ಇಡೀ ಜಗತ್ತನ್ನೇ ಇಸ್ಲಾಮೀಕರಣ ಮಾಡುತ್ತೇವೆ ಎಂದು ಹೇಳಿಕೊಂಡು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿರುವ ಜಿಹಾದಿಗಳು ದಿನದಿಂದ ದಿನಕ್ಕೆ ತಮ್ಮ ಕ್ರೌರ್ಯ ಮೆರೆಯುತ್ತಲೇ ಇದ್ದಾರೆ. ಜಗತ್ತಿನಾದ್ಯಂತ ಹಬ್ಬಿರುವ ಉಗ್ರ ಸಂಘಟನೆಗಳು ಪಾಕಿಸ್ತಾನವನ್ನು ತಮ್ಮ ತವರು ದೇಶವಾಗಿ ಉಪಯೋಗಿಸುತ್ತಿರುವುದು ಮಾತ್ರ ಸುಳ್ಳಲ್ಲ. ಧರ್ಮದ ಅತೀಯಾದ ಅಮಲಿನಿಂದ ತೇಲುತ್ತಿರುವ ಜಿಹಾದಿಗಳು ಭಾರತವನ್ನು ಹೆಚ್ಚು ಟಾರ್ಗೆಟ್ ಮಾಡಿದ್ದು, ಗಡಿಯಲ್ಲಿ ಪದೇ ಪದೇ ಉಪಟಳ ನೀಡುತ್ತಲೇ ಇದ್ದಾರೆ. ಆದರೆ ಭಾರತೀಯ ಸೈನಿಕರ ಪರಾಕ್ರಮದ ಮುಂದೆ ಯಾವ ಭಯೋತ್ಪಾದಕರ ದಾಳಿಯೂ ಫಲ ನೀಡುತ್ತಿಲ್ಲ. ಆದರೆ ದೇಶದಲ್ಲೇ ಇದ್ದು, ದೇಶದ್ರೋಹದ ಕೆಲಸಕ್ಕೆ ಕೈಹಾಕಿರುವ ಕೆಲವರು ಇದೀಗ ದೇಶದ ದೇಶದೊಳಗಿಂದಲೇ ಸಂಚು ರೂಪಿಸುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಯಾಕೆಂದರೆ ಇದೀಗ ಉತ್ತರ ಪ್ರದೇಶದಲ್ಲಿ ನಡೆದ ಬಾಂಬ್ ದಾಳಿ ಇಡೀ ದೇಶವನ್ನೇ ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಯಾಕೆಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರ ಘರ್ಜನೆಗೆ ಪಾಕ್ ಉಗ್ರರು ದಿನೇ ದಿನೇ ನೆಲಕ್ಕುರುಳುತ್ತಿದ್ದಾರೆ. ಆದರೆ ಇದೀಗ ಮುಸ್ಲೀಮರೇ ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿಯೇ ಸ್ಫೋಟಗೊಂಡಿದ್ದು, ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.!
ಗುಜರಿ ಅಂಗಡಿಯಲ್ಲೇ ಬಾಂಬ್ ಸ್ಫೋಟ..!
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಇದೀಗ ಬಾಂಬ್ ಸ್ಫೋಟಗೊಂಡಿದ್ದು, ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಜಫರ್ ನಗರದ ಗುಜರಿ ಅಂಗಡಿಯೊಂದರಲ್ಲಿ ಬಾಂಬ್ ಸ್ಫೋಟಗೊಂಡ ಘಟನೆ ಇದೀಗ ದೇಶವನ್ನೇ ತಲ್ಲಣಗೊಳಿಸಿದೆ. ಯಾಕೆಂದರೆ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಯಾವುದೇ ಮುಲಾಜಿಲ್ಲದೆ ಹೋರಾಡಿ , ದಿನೇ ದಿನೇ ಉಗ್ರರನ್ನು ಹೊಡೆದುರುಳಿಸಲಾಗುತ್ತಿದೆ. ಆದ್ದರಿಂದಲೇ ಈ ದಾಳಿ ಪ್ರತ್ಯುತ್ತರವಾಗಿ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಮುಜಫರ್ ನಗರ ಅತೀ ಹೆಚ್ಚು ಮುಸ್ಲೀಮರೇ ವಾಸವಾಗಿರುವ ಪ್ರದೇಶವಾಗಿದ್ದು, ಸ್ಥಳೀಯರ ಕೈವಾಡ ಕೂಡ ಇರಬಹುದು ಎಂಬ ಸಂಶಯ ವ್ಯಕ್ತವಾಗಿದೆ.!
