ಒಬ್ಬ ಸೈನಿಕನ ತಾಯಿ ತನ್ನ ಮಗನನ್ನು ಕಳೆದುಕೊಳ್ಳುತ್ತೇನೆಂದು ಗೊತ್ತಿದ್ದರೂ ತುಂಬಾ ಖುಷಿಯಿಂದಲೇ ತನ್ನ ಮಗನನ್ನು ಭಾರತ ಮತ್ತು ಪಾಕ್ನ ಯುದ್ಧಕ್ಕೆ
ಕಳುಹಿಸುತ್ತಾಳೆ.ಹೆಂಡತಿ ತಾನು ವಿಧವೆಯಾಗುತ್ತೇನೆ ಎಂದು ಗೊತ್ತಿದ್ದರೂ ಸಹ ಅದನ್ನೆಲ್ಲ ಬದಿಗಿಟ್ಟು ದು:ಖವನ್ನು ಕೈಯಲ್ಲಿ ಅದುಮಿಕೊಂಡು ಗಂಡನನ್ನು ಅತ್ಯಂತ ಸಂತೋಷದಿಂದ ಯುದ್ಧದಲ್ಲಿ ಜಯಶಾಲಿಯಾಗಿ ಬನ್ನಿ ಎಂದು ಹರಸಿ ಕಳುಹಿಸಿಕೊಡುತ್ತಾಳೆ. ಇಂತವರಿಗೆಲ್ಲಾ ನಮ್ಮ ದೇಶ ಎಂದು ಒಂದು ಸಲ ಕಣ್ಣ ಮುಂದೆ ಬಂದಾಗ ಅವರೆದುರು ಯಾವ ಸಂಬಂಧವೂ ನೆನಪಿಗೆ ಬರೋದಿಲ್ಲ.
ಇತ್ತ ಭಾರತ-ಪಾಕ್ ಯುದ್ಧ ನಡೆತಾ ಇದೆ..ನಮ್ಮ ಭಾರತೀಯ ಸೈನಿಕರು ತಮ್ಮ ರಕ್ತ ಪಾತ ಹರಿಸಿಕೊಂಡು ನಮ್ಮ ದೇಶಕ್ಕಾಗಿ ಹೋರಾಟ ನಡೆಸ್ತಾ ಇದ್ರೆ ಇತ್ತ ಆ ಮಹಿಳೆ ಮಾತ್ರ ತನ್ನ ಗಂಡನೊಂದಿಗೆ ತನ್ನ ಮಕ್ಕಳನ್ನು ಕರೆದುಕೊಂಡು ಭಾರತ ಬಿಟ್ಟು ಓಡಿ ಹೋಗ್ತಾಳೆ..
ಭಾರತದ ಏಳನೇ ಪ್ರಧಾನ ಮಂತ್ರಿಯಾಗಿ ರಾಜೀವ್ಗಾಂಧಿ ಉದ್ಯೋಗಿಗಳ ಪೈಲಟ್ ಮತ್ತು 1968 ರಿಂದ ದೇಶೀಯ ವಾಹನ ನೌಕೆಗಳಿಗೆ ಕೆಲಸ
ಮಾಡುತ್ತಿದ್ದರು.ತಮ್ಮ ವಿದ್ಯಾಭ್ಯಾಸವನ್ನು ಯು.ಕೆ ಯಲ್ಲಿ ಮುಗಿಸಿ ದೆಹಲಿಯಿಂದ ಪೈಲಟ್ ಪರವಾನಿಗೆಯನ್ನು ಪಡೆದಿರ್ತಾರೆ. ಆದರೆ 1971ರ ಇಂಡಿಯಾ-ಪಾಕ್ ಯುದ್ಧದ ಸಮಯದಲ್ಲಿ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗುತ್ತೆ.ಆದರೆ ತಮ್ಮ ಬಬ್ಬ ಬ್ರೇವ್ ಪೈಲಟ್ ಮಾತ್ರ ಪರವಾನಗಿಯನ್ನು ಕೊಡುವಂತೆ ಅರ್ಜಿಯನ್ನು ಹಾಕಿ ರಜೆಯನ್ನು ತೆಗೆದುಕೊಳ್ಳುತ್ತಾನೆ .ಅದು ಬೇರಾರು ಅಲ್ಲ ರಾಜೀವ್ ಗಾಂಧಿ. ರಾಜೀವ್ ಗಾಂಧಿ ತನ್ನ ಹೆಂಡತಿ ಸೋನಿಯಾ ಗಾಂಧಿ
ಮಗ ರಾಹುಲ್ ಗಾಂಧಿಯೊಂದಿಗೆ ಇಟಲಿಗೆ ಓಡಿಹೋಗ್ತಾರೆ. ಆದರೆ ಸೋನಿಯಾ ಇಂದಿಗೂ ನಾನು ಭಾರತೀಯಳು ಅಂತ ಹೇಳ್ತಾನೆ ಇರ್ತಾರೆ..ಆದರೆ ಅಂದು ಯಾಕೆ ಪಾಕ್-ಭಾರತ ಯುದ್ಧ ನಡೆಯ ಬೇಕಾದರೆ ಭಾರತಕ್ಕೆ ಬೆಂಬಲ ಕೊಡುವ ಬದಲು ಪ್ರಾಣ ಭೀತಿಯಿಂದ ಇಟಲಿಗೆ ಹೋಡಿಹೋಗಿದ್ದು?ಈಗಲೂ ರಾಹುಲ್ ಗಾಂಧಿ ಮಾತ್ರ ಯಾವಾಗಲೂ ವಿದೇಶಿ ಟ್ರಿಪ್ಲ್ಲೇ ಇರ್ತಾರೆ.
