ಪ್ರಚಲಿತ

ಮೋದಿಗೆ ಟಾಂಗ್ ಕೊಡಲು ಹೋದ ರಮ್ಯಾಳನ್ನು ಗುಂಡಿಗೆ ಹಾಕಿದ ಬೆಂಗಳೂರು ಯುವಕರು‌.! ಮತ್ತೆ ಪೇಚೆಗೆ ಸಿಲುಕಿದ ಪದ್ಮಾವತಿ.!

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯ ಮೂಲಕವೇ ತನ್ನ ಹೆಸರು ಚಾಲ್ತಿಯಲ್ಲಿರುವಂತೆ ಮಾಡುತ್ತಿರುವ ಕನ್ನಡ ಚಿತ್ರರಂಗ ನಟಿ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾಳಿಗೆ ಇದೀಗ ಭಾರೀ ಅವಮಾನವೇ ಉಂಟಾಗಿದೆ. ಕೇವಲ ಸಿನಿಮಾಗಳಲ್ಲಿ ಅಭಿನಯಿಸಿ ಅಲ್ಪಸ್ವಲ್ಪ ಪಬ್ಲಿಸಿಟಿ ಗಿಟ್ಟಿಸಿಕೊಂಡಿದ್ದ ರಮ್ಯಾಳಿಗೆ ಅದೇನೋ ಪ್ರಚಾರದ ಹುಚ್ಚು, ಅದಕ್ಕಾಗಿಯೇ ಜಗತ್ತು ಕಂಡ ಅಪರೂಪದ ನಾಯಕ , ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಏನಾದರೊಂದು ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆದುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದು, ಭಾರೀ ಸುದ್ದಿಯಲ್ಲಿದ್ದಾಳೆ.!

ಪ್ರಧಾನಿ ಮೋದಿಯವರ ಬಗ್ಗೆ ಕೀಳಾಗಿ ಮಾತನಾಡುತ್ತಾ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಒಂದಲ್ಲಾ ಒಂದು ಹೇಳಿಕೆ ನೀಡುತ್ತಾ ಸುದ್ದಿಯಾಗುತ್ತಿರುವ ರಮ್ಯಾ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರಿಂದ ಉಗಿಸಿಕೊಂಡಿದ್ದು ಮಾತ್ರ ನೆನಪಿನಲ್ಲಿರಲೇಬೇಕು. ಪಾಕಿಸ್ತಾನವನ್ನು ಸ್ವರ್ಗ ಎಂದು ಕರೆಸಿಕೊಂಡವಳಿಂದ ಪಾಠ ಕಲಿಯಬೇಕಂತೆ, ಅದಕ್ಕಾಗಿಯೇ ಬೆಂಗಳೂರಿನ ಬಿಸಿರಕ್ತದ ಕೆಲ ಯುವಕರು ರಮ್ಯಾಳಿಗೆ ತಕ್ಕ ಪಾಠವೊಂದನ್ನೇ ಕಲಿಸಿದ್ದಾರೆ..!

ರಮ್ಯಾಳನ್ನು ಗುಂಡಿಗೆ ಹಾಕಿದ ಯುವಕರು..

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸದ್ಯ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇತ್ತೀಚೆಗೆ ಸಮಾವೇಶವೊಂದರಲ್ಲಿ ಮಾತನಾಡುತ್ತಾ , ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಬಹಳ ಅಸಮಧಾನ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರಕಾರ ಕಳೆದ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಡೆಸಿಲ್ಲ ಎಂಬುದಕ್ಕೆ ಇಲ್ಲಿನ ರಸ್ತೆಗಳೇ ಪ್ರತ್ಯಕ್ಷ ಸಾಕ್ಷಿ ಎಂದಿದ್ದರು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕ್ರೈಂ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ , ಬೆಂಗಳೂರು ಕಾಂಗ್ರೆಸ್ ಆಡಳಿತದಲ್ಲಿ ಕ್ರೈಂ ಸಿಟಿಯಾಗಿ ಬದಲಾಗಿದೆ, ಬೆಂಗಳೂರು ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಯಾಗಿದೆ ಎಂದಿದ್ದರು.

