ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂಬ ಹಠದಿಂದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷವನ್ನು ಕೆಳಗಿಳಿಸಿ ಮೂರನೇ ಸ್ಥಾನಕ್ಕಿಳಿದಿದ್ದ ಜನತಾ ಪಕ್ಷದ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದು ಇದೀಗ ಇತಿಹಾಸ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾದ ನಂತರ ರಾಜ್ಯದ ಜನತೆಯಲ್ಲಿ ಆಕ್ರೋಶ ಹುಟ್ಟಿಸುವಂತೆ ಆಗಿತ್ತು. ಜನರು ಅಧಿಕಾರ ಕೊಟ್ಟಿತ್ತು ಭಾರತೀಯ ಜನತಾ ಪಕ್ಷಕ್ಕೆ. ಆದರೆ ಕುತಂತ್ರ ಬುದ್ದಿ ಅನುಸರಿಸಿದ ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಸರ್ಕಾರವನ್ನು ನಡೆಸಿ ಬಿಜೆಪಿಯನ್ನು ದೂರವಿರಿಸಿದ್ದಾರೆ ಎಂಬ ಆಕ್ರೋಶ ಈವರೆಗೂ ಸಾಗುತ್ತಲೇ ಇದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಬಗ್ಗೆ ಅವಹೇಳನ ಮಾಡಿರುವ ಪೋಸ್ಟ್ಗಳು ರಾರಾಜಿಸುತ್ತಿದ್ದವು. ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಮೈಬಣ್ಣ ಹಾಗೂ ಅವರ ಎರಡನೇ ಪತ್ನಿ ರಾಧಿಕಾ ಕುಮಾರ ಸ್ವಾಮಿಯವರ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.
ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಒಂದು ತಿಂಗಳು ಹತ್ತಿರ ಬರುತ್ತಲೇ ಇದೀಗ ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ ಅವರು ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಅವಹೇಳನ ಮಾಡಿ ಪೋಸ್ಟ್ ಮಾಡಿದ್ದಾರೆ! ನಟ ದರ್ಶನ್ ತೂಗುದೀಪ್ ಅವರ ಫೇಸ್ ಬುಕ್ ಖಾತೆಯಿಂದ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಗೇಲಿ ಮಾಡುವ ಸಂದೇಶ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. “ಚುನಾವಣೆಯ ಮೊದಲು ಕಪ್ಪು ನಮ್ದೇ, ಕಪ್ಪು ನಮ್ದೇ ಎಂದು ಹೇಳ್ತಿದ್ರಿ, ಆದರೆ ಅದು ಇಷ್ಟೊಂದು ಕಪ್ಪು ಇದೆ ಎಂದು ಹೇಳೇ ಇಲ್ವರೋ” ಎಂದು ಬರೆದು ಕುಮಾರ ಸ್ವಾಮಿಯವರ ಮುಖವನ್ನು ಮತ್ತಷ್ಟು ಕಪ್ಪು ಮಾಡಿ ಪೋಸ್ಟ್ ಮಾಡಲಾಗಿದೆ.
ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಅಭಿಮಾನಿಗಳು ದೂರು ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರಿಗೆ ದೂರು ನೀಡಿರುವ ಅಖಿಲ ಕರ್ನಾಟಕ ಕುಮಾರ ಸ್ವಾಮಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಇಂತಹಾ ಪೋಸ್ಟ್ ಹಾಕಿದವರು ಅದೆಷ್ಟೇ ದೊಡ್ಡ ವ್ಯಕ್ತಿಗಳಾಗಿದ್ರೂ ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಫೇಕ್ ಅಕೌಂಟ್..?
ಈ ಮಧ್ಯೆ ಇದು ನಟ ದರ್ಶನ್ ಅವರ ಅಧಿಕೃತ ಖಾತೆ ಅಲ್ಲ. ಬಹುಷಃ ಇದು ನಕಲಿ ಖಾತೆ ಆಗಿದ್ದಿರಬೇಕು. ಇದನ್ನು ಬೇರೆ ಯಾರೋ ಅನಾಮಿಕರು ಇದನ್ನು ಉಪಯೋಗಿಸುತ್ತಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ದೂರು ನೀಡಲಾಗಿದ್ದು ಇನ್ನಷ್ಟೇ ತನಿಖೆಯ ವಿಚಾರ ಗೊತ್ತಾಗಬೇಕಾಗಿದೆ.
-ಏಕಲವ್ಯ