ಪ್ರಚಲಿತ

ಬ್ರೇಕಿಂಗ್: ಟೆಂಪಲ್ ರನ್ ಬಳಿಕ ರಾಹುಲ್ ಮಾಡಿದ ಮತ್ತೊಂದು ಐಡಿಯಾ ಏನ್ ಗೊತ್ತಾ…!?ವಿಮಾನ ಹತ್ತಲ್ವಂತೆ ರಾಹುಲ್ ಗಾಂಧಿ!!

ಚುನಾವಣೆಗೆ ಬೇಕಾಗಿ ಯಾವ ರೀತಿಯ ನಟನೆಗೂ ಸಿದ್ದವಿರುವ ಈ ಕಾಂಗ್ರೆಸ್ ನಾಯಕರು ಒಂದೊಂದು ರಾಜ್ಯದ ಚುನಾವಣೆಗೆ ಒಂದೊಂದು ಬಗೆಯ ವೇಷ ಹಾಕಿಕೊಂಡು ಜನರನ್ನು ಆಕರ್ಷಿಸಲು ಹೊರಟಿದ್ದಾರೆ…! ಶ್ರೀ ನರೇಂದ್ರ ಮೋದಿಯವರ ಆಡಳಿತ ನೋಡಿ ಇಡೀ ದೇಶವೇ ನರೇಂದ್ರ ಮೋದಿಯವರನ್ನು ಬೆಂಬಲಿಸತೊಡಗಿದೆ.
ಪ್ರತೀ ರಾಜ್ಯಗಳಲ್ಲೂ ಬಿಜೆಪಿ ಗೆಲ್ಲುವ ಮೂಲಕ ‘ಕಾಂಗ್ರೆಸ್ ಮುಕ್ತ ಭಾರತಕ್ಕೆ‌’ ಒಂದೊಂದೇ ರಾಜ್ಯವನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಾ ಸಾಗುತ್ತಿದೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ…

ಬಿಜೆಪಿಯ ಸುನಾಮಿಗೆ ನೆಲಕಚ್ಚಿರುವ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ತನ್ನ ನೆಲೆ ಕಳೆದುಕೊಳ್ಳುತ್ತಾ ಬಂದಿದೆ. ೬೦ ವರ್ಷಗಳ ಕಾಲ ದೇಶವನ್ನಾಳಿದ ರಾಷ್ಟ್ರೀಯ ಪಕ್ಷವೊಂದು ಇವತ್ತು ತನ್ನ ಉಳಿವಿಗಾಗಿ ಪರದಾಡುತ್ತಿರುವ ರೀತಿ ನೋಡುವಾಗಲೇ ಗೊತ್ತಾಗುತ್ತದೆ ಕಾಂಗ್ರೆಸ್ ಯಾವ ಮಟ್ಟಕ್ಕೆ ಬಂದಿದೆ ಎಂದು…!

ಅದಕ್ಕಾಗಿಯೇ ಸ್ವತಃ ಪಕ್ಷದ ರಾಷ್ಟ್ರೀಯ ನಾಯಕನೇ ಡ್ರಾಮಾ ಮಾಡಲು ಹೊರಟಿದ್ದಾರೆ ಎಂದರೆ ಪಕ್ಷದ ಸ್ಥಿತಿ ಯಾವ ರೀತಿಯಲ್ಲಿ ಹದಗೆಟ್ಟಿರಬಹುದು ಎಂದು ಆಲೋಚಿಸಬಹುದು…!! ಕಳೆದ ಗುಜರಾತ್ ಚುನಾವಣಾ ಸಂದರ್ಭದಲ್ಲಿ ಹಿಂದೂಗಳ ಓಲೈಕೆ ಮಾಡಲು ಹೊರಟ ಕಾಂಗ್ರೆಸ್ ಮಹಾರಾಜ ರಾಹುಲ್ ಗಾಂಧಿ ದೇವಸ್ಥಾನ ಸುತ್ತಲು ಆರಂಭಿಸಿದ್ದರು.
ಆದರೆ ಯಾವ ಫಲವೂ ದೊರೆಯಲಿಲ್ಲ ಮಹಾರಾಜನಿಗೆ. ಹಿಂದೂ ವಿರೋಧಿ ನೀತಿಗಳಿಂದಲೇ ಕಾಂಗ್ರೆಸ್ ನ್ನು ಜನರು ವಿರೋಧಿಸತೊಡಗಿದರು. ಆದ್ದರಿಂದಲೇ ಇಂದು ದೇಶದೆಲ್ಲೆಡೆ ಕೇಸರಿ ಪತಾಕೆಯನ್ನು ಬಿಜೆಪಿ ಹಾರಿಸತೊಡಗಿದೆ…!

