ಪ್ರಚಲಿತ

ಯಾಕೆ ಸಿದ್ಧರಾಮಯ್ಯನವರ ಸರಕಾರ ಮುಸಲ್ಮಾನರ ಮೇಲಿರುವ ಕೋಮು ಗಲಭೆಯ ಮೊಕದ್ದ ಮೆಗಳನ್ನು ವಜಾಗೊಳಿಸುತ್ತಿದೆ ಗೊತ್ತೇ?! ಇಲ್ಲಿದೆ ಸ್ಫೋಟಕ ಮಾಹಿತಿ!

ಚುನಾವಣೆಗೆ ಕೇವಲ ಬರೋಬ್ಬರಿ ಎಂದರೆ ಎರಡು ಅಥವಾ ಮೂರು ತಿಂಗಳಿದೆ! ಅಷ್ಟರಲ್ಲಿಯೇ ಮತ್ತೆ ಕೆಳಮಟ್ಟದ ತುಷ್ಟೀಕರಣದ ರಾಜಕಾರಣಕ್ಕಿಳಿದಿದೆ ರಾಜ್ಯ ಕಾಂಗ್ರೆಸ್ ಸರಕಾರ! ಇವತ್ತು, ರಾಮಲಿಂಗಾರೆಡ್ಡಿ, ಮಾಧ್ಯಮದವರ ಸುದ್ದಿಗೋಷ್ಟಿಯನ್ನು ಕರೆದು, ಕಳೆದ ನಾಲ್ಕು ವರ್ಷಗಳಲ್ಲಿ ಯಾವ್ಯಾವ ಮುಸಲ್ಮಾನರ ಮೇಲೆ ಮೊಕದ್ದಮೆಗಳು ದಾಖಲಾಗಿವೆಯೋ, ಅಂತಹ ಪ್ರತಿ ಮೊಕದ್ದಮೆಯನ್ನೂ ಕೈ ಬಿಡಬೇಕೆಂದು ಆಜ್ಞೆ ಮಾಡಿದ್ದಾರೆ! ಉದ್ದೇಶ ಏನು ಗೊತ್ತಾ?! ಕೋಮು ಗಲಭೆಯನ್ನು ಕಡಿಮೆ ಮಾಡುವ ಸಲುವಾಗಿ! ಹೇಳಿಕೆ ನೀಡಿದ್ದೇ ಈಗೊಂದು ಬಹುದೊಡ್ಡ ವಿವಾದಕ್ಕೆ ಕಾರಣವಾಗಿದೆ!

ಹಾಸ್ಯಾಸ್ಪದವಲ್ಲವೇ ಇದು?! ಕಟುಕರನ್ನು, ಅಪರಾಧಿಗಳನ್ನು ಜೈಲಿನಿಂದ ಹೊರಗಿಟ್ಟು, ಸಮಾಜದ ಒಳಗಿಟ್ಟು ರಾಜ್ಯದ ಶಾಂತಿ ಕಾಪಾಡುತ್ತೇನೆಂದು ಹೊರಟರೆ ಸಾಧ್ಯವೇ?! ಅರ್ಥವಿದೆಯೇ?! ಅಥವಾ, ನಮ್ಮನ್ನು ಬಿಡುಗಡೆ ಮಾಡಿಬಿಟ್ಟರೆಂಬ ಕಾರಣಕ್ಕೆ ಎಲ್ಲವನೂ ಮರೆತು ಆದರ್ಶ ವ್ಯಕ್ತಿಯಾಗುತ್ತಾನೆಯೇ?!

ಅಲ್ಲ ಸ್ವಾಮಿ! ಕಳೆದ ಸಿದ್ಧರಾಮಯ್ಯನವರ ನಾಲ್ಕೂವರೆ ವರುಷಗಳಲ್ಲಿ, 21 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ! ಅದರಲ್ಲಿಯೂ., NIA ಪಿಎಫ್ ಐ ಮತ್ತು ಎಸ್ ಡಿ ಪಿ ಐ ಸಂಘಟನೆಯ ಕೈವಾಡವಿದೆ ಎಂದು ವರದಿ ನೀಡಿದೆ! ದೇಶಾದ್ಯಂತ, ಈ ಎರಡೂ ಸಂಘಟನೆಗಳನ್ನು ನಿಷೇಧಿಸಿ ಎಂಬ ಕೂಗೇಳುತ್ತಿದೆ! ಕಾಂಗ್ರೆಸ್ ಸರಕಾರದಲ್ಲಾದಷ್ಟು ಕೋಮು ಗಲಭೆ ಯಾವ ಸರಕಾರದ ಆಡಳಿತವಿದ್ದಾಗಲೂ ಆಗಲಿಲ್ಲ ಎಂಬ ಸತ್ಯವೂ ಮುಂದಿದೆ! ಇಷ್ಟಿದ್ದರೂ, ಅಂತಹ ಮುಸಲ್ಮಾನ ವ್ಯಕ್ತಿಗಳನ್ನು, ಕೋಮು ಗಲಭೆಯ ಅಪರಾಧದಡಿ ಯೇ ಮೊಕದ್ದಮೆ ದಾಖಲಾಗಿರುವ ಮುಸಲ್ಮಾನರನ್ನು
ಸರಕಾರ ಬಿಡುಗಡೆ ಮಾಡಲು ಹೊರಟಿದೆಯಲ್ಲವಾ?! ನೈತಿಕತೆಯ ಶಬ್ದದ ಅರ್ಥವಾದರೂ ಇವತ್ತಿನ ಸಿದ್ಧರಾಮಯ್ಯನ ಸರಕಾರಕ್ಕೆ ಗೊತ್ತಿದೆಯೇ?!

