ಪ್ರಧಾನಿ ನರೇಂದ್ರ ಮೋದಿ ಅವರ ನಾಡಲ್ಲಿ ಬಿಸಿರಕ್ತದ ಯುವಕ ಎಂದು ಖ್ಯಾತಿಯಾಗಿದ್ದಲ್ಲದೇ, ದೇಶದ್ರೋಹಿ ಎನ್ನುವ ಪಟ್ಟವನ್ನು ಅಲಂಕರಿಸಿದ ವ್ಯಕ್ತಿ ಹಾರ್ದಿಕ್
ಪಟೇಲ್!! ಇದೀಗ ಹಾರ್ದಿಕ್ ಪಟೇಲ್ ಎಲ್ಲೆಡೆ ಸುದಿಯಾಗಿದ್ದು, ಕಾಂಗ್ರೆಸ್ನ ಕೈಗೊಂಬೆಯಾಗಿರುವುದು ಮಾತ್ರ ಅಕ್ಷರಶಃ ನಿಜ!! ಈಗಾಗಲೇ ಪಟೇಲ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವವರ ಮುಂದಾಳತ್ವ ವಹಿಸಿಕೊಂಡಿರುವ ಹಾರ್ದಿಕ್, ಈ ಬಗ್ಗೆ ಅನೇಕ ಬಂದ್ಗಳನ್ನು ಮಾಡಿ ಪೊಲೀಸರಿಗೂ ಅತಿಥಿಯಾಗಿದ್ದರು!! ಕಾಂಗ್ರೆಸ್ನ ಹಿತೈಷಿಯೆಂದೇ ಬಿಂಬಿತರಾಗಿರುವ ಹಾರ್ದಿಕ್, ರಾಹುಲ್ ಗಾಂಧಿಯನ್ನು ರಹಸ್ಯವಾಗಿ ಭೇಟಿ ಮಾಡಿರುವ ವಿಚಾರ ಬಯಲಾಗಿದ್ದು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಹೊರೆಸುತ್ತಾ, ತನ್ನದೇ ಆದ ನಕರಾತ್ಮಕ ಮಾಹಿತಿಗಳನ್ನು ಭಿತ್ತರಿಸಿ, ನಾಯಕನಾಗಿ
ಹೊರಹೊಮ್ಮುತ್ತಿರುವ “ಸೋ ಕಾಲ್ಟ್ ಲೀಡರ್” ಈತ!! ಭಾರತ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯ ನಡೆಯುವ ಕ್ರೀಡಾಂಗಣದಲ್ಲಿ ಪ್ರತಿಭಟಿಸುವ ಬೆದರಿಕೆ ಹಾಕಿದ್ದ
ಹಾರ್ದಿಕ್ ಜೈಲು ಸೇರಿದ್ದು, ತದನಂತರದಲ್ಲಿ ಮತ್ತೆ ತ್ರಿವರ್ಣ ಧ್ವಜಕ್ಕೆ ಅವಮಾನವೆಸಗಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಕೋಟ್ ಪೆÇಲೀಸರ ಅಥಿತಿಯೂ ಆಗಿದ್ದರು ಈ ಪಟೇಲ್ ಮೀಸಲಾತಿ ಹೋರಾಟಗಾರ!! ಒಂದಲ್ಲ ಒಂದು ರೀತಿಯಾಗಿ ಎಡವಟ್ಟು ಮಾಡುತ್ತಿರುವ ಈತ, ರಾಹುಲ್ ಗಾಂಧಿಯನ್ನು ರಹಸ್ಯವಾಗಿ ಬೇಟಿ ನೀಡಿ, ರಾಹುಲ್ ಗಾಂಧಿಯನ್ನೇ ಬೇಟಿ ಮಾಡಿಲ್ಲ ಎಂದು ಹೇಳುತ್ತಿದ್ದಾರೆ ಎಂದರೆ ಇದರ ಒಳಗಿರುವ ಮರ್ಮವಾದರೂ ಏನು??
“ರಾಹುಲ್ ಅವರನ್ನು ತಾವು ಭೇಟಿಯಾಗಿಲ್ಲ” ಎಂದು ಸುಳ್ಳು ಹೇಳಿದ್ದ ಹಾರ್ದಿಕ್!!
