ಇನ್ನೇನು ಕೆಲವೇ ಸಮಯದಲ್ಲಿ ವಿಧಾನಸಭಾ ಚುನಾವಣೆ ರಾಜ್ಯದಲ್ಲಿ ನಡೆಯಲಿದೆ. ರಾಜಕಾರಣಿಗಳು ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಗಿಫ್ಟ್ ಹಂಚುವ ಕೆಲಸ ಸಹ ಜೋರಾಗಿಯೇ ನಡೆಯುತ್ತಿದೆ.
ಚಿಕ್ಕಮಗಳೂರು ಕ್ಷೇತ್ರದಲ್ಲಿ ರೂ ಎಲ್ಲಾ ಪಕ್ಷಗಳು ನಮಗೆ ಮತ ನೀಡಿ, ನಮಗೆ ಮತ ನೀಡಿ ಎಂದು ಮತದಾರರ ನ್ನು ಓಲೈಕೆ ಮಾಡುವಲ್ಲಿ ಸರ್ಕಸ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡರ ಪರ ಕುಕ್ಕರ್ ಹಂಚುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಕೂಡಾ ದೊಡ್ಡ ಮಟ್ಟದಲ್ಲಿ ನಡೆದಿದೆ.
ಎಲೆಕ್ಷನ್ ಬಂದಾಗ ಕಾಂಗ್ರೆಸ್ನಿಂದ ಕುಕ್ಕರ್ ರಾಜಕೀಯ ಹೊಸತೇನಲ್ಲ. ಈ ಹಿಂದೆ ಕಾಂಗ್ರೆಸ್ನ ಲಕ್ಷ್ಮಿ ಹೆಬ್ಬಾಳ್ಕರ್, ರಾಮಲಿಂಗಾ ರೆಡ್ಡಿ ಕೂಡಾ ಕುಕ್ಕರ್ ಕೊಟ್ಟು ಓಟು ಕಲೆಕ್ಷನ್ ಮಾಡೋಕೆ ಪ್ರಯತ್ನ ನಡೆಸಿದ್ದು ಎಲ್ಲರಿಗೂ ಗೊತ್ತು. ರಾಮಲಿಂಗಾ ರೆಡ್ಡಿ ಅವರ ಕುಕ್ಕರ್ ಸ್ಫೋಟಿಸಿ ಜನರ ಜೀವಕ್ಕೆ ಆಪತ್ತು ಬಂದದ್ದು ಹಳೇ ಸುದ್ದಿ.
ಈಗ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಶಾಸಕ ರಾಜೇಗೌಡ ನೀಡಿರೋ ಕುಕ್ಕರ್ ಬಗ್ಗೆಯೂ ಸುದ್ದಿ ಯಾಗಿದೆ. ನಾನೂರೈವತ್ತು ರೂಪಾಯಿ ಬೆಲೆಯ ಲಾಟ್ಪೋಟ್ ಕುಕ್ಕರ್ಗೆ ಸಾವಿರದ ನಾನೂರು ರೂಪಾಯಿ ಸ್ಟಿಕ್ಕರ್ ಅಂಟಿಸಿ ಜನರಿಗೆ ವಿತರಿಸಿ ಸಿಕ್ಕಿಬಿದ್ದಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಕುಕ್ಕರ್ ವಿತರಿಸಿ ಜನರನ್ನು ಕುರಿ ಮಾಡಲು ಹೋಗಿ, ಕೊನೆಗೆ ತಾವೇ ಬಕ್ರಾ ಆಗಿದ್ದಾರೆ. ಇವರ ಈ ಕಿತಾಪತಿ ಕಂಡುಹಿಡಿದ ಜನರು ಅವರನ್ನು ವ್ಯಂಗ್ಯವಾಡಿ ನಗುತ್ತಿದ್ದಾರೆ.
ಐದು ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಮಾಡದೆ ನಾಪತ್ತೆಯಾಗಿದ್ದ ರಾಜೇಗೌಡರು ಕುಕ್ಕರ್ ನೀಡಿ ಮತ ಪಡೆಯಲು ಹೊರಟಿರುವುದು ಹಾಸ್ಯಾಸ್ಪದ ಎಂದು ಮತದಾರರು ಅವರನ್ನು ತರಾಟೆಗೂ ತೆಗೆದುಕೊಂಡಿದ್ದಾರೆ. ಮೂಲಭೂತ ಸೌಕರ್ಯಗಳನ್ನೇ ಜನರಿಗೆ ನೀಡಲಾಗದ ರಾಜೇಗೌಡರಿಂದ ಇನ್ನೇನು ಅಭಿವೃದ್ಧಿ ಸಾಧ್ಯ ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ.
ಒಟ್ಟಿನಲ್ಲಿ ಕುಕ್ಕರ್ ಕೊಟ್ಟು ಮತ ಪಡೆಯೋ ಭರದಲ್ಲಿ ಕಾಂಗ್ರೆಸ್ ನಾಯಕರು ‘ಕೈ’ ಸುಟ್ಟುಕೊಂಡಿದ್ದಂತೂ ಸತ್ಯ.