ಇಷ್ಟು ದಿನ, ಅಪರಾಧಿಗಳೆಂದೆನಿಸಿಕೊಂಡವರನ್ನೇ ಬಿಡುಗಡೆ ಮಾಡ ಹೊರಟು ಯಾವ ರೀತಿಯ ಶಾಂತಿಯನ್ನು ಕಾಪಾಡತೊಡಗಿದೆ ಸರಕಾರ?! ಯಾರು ಅಪರಾಧ ಎಸಗಿದ್ದಾರೋ, ಅಂತಹವರಿಗೆ ಕಾನೂನಿನ ಅಡಿಯಲ್ಲಿ, ಶಿಕ್ಷೆಯಾಗಲೇಬೇಕು! ಆದರೆ, ಕಾಂಗ್ರೆಸ್ ಏನು ಮಾಡುತ್ತಿದೆ?! ಅಪರಾಧಿಗಳನ್ನು ಸ್ಚತಂತ್ರ್ಯವಾಗಿ ಹಾರಲು ಬಿಟ್ಟು ಯಾವ ರೀತಿಯ ರಕ್ಷಣೆ ಕೊಡಬಹುದು?!

ಇದನ್ನೇ ಮಾಧ್ಯಮದವರು ಕೇಳಿದಾಗ, ರಾಮಲಿಂಗಾರೆಡ್ಡಿ ಕೊಟ್ಟ ಉತ್ತರ ಏನು ಗೊತ್ತೇ?!

“ಎಲ್ಲಾ ಸರಕಾರಗಳೂ ಚುನಾವಣೆ ಹತ್ತಿರ ಬಂದಾಗ ಇದನ್ನೇ ಮಾಡುತ್ತವೆ” ಎಂಬ ಬೇಜವಾಬ್ದಾರಿ ಉತ್ತರ! ಇದೊಂದರಲ್ಲಿಯೇ ಕರ್ನಾಟಕದ ಪ್ರಜೆಗಳರಿಯಬೇಕಿದೆ! ಎಷ್ಟು ತೆರನಾದ ತುಚ್ಛ ಸರಕಾರವೊಂದನ್ನು ತಾಯಿ ಭುವನೇಶ್ವರಿಗೆ ಅರ್ಪಿಸಿದ್ದೇವೆಂದು! ಎಲ್ಲ ಸರಕಾರಗಳೂ ಹೀಗೆಯೇ ಎಂದು ಸಮರ್ಥಿಸಿಕೊಂಡ ರೆಡ್ಡಿ ಸಾಕ್ಷ್ಯಗಳನ್ನು ಕೊಡಲು ಶಕ್ತರಿರುವರೇ?!

ಇದೇ ಕೆಲವು ದಿನಗಳ ಹಿಂದೆ, ಮಂಗಳೂರಿನಲ್ಲಿ ಕೋಮು ಗಲಭೆಗಳ ಕಿಚ್ಚೆದ್ದಾಗ, ಮುಸಲ್ಮಾನನೇ ಆಗಲಿ, ಹಿಂದೂವೇ ಆಗಲಿ, ಅಪರಾಧಿಗೆ ಶಿಕ್ಷೆಯಾಗಬೇಕು ಎಂದಿದ್ದು ಇದೇ ಸಿದ್ಧರಾಮಯ್ಯ! ಆದರೆ, ಇವತ್ತು ನೋಡಿದರೆ?! ಅದೇ ಮುಸಲ್ಮಾನರನ್ನು ಬಿಡುಗಡೆ ಮಾಡಿ ಎಂಬ ಹುಕುಂ ಕೊಟ್ಟಿದ್ದಾರಲ್ಲವಾ?! ಇದು ಮತಕ್ಕೋಸ್ಕರ ಆದರ್ಶವನ್ನೇ ಮರೆತವನು ದೇಹವನ್ನೇ ಮಾರಿಕೊಂಡವನಿಗಿಂತ ಕಡೆಯಾಗುವುದಿಲ್ಲವೇ?!