ಆದರೆ ಇವರನ್ನು ದೂರ ಬೇಕಾಗಿಲ್ಲ ಯಾಕೆಂದರೆ ತಮ್ಮ ಹೆತ್ತವರಿಂದ ಕಲಿತ ಪಾಠವನ್ನು ರಾಹುಲ್ ಅನುಸರಿಸುತ್ತಿದ್ದಾರೆ!!
ಭಾರತೀಯ ವಿಮಾನಯಾನ ಸಂಸ್ಥೆಗಳ ಪೈಲಟ್ಗಳಂತೆಯೇ ತಮ್ಮ ತಾಯ್ನಾಡಿಗೆ ದೇಶೀಯ ಸೇವೆ ಸಲ್ಲಿಸುವುದರ ಮೂಲಕ ತಮ್ಮ ಕುಟುಂಬ ಸಮೇತ ಇಟಲಿಯಲ್ಲೇ ಜೀವನ ಕಳೆದರು. ಇತ್ತ ಭಾರತ-ಪಾಕ್ ಯುದ್ಧಾನಂತರ ಜನರಲ್ ನಿಯಾಜಿಯ ಶರಣಾಗತಿಯ ನಂತರ ಮತ್ತೆ ಭಾರತಕ್ಕೆ ಮರಳುತ್ತಾರೆ. ಉಳಿದ ಪೈಲಟ್ಗಳು ತಮ್ಮ ತಾಯ್ನಾಡಿಗೆ ಸಹಾಯ ಮಾಡಲು ನಿರ್ಧರಿಸುತ್ತಾರೆ. ಆದರೆ ಭಾರತವನ್ನು ಆಳ್ವಿಕೆ ಮಾಡಬಯಸಿದಂತಹ ವ್ಯಕ್ತಿಯೇ ಹೇಡಿಯಂತೆಯೇ ಭಾರತದಿಂದ ಹೊರಗುಳಿಯುತ್ತಾರೆ.. ಎಂತಹ ನಾಚಿಕೆ ಗೇಡು ಅಲ್ಲವೇ?
1971 ರಲ್ಲೆ ಭಾರತ ಬಿಟ್ಟು ತೊಲಗಿದ ಸೋನಿಯಾ ಗಾಂಧಿ ಚುನಾವಣಾ ಅಭಿಯಾನದಲ್ಲಿ ಸಿನಿಮಾ ಡೈಲಾಗ್ ತರಾ “ನಾನು ಭಾರತೀಯಳು; ನನ್ನ
ಕೊನೆಯುಸಿರುವವರೆಗೆ ಭಾರತದಲ್ಲೇ ಇರುತ್ತೇನೆ”…ಈ ಡೈಲಾಗ್ ಸೋನಿಯಾ ಗಾಂಧಿಯ ಬಾಯಿಯಿಂದ ಬಂದಿರೋವಂತಹದು ಯಾಕೆಂದರೆ ಅವರಿಗೆ ಪ್ರದಾನ ಮಂತ್ರಿಯಾಗಬೇಕು ಅನ್ನೋ ಮಹದಾಸೆ.
ಭಾರತ ಹೊತ್ತಿ ಉರಿತಾ ಇರೋ ಸಮಯದಲ್ಲಿ ನಾವೊಂದ್ಸಲ ಬಚಾವ್ ಆಗ್ತೇವೆ ಅಂತ ಭಾರತ ಬಿಟ್ಟು ಓಡಿ ಹೋದವರಿಗೆ ನಾವು ಅವರನ್ನು ಗೌರವಿಸಬೇಕಾ?
