ಪ್ರಚಲಿತ

ಭಗವಂತನ‌ ಬಗ್ಗೆ ಭಗವಾನ್ ವ್ಯಂಗ್ಯ: ಇಂತವರಿಗೆ ಕಾನೂನಿನಲ್ಲಿ ಶಿಕ್ಷೆ ಇಲ್ಲವೇ?

ಹೆಸರು ಭಗವಾನ್ ಎಂದಾದರೂ, ಹಿಂದೂ ಧರ್ಮದ ದೇವರುಗಳನ್ನು ಅವಮಾನ ಮಾಡೋದ್ರಲ್ಲಿ, ಅವಹೇಳನ ಮಾಡೋದ್ರಲ್ಲಿಯೇ ವಿಕೃತ ಸಂತೋಷಿ ಈ ಕ್ರಿಮಿ. ಹಿಂದೂ ಧರ್ಮ, ದೇವರುಗಳನ್ನು ಅವಹೇಳನ ಮಾಡಿಕೊಂಡು ಗಂಜಿ ತಿನ್ನುತ್ತಿರುವ ಈ ‘ಗಂಜಿ ಗಿರಾಕಿ’ ಲದ್ದಿ ಜೀವಿ ಈಗ ಕೋಟ್ಯಂತರ ಜನರ ಆರಾಧ್ಯ ದೈವ ಪ್ರಭು ಶ್ರೀರಾಮಚಂದ್ರನ ಬಗ್ಗೆ ನಾಲಿಗೆ ಹರಿಯಬಿಟ್ಟು, ತನ್ನ ತೀಟೆ ತೀರಿಸಿಕೊಂಡಿದ್ದಾನೆ.

ಹಿಂದೂ ಧರ್ಮದ ಕೃತಿಗಳ ಬಗೆಗೂ ಈ ಕ್ರಿಮಿಯ ನೆಗೆಟಿವ್ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಮಂಡ್ಯದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಈ ದುಷ್ಟ ಮೃಗ, ಶ್ರೀ ರಾಮ ಮದ್ಯಪಾನ ಮಾಡುತ್ತಿದ್ದ, ತನ್ನ ಹೆಂಡತಿ ಸೀತೆಗೂ ಹೆಂಡ ಕುಡಿಸುತ್ತಿದ್ದ ಎನ್ನುವ ಮೂಲಕ ಮತ್ತೆ ವಿವಾದ ಹುಟ್ಟು ಹಾಕಿದ್ದಾನೆ. ಹಾಗೆಯೇ ಈ ದೇಶದಲ್ಲಿ ರಾಮರಾಜ್ಯದ ಕಥೆಯನ್ನು ಹಾಗೆಯೇ ಕಟ್ಟಿ ಬಿಡಲಾಗಿದೆ. ಈ ಕಥೆ ಹೆಚ್ಚು ಹರಡಲು ಕಾರಣ ಗಾಂಧಿ. ವಾಲ್ಮೀಕಿ ರಾಮಾಯಣ ಅಥವಾ ಉತ್ತರಾಕಾಂಡದಲ್ಲಾಗಲಿ ರಾಮರಾಜ್ಯದ ಕಲ್ಪನೆಯ ಮಾಹಿತಿಯಾಗಲಿ, ಆಧಾರವಾಗಲಿ ಇಲ್ಲ ಎಂದು ಎಲುಬಿಲ್ಲದ ನಾಲಿಗೆಯಲ್ಲಿ ಬಾಯಿಗೆ ಬಂದಂತೆ ಬೊಗಳಿದ್ದಾನೆ.