ದೇಶದೆಲ್ಲೆಡೆ ನೆಲಕಚ್ಚಿರುವ ಕಾಂಗ್ರೆಸ್ ಉಳಿದಿರುವ ಒಂದು ರಾಜ್ಯ ಕರ್ನಾಟಕವನ್ನಾದರೂ ಉಳಿಸಿಕೊಳ್ಳುವ ಸಲುವಾಗಿ ಹರಸಹಾಸ ಪಡುತ್ತಿದೆ. ಈಗಾಗಲೇ ರಾಜ್ಯದಲ್ಲಿ ಹಿಂದೂ ವಿರೋಧಿ ಆಡಳಿತ ಕಾಂಗ್ರೆಸ್ ನಡೆಸುತ್ತಿದೆ ಆದರೂ ಚುನಾವಣೆ ಹೊಸ್ತಿಲಲ್ಲಿ ಹಿಂದುತ್ವದ ಜಪ ಮಾಡಲು ಶುರುಮಾಡಿದ್ದಾರೆ ಕಾಂಗ್ರೆಸ್ ನಾಯಕರು.
ರಾಜ್ಯದಲ್ಲಿ ಜಾತಿಯ ವಿಚಾರವಾಗಿ ಜನರನ್ನು ವಿಂಗಡಿಸಿದ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಇದೀಗ ಜಾತಿವಾದವನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಆರಂಭಿಸಿದೆ…!

ಈಗಾಗಲೇ ಗುಜರಾತ್ ನಲ್ಲಿ ‘ಟೆಂಪಲ್ ರನ್’ ಮಾಡಿ ಸೋತ ಕಾಂಗ್ರೆಸ್ ನ ಮಹಾರಾಜ ಇದೀಗ ಕರ್ನಾಟಕದಲ್ಲೂ ಹಿಂದುತ್ವದ ಜಪ ಮಾಡಲು ತಯಾರಾಗಿದ್ದಾರೆ…!

ಯಡಿಯೂರಪ್ಪ ರವರ ಮಾದರಿಯಲ್ಲೇ ರಾಹುಲ್ ಗಾಂಧಿ…!

ಹೌದು , ಈಗಾಗಲೇ ಕರ್ನಾಟಕದಲ್ಲಿ ಮನೆಮಾತಾಗಿರುವ ಯಡಿಯೂರಪ್ಪ ನವರ ನೇತ್ರತ್ವದ “ಪರಿವರ್ತನಾ ಯಾತ್ರೆ” ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪರಿವರ್ತನಾ ಯಾತ್ರೆಗೆ ಪ್ರತೀ ಊರಿನಲ್ಲೂ ಉತ್ತಮ ರೀತಿಯ ಸ್ಪಂದನೆ ವ್ಯಕ್ತವಾಗುತ್ತಿದ್ದು ಬಿಜೆಪಿ ಯ ಈ ರ್ಯಾಲಿಗೆ ಲಕ್ಷ ಲಕ್ಷ ಜನ ಸೇರುತ್ತಿದ್ದಾರೆ…! ಮುಂದಿನ ಚುನಾವಣಾ ದ್ರಷ್ಠಿಯಿಂದ ಪಕ್ಷ ಸಂಘಟನೆಗಾಗಿ ಯಡಿಯೂರಪ್ಪ ನವರು ಈ ಆಂದೋಲನ‌ ನಡೆಸುತ್ತಿದ್ದು ಪ್ರತೀ ಕಾರ್ಯಕ್ರಮದಲ್ಲೂ ಕಾಂಗ್ರೆಸ್ ನ ಹಣೆಬರಹವನ್ನು ಎಳೆ ಎಳೆಯಾಗಿ ಜನರೆದುರು ಬಿಡಿಸಿಡುವ ಮೂಲಕ ಸಿದ್ದರಾಮಯ್ಯನವರ ಆಡಳಿತದ ವೈಫಲ್ಯವನ್ನು ಜನರಿಗೆ ತಿಳಿಸುತ್ತಾ ಇದ್ದಾರೆ. ಪ್ರತೀ ಊರಿಗೂ ಬಸ್ ನ ಮೂಲಕ ತೆರಳಿ ಜನರ ಜೊತೆ ನೇರ ಸಂಪರ್ಕ ಇಟ್ಟುಕೊಂಡು ಉತ್ತಮ‌ ಬೆಂಬಲ ಪಡೆಯುತ್ತಿದ್ದಾರೆ…!