ಇದನ್ನೇ ತನ್ನ ತೀಟೆ ತೀರಿಸಿಕೊಳ್ಳಲು ಬಳಸಿಕೊಂಡ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಪ್ರಧಾನಿ ಮೋದಿಯವರ ಕಾಲೆಳೆಯುವ ಸಲುವಾಗಿ ವಿಧಾನಸೌಧದ ಮತ್ತು ಸ್ಟಾರ್ ಹೋಟೆಲ್‌ಗಳ ಸುತ್ತಮುತ್ತಲಿನ ರಸ್ತೆಗಳ ವಿಡಿಯೋ ಮಾಡಿ ಅದಕ್ಕೆ ನಮ್ಮ ಬೆಂಗಳೂರಿನ ರಸ್ತೆ ಈ ರೀತಿ ಉತ್ತಮವಾಗಿದೆ , ನಿಮ್ಮ ಊರಿನ ರಸ್ತೆ ನೀವು ನೋಡಿಕೊಳ್ಳಿ ಎಂದಿದ್ದರು. ರಮ್ಯಾ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಂತೆ ಆಕ್ರೋಷಗೊಂಡ ಸಿಲಿಕಾನ್ ಸಿಟಿಯ ಕೆಲ ಯುವಕರು ರಮ್ಯಾ ವಿರುದ್ಧ ಹೊಸ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.!

ರಮ್ಯಾಳ ಛಳಿ ಬಿಡಿಸಿದ ಸೆಲ್ಫಿ ಪ್ರೊಟೆಸ್ಟ್..!

ರಮ್ಯಾ ಕಾಂಗ್ರೆಸ್ ನ ಐಟಿ ಸೆಲ್‌ನ ಮುಖ್ಯಸ್ಥೆ ಆಗಿರುವುದರಿಂದ ತಾನೇನೇ ಮಾಡಿದರೂ ತೊಂದರೆಯಿಲ್ಲ ಎಂಬ ಆಲೋಚನೆಯಿಂದ ಇಂತಹ ಯಡವಟ್ಟು ಮಾಡಿಕೊಳ್ಳುತ್ತಲೇ ಇದ್ದಾಳೆ. ಆದರೆ ಈ ಬಾರಿ ತಾನು ನಡೆಸಿದ ತಂತ್ರ ರಮ್ಯಾಳಿಗೆ ತಿರುಗುಬಾಣವಾಗಿದ್ದು ಭಾರೀ ಮುಖಭಂಗವಾಗಿದೆ. ಯಾಕೆಂದರೆ ರಮ್ಯಾ ತಾನು ಪ್ರಧಾನಿ ವಿರುದ್ಧ ನಡೆಸಿದ ಈ ತಂತ್ರಕ್ಕೆ ಸಿಲಿಕಾನ್ ಸಿಟಿ ಯುವಕರು ರಮ್ಯಾಳ ಫೋಟೋ ಹಿಡಿದುಕೊಂಡು ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದರುವ ದೊಡ್ಡ ದೊಡ್ಡ ಗುಂಡಿಗಳಲ್ಲಿ ಇಟ್ಟು ಸೆಲ್ಫೀ ತೆಗೆದುಕೊಂಡು ರಮ್ಯಾಳಿಗೆ ಕಳುಹಿಸುವ ಅಭಿಯಾನವನ್ನೇ ಹಮ್ಮಿಕೊಂಡಿದ್ದಾರೆ.

ರಾಜ್ಯ ರಾಜಕಾರಣದಿಂದ ರಮ್ಯಾಳನ್ನು ದೂರ ಇಟ್ಟಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿರುವಂತದ್ದು. ಆದರೆ ದೆಹಲಿಯಲ್ಲೇ ಕುಳಿತುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದ ರಮ್ಯಾಳಿಗೆ ಯುವಕರು ಸಖತ್ ಟಾಂಗ್ ನೀಡಿದ್ದು, ಇದೀಗ ರಮ್ಯಾ ತಲೆ ಎತ್ತಲಾಗದ ರೀತಿಯಲ್ಲಿ ಮುಜುಗರ ಅನುಭವಿಸುವಂತಾಗಿದೆ..! ಪ್ರಧಾನಿ ಮೋದಿಯವರನ್ನು ಟೀಕಿಸಲು ಹೋದ ರಮ್ಯಾ ತಾನೇ ಟೀಕೆಗೆ ಒಳಗಾಗುತ್ತಿದ್ದು ಕೆಟ್ಟಷ್ಟು ಮತ್ತೆ ಮತ್ತೆ ಈ ರೀತಿ ನಡೆದುಕೊಳ್ಳುತ್ತಲೇ ಇದ್ದಾಳೆ ಎಂಬುದು ವಿಶೇಷ..!

–ಅರ್ಜುನ್

Tags

Related Articles

Close