ಅಂಕಣ

ಮೋದಿ ಚುನಾವಣೆಗೂ ಮುನ್ನ ಕೊಟ್ಟ ಭರವಸೆಯಂತೆ ನನ್ನ ಹದಿನೈದು ಲಕ್ಷ ಹಣ ಇಂದು ನನ್ನ ಖಾತೆಗೆ ಪಾವತಿಸಿದ್ದಾರೆ..! ನಿಮಗೆ ಇನ್ನೂ ಬಂದಿಲ್ಲವೆಂದರೇ ಇದನ್ನೊಮ್ಮೆ ಓದಿ!

ಏನ್ ಗೊತ್ತಾ ಗುರು?!

ಯಾವಾಗ ಜಾಕೀರ್ ನಾಯಕ್ ಭಾರತ ಬಿಟ್ಟು ಓಡಿದನೋ, ಆತನ ನೂರಾರು ಕೋಟಿ ಹಣವನ್ನು ದೇಶದ ಅಭಿವೃದ್ಧಿಗೆ ಮುಟ್ಟುಗೋಲು ಹಾಕಿಕೊಂಡರು!

ಯಾವಾಗ ನಮ್ಮ ಶತ್ರು ದೇಶದ ಒಳಹೊಕ್ಕು ಸರ್ಜಿಕಲ್ ಸ್ಟ್ರೈಕ್ ನಡಸಿ ಉಗ್ರರನ್ನು ಮಟ್ಟ ಹಾಕಿ ಪಾಕಿಸ್ತಾನದ ಎದೆಯೊಳಗೆ ಭಯ ಅನ್ನುವ ಬೀಜ ನೆಟ್ಟರೋ

ಯಾವಾಗ ಮೋದಿ ‘ನೋಟು ಅಮಾನೀಕರಣ’ವನ್ನು ಮಾಡಿದರೋ, 500 ಹಾಗೂ 1000 ರೂಗಳ ಲೆಕ್ಕ ಸಿಕ್ಕಿತು! ಪ್ರತ್ಯೇಕತಾವಾದಿಗಳ ನೋಟುಗಳೆಲ್ಲ ಕೇವಲ ಕಾಗದವಾಯಿತು! ದಾವೂದ್ ನ ಹಣಕಾಸು ವ್ಯವಸ್ಥಾಪಕ ಟವರ್ ಮೇಲಿಂದ ನೆಗೆದು ಆತ್ಮಹತ್ಯೆ ಮಾಡಿಕೊಂಡ! ಅದೆಷ್ಟೋ ನೋಟುಗಳು ಕಸದ ಬುಟ್ಟಿ ಕಂಡವು!

ಇದಾದ ಮೇಲೆ ಕಾಶ್ಮೀರದಲ್ಲಿ ನಮ್ಮನ್ನ ಕಾಯುವ ಸೈನಿಕರಿಗೆ ಎಸೆಯುತ್ತಿದ್ದ ಕಲ್ಲುಗಳು ಸಂಪೂರ್ಣವಾಗಿ ನಿಂತು ಹೋಯಿತು

Why all the Violence in Jammu-Kashmir Has Suddenly Stopped???

ಹಿಂದೆ ಒಂದು ಉಗ್ರ ಸತ್ತಾಗ ಮಾಧ್ಯಮಗಳೆಲ್ಲ ದೊಡ್ಡ ಸಂಚಲನವಾಗುತ್ತಿತ್ತು

ಅದರೆ ಕಳೆದ ಆರು ತಿಂಗಳಲಲ್ಲಿ ಬರೋಬರಿ 143 ಉಗ್ರರನ್ನು ಕೊಂದು ಕಾಶ್ಮೀರದ ಹೆಸರನ್ನೂ ಕೇಳಿದರೂ ಉಗ್ರರು ಭಯ ಪಡುವಂತಾಗಬೇಕು ಅಂತ ಮಾಡಿದರಲ್ಲ ಈ ಮೋದಿ ಮತ್ತು ಅಜಿತ್ ದೋವಲ್ ಇದಕ್ಕಿಂತ ಜಾಸ್ತಿ ಇನ್ನೇನು ಬೇಕು ದೇಶ ಭಕ್ತನಿಗೆ..

ಇಷ್ಟೇ ಅಲ್ಲ,

ನಕ್ಸಲರ ಹಾವಳಿಯ ಬಗ್ಗೆ ಕಳೆದ ಒಂದು ವರ್ಷದಿಂದ ಯಾವುದಾದರೂ ಸುದ್ದಿ ಕೇಳಿದ್ದೀರಾ?