ಸೋನಿಯಾ ಗಾಂಧಿ ಹಲವಾರು ಬಾರಿ ಭಾರತ ಮತ್ತು ಕಾಂಗ್ರೆಸ್ ಬಗ್ಗೆ ನಿರಾಶೆಯಾಗ್ತಾಳೆ. ಇಂದಿರಾ ಗಾಂಧಿ ಪ್ರಜಾಪ್ರಭುತ್ವವನ್ನು ಕೊಂದ ಅನೇಕ ಮುಗ್ಥರನ್ನು
ಬಲಿಪಶು ಮಾಡಿದ ಮಹಿಳೆ. ಕೊನೆಗೆ 1977 ರ ಚುನಾವಣೆಯಲ್ಲಿ ಭಾರತೀಯರೇ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಾರೆ. ಇದನ್ನೆಲ್ಲಾ ಅರಿತ ಸೋನಿಯಾ ಗಾಂಧಿ ಇಲ್ಲಿ ನಮ್ಮ ಬೇಳೆ ಬೇಯೋದಿಲ್ಲ ಅಂತಾ ಎಲ್ಲಾ ಬ್ಯಾಗ್ಗಳನ್ನೆಲ್ಲಾ ಪ್ಯಾಕ್ ಮಾಡಿ ತನ್ನ ಗಂಡ ಮಕ್ಕಳೊಂದಿಗೆ ಮತ್ತೆ ಇಟಲಿಗೆ ಪಲಾಯನ ಮಾಡ್ತಾಳೆ.. ಮತ್ತೆ ಇಂದಿರಾ ಗಾಂಧಿ, ಸಂಜಯ್ ಮತ್ತು ಮೇನಕಾ ಗಾಂಧಿ ಎಲ್ಲರೂ ಸೇರಿ ಮತ್ತೆ ವಾಪಸ್ಸು ಕರೆತರ್ತಾರೆ. ಭಾರತೀಯರೆಲ್ಲ ಇಲ್ಲಿ ಗಮನಿಸ ಬೇಕಾದ ಅಂಶ ಏನೆಂದರೆ.. ಸೋನಿಯಾ ಗಾಂಧಿ ಭಾರತೀಯರಲ್ಲ.. ನಾವೇನಾದರೂ ಹಾಗೆ ಅಂದು ಕೊಂಡರೆ ಮುಂದೆ ನಮಗೆ ತೊಂದರೆ ಕಟ್ಟಿಟ್ಟ ಬುತ್ತಿ ಅಷ್ಟೆ!
ಇಲ್ಲಿ ನಾವು ನಿಜವಾಗಲೂ ನೆನಪಿಸಬೇಕಾದ ಹೆಸರೆಂದರೆ ರಾಷ್ಟ್ರದ ನಿರುದ್ಯೋಗ ಸಮಸ್ಯೆಯಲ್ಲಿ ಕೆಲಸ ಮಾಡಿದಂತಹ ರಾಜೀವ್ ಗಾಂಧಿ. ಭಾರತೀಯರು ರಾಷ್ಟ್ರದ ಸೇವೆಯಲ್ಲಿ ನಿರತರಾಗಿದ್ದರು, ಆದರೆ ರಾಜೀವ್ಗಾಂಧಿ ಮಾತ್ರ ತಮ್ಮ ಅಜ್ಜನ ಹೆಸರು ಹೇಳಿಕೊಂಡು ಹೇಡಿಯಂತೆ ವರ್ತಿಸಿದ್ದರು. ಅದೇ ಹೋಲಿಕೆ ಈಗ ಮಗ ರಾಹುಲ್ ಗಾಂಧಿಯದ್ದು.
ಕಾಂಗ್ರೆಸ್ನ ಎಲ್ಲಾ ಅನುಯಾಯಿಗಳು ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಇಂತವರನ್ನು ನೆನಪಿಸಿ ತಲೆತಗ್ಗಿಸಬೇಕು. ಭಾರತಕ್ಕೆ ಒಂದು ಒಳ್ಳೆ ಇತಿಹಾಸವಿದೆ. ಅನೇಕ ರಾಜರುಗಳು ತಮ್ಮ ತಾಯ್ನಾಡಿಗಾಗಿ ಕೊನೆಯುಸಿರಿರುವ ವರೆಗೆ ಹೋರಾಟ ಮಾಡಿದ ಇತಿಹಾಸಗಳು ಅದೆಷ್ಟೋ!! ಆದರೆ ಇವರು ಮಾತ್ರ ಸರ್ಕಾರದಿಂದ ಎಲ್ಲಾ ಸವಲತ್ತನ್ನು ಪಡೆದುಕೊಳ್ಳುತ್ತಾರೆ. ಭಾರತಕ್ಕೆ ಇವರ ಅಗತ್ಯವಿದೆ ಎಂದಾಗ ದೇಶಾಂತರ ಹೋಗ್ತಾರೆ. ನೆಹರು ಈ ದೇಶಕ್ಕೆ ಎಂತಹ ಅಪಾಯವನ್ನು ತಂದಿಟ್ಟರು ಅಂತ ನಮಗೆಲ್ಲಾ ಗೊತ್ತೇ ಇದೆ. ನೆಹರೂವಿನಿಂದ ರಾಹುಲ್ ಗಾಂಧಿಯವರೆಗೂ ಸಹ ಯಾರೂ ಕೂಡಾ ದೇಶದ ಹಿತವನ್ನು ಬಯಸಿ ಆಳ್ವಿಕೆ ನಡೆಸಿದವರೂ ಅಲ್ಲ, ಜನರ ಜೊತೆ ಅಗತ್ಯವಿದ್ದಾಗ ನಿಂತವರೂ ಅಲ್ಲ. ಇದೇ ಇವರ ತಾಕತ್ತು!!!
-ಸುಜಯ