ಪ್ರಚಲಿತ

ಬಿಗ್ ಬ್ರೇಕಿಂಗ್!!! ಹತ್ಯೆ ಸುಪಾರಿ ಮೇರೆಗೆ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಬಂಧನ!

ಗೌರೀ ಹತ್ಯೆಯ ಜಾಡು ಬೆನ್ನಟ್ಟಿದ್ದವರಿಗೆ ಸಿಕ್ಕಿತು ಇನ್ನೊಂದು ಮಾಹಿತಿ!

ಗೌರೀ ಹತ್ಯೆಯ ಜಾಡು ಬೆನ್ನಟ್ಟಿದ್ದವರಿಗೆ ಸಿಕ್ಕಿತೊಂದು ಆಘಾತಕಾರಿ ಸುದ್ದಿ! ಸಿಸಿಬಿಯ ವಶದಲ್ಲಿರುವ ವಿಜಯಪುರ ಮೂಲದ ಸುಪಾರಿ ಕಿಲ್ಲರ್ ಗಳಾದ ಶಶಿಧರ್ ಮುಂಡಾಧರೆ ಹಾಗೂ ಆತನ ಸ್ನೇಹಿತರು ಈಗ ಇನ್ನೊಂದು ಸತ್ಯವನ್ನು ಹೊರ ಹಾಕಿದ್ದು, ಗೌರೀ ಲಂಕೇಶ್ ಹತ್ಯೆಯ ಜೊತೆಗೆ ಪತ್ರಕರ್ತ ಸುನಿಲ್ ಹೆಗ‌್ಗರವಳ್ಳಿ ಹತ್ಯೆಗೂ ಸುಪಾರಿ ಕೊಟ್ಟಿದ್ದರೆಂದು ಒಪ್ಪಿಕೊಂಡಿದ್ದಾರೆ!

ಕೊಲೆಗೆ ಸುಪಾರಿ ನೀಡಿದ್ದು ರವಿ ಬೆಳಗೆರೆ!!

ಹಾಯ್ ಬೆಂಗಳೂರ್ ಖ್ಯಾತಿಯ ಪತ್ರಕರ್ತ, ರವಿ ಬೆಳಗೆರೆಯವರು ಹತ್ಯೆಗೆ ಸುಪಾರಿ ನೀಡಿದ್ದಾರೆಂದು ಒಪ್ಪಿಕೊಂಡಾ ಆರೋಪಿಗಳು, ಸಹಪತ್ರಕರ್ತ ಸುನಿಲ್ ಹೆಗ್ಗರವಳ್ಳಿಯವರ ಹತ್ಯೆಗೆ ಸುಪಾರಿ ನೀಡಿದ್ದರೆಂದು ಹೇಳಿದ್ದಾರೆ!

ತಕ್ಷಣವೇ, ಖ್ಯಾತ ಪತ್ರಕರ್ತರಾದ ರವಿ ಬೆಳಗೆರೆಯವರನ್ನು ಬಂಧಿಸಿರುವ ಪೋಲಿಸರು, ವಿಚಾರಣೆಗೆ ಮುಂದಾಗಿದ್ದಾರೆ! 2002 ರಿಂದ 2015 ರ ತನಕವೂ ಸಹಪತ್ರಕರ್ತರಾಗಿದ್ದ ಸುನಿಲ್ ಹೆಗ‌್ಗರವಳ್ಳಿಯನ್ನು ವೈಯುಕ್ತಿಕ ದ್ವೇಷದ ಹಿನ್ನೆಲೆ ಕಾರಣ ಎಂದು ಸಿಸಿಬಿ ಅಧಿಕಾರಿ ಸತೀಶ್ ಕುಮಾರ್ ಹೇಳಿಕೆ ನೀಡಿದ್ದು ಇದೀಗ ಗೌರೀ ಹತ್ಯೆಯ ಜಾಡು ಬೆನ್ನತ್ತಿದ ಪೋಲಿಸರು ಚುರುಕಾಗಿದ್ದಾರೆ!

https://www.facebook.com/SuvarnaNews/videos/1751596468204731/

ಭೀಮಾ ತೀರದ ಹಂತಕರ ಪುಸ್ತಕದಿಂದಲೇ ಪ್ರಾರಂಭ ಹಂತಕರ ಒಡನಾಟ!!