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಶದಲ್ಲಿ ನಡೆಯುತ್ತಿರುವ ಉಗ್ರ ಸಂಹಾರವನ್ನು ಬೆಂಬಲಿಸಿ , ಉಗ್ರರ ವಿರುದ್ಧ ಬಿರ್ಸಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿರುವ ಬೆನ್ನಲ್ಲೇ ತಮ್ಮದೇ ರಾಜ್ಯದಲ್ಲಿ ಈ ರೀತಿ ಘಟನೆ ನಡೆದಿದ್ದು, ಮುಖ್ಯಮಂತ್ರಿಗಳು ಕೆಂಡಾಮಂಡಲವಾಗಿದ್ದಾರೆ. ಯಾಕೆಂದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಯೋಗಿ ಆದಿತ್ಯನಾಥ್ ಅವರು ಇದೀಗ ನಿರ್ಧರಿಸಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.!
ಮುಸ್ಲೀಮರೇ ಹೆಚ್ಚಾಗಿರುವ ಪ್ರದೇಶಗಳಲ್ಲಿ ದಾಳಿ..!
ಭಯೋತ್ಪಾದಕರಿಗೆ ಇಸ್ಲಾಂ ಧರ್ಮದ ಉಳಿವಷ್ಟೇ ಮುಖ್ಯ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದೀಗ ಸ್ವತಃ ಮುಸ್ಲೀಮರು ಅತೀ ಹೆಚ್ಚು ವಾಸಿಸುತ್ತಿರುವ ಪ್ರದೇಶದಲ್ಲಿ ಸ್ಪೋಟಗೊಂಡಿರುವುದರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯಾಕೆಂದರೆ ದಾಳಿಯಲ್ಲಿ ನಾಲ್ವರು ಈಗಾಗಲೇ ಸಾವನ್ನಪ್ಪಿದ್ದು, ಅಗ್ನಿಶಾಮಕ ಸಿಬ್ಬಂದಿಗಳು , ಉಗ್ರ ನಿಗ್ರಹ ದಳದ ಸಿಬ್ಬಂದಿಗಳು ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಸೂಕ್ತ ಕಾರಣ ಏನೆಂಬುದು ಸದ್ಯ ತಿಳಿದುಬಂದಿಲ್ಲವಾದರೂ ಗುಜರಿ ವ್ಯಾಪಾರಿಗಳೇ ಹೆಚ್ಚು ವಾಸಿಸುವ ಪ್ರದೇಶದಲ್ಲಿ ಸ್ಫೋಟಗೊಂಡಿದೆ.!
ಆದ್ದರಿಂದ ದೇಶಕ್ಕೆ ಹೊರಗಿನ ಉಗ್ರರಿಂದ ರಕ್ಷಿಸಲು ನಮ್ಮ ಸೈನಿಕರು ಜೀವದ ಹಂಗು ತೊರೆದು ಗಡಿಯಲ್ಲಿ ಕಾಯುತ್ತಿದ್ದಾರೆ. ಆದರೆ ಇತ್ತ ದೇಶದ ಒಳಗಿನಿಂದ ದುಶ್ಕೃತ್ಯಗಳು ನಡೆಯುತ್ತಿರುವುದರಿಂದ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಗಳು ಕೇಳಿ ಬರುತ್ತಿದೆ.!
–ಅರ್ಜುನ್