ನನ್ನ ರಕ್ತದ ಕ್ಷಾತ್ರತೇಜಸ್ಸನ್ನು ತೋರುವ ಮುನ್ನ ನನ್ನೆದುರು ಸಾವು ಬಂದರೆ ನಾನು ಸಾವನ್ನೆ ಕೊಂದುಬಿಡುತ್ತೇನೆ,( If death strikes before i prove my blood, I promise (swear), I will kill death, )
–ಕಾಪ್ಟನ್ ಮನೋಜ್ ಕುಮಾರ್ ಪಾಂಡೆ…
ಮನೋಜ್ ಕುಮಾರ್ ಪಾಂಡೆ ಹುಟ್ಟಿದ್ದು ೨೫ ಜೂನ್ ೧೯೭೫ ಸೀತಾಪುರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ , ಅತ್ಯಂತ ಕ್ಲಿಷ್ಟಕರವಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸು ಮಾಡಿದ ಈತ ಆರ್ಮಿಯನ್ನು ಸೇರಿದ ಮೇಲೆ ಗೂರ್ಖಾ ರೈಫಲ್ಸ್ನಲ್ಲಿದ್ದ.
ಸರ್ವೀಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ಎಲ್ಲರಿಗೂ ‘ನೀವೇಕೆ ಸೇನೆ ಸೇರುತ್ತಿದ್ದೀರಿ’ ಎಂದು ಕೇಳುತ್ತಾರೆ. ಬಹಳಷ್ಟು ಜನ ಅದೊಂದು ದಿನ ಸೇನಾ ಮುಖ್ಯಸ್ಥನಾಗುತ್ತೇನೆ ಎಂದು, ಇಲ್ಲವೇ ಮತ್ಯಾವುದಾದರೂ ಹುದ್ದೆಗೆ ಹೋಗುತ್ತೇನೆ ಎಂದು ಉತ್ತರಿಸುತ್ತಾರೆ. ಈ ಹುಡುಗ ಮಾತ್ರ ಅವತ್ತು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ- ‘ನಾನು ಸೇನೆ ಸೇರುತ್ತಿರುವುದೇ ಪರಮವೀರಚಕ್ರ ಪಡೆಯುವುದಕ್ಕೆ..’ ಅದನ್ನ ಸೇನೆ ಬಿಟ್ಟು ಬೇರೆಲ್ಲೂ ಕೊಡಲ್ವಲ್ಲಾ?
ನವಾಜ್ ಷರೀಫ್ ಅವರೊಂದಿಗೆ ಕೈಕುಲುಕಿದ್ದ ವಾಜಪೇಯಿ ಅವರ ಸರ್ಕಾರ ನಡುಗಿತ್ತು, ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆ ಶುರುವಾಯ್ತು. ಆಪರೇಷನ್ ವಿಜಯ ಶುರುವಾಯ್ತು.
ಮನೋಜ್ ಕುಮಾರ್ ಪಾಂಡೆಯ ತುಕಡಿಗೆ ಬಟಾ
ಅದು 1999, ಜೂನ್ 11. ಜುಬರ್ ಶಿ
ಮುಂದುವರಿದು ಮಧ್ಯರಾತ್ರಿಯ ವೇಳೆಗೆ
ಅಷ್ಟರಲ್ಲಿ ಹೆಗಲು, ಕಾಲಿಗೆ ತೀವ್ರ
ಸಾಮಾನ್ಯವಾಗಿ ಬಂಕರ್ ಒಂದರಲ್ಲಿ ಒಂದು ಮಷಿನ್ ಗನ್ ಇರುತ್ತದೆ. ಪ್ರತಿ ಮಿನಿಟಿಗೆ 600 ಗುಂಡುಗಳನ್ನು ಕಕ್ಕುವ ಮಷಿನ್ ಗನ್ ಗಳು ಅವು. ಅವುಗಳ ನಡುವೆಯೇ ಆತ ಒಂದು ಮತ್ತು ಎರಡನೇ ಬಂಕರುಗಳನ್ನು ಗ್ರೆನೇಡಿನಲ್ಲಿ ಉಡಾಯಿಸಿಯೇಬಿಟ್ಟ. ಆಗ ಆತನ ತೋಳಿಗೆ ಮತ್ತು ಕಾಲಿಗೆ ಗುಂಡುಗಳು ಬಿದ್ದವು. ಜತೆಯಲ್ಲಿದ್ದ ಹುಡುಗರು ಹೇಳಿದರು- ‘ಇಲ್ಲೇ ನಿಲ್ಲಿ ಸಾಹೆಬ್.. ನಾವು ಮುಂದುವರಿಯುತ್ತೇವೆ..’ ಆತ ಹೇಳಿದ- ‘ಕರ್ನಲ್ ಗೆ ನಾನು ಮಾತು ಕೊಟ್ಟಿದ್ದೇನೆ. ನಾನೇ ಹೋರಾಟ ಮುಗಿಸುತ್ತೇನೆ..’ ಹಾಗನ್ನುತ್ತಲೇ ಮೂರನೇ ಬಂಕರನ್ನೂ ಉಡಾಯಿಸಿದ. ನಾಲ್ಕನೆಯದರ ಬಳಿ ಸಾರಿದಾಗ ಅದಾಗಲೇ ಸುಸ್ತಾಗಿದ್ದ. ಸ್ಥಿರತೆ ಸಹಜವಾಗಿಯೇ ತಪ್ಪಿತ್ತು. ಅಷ್ಟಾಗಿಯೂ ನಾಲ್ಕನೇ ಬಂಕರ್ ಗುರಿಯಾಗಿಸಿ ಗ್ರೈನೆಡ್ ಮುಚ್ಚಳ ಜಗ್ಗಿದ. ಆಗಲೇ ನನ್ನ ಕಣ್ಣೆದುರು ಪಾಕಿಸ್ತಾನಿ ಮಷಿನ್ ಗನ್ನುಗಳು ಆತನ ತಲೆಯನ್ನು ಸೀಳಿಬಿಟ್ಟವು. ಆ ಕ್ಷಣದಲ್ಲೇ ಸಾವು ಬಂತು. ಆದರೆ ಅಚ್ಚರಿ ನೋಡಿ. ಅಂಥ ಸಂದರ್ಭದಲ್ಲೂ ಆತ ಎಸೆದ ಗ್ರೆನೆಡ್ ಗುರಿ ತಲುಪಿ ನಾಲ್ಕನೇ ಬಂಕರನ್ನು ಉಡಾಯಿಸಿತು..
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಸಂ
“A man is not dead until he is forgotten” ಎಂಬ ಮಾತೊಂದಿದೆ. ಇವತ್ತು ನಾವು ಚೆನ್ನಾಗಿದ್ದೇವೆ
ಕಾರ್ಗಿಲ್ ಉಳಿಸಿಕೊಳ್ಳುವುದಕ್ಕಾಗಿ ಅಂದು 527 ಸೈನಿಕರು ತಮ್ಮ ಜೀವವನ್ನೇ ಬಲಿ
– ಮಹೇಶ