ಭೀಮಾ ತೀರದ ಹಂತಕರಿಗೆ ಸಹಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿರುವ ರವಿ ಬೆಳಗೆರೆಯವರ ಒಡನಾಟ ಹಂತಕರಿಂದ ಹಿಡಿದು, ಎಲ್ಲಾ ಭೂಗತ ಪಾತಕಿಗಳ ಜೊತೆಗಿದೆ ಎಂಬುದಕ್ಕೆ ಸಾಕ್ಷಿಗಳು ಅವರು ವಿಸ್ತೃತವಾಗಿ ಬರೆದಿರುವ ಕಾದಂಬರಿಗಳು.

ಇತ್ತೀಚೆಗೆ ರವಿ ಬೆಳಗೆರೆ ಅವರು ತನ್ನ ಮಾಲಿಕತ್ವದ ಪತ್ರಿಕೆಯನ್ನು ತನ್ನ ವಯಸ್ಸಿನ ಕಾರಣಗಳಿಂದ ಮುಚ್ಚುವುದಾಗಿ ಹೇಳಿದ್ದರು. ಲಾಭದಲ್ಲಿ ನಡೆಯುತ್ತಿದ್ದ ಪತ್ರಿಕೆಯನ್ನು ಏಕಾಏಕಿ ಬಂದ್ ಮಾಡಲು ಕಾರಣವೇನು ಎಂಬುವುದು ಜನತೆಗೆ ಭಾರೀ ಅಚ್ಚರಿಗೆ ಕಾರಣವಾಗಿತ್ತು. ಆದರೆ ಇದರ ರಹಸ್ಯ ಭೀಮಾ ತೀರದ ಹಂತಕರಿಂದ ಬೆಳಕಿಗೆ ಬಂದಂತಾಗಿದೆ. ಗೌರಿ ಲಂಕೇಶ್ ಹತ್ಯೆಯ ಸಂಬಂಧ ಎಸ್‍ಐಟಿ ಅಧಿಕಾರಿಗಳು ಭೀಮಾ ತೀರದ ಹಂತಕರನ್ನು ಬಂಧಿಸಿ ಬಾಯಿಬಿಡಿಸಿದಾಗ ಅಚಾನಕ್ ಆಗಿ ಇನ್ನೊಂದು ಕೊಲೆ ಸ್ಕೆಚ್ ಬೆಳಕಿಗೆ ಬಂದಿದೆ.

ಹಾಯ್‍ಬೆಂಗಳೂರು ಪತ್ರಿಕಾ ಮಾಲಿಕ, ಗೌರವ ಸಂಪಾದಕ ರವಿ ಬೆಳಗೆರೆ ಅವರು ಸಂಪಾದಕ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಭೀಮಾ ತೀರದ ಹಂತಕರಿಗೆ ಯಾಕೆ ಸುಫಾರಿ ನೀಡಿದ್ದಾರೆ ಎನ್ನುವುದು ಇನ್ನಷ್ಟೇ ಬೆಳಕಿಗೆ ಬರಬೇಕಾಕಿದೆ. ಭೀಮಾ ತೀರದ ಹಂತಕ ಶಶಿಧರ್ ಮುಂಡಾಧರ್ ಶಾರ್ಪ್ ಶೂಟರ್ ಆಗಿದ್ದು, ಗೌರಿ ಕೊಲೆಯ ಆಪಾದನೆಯ ಮೇಲೆಗೆ ಬಂಧಿಸಲಾಗಿತ್ತು. ಈ ವೇಳೆ ರವಿ ಬೆಳಗೆರೆ ಅವರ ಸುಪಾರಿ ಕೊಲೆ ವಿಷ್ಯ ಬೆಳಕಿಗೆ ಬಂದಿದೆ.

30 ಲಕ್ಷಕ್ಕೆ ಸುಪಾರಿ?