Image result for PFI

ಇದೇ ಸರಕಾರ, ತಿಂಗಳ ಹಿಂದಷ್ಡೇ, ಪಿ ಎಫ್ ಐ ಕಾರ್ಯಕರ್ತರ ಮೇಲಿದ್ದ 175 ಕ್ರಿಮಿನಲ್ ಮೊಕದ್ದಮೆಗಳನ್ನು ವಜಾಗೊಳಿಸಿದೆ! ಅದೂ ಸಹ, ರಾಷ್ಟ್ರದ್ರೋಹ, ಕೋಮುಗಲಭೆ , ಹತ್ಯೆಗೆ ಪ್ರಯತ್ನ.. ಇಂತವೇ ಮೊಕದ್ದಮೆಗಳಿದ್ದದ್ದಾರೂ ವಜಾಗೊಳಿಸಿರುವಾಗ, ಕೊನೆಗದೇ ಪ್ರಶ್ನೆ ಉಳಿಯುವುದು! “ನೈತಿಕತೆ ಇದೆಯಾ!?!”

ಎನ್ ಐ ಎ ವರದಿ ನೀಡಿದ್ದರೂ, ಸಿದ್ಧರಾಮಯ್ಯ ಸರಕಾರ ಇಷ್ಟು ಕಡೆಗಣನೆ ಮಾಡುತ್ತಿರುವುದರಲ್ಲಿ ಅರ್ಥವಿದೆಯಾ?! ಜವಾಬ್ದಾರಿಯುವ ಮನುಷ್ಯನಾಗಿ ಮಾಡುವ ಕೆಲಸವಾ ಇದು?! ಮೊದಲನೆಯದಾಗಿ, ಮುಸಲ್ಮಾನರ ಮೇಲಿನ ಮೊಕದ್ದಮೆಗಳನ್ನು ವಜಾ ಮಾಡುತ್ತಿರುವುದು, ಕೇವಲ ಅವರೆಲ್ಲ ಪಿಎಫ್ ಐ ಮತ್ತು ಎಸ್ ಡಿ ಪಿ ಐ ಕಾರ್ಯಕರ್ತರೆಂಬ ಕಾರಣಕ್ಕೆ!

Image result for Siddaramaiah meets PFI activists

ಇತ್ತೀಚೆಗೆ, ಅವೆರಡೂ ಸಂಘಟನೆಗಳ ಜೊತೆ ಕೂತು ರಾಜಕೀಯ ಮಾತುಕಥೆ ನಡೆಸಿದ್ದ ಸಿದ್ಧರಾಮಯ್ಯರವರಿಂದ ರಾಮ ರಾಜ್ಯ ನಿರೀಕ್ಷಿಸುವುದು ಸಾಧ್ಯವೇ?! ತುಘಲಕ್ ಆಡಳಿತವೆನ್ನುವುದಕೆ ಸೂಕ್ತವಾದೀತು!

ಇದು ನಾಚಿಕೆಗೇಡಿನ ವಿಷಯ! ಮತಕ್ಕೋಸ್ಕರ ., ಅಧಿಕಾರಕ್ಕೋಸ್ಕರ. . . ಕಟುಕರನ್ನೂ, ಅಪರಾಧಿಗಳನ್ನೂ ಓಲೈಸುವುದು, ಸಂವಿಧಾನವನ್ನು
ಪಾಲಿಸದಿರುವುದು, ಕಾನೂನನ್ನು ಗಾಳಿಗೆ ತೂರುವುದು, ಪ್ರಜಾ ಪಾಲನೆಯಲ್ಲಿ ತುಷ್ಟೀಕರಣ ಮಾಡುವುದು.. . ಅಧರ್ಮದಿಂದ ಸೊಕ್ಕುರಿಯುವುದು! ಇವೆಲ್ಲ ಯಾವ ಲಕ್ಷಣ ಗೊತ್ತೇ?! ಆರುಗ ದೀಪ ಜೋರಾಗಿ ಉರಿಯುವಂತೆ ಒಬ್ಬ ಪ್ರಜಾಪೀಡಕನಾದವನು ತನ್ನದೆಲ್ಲವನೂ ಕಳೆದುಕೊಂಡು, ನಿಂದನೆಗೊಳಗಾಗಿ, ಬೀದಿ ಭಿಕಾರಿಯಾಗುವ ಕಾಲದ ಸನಿಹದಲ್ಲಿದ್ದಾನೆ ಎಂಬುದನ್ನು ಸೂಚಿಸುತ್ತದೆ!

ಛೇ! ಛೇ!

– ತಪಸ್ವಿ

Tags

Related Articles

Close