ರಾಮ ೧೪ ವರ್ಷ ಕಾಡಿನಲ್ಲಿದ್ದ. ವನವಾಸದ ನಂತರ ೧೧ ವರ್ಷ ಆಳ್ವಿಕೆ ನಡೆಸಿದ. ಆದರೆ ಈತ ಆಡಳಿತ ನಡೆಸದೆ ಕೇವಲ ಪುರೋಹಿತರ ಬಳಿ ಕಥೆ ಹೇಳಿಕೊಂಡು ಕಾಲ ಕಳೆದಿದ್ದ. ಮಧ್ಯಾಹ್ನದ ಬಳಿಕ ತಾನೂ ಹೆಂಡ ಕುಡಿದು, ಸೀತೆಗೂ ಹೆಂಡ ಕುಡಿಸುತ್ತಿದ್ದ ಎಂದು ಹೇಳಿದ್ದಾನೆ. ಇದಕ್ಕೆ ದಾಖಲೆಗಳು ವಾಲ್ಮೀಕಿ ರಾಮಾಯಣ, ಉತ್ತರಾಕಾಂಡದಲ್ಲಿ ದೊರೆಯುತ್ತವೆ ಎಂದಿದ್ದಾನೆ. ಪತ್ನಿ ಸೀತೆಯ ಮೇಲೆ ಯಾರೋ ಅಪವಾದ ಹಾಕಿದರು ಎಂದು ಗರ್ಭಿಣಿ ಸೀತೆಯನ್ನು ಕಾಡಿಗಟ್ಟುತ್ತಾನೆ. ಆಕೆಗೆ ಸಮರ್ಥನೆಗೂ ಅವಕಾಶ ನೀಡಲಿಲ್ಲ. ಕಾಡಿನಲ್ಲಿ ವಾಲ್ಮೀಕಿ ಸಿಗದಿದ್ದರೆ ಆಕೆಯ ಕಥೆ ಏನಾಗಬೇಕಿತ್ತು?, ಹದಿನೇಳು ವರುಷ ಸೀತೆ ಏನಾದಳು ಎಂಬುದನ್ನೇ ರಾಮ ಕೇಳಲಿಲ್ಲ. ಆ ಬಳಿಕ ಅನ್ನ ನೀಡಿ ದೂರ್ವಾಸ ಮುನಿಯನ್ನು ಸಭೆಯ ವೇಳೆ ಬಿಟ್ಟಿದ್ದಕ್ಕೆ ತಮ್ಮ ಲಕ್ಷ್ಮಣನನ್ನು ಗಡಿಪಾರು ಮಾಡಿದ. ಲಕ್ಷ್ಮಣ ನದಿಯ ದಡದ ಮೇಲೆ ಸತ್ತ. ತಪಸ್ಸು ಮಾಡುತ್ತಿದ್ದ ಶೂದ್ರ ಶಂಭುಕನನ್ನು ರಾಮ ಕತ್ತಿಯಲ್ಲಿ ಕಡಿದು ಹಾಕಿದ. ಇವೆಲ್ಲ ರಾಮಾಯಣದಲ್ಲೇ ಉಲ್ಲೇಖವಾಗಿದೆ. ಆದರೂ ಅವನನ್ನು ಆದರ್ಶ ಪುರುಷ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾನೆ.

ಜನರು ಶ್ರೀರಾಮನ ಹೆಸರನ್ನು ಮಕ್ಕಳಿಗೆ ಇರಿಸುವುದರ ಬಗೆಗೂ ಕುಹಕವಾಡಿರುವ ಈ ಪಾಪಿ, ಹುಟ್ಟಿನಿಂದ ತಾನು ಧರಿಸಿರುವ ಭಗವಾನ್ ಎಂಬ ಹೆಸರನ್ನು ಬದಲಾಯಿಸದೆ ಇರುವುದು ದುರಾದೃಷ್ಟ.

ಒಟ್ಟಿನಲ್ಲಿ ತಾನು ತೆರೆಮರೆಗೆ ಸರಿಯುತ್ತಿದ್ದೇನೆ. ತನ್ನ ಅಸ್ತಿತ್ವ ಜನರು ಮರೆತು ಬಿಡುತ್ತಾರೆ ಎಂದು ಗೊತ್ತಾದಾಗ ಈ ಭಗವಾನ್ ಒಂದಿಲ್ಲೊಂದು ವಿವಾದ ಸೃಷ್ಟಿಸಿ ಮತ್ತೆ ತನ್ನ ಇರುವಿಕೆಯನ್ನು ಸಾಬೀತು ಮಾಡಲು ಪ್ರಯತ್ನ ಪಡುತ್ತಾನೆ. ಕೊನೆಗೆ ಸಾರ್ವಜನಿಕವಾಗಿ ಬೇಕಾಬಿಟ್ಟಿ ಹೇಳಿಕೆ ನೀಡಿ ತನ್ನ ಮರ್ಯಾದೆಯನ್ನು ತಾನೇ ಕಳೆದುಕೊಳ್ಳುತ್ತಾನೆ. ಗಂಜಿ ಹುಟ್ಟಿಸುವ ನೆಪದಲ್ಲಿ ಅಸ್ವಸ್ಥನಂತೆ ಹೇಳಿಕೆ ನೀಡುವ ಇಂತಹವರು ದೇಶದ ಹಿತಕ್ಕೆ ಅಪಾಯಕಾರಿ.

Tags

Related Articles

Close