ರವಿ ಬೆಳಗೆರೆ ಅವರು ಪ್ರಾರ್ಥನಾ ಶಾಲೆಯನ್ನು ನಡೆಸುತ್ತಿದ್ದು, ಅಲ್ಲೇ ಸಮೀಪ ಹಾಯ್‍ಬೆಂಗಳುರು ಕಚೇರಿ ಇದೆ. ಒಂದು ಕಾಲದಲ್ಲಿ ಸುನಿಲ್ ಹೆಗ್ಗರವಳ್ಳಿ ಹಾಗೂ ರವಿಬೆಳಗೆರೆ ಅವರ ಗೆಳೆತನ ತೀವ್ರವಾಗಿತ್ತು. ರವಿಬೆಳಗೆರೆಗೆ ತನ್ನ ಎರಡನೇ ಹೆಂಡತಿ ಯಶುಮತಿ ಜೊತೆ ತನ್ನ ಸಂಬಂಧ ಹಳೆಸಿದ್ದು ಈ ಬಗ್ಗೆ ಆವಾಗಾವಾಗ ರವಿ ಬೆಳಗೆರೆ ಹೇಳಿಕೊಳ್ಳುತ್ತಾ ಇದ್ದರು. ಸುನಿಲ್ ಹೆಗ್ಗರವಳ್ಳಿ ಹಾಗೂ ತನ್ನ ಎರಡನೇ ಹೆಂಡತಿ ಜೊತೆ ಸಂಬಂಧ ಕಲ್ಪಿಸಿ ಇದೇ ಇದೇ ವಿಚಾರದಲ್ಲಿ ರವಿಬೆಳಗೆರೆ ಹಾಗೂ ಸುನಿಲ್ ಹೆಗ್ಗರವಳ್ಳಿ ಜೊತೆ ಮನಸ್ತಾಪ ಉಂಟಾಗಿ ಅದು ಕೊಲೆ ನಡೆಸುವಷ್ಟರ ಮಟ್ಟಿಗೆ ಮುಂದುವರಿದಿದೆಯೇ ಎಂಬ ಸಂಖೆ ಮುಂದುವರಿದಿದೆ. ಮೂಲಗಳ ಪ್ರಕಾರ ಆರಂಭದಲ್ಲಿ 28 ಲಕ್ಷ ರೂ ಸುಫಾರಿ ನೀಡಲಾಗಿದ್ದು, ಮುಂದಿನ ಹಣ ನಂತರ ನೀಡಬೇಕಾಗಿತ್ತು. ಈ ಬಗ್ಗೆ ತನಿಖೆ ಮುಂದುವರಿದಿದೆ.

ಸುಫಾರಿ ಕಿಲ್ಲರ್‍ಗಳಿಂದ ಹೇಗೆ ಸುನಿಲ್ ಎಸ್ಕೇಪ್ ಆಗಿದ್ದು ಹೇಗೆ?

ಆಗಸ್ಟ್ 28ರಿಂದ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಭೀಮಾ ತೀರದ ಹಂತಕರು ಪ್ಲಾನ್ ಮಾಡಿದ್ದರು. ಇದಕ್ಕಾಗಿ ಬಂದೂಕನ್ನೂ ಖರೀದಿಸಲಾಗಿತ್ತು. ಇದರ ಬಗ್ಗೆ ಮಾಹಿತಿ ಪಡೆದಿದ್ದ ಸುನಿಲ್ ಹೆಗ್ಗರವಳ್ಳಿ ಸಿಸಿ ಟಿವಿಗಳ ದೃಶ್ಯದಿಂದ ಮಾಹಿತಿ ಪಡೆದು ಅಲ್ಲಿಂದ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಈ ಮುಂಚೆ ತಾಹಿರ್ ಎನ್ನುವ ಶಾರ್ಪ್ ಶೂಟರ್ ಅನ್ನು ಯಶವಂತ್‍ಪುರದಿಂದ ಬಂಧಿಸಲಾಗಿತ್ತು. ಈತ ಯಾರನ್ನೋ ಕಿಡ್ನಾಪ್ ಮಾಡಿ ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ ಇದಕ್ಕಾಗಿ ಸುಫಾರಿ ಪಡೆದುಕೊಂಡಿದ್ದಾನೆ ಎಂಬ ಮಾಹಿತಿಯನ್ವಯ ಆತನನ್ನು ಬಂಧಿಸಲಾಗಿತ್ತು. ಈ ವೇಳೆ ತನಿಖೆಯನ್ನು ಕೈಗೊಂಡಾಗ ರವಿಬೆಳಗೆರೆ ಸುನಿಲ್‍ನನ್ನು ಕೊಲೆ ಮಾಡಲು ಸುಫಾರಿ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಸಿಬಿ ಅಧಿಕಾರಿ ಸತೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಭೀಮಾ ತೀರದ ಹಂತಕರ ಬಗ್ಗೆ ಬರೆಯುವಾಗಲೇ ಹಂತಕರ ಜೊತೆ ಒಡನಾಟ ಬೆಳೆಸಿಕೊಂಡಿದ್ದ ಹಾಯ್ ಬೆಂಗಳೂರು ಖ್ಯಾತಿಯ ರವಿ ಬೆಳಗೆರೆಯವರು ಈಗಾಗಲೇ ಸಿಸಿಬಿಯ ವಶದಲ್ಲಿದ್ದು, ವಿಚಾರಣೆಯ ಬಳಿಕ ಆಘಾತಕಾರಿ ಮಾಹಿತಿಗಳನ್ನು ನೀಡುವರೋ ಎಂದು ನೋಡಬೇಕಿದೆ!

– PriChe Team

Tags

Related Articles

Close