ಪ್ರಚಲಿತ

ಚಕ್ರವರ್ತಿ ಆರ್ಭಟಕ್ಕೆ ಬಿಲ ಸೇರಿದ ಪ್ರಕಾಶ್ ರಾಜ್..! ಉತ್ತರ ನೀಡಲಾಗದೆ ನಾಪತ್ತೆಯಾದ ಬಹುಭಾಷಾ ನಟ..!

ಹಿಂದೂ ಧರ್ಮವನ್ನು ಅಥವಾ ಧರ್ಮದ ವಿಚಾರವಾಗಿ ಯಾರಾದರೂ ಹಗುರವಾಗಿ ಮಾತನಾಡಿದರೆ ಸಾಕು ಅಂತವರು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಆಪ್ತರಾಗಿ ಬಿಡುತ್ತಾರೆ. ಹಿಂದೂ ಧರ್ಮದಲ್ಲಿಯೇ ಹುಟ್ಟಿ ತನ್ನ ಧರ್ಮವನ್ನೇ ಅವಮಾನ ಮಾಡುವುದು ಎಂದರೆ ಕೆಲವು ಬುದ್ಧಿಜೀವಿಗಳಿಗೆ ಅದೇನೋ ಖುಷಿ. ಅಂತವರ ಸಾಲಿಗೆ ಸೇರಿಕೊಂಡವರೇ ಈ ಪ್ರಕಾಶ್ ರಾಜ್. ಸದಾ ಒಂದಲ್ಲ ಒಂದು ಹಿಂದೂ ವಿರೋಧಿ ಹೇಳಿಕೆ ನೀಡುತ್ತಾ ಸಿದ್ದರಾಮಯ್ಯನವರ ಸೈಟ್ ಭಾಗ್ಯಕ್ಕೆ ಹೊಂಚು ಹಾಕಿ ಕೂತಿರುವ ಈತನ ಮಾನ ಹರಾಜಾದಷ್ಟು ನಾಚಿಕೆಯಿಲ್ಲ.

ಯಾಕೆಂದರೆ ಸದ್ಯ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವುದರಿಂದ ಅಭ್ಯರ್ಥಿಗಳು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಅದೇ ರೀತಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಪರವಾಗಿ ಅವರ ಪತ್ನಿ ಮತಯಾಚನೆಗೆ ತೆರಳಿದ ವಿಚಾರವಾಗಿ ಪ್ರಕಾಶ್ ರಾಜ್ ತನ್ನ ಟ್ವಿಟರ್ ಖಾತೆಯಲ್ಲಿ ಅದರ ವಿರುದ್ಧ ಕೆಲವೊಂದು ಹೇಳಿಕೆ ನೀಡಿದ್ದನು. ಈ ವಿಚಾರ ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.‌ ಇದೀಗ ಮತ್ತೊಂದು ಘಟನೆಯಿಂದ ಪ್ರಕಾಶ್ ರಾಜ್ ನ ನೈಜ ವ್ಯಕ್ತಿತ್ವ ರಾಜ್ಯದ ಜನತೆಯ ಮುಂದೆ ಬಯಲಾಗಿದೆ.

ಬಿಜೆಪಿ ಅಭ್ಯರ್ಥಿಯ ವಿಚಾರವಾಗಿ ಪ್ರಕಾಶ್ ರಾಜ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಖರ ವಾಗ್ಮಿ, ಖ್ಯಾತ ಅಂಕಣಕಾರ , ಯುವಾಬ್ರಿಗೇಡ್ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿತ್ತು. ಯಾಕೆಂದರೆ ಪದೇ ಪದೇ ಪ್ರಕಾಶ್ ರಾಜ್ ಹಿಂದೂಗಳ ವಿರುದ್ಧ ಏನಾದರೊಂದು ಹೇಳಿಕೆ ನೀಡಿ , ತನ್ನ ಹೆಸರು ಚಾಲ್ತಿಯಲ್ಲಿರುವಂತೆ ಮಾಡುವ ಛಪಲ ಹೊಂದಿದ್ದಾನೆ. ಆದರೆ ನಿನ್ನೆ ಚಕ್ರವರ್ತಿ ನೀಡಿದ್ದ ತಿರುಗೇಟಿಗೆ ಕಂಗಾಲಾದ ಪ್ರಕಾಶ್ ರಾಜ್ ಇದೀಗ ನಾಪತ್ತೆಯಾಗಿದ್ದಾರೆ.!

Related image

ಚಕ್ರವರ್ತಿಗೆ ಹೆದರಿ ಬಾಲ ಮುದುಡಿಕೊಂಡ ಪ್ರಕಾಶ್..!

ಟ್ವಿಟ್ಟರ್ ನಲ್ಲಿ ಅತೀ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಚಕ್ರವರ್ತಿ ಸೂಲಿಬೆಲೆ ಅವರು ನಿನ್ನೆ ಪ್ರಕಾಶ್ ರಾಜ್ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು , ಇಡೀ ಟ್ವಿಟ್ಟರ್ ಮಾತ್ರವಲ್ಲದೆ ಫೇಸ್‌ಬುಕ್‌ ವಾಟ್ಸಾಪ್ ಗಳಲ್ಲಿ ಭಾರೀ ವೈರಲ್ ಆಗಿತ್ತು. ಯಾಕೆಂದರೆ ಚಕ್ರವರ್ತಿ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಪ್ರಕಾಶ್ ರಾಜ್ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೂ ತಿರುಗೇಟು ನೀಡಿದ್ದರು. ಇದರಿಂದಾಗಿ ಕಂಗಾಲಾದ ಪ್ರಕಾಶ್ ರಾಜ್ , ಯಾವುದೇ ಪ್ರತಿಕ್ರಿಯೆ ನೀಡದೆ ಚಕ್ರವರ್ತಿ ಅವರನ್ನು ತಮ್ಮ ಖಾತೆಯಿಂದ ಬ್ಲಾಕ್ ಮಾಡಿದ್ದಾರೆ.

ಈ ಹಿಂದೆಯೂ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಒಂದೊಂದು ಹೇಳಿಕೆ ನೀಡುತ್ತಿದ್ದ ಪ್ರಕಾಶ್ ರಾಜ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ , ಆದ್ದರಿಂದ ಈತನ ಪುಕ್ಕಲುತನ ಯಾವ ಮಟ್ಟಿಗೆ ಇದೆ ಎಂಬುದು ಅರಿವಾಗುತ