ಪಟೇಲ ಸಮುದಾಯ ತನ್ನನ್ನು ರಾಜಕೀಯಕ್ಕೇ ಎಂಟ್ರಿ ಮಾಡಲು ಪ್ರೇರೆಪಿಸಿದರೆ ರಾಜಕೀಯವನ್ನು ಪ್ರವೇಶಿಸುವೇ ಎಂದಿದ್ದ ಹಾರ್ದಿಕ್ ಪಟೇಲ್, ಗುಜರಾತಿನ
ಪಂಚತಾರಾ ಹೋಟೆಲ್ನಲ್ಲಿ ಗೆಹ್ಲೋಟ್ ಅವರೊಂದಿಗೆ ಮಾತುಕತೆ ನಡೆಸಲು ಹಾರ್ದಿಕ್ ಪಟೇಲ್ ಹೋಗಿದ್ದಾಗ, ಅದೇ ಹೋಟೆಲ್ನಲ್ಲಿದ್ದ ರಾಹುಲ್ ಗಾಂಧಿ
ಅವರೊಂದಿಗೂ ಮಾತುಕತೆ ನಡೆಸಿದ್ದರು ಎನ್ನುವ ವದಂತಿಗಳು ಹಬ್ಬಿತ್ತು!! ಆದರೆ, ಹಾರ್ದಿಕ್ ಅವರು ರಹಸ್ಯವಾಗಿ ರಾಹುಲ್ ಗಾಂಧಿ ಅವರನ್ನೂ ಗೌಪ್ಯವಾಗಿ ಭೇಟಿ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಮಾಧ್ಯಮಗಳು ಹೊರಹಾಕಿದ್ದಾರೆ!!
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತಾವು ಸೋಮವಾರ ರಹಸ್ಯವಾಗಿ ಭೇಟಿ ಮಾಡಿರುವುದಾಗಿ ಮಾಧ್ಯಮಗಳಲ್ಲಿ ಬಂದ ವರದಿಗೆ ಸ್ಪಷ್ಟನೆ ನೀಡಿರುವ ಹಾರ್ದಿಕ್ ಪಟೇಲ್, ರಾಹುಲ್ ಅವರನ್ನು ತಾವು ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ!!
ಆದರೆ, ಹಾರ್ದಿಕ್ ಅವರು ಹೋಟೆಲ್ ಪ್ರವೇಶಿಸುವ ಮತ್ತು ಅಲ್ಲಿಂದ ತೆರಳಿದ ವಿಚಾರಗಳನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆ ಹಿಡಿದಿದ್ದು, ಈ ಮಾಹಿತಿಗಳನ್ನು
ಮಾದ್ಯಮಗಳು ಪ್ರಸಾರ ಮಾಡಿದ್ದವು!! ಅಷ್ಟೇ ಅಲ್ಲದೇ, ಪ್ರಸಾರ ಮಾಡಿದ್ದ ಸುದ್ದಿ ವಾಹಿನಿಗಳು, ಹಾರ್ದಿಕ್ ಅವರು ರಹಸ್ಯವಾಗಿ ರಾಹುಲ್ ಅವರನ್ನೂ ಭೇಟಿ
ಮಾಡಿದ್ದಾರೆ ಎಂದು ವರದಿ ಮಾಡಿದ್ದವು!! ಈ ಸಂದರ್ಭದಲ್ಲಿ ಮಾಧ್ಯಮದಲ್ಲಿ ಈ ದೃಶ್ಯಾವಳಿಗಳು ಪ್ರಸಾರವಾಗುತ್ತಿದ್ದಂತೆ ಟ್ವೀಟ್ ಮಾಡಿದ ಅಶೋಕ್ ಗೆಹ್ಲೋಟ್, ಹಾರ್ದಿಕ್ ಅವರು ತಮ್ಮನ್ನು ಭೇಟಿ ಮಾಡಲು ಬಂದಿದ್ದರು ಎಂದು ಹೇಳಿದ್ದಾರೆ. ನಂತರ ಸರಣಿ ಟ್ವೀಟ್ಗಳನ್ನು ಮಾಡಿರುವ ಗೆಹ್ಲೋಟ್, ಬಿಜೆಪಿಯು ಕಾಂಗ್ರೆಸ್ ಮುಖಂಡರನ್ನು ಹಿಂಬಾಲಿಸುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.
#HardikRahulMeetExposed | Republic TV accesses CCTV exposing secret meet pic.twitter.com/in2Szccp2Z
— Republic (@republic) October 25, 2017
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಹುಲ್ ಗಾಂಧಿ ಹಾರ್ದಿಕ್ ಗೆ ದೊಡ್ಡ ಮೌಲ್ಯದ ಮೊತ್ತವನ್ನು ನೀಡಿದ್ದಾರೆಯೇ???
