ಎಂತಹ ವಿಚಿತ್ರ ನೋಡಿ!! ಭಾರತ ಅದೆಷ್ಟೋ ನಿರಾಶ್ರಿತರಿಗೆ ಆಶ್ರಯ ನೀಡಿದಂತಹ ಪುಣ್ಯಭೂಮಿ. ಹಿಂದೂ ರಾಷ್ಟ್ರವಾಗಿದ್ದ ಭಾರತದಲ್ಲಿ ಸ್ವಾತಂತ್ರ್ಯ ಲಭಿಸಿದ ಕೆಲವೇ ಸಮಯಗಳಲ್ಲಿ ಕೆಲ ಕುತಂತ್ರಗಳಿಂದ ಮುಸಲ್ಮಾನರೇ ಅಧಿಕ ಸಂಖ್ಯೆಯಲ್ಲಿದ್ದ ಪಾಕಿಸ್ತಾನ, ಬಾಂಗ್ಲಾವು ಭಾರತದಿಂದ ಪ್ರತ್ಯೇಕಕೊಂಡು, ಅವುಗಳನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಿ ಮಾಡಿದ ನಂತರ ಆ ರಾಷ್ಟ್ರಗಳು ತಮಗೆ ಪ್ರತ್ಯೇಕ ರಾಷ್ಟ್ರ ಸಿಕ್ಕಿತು ಎನ್ನುವ ಬಗ್ಗೆ ಸಂತಸವೇನೋ ಪಟ್ಟರು. ಆದರೆ ಅಲ್ಲಿದ್ದ ಹಿಂದೂಗಳ ಪರಿಸ್ಥಿತಿ ಮಾತ್ರ ನರಕಕ್ಕಿಂತಲೂ ಕಡೆಯಾಗಿ ಹೋಗಿದ್ದು ಮಾತ್ರ ನಿಜಕ್ಕೂ ಕೂಡ ಬೇಸರದ ಸಂಗತಿ.
ಹೌದು…. ಭಾರತ ಹಿಂದೂ ರಾಷ್ಟ್ರವಾದರೂ ಕೂಡ ಎಲ್ಲಾ ಧರ್ಮದವರಿಗೂ ಆಶ್ರಯ ನೀಡಿದಂತಹ ಪುಣ್ಯ ನೆಲ!! ಆದರೆ ಹಿಂದೂಗಳನ್ನು ತುಚ್ಛವಾಗಿ ಕಾಣುವಂತಹ ರಾಷ್ಟ್ರಗಳು ಇಂದು ನಮ್ಮ ಕಣ್ಣು ಮುಂದೆ ಇದೆ ಎಂದರೆ ಅದು ನಿಜಕ್ಕೂ ಕೂಡ ಬೇಸರದ ಸಂಗತಿ!! ಭಾರತದ ಸಹಾಯದಿಂದ ಸ್ವಾತಂತ್ರ್ಯ ಪಡೆದಿರುವ ಬಾಂಗ್ಲಾದಲ್ಲಿ ಹಿಂದೂಗಳಿಗೆ ನೆಮ್ಮದಿ ಇಲ್ಲದಂತಾಗಿದ್ದು, ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ, ದಾಳಿ, ದರೋಡೆ, ಅತ್ಯಾಚಾರ ಅನಾಚಾರಗಳು ಅನಾಯಾಸವಾಗಿ ನಡೆಯುತ್ತಲೇ ಇದೆ. ಆದರೆ ಇದೀಗ ಇದು ತಾರಕಕ್ಕೇರಿದ್ದು, ಅಲ್ಲಿರುವ ಹಿಂದೂಗಳನ್ನು ಹೊಡೆದೊಡಿಸುವ ಪ್ರಯತ್ನಗಳು ಇನ್ನಿಲ್ಲದಂತೆ ನಡೆಯುತ್ತಿದೆ ಎಂದರೆ ನಂಬ್ತೀರಾ??
ಆದರೆ ಅದನ್ನು ನಂಬಲೇಬೇಕು!! ಯಾಕೆಂದರೆ ಭಾರತದಲ್ಲಿ ನಾವುಗಳು ಎಲ್ಲಾ ಧರ್ಮದವರನ್ನು ನಮ್ಮವರೇ, ನಮ್ಮ ಸಹೋದರರು ಎಂದು ಭ್ರಾತೃತ್ವದ ಭಾವದಿಂದ ಕಾಣುತ್ತೇವೆ. ಆದರೆ ಪಾಕಿಸ್ತಾನಿಯರೇ ಆಗಲಿ ಬಾಂಗ್ಲಾ ದೇಶಿಗರೇ ಆಗಿರಲಿ ಅವರು ಯಾವತ್ತೂ ಕೂಡ ಹಿಂದೂಗಳು ನಮ್ಮ ಸಹೋದರರೆಂದು ಕರೆದಿದ್ದು ಎಂದಾದರೂ ಕೇಳಿದ್ದೀರೇ?? ಅದೂ ಸಾಲದು ಎಂಬಂತೆ ಪೂರ್ವ ಕಾಲದಿಂದಲೂ ಅಲ್ಲೇ ನೆಲೆಸಿರುವ ಹಿಂದೂಗಳನ್ನು ಹೊಡೆದೊಡಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದರೆ ನಿಜಕ್ಕೂ ಕೂಡ ಬೇಸರದ ಸಂಗತಿಯಲ್ಲದೇ ಮತ್ತೇನು??
ಅಷ್ಟಕ್ಕೂ ಇಲ್ಲಿ ನಡೆದಿರುವ ನೈಜ್ಯ ಸಂಗತಿಯಾದರೂ ಏನು ಗೊತ್ತೇ??
ಹಿಂದೂಗಳ ಮೇಲೆ ನಿರಂತರವಾಗಿ ದಾಳಿ, ದರೋಡೆ, ಅತ್ಯಾಚಾರ ಅನಾಚಾರಗಳು ನಡೆಸುತ್ತಿರುವ ಬಾಂಗ್ಲಾದೇಶದ ಮುಸಲ್ಮಾನರು ಇದೀಗ ಹಿಂದೂಗಳ ಮೇಲೆ ಹಲ್ಲೆ ನಡೆಸಿ, ದೇಶ ಬಿಟ್ಟು ತೊಲಗಿ ಎಂದು ಒತ್ತಾಯಿಸುತ್ತಿದ್ದಾರೆ!! ಈ ಘಟನೆ ನಡೆದಿದ್ದು, ಬೇರಾವುದೇ ವಿಚಾರಕ್ಕಾಗಿ ಅಲ್ಲ, ದೇಶದ್ರೋಹದ ಕೆಲಸಕ್ಕಾಗಿಯೂ ಅಲ್ಲ. ಬದಲಾಗಿ ಹಿಂದೂಗಳು ಸಾಮೂಹಿಕವಾಗಿ ಕೀರ್ತನೆಯನ್ನು ಹಮ್ಮಿಕೊಂಡರು ಎನ್ನುವ ಒಂದೇ ಒಂದು ಕಾರಣಕ್ಕಾಗಿ!!
ಹೌದು… ಬಾಂಗ್ಲಾದೇಶದ ಖಜೂರಿಯಾ ಗ್ರಾಮದಲ್ಲಿ ಹಿಂದೂಗಳು ವಾರ್ಷಿಕ ಸಾಮೂಹಿಕ ಕೀರ್ತನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಈ ಒಂದು ಕಾರ್ಯಕ್ರಮಕ್ಕೆ ನೂರಾರು ಹಿಂದೂಗಳು ಪಾಲ್ಗೊಂಡಿದ್ದು, ಸಾಮೂಹಿಕವಾಗಿ ಕೀರ್ತನೆಯನ್ನು ತಕ್ಕ ಮಟ್ಟಿಗೆ ಅದ್ದೂರಿಯಿಂದಲೇ ಆಚರಿಸಲಾಗಿತ್ತು!! ಆದರೆ ಇದೇ ವೇಳೆ ಪ್ರವೇಶಿಸಿದ ಅಲ್ಲಿನ ಶಾಹಿನ್ ಮತ್ತು ನೂರುಲ್ ಹಕ್ ಎನ್ನುವ ಮುಸ್ಲಿಂ ಯುವಕರು ಹಿಂದೂಗಳ ಮೇಲೆ ದಾಳಿ ಮಾಡಿದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ಕೀರ್ತನೆ ಮಾಡುವಂತಿದ್ದರೇ, ಭಾರತಕ್ಕೆ ಹೋಗಿ ಎಂದು ಬೆದರಿಕೆ ಒಡ್ಡಿದ್ದಾರೆ.
ಕೇವಲ ಸಾಮೂಹಿಕ ಕೀರ್ತನೆಯನ್ನು ಹಮ್ಮಿಕೊಂಡಿದ್ದಕ್ಕಾಗಿ ಭಾರತಕ್ಕೆ ಹೋಗಿ ಎಂದು ಹೇಳಿರುವ ಮುಸಲ್ಮಾನರು ಅವಾಚ್ಯ ಶಬ್ದಗಳಿಂದ ಹಿಂದೂಗಳನ್ನು ನಿಂದಿಸಿರುವ ಬಗ್ಗೆ ಬಾಂಗ್ಲಾದ ಎಬೆಲಾ ಡಾಟ್ ಕಾಮ್ ವರದಿ ಮಾಡಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಶೋಚನೀಯವಾಗಿದ್ದು, ಹಿಂದೂಗಳ ಪರ ಧ್ವನಿ ಎತ್ತಿದರೆ ನಿರ್ಜನ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಸರದಿ ಸಾಲಿನಲ್ಲಿ ಕೂರಿಸಿ ಕೊಂದು ಹಾಕುತ್ತಾರೆ ಈ ರಾಕ್ಷಸರು!! ಅಷ್ಟೇ ಅಲ್ಲದೇ ಈಗಾಗಲೇ ಬಾಂಗ್ಲಾದಲ್ಲಿ ಅದೆಷ್ಟೋ ಹಿಂದೂಗಳನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ಕೊಡಬಾರದ ಹಿಂಸೆಗಳನ್ನು ನೀಡುತ್ತಾ ತಿನ್ನಲು ಅನ್ನವಿಲ್ಲದಿದ್ದರೂ ಕೂಡ ಹಿಂದೂ ಹೆಣ್ಣು ಮಕ್ಕಳ ದೇಹವನ್ನು ಬಯಸುತ್ತಿದ್ದು, ಇದೀಗ ಹಿಂದೂಗಳನ್ನೆಲ್ಲ ಹೊಡೆದೊಡಿಸುವ ತಂತ್ರವನ್ನೂ ರೂಪಿಸಿದ್ದಾರೆ.
ಹಿಂದೂಗಳ ಮೇಲೆ ನಡೆಯುತ್ತಿರುವ ಕಿರುಕುಳವನ್ನು ಬಿಚ್ಚಿಟ್ಟ ಬಾಂಗ್ಲಾ ಹಿಂದೂಗಳು!!
ಹೌದು… ಬಾಂಗ್ಲಾ ಮುಸಲ್ಮಾನರ ಕ್ರೌರ್ಯಗಳಿಗೆ ಬೇಸತ್ತಿರುವ ಹಿಂದೂಗಳಿಗೆ ಸೂಕ್ತ ಬೆಂಬಲವೇ ಇಲ್ಲದಂತಾಗಿದೆ. ಈ ಬಗ್ಗೆ ಎಬೆಲಾ ಡಾಟ್ ಕಾಮ್ ವರದಿ ಮಾಡಿದ್ದು, ಹಿಂದೂಗಳ ಮೇಲೆ ಬಾಂಗ್ಲಾ ಮುಸಲ್ಮಾನರು ನಡೆಸುತ್ತಿರುವ ದೌರ್ಜನ್ಯಗಳು ಈ ಮೂಲಕ ಮತ್ತೊಮ್ಮೆ ಬಯಲಾಗಿದೆ. “ಗ್ರಾಮದಲ್ಲಿ ಸಾಮಾನ್ಯ ಹಿಂದೂಗಳು ಜೀವನ ನಡೆಸುವುದೇ ದುಸ್ತರವಾಗಿದೆಯಲ್ಲದೇ ಜನರು ಆತಂಕದಲ್ಲೇ ಜೀವನ ನಡೆಸುವಂತಾಗಿದೆ. ಅಷ್ಟೇ ಅಲ್ಲದೇ ಸ್ಥಳೀಯ ಗುಂಡಾಗಳು ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಕಿರುಕುಳ ನೀಡುವ ಪ್ರಕ್ರಿಯೆ ನಿರಂತರವಾಗಿವೆ ಎಂದು ಗ್ರಾಮದ ಪುಲಿನ್ ಘರಾಮಿ, ಮಣಿಂದ್ರ ಬಿಸ್ವಾಸ್, ಮಹಾರಾಜ್ ಬಿಸ್ವಾಸ್, ಹರಿದಾಸ್ ಘರಾಮಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ, ಸ್ಥಳೀಯ ಆಡಳಿತ ಹಿಂದೂಗಳನ್ನು ರಕ್ಷಿಸಬೇಕು. ಇಲ್ಲದಿದ್ದರೇ ಜೀವನ ಮತ್ತಷ್ಟು ದುರಸ್ತರವಾಗಲಿದೆ ಎಂದು ಹಿಂದೂಗಳು ಈಗಾಗಲೇ ಆಗ್ರಹಿಸಿದ್ದಾರೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಜನಪ್ರತಿನಿಧಿಗಳು, ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆಯೂ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಹಿಂದೂ ಧರ್ಮದ ಬಗ್ಗೆ ಅಚಲವಾದ ಶ್ರದ್ಧಾ ಭಕ್ತಿಯನ್ನು ಹೊಂದಿರುವ ಭಾರತದ ಪ್ರಧಾನಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿರುವುದು ಅತೀ ಮುಖ್ಯವಾಗಿದೆ!! ಅಷ್ಟೇ ಅಲ್ಲದೇ ಈ ಬಗ್ಗೆ ಭಾರತ ಸಿಡಿದೇಳುತ್ತಾ ಎನ್ನುವ ಪ್ರಶ್ನೆಯೂ ಇದೀಗ ಮೂಡಿದೆ!!
ಒಟ್ಟಿನಲ್ಲಿ ಬಾಂಗ್ಲಾದಲ್ಲಿರುವ ಹಿಂದೂಗಳಿಗೆ ಅನಾದಿಕಾಲದಿಂದಲೂ ಬಾಳಿ ಬದುಕಿದ ಬಾಂಗ್ಲಾದಲ್ಲಿಯೇ ನೆಮ್ಮದಿಯ ನಿಟ್ಟುಸಿರು ಬಿಡಲಾಗುತ್ತಿಲ್ಲವಲ್ಲದೇ ಬಾಂಗ್ಲಾದಲ್ಲಿರುವ ಹಿಂದೂಗಳಿಗೆ ನೆಲೆಯೇ ಇಲ್ಲ ಎಂಬಂತಾಗಿದ್ದು ಮಾತ್ರ ನಿಜಕ್ಕೂ ಅಚ್ಚರಿಯ ವಿಚಾರ!! ಕೇವಲ ಸಾಮೂಹಿಕ ಕಾರ್ಯಕ್ರಮವನ್ನು ಹಮ್ಮಿಕೊಂಡರು ಎನ್ನುವ ಕಾರಣಕ್ಕಾಗಿ ತಮ್ಮ ತಮ್ಮ ಧರ್ಮದ ಬಗ್ಗೆ ಒಲವು ತೋರುವುದೇ ತಪ್ಪು ಎಂದು ಭಾವಿಸಿದರೆ, ಭಾರತದಲ್ಲಿ ಇಂದು ಮುಸಲ್ಮಾನರು ಅದೆಲ್ಲಿಗೆ ಹೋಗುತ್ತಿದ್ದರೋ ನಾ ಕಾಣೆ!!
– ಅಲೋಖಾ