ಪ್ರಚಲಿತ

ಚಾಣಕ್ಯನ ರಣತಂತ್ರಕ್ಕೆ ಬೆಚ್ಚಿಬಿದ್ದ ಸಿದ್ದರಾಮಯ್ಯ! ಷಾ, ಸಿದ್ದರಾಮಯ್ಯನ ಬುಡಕ್ಕೆ ಕೊಡಲಿ ಏಟು ಕೊಟ್ಟಿದ್ದು ಹೇಗೆ ಗೊತ್ತಾ…!?

ಅಧಿಕಾರದ ಅವಧಿಯಲ್ಲಿ ಇಡೀ ದೇಶವನ್ನೇ ಗುಡಿಸಿ ಗುಂಡಾಂತರ ಮಾಡಿ ಇಡೀ ದೇಶವನ್ನೇ ಜಗತ್ತಿನ ಮುಂದೆ ಮಂಡಿಯೂರುವಂತೆ ಮಾಡಿದ್ದ ಕಾಂಗ್ರೆಸ್ ನ್ನು ಕೆಳಗಿಳಿಸಿ ಪ್ರಧಾನಿ ಪಟ್ಟ ಏರಿದ ಶ್ರೀ ನರೇಂದ್ರ ಮೋದಿ “ಕಾಂಗ್ರೆಸ್ ಮುಕ್ತ ಭಾರತ” ದ ಗುರಿಯನ್ನು ಚುನಾವಣಾ ಸಂದರ್ಭದಲ್ಲಿ ದೇಶಕ್ಕೆ ತಿಳಿಸಿದ್ದರು.

ಪಾತಾಳಕ್ಕೆ ಕುಸಿದಿದ್ದ ಭಾರತದ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಮೇಲಿತ್ತಿದ ಮೋದಿಯವರು ಭಾರತವನ್ನು ಮತ್ತೆ ಜಗತ್ತಿನ ಮುಂದೆ ತಲೆಯೆತ್ತಿ ನಿಲ್ಲುವಂತೆ ಮಾಡಿದ್ದಾರೆ.

ಇದೀಗ ತಮ್ಮ ಗುರಿಯನ್ನು ಸಾಧಿಸಲು ಪ್ರಾರಂಭಿಸಿದ ಮೋದಿಯವರು ಈಗಾಗಲೇ ನಡೆದ ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿ ಕೇಸರಿ ಪತಾಕೆ ಹಾರಿಸಿದ್ದಾರೆ.ಪ್ರತೀ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ.

Image result for amit shah and siddaramaiah

ಇದಕ್ಕೆಲ್ಲಾ ಕಾರಣ ಮೋದಿಯ ಉತ್ತಮ ಆಡಳಿತ ಮತ್ತು ರಾಜಕೀಯ ಚಾಣಕ್ಯ ಅಮಿತ್ ಷಾ ರವರ ರಾಜಕೀಯ ತಂತ್ರ…!

ಹೌದು, ಮೋದಿ ಷಾ ಮೋಡಿಗೆ ಇಡೀ ದೇಶದಲ್ಲೇ ಕಾಂಗ್ರೆಸ್ ನೆಲಕಚ್ಚಿದೆ.

ಚುನಾವಣೆಗೆ ಮೊದಲೇ ಆಯಾ ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿನ ಎಲ್ಲಾ ಚುನಾವಣೆಗೆ ಬೇಕಾದ ತಯಾರಿಗಳನ್ನು ಸ್ವತಃ ತಾವೇ ಖುದ್ದಾಗಿ ಮಾಡಿಸುತ್ತಿದ್ದು ಎಲ್ಲಾ ರಾಜ್ಯಗಳನ್ನು ಬಿಜೆಪಿಯ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ಗೆ ಬಲವಾಗಿ ಇರುವಂತಹ ಒಂದು ರಾಜ್ಯ ಎಂದರೆ ಅದು ಕರ್ನಾಟಕ. ಇದೀಗ ಕರ್ನಾಟಕದ ಮೇಲೂ ಕಣ್ಣಿಟ್ಟಿರುವ ಅಮಿತ್ ಷಾ ಕರ್ನಾಟಕದಲ್ಲೂ ಕೇಸರಿ ಪತಾಕೆ ಹಾರಿಸಲು ಸಿದ್ದತೆ ನಡೆಸಿದ್ದಾರೆ…!