ಗುಜರಾತಿನ ಪಂಚತಾರಾ ಹೋಟೆಲ್ನಲ್ಲಿ ಗೆಹ್ಲೋಟ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ರಾಹುಲ್ ಗಾಂಧಿ ಅವರನ್ನು ತಾವು ಸೋಮವಾರ ರಹಸ್ಯವಾಗಿ ಭೇಟಿ ಮಾಡಿರುವುದಾಗಿ ಮಾಧ್ಯಮಗಳಲ್ಲಿ ಸುದ್ದಿ ಭಿತ್ತರಿಸಲಾಗಿದೆ!! ಅದರೊಂದಿಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಬಗ್ಗೆ ಮಾಹಿತಿ ಸಿಕ್ಕಿದೆ!! ಸಿಸಿಟಿವಿ ದೃಶ್ಯಾವಳಿಯನ್ನು ಸರಿಯಾಗಿ ಗಮನಿಸಿದಾಗ ಅದರಲ್ಲಿ ಒಂದಷ್ಟು ವಿಚಾರಗಳು ನಮಗೆ ಭಾಸವಾಗುತ್ತೆ ಅದೇನೆಂದರೆ, ಈ ಹಾರ್ದಿಕ್ ಪಟೇಲ್ ಹಾಗೂ ಆತನ ಸಹಚರರು ರಾಹುಲ್ ಗಾಂಧಿಯನ್ನು ಬೇಟಿ ಮಾಡಿ ಬರುವ ವೇಳೆ ಸಹಚರರ ಕೈಯಲ್ಲಿ ಒಂದು ಚೀಲ ಇರುವಂತೆ ಭಾಸವಾಗಿದ್ದು ಅದರಲ್ಲೇನಿರಬಹುದು ಎನ್ನುವ ಸಂಶಯ ಇದೀಗ ಮೂಡಿದೆ!! ಹಾಗಾದರೆ ಚುನಾವಣೆಗಾಗಿ ದೊಡ್ಡ ಮೊತ್ತದ ಹಣವನ್ನೇನಾದರೂ ನೀಡಿದ್ದಾರೆಯೇ ರಾಹುಲ್ ಗಾಂಧಿ??
#BREAKING on #HardikRahulMeetExposed | Hardik Patel cornered after CCTV footage exposed; threatens to sue hotel over CCTV footage leak pic.twitter.com/taQiKI9cTT
— Republic (@republic) October 25, 2017
ಇನ್ನು ಬಿಜೆಪಿ ಚಳುವಳಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಹಾರ್ದಿಕ್ ಪಟೇಲ್ ಆಪ್ತರಾದ ವರುಣ್ ಪಟೇಲ್ ಹಾಗೂ ರೇಷ್ಮಾ ಪಟೇಲ್ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, “ಹಾರ್ದಿಕ್ ಪಟೇಲ್ ಕಾಂಗ್ರೆಸ್ ಏಜೆಂಟ್, ಆತನಿಂದ ಸಮುದಾಯಕ್ಕೆ ಯಾವುದೇ ರೀತಿಯ ಲಾಭವಿಲ್ಲ” ಎಂದು ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಪೆÇಲೀಸರನ್ನು ಕೊಲ್ಲಿ ಎಂದು ಉತ್ತೇಜಿಸಿದ್ದ ಕಾರಣಕ್ಕೆ ದೇಶ ದ್ರೋಹದ ಆರೋಪದ ಮೇಲೆ ಹೊತ್ತುಕೊಂಡಿದ್ದ ಈತನನ್ನು ರಾಹುಲ್ ಗಾಂಧಿಯೇ ಬೆಂಬಲಿಸುತ್ತಿರುವಾಗ ದೇಶದ್ರೋಹದ ಆರೋಪ ಕ್ಷಣಿಕ ಎಂದನಿಸುತ್ತೆ!!
Why's @HardikPatel_ "hiding" & lying about his meeting with Rahul Gandhi @OfficeOfRG
That Hardik was at Taj room number 224 is confirmed.— Deepal Trivedi (@DeepalMirror) October 23, 2017
ಇಷ್ಟೆಲ್ಲಾ ಆರೋಪಗಳ ನಡುವೆಯೂ ರಾಹುಲ್ ಗಾಂಧಿಯನ್ನು ರಹಸ್ಯವಾಗಿ ಬೇಟಿಯಾಗಿದ್ದರು ಕೂಡ ಬೇಟಿಯಾಗಿಲ್ಲ ಎನ್ನುತ್ತಿರುವ ಈತ ಅದೆಷ್ಟು ರಹಸ್ಯಗಳನ್ನು
ಕಾಪಾಡುತ್ತಿದ್ದನೋ ನಾ ಕಾಣೆ!! ಹಾರ್ದಿಕ್ನ ಅದೆಷ್ಟೋ ಬೆಂಬಲಿಗರು, ಈತನ ಕಾಂಗ್ರೆಸ್ ಪ್ರೇಮವನ್ನು ಕಂಡು ಈತನ ವಿರುದ್ದವೇ ಸೆಟೆದು ನಿಂತಿದ್ದು, ಬಿಜೆಪಿಗೆ
ಸೇರ್ಪಡೆಗೊಳ್ಳುತ್ತಿದ್ದಾರೆ!! ತನ್ನ ಸಮುದಾಯ ಚುನಾವಣೆಗೆ ಪ್ರೆರೇಪಿಸಿದರೇ ಮಾತ್ರ ಚುನಾವಣೆಗೆ ಎಂಟ್ರಿಯಾಗುವೇ ಎಂದ ಹಾರ್ದಿಕ್ ಯಾರಾ ಪ್ರೇರಣೆಯಿಂದ
ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದಾರೆಯೋ ಏನೊ ಗೊತ್ತಿಲ್ಲ!!!
this @HardikPatel_ doesn't have guts to even admit that he met @OfficeOfRG & he will help patidars to get reservations. pic.twitter.com/8woiAaQMan
— Rishi Bagree ?? (@rishibagree) October 25, 2017
– ಅಲೋಖಾ