ಮಕ್ಕಳನ್ನು ಕದ್ದು ಮಾರಟ ಮಾಡುವ ಅತೀ ದೊಡ್ಡ ಜಾಲಕ್ಕೆ ನೋಟ್ ಬ್ಯಾನ್ ನಂತರ ದಿಕ್ಕೆ ತೋಚದಂತಾಗಿದೆ. ವರುಷಕ್ಕೆ 2 ಮಿಲಿಯನ್ ಮಕ್ಕಳು ಕಾಣೆಯಾಗಿ ಈ ದಂದೆಗೆ ಬಳಸ್ಪಡುವುದು ಭಾಗಶಃ 90 ನಿಂತು ಹೋಗಿದೆ

MUST READ! What Has Demonetization Done to 20 Trillion Human Trafficking Industry ??

ಯಾವಾಗ ನಕಲಿ ಬಾಬಾನಾದ ರಾಮ್ ರಹೀಮ್ ಜೈಲಿನಲ್ಲಿ ಮಾಮೂಲು ತಟ್ಟೆ ಹಿಡಿದು ಕೂತನೋ,

ಯಾವಾಗ ದುಬೈನಲ್ಲಿ ದಾವೂದ್ ನ 35,000 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತೋ,

ಯಾವಾಗ ದಾವೂದ್ ನ 42,000 ಕೋಟಿ ಹಣದ ಲಂಡನ್ನಿನಲ್ಲಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತೋ,

ಯಾವಾಗ NIA ಪ್ರತ್ಯೇಕತಾವಾದಿಗಳಿಗೆ ಹಣದ ಸಹಾಯ ಮಾಡುತ್ತಿದ್ದ ಪಾಕಿಸ್ಥಾನದ ಸಂಪರ್ಕವನ್ನು ಪತ್ತೆ ಹಚ್ಚಿತೋ,

ಯಾವಾಗ ಉಗ್ರಗಾಮಿಗಳ ಶವದೇಹಗಳನ್ನೆಲ್ಲ ಗುಡ್ಡೆ ಹಾಕಿ ಪೇರಿಸತೊಡಗಿದರೋ,

ಯಾವಾಗ ಮಾಂಸ ಖಾದ್ಯಗಳ ಉದ್ಯಮಿ ಮೊಯಿನ್ ಖುರೇಶಿ ಜೈಲಿನಲ್ಲಿ ರಾಗಿ ಮುದ್ದೆ ತಿನ್ನುವಂತಾಯಿತೋ,

ಯಾವಾಗ ಸಾಧ್ವಿಯ ಎಂಟೊಬ್ಬತ್ತು ವರ್ಷಗಳ ನರಕಯಾತನೆ ಕೊನೆಯಾಗಿ ಜೈಲಿನಿಂದ ಬಿಡುಗಡೆಯಾದಳೋ,

ಯಾವಾಗ ಲೆಫ್ಟಿನೆಂಟ್ ಕಾಲೋನೆಲ್ ಪುರೋಹಿತ್ ಗೆ ಸತತ ಒಂಭತ್ತು ವರ್ಷಗಳ ಹೋರಾಟದ ನಂತರ ಜಾಮೀನು ಸಿಕ್ಕಿ, ಆತನ ದಕ್ಷತೆ ಹಾಗೂ ಪ್ರಾಮಾಣಿಕತೆ ಭಾರತಕ್ಕೆ ತಿಳಿಯುವಂತಾಯಿತೋ,…..

ಯಾವಾಗ ಹೊರ ದೇಶಗಳಿಂದ ಅನುದಾನವನ್ನು ತೆಗೆದುಕೊಂಡು ಭಾರತದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದ ಹಾಗೂ ಹಿಂದೂಗಳ ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಅದೆಷ್ಟೋ NGO ಗಳನ್ನು ರದ್ದುಗೊಳಿಸಿದರೋ,

ಯಾವಾಗ ಮನುಕುಲಕ್ಕೇ ಮಾರಕವಾದ ರೋಹಿಂಗ್ಯಾ ಮುಸಲ್ಮಾನರನ್ನು ಭಾರತದಿಂದ ಗಡೀಪಾರುಗೊಳಿಸಬೇಕೆಂಬ ಒಕ್ಕೊರಲಿನ ಧ್ವನಿ ಸಂಸತ್ತಿನಲ್ಲಿಯೇ ಎದ್ದಿತೋ,