ಕರ್ನಾಟಕದ ವಿಧಾನಸಭೆ ಚುನಾವಣೆಯನ್ನು ಗೆಲ್ಲಲೇಬೇಕು, ಅದಕ್ಕಾಗಿ ಎಲ್ಲಾ ತಯಾರಿಗಳನ್ನು ಈಗಿನಿಂದಲೇ ಮಾಡಿಕೊಳ್ಳಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಷಾ ಆದೇಶ ನೀಡಿ ಕೆಲವು ತಿಂಗಳುಗಳೇ ಕಳೆದಿವೆ.ಈಗ ಸ್ವತಃ ತಾವೇ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ತಯಾರಿಯನ್ನು ಗಮನಿಸುತ್ತಿದ್ದಾರೆ.

Image result for amit shah and siddaramaiah

ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ತಯಾರಿ ನಡೆಸುವುದರಿಂದ ಕಾಂಗ್ರೆಸ್ ಕಂಗಾಲಾಗಿದೆ.

ಅತ್ತ ಕಾಂಗ್ರೆಸ್ ಮಹಾರಾಜ ರಾಹುಲ್ ಗಾಂಧಿ ಕರ್ನಾಟಕದ ಚುನಾವಣೆಗೆ ಡ್ರಾಮಾ ಆರಂಭಿಸಿದ್ದು ಮಠಗಳಿಗೆ ಭೇಟಿ ನೀಡುತ್ತಿದ್ದಾರೆ.
ಇದರ ಜೊತೆಗೆ ಸಿದ್ದರಾಮಯ್ಯನವರೂ ದೇವಸ್ಥಾನಗಳಿಗೆ ಭೇಟಿ ನೀಡಿ ‘ಹಿಂದುತ್ವ’ ದ ಜಪ ಮಾಡಲು ಆರಂಭಿಸಿದ್ದಾರೆ…!

ಇದೀಗ ಮತ್ತೆ ಕರ್ನಾಟಕಕ್ಕೆ ಬರಲು ತಯಾರಾದ ಅಮಿತ್ ಷಾ ಜನವರಿ 25ರಂದು ಮೈಸೂರಿನಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯಾಗಿದ್ದು ಅಮಿತ್ ಷಾ ರ ಭೇಟಿ ಬಹಳ ಕುತೂಹಲಕ್ಕೆ ಕಾರಣವಾಗಿದೆ.

ಸ್ವತಃ ಸಿದ್ದರಾಮಯ್ಯನವರ ತವರಲ್ಲೇ ಕಾಂಗ್ರೆಸ್ ಗೆ ಶಾಕ್ ನೀಡಲು ಅಮಿತ್ ಷಾ ತಂತ್ರ ರೂಪಿಸಿದ್ದಾರೆ.ಇದರಿಂದ ಸಿದ್ದರಾಮಯ್ಯನವರ ಜೊತೆಗೆ ಕಾಂಗ್ರೆಸ್ ಕೂಡಾ ಭಯಗೊಂಡಿದೆ.

Image result for suttur mutt in mysore

ಅಂದೇ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಲಿರುವ ಅಮಿತ್ ಷಾ ಸಿದ್ದರಾಮಯ್ಯನವರಿಗೆ ಬಿಗ್ ಶಾಕ್ ನೀಡಲಿದ್ದಾರೆ…!

ದೇಶದಲ್ಲಿ ಕಾಂಗ್ರೆಸ್ ಗೆ ಉಳಿದಿರುವ ಒಂದು ರಾಜ್ಯ ಕರ್ನಾಟಕವನ್ನು ಹೇಗಾದರೂ ಬಿಜೆಪಿಯ ತೆಕ್ಕೆಗೆ ಪಡೆಯಲೇಬೇಕೆಂಬ ಗುರಿ ಹೊಂದಿರುವ ಬಿಜೆಪಿಯ ಚಾಣಕ್ಯ ಅಮಿತ್ ಷಾ ಕರ್ನಾಟಕದಲ್ಲೂ ಮ್ಯಾಜಿಕ್ ಮಾಡಲಿದ್ದಾರೆ…!

ರಾಹುಲ್ ಗಾಂಧಿ ರಾಜಕೀಯ ನಾಟಕಕ್ಕಾಗಿ ಎಷ್ಟೇ ದೇವಾಲಯ ಸುತ್ತಿದರೂ,ಸಿದ್ದರಾಮಯ್ಯ ಎಷ್ಟೇ ಜನಾಶಿರ್ವಾಧ ಸಮಾವೇಶ ನಡೆಸಿದರು ಅಮಿತ್
ಷಾ ರಾಜಕೀಯ ತಂತ್ರಗಾರಿಕೆಯ ಎದುರು ಇವೆಲ್ಲವೂ ಠುಸ್ಸ್ ಆಗಲಿದೆ. ಮುಂದಿನ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಂತೂ ಖಂಡಿತ…!

Image result for rahul gandhi temple runImage result for rahul gandhi temple run

–ಅರ್ಜುನ್

Tags

Related Articles

Close