ಇದೇ ಕಾರಣಕ್ಕೆ ರಾಹುಲ್ ಗಾಂಧಿ ಕೂಡ ಯಡಿಯೂರಪ್ಪ ನವರ ಮಾದರಿಯಲ್ಲೇ ಇದೀಗ “ವಿಶೇಷ ಬಸ್” ನ ಮೂಲಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ…! ರಾಜ್ಯ ಪ್ರವಾಸಕ್ಕೆ ತಯಾರಾಗಿರುವ ರಾಹುಲ್ ಗಾಂಧಿ ಈ ಬಾರಿ ಬಸ್ ನ ಮೂಲಕ ರಾಜ್ಯ ಸುತ್ತಲಿದ್ದಾರೆ. ಈ ಮೂಲಕ ತಾನೊಬ್ಬ ‘ಸಾಮಾನ್ಯ’ ಎಂಬಂತೆ ಬಿಂಬಿಸಲು ಹೊರಟಿದ್ದಾರೆ…!
ತಾನು ಯಾವುದೇ ಪ್ರದೇಶಕ್ಕೆ ಹೋದರು ವಿಶೇಷ ವಿಮಾನ ಅಥವಾ ಹೆಲಿಕಾಪ್ಟರ್ ಮೂಲಕ ತೆರಳುವ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಸ್ ಮೂಲಕ ಬಂದು ರಾಜ್ಯ ಸುತ್ತಲಿದ್ದಾರೆ…!

ಈಗಾಗಲೇ ರಾಹುಲ್ ಗಾಂಧಿಯ ಈ ಪ್ರವಾಸಕ್ಕೆ “ವಿಶೇಷ ಬಸ್” ಚೆನ್ನೈನಲ್ಲಿ ತಯಾರಾಗುತ್ತಿದೆ.
ತಾನೊಬ್ಬ ಸಾಮಾನ್ಯ ಎಂಬುದನ್ನು ಬಿಂಬಿಸಲು ಹೊರಟ ರಾಹುಲ್ ಗಾಂಧಿಯ ಈ ಬಸ್ ಐಶಾರಾಮಿಯಾಗಿದ್ದು ವಿಶೇಷ ರೀತಿಯ ಸವಲತ್ತುಗಳನ್ನು ಹೊಂದಿದೆ.

ರಾಜ್ಯದ ಜನರನ್ನು ಮೋಸ ಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಕೆಲ ಪ್ರಮುಖ ದೇವಾಲಯಗಳನ್ನು ಭೇಟಿ ಮಾಡಲಿರುವ ರಾಹುಲ್ ಗಾಂಧಿ ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿದ್ದು ಕರ್ನಾಟಕದಲ್ಲೂ “ಟೆಂಪಲ್ ರನ್” ಮಾಡಲು ತಯಾರಾಗಿದ್ದಾರೆ…!

ಕೇವಲ ರಾಜ್ಯದ ಜನರ ಸಿಂಪತಿ ಗಿಟ್ಟಿಸಿಕೊಳ್ಳುವ ಸಲುವಾಗಿ ತೋರ್ಪಡಿಕೆಗಾಗಿ ಬಸ್ ಮೂಲಕ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ರಾಹುಲ್ ಗಾಂಧಿ ಯ ಈ “ವಿಶೇಷ ಬಸ್” ಗೆ ಲಕ್ಷ ಲಕ್ಷ ಖರ್ಚು ಮಾಡಲಾಗುತ್ತಿದೆ ಎಂದು ಮೂಲಗಳ ಪ್ರಕಾರ ತಿಳಿದಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ತನ್ನ ಪಕ್ಷವನ್ನು ಬಲಗೊಳಿಸಲು ಹರಸಾಹಸ ಪಡುತ್ತಿದೆಯಾದರೂ ಕಾಂಗ್ರೆಸ್ ನ ಎಲ್ಲಾ ಹಗರಣಗಳು ಇಂದು ಪ್ರತಿಯೊಂದು ಮನೆಯಲ್ಲೂ ಪ್ರತಿಯೊಬ್ಬರ ಬಾಯಲ್ಲಿದೆ. ಆದ್ದರಿಂದ ದೇಶದೆಲ್ಲೆಡೆ ಬಿಜೆಪಿಯನ್ನು ವಿಸ್ತರಿಸಿ ಕೇಸರಿ ಪತಾಕೆ ಹಾರಿಸುತ್ತಿರುವ ಮೋದಿ ಸರ್ಕಾರ ಕರ್ನಾಟಕದಲ್ಲೂ ಮ್ಯಾಜಿಕ್ ಮಾಡಲಿದ್ದಾರೆ…!
–ಅರ್ಜುನ್

Tags

Related Articles

Close