ಯಾವಾಗ ತ್ರಿವಳಿ ತಲಾಖ್ ಹಾಗೂ ನಿಕಾಹ್ ಹಲಾಲ್ ಎಂಬ ಇಸ್ಲಾಂ ನ ಅನಿಷ್ಟ ಪದ್ಧತಿಯೊಂದು ಶಾಶ್ವತವಾಗಿ ರದ್ದಾಗಿ ಮುಸಲ್ಮಾನ ಹೆಣ್ಣು ಮಕ್ಕಳ ಹೋರಾಟಕ್ಕೆ ಜಯ ದೊರಕಿತೋ,

ಯಾವಾಗ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಶುಭಸೂಚಕವಾದ ನವರಾತ್ರಿಯನ್ನು ರಾಷ್ಟ್ರಪತಿ ಭವನದಲ್ಲಿ ಆಚರಿಸಲು ಪ್ರಾರಂಭಿಸಿದರೋ,

ಯಾವಾಗ ಭಾರತದ ಹಬ್ಬವಾದ ನವರಾತ್ರಿಯನ್ನು ಇಡೀ ಸಂಸತ್ತು ಸಂಭ್ರಮದಿಂದ ಆಚರಿಸಿತೋ,

ಯಾವಾಗ ದೋಕಲಂ ಗಡಿ ವಿವಾದ ತೆಗೆದಿದ್ದ ಚೀನಾಗೆ ಮುಖಭಂಗವಾಗಿ, ತಾನೇ ಉಗಿದಿದ್ದ ಎಂಜಲನ್ನು ನೆಕ್ಕುವಂತಾಯಿತೋ,. , . . . .

ಅಬ್ಬಾ! ಈ ಸಾಧನೆಗಳನ್ನು ಹೊರತು ಪಡಿಸಿ ಇನ್ನೂ ನೂರಾ ಹದಿನೈದು ಸಾಧನೆಗಳನ್ನೂ ನಾನು ಸಾಕ್ಷ್ಯಾಧಾರಿತ ತೋರಿಸಬಹುದು!

ಒಂದೇ ಒಂದು ಹಗರಣವಿಲ್ಲ! ವಾಜಪೇಯಿ ಸರಕಾರದಲ್ಲಿ ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಯಾವ ಹಗರಣವೂ ಇಲ್ಲ! ಇನ್ನೂ ಇದೆ ಹೇಳಿದರೆ!

ಒಂದು ಸತ್ಯ ಗೊತ್ತಾ?! ಈ ಮೇಲೆ ಹೇಳಿದ ಎಲ್ಲಾ ಸಾಧನೆಗಳಿಂದ ನನ್ನದೊಂದು ಹದಿನೈದು ಲಕ್ಷ ಮತ್ತೆ ಮರಳಿ ಬಂದಿದೆ ನನಗೆ! ಮುಂದಿನ ದಿನಗಳಲ್ಲಿ ಏನೆಲ್ಲ ಆಗಲಿದೆಯೋ, ನನ್ನ ಹದಿನೈದು ಲಕ್ಷಕ್ಕೆ ಅವೆಲ್ಲ ಬೋನಸ್ ಗಳಾಗಿ ಹಾಗೂ ಬಡ್ಡಿಗಳಾಗಿ ರೂಪುಗೊಳ್ಳುತ್ತವಷ್ಟೇ!

ನೀವು ಯಾಕೆ ಸರಕಾರ 30 ರೂಪಾಯಿಗೆ ಪೆಟ್ರೋಲನ್ನು ಖರೀದಿಸಿ 70 ರೂಪಾಯಿಗಳಿಗೆ ಮಾರುತ್ತವೆ ಎಂದು ಕೇಳುವುದಾದರೆ ಯಾಕೆ ಸರಕಾರ 16 ರೂಪಾಯಿಗಳಿಗೆ ಖರೀದಿಸಿದ ಗೋಧಿಯನ್ನು 2 ರೂಗಳಿಗೆ ಭಾರತೀಯರಿಗೆ ನೀಡುತ್ತದೆಂಬುದನ್ನೂ ಸಹ ನೀವು ಕೇಳಲೇಬೇಕು!

ಇಷ್ಟೇ ಅಲ್ಲ! ಯಾಕೆ 50 ರೂಗಳಿಗೆ ಖರೀದಿಸಿದ ಸೀಮೆ ಎಣ್ಣೆಯನ್ನು 15 ರೂಪಾಯಿಗಳಿಗೆ ಮಾರುತ್ತದೆಂಬುವುದನ್ನೂ ನೀವು ಕೇಳಬೇಕು! ಯಾಕೆ 40 ರೂಪಾಯಿಗೆ ಖರೀದಿಸುವ ಸಕ್ಕರೆಯನ್ನು ಕೇವಲ 26 ರೂಪಾಯಿಗಳಿಗೆ ನೀಡುತ್ತಾರೆ ಎಂಬುವುದನ್ನೂ ನೀವು ಕೇಳಬೇಕು! ಯಾಕೆ ಉಪನ್ಯಾಸಕರಿಗೆ ಲಕ್ಷಗಟ್ಟಲೆ ಸಂಬಳ ನೀಡಿದ ಮೇಲೆ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆಂಬುದನ್ನೂ ನೀವು ಕೇಳಬೇಕಾಗುತ್ತದೆ! ಯಾಕೆ ಸಾರ್ವಜನಿಕರ ಹತ್ತಿರ ಹಣ ಕೇಳದೇ 60 ಲಕ್ಷ ಶೌಚಾಲಯಗಳನ್ನು ಉಚಿತವಾಗಿ ನಿರ್ಮಿಸಲಾಯಿತು ಎಂದು ನೀವು ಕೇಳಬೇಕಾಗುತ್ತದೆ! ಯಾಕೆ ಉಚಿತವಾಗಿ ಮೂರು ಕೋಟಿ ಗ್ಯಾಸ್ ಸ್ಟೋವ್ ಗಳನ್ನು ಬಡವರಿಗೆ ನೀಡಲಾಯಿತು ಎಂಬುವುದನ್ನೂ ನೀವು ಕೇಳಲೇಬೇಕಾಗುತ್ತದೆ!

ಆದರೆ. . . .

ಪೆಟ್ರೋಲ್ ಬೆಲೆ ಜಾಸ್ತಿಯಾದುದನ್ನೇ ಹಿಡಿದು ಕೂತ ಒಂದಷ್ಟು ಮಂದಿಗೆ ಈ ವಾಸ್ತವಗಳು ತಲೆಗೆ ಹತ್ತುವುದಿಲ್ಲ! ಪೆಟ್ರೋಲ್ ಯಾಕೆ ಜಾಸ್ತಿ ಎಂದು ಸವಾಲೆಸೆದ ಮಂದಿಯ ಮನೆಯ ಮಕ್ಕಳೆಲ್ಲರೂ ಒಂದು ಲೀಟರ್ ಗೆ ಕೇವಲ ಹದಿನೈದು ಕಿ.ಮೀ ಮೈಲೇಜು ಕೊಡುವ ಎರಡು ಲಕ್ಷದ ಬೈಕ್ ಓಡಿಸುವವರೇ! ಇಂತಹವರಿಗೆಲ್ಲ ನೆಹರೂ ಮಾಮಾನಾಗುತ್ತಾನೆ! ಮಾಯಾವತಿ ತಂಗಿಯಾಗುತ್ತಾಳೆ! ಮಮತಾ ಅಕ್ಕನಾಗುತ್ತಾಳೆ! ಜಯಲಲಿತಾ ಅಮ್ಮನಾಗುತ್ತಾಳೆ! ಅತೀ ದುಷ್ಟ ಸೋನಿಯ ಗಾಂಧಿ ಸೊಸೆಯಾಗುತ್ತಾಳೆ! ಆದರೆ, ಮೋದಿ ಮಾತ್ರ ಭಾರತದ ಮಗನೆಂಬುವುದನ್ನು ಒಪ್ಪುವುದೇ ಇಲ್ಲ!

ಇಲ್ಲಿ ವಾಸ್ತವವಾಗಿ ಇರುವುದು ಪೆಟ್ರೋಲ್ ಬೆಲೆ ಏರಿಕೆಯಾಗಿರುವುದಲ್ಲ! ವಿಷಯ ಇಷ್ಟೇ! ದೇಶದ್ರೋಹಿಗಳಾದ ಭಯೋತ್ಪಾದಕರ ಹಿತೈಷಿಯೆಂಬ ಬಿರುದು ಹೊಂದಿರುವ ಜನಗಳಿಗೆ ಮೋದಿಯ ಅಧಿಕಾರವನ್ನು ಮುರಿದು ಒಳನುಗ್ಗಿ ಭಾರತವನ್ನು ರಾಜಕೀಯವಾಗಿ ಹಾಳುಗೆಡವಲಾಗುತ್ತಿಲ್ಲ ಎಂಬುದಷ್ಟೇ!

– ತಪಸ್ವಿ

Tags

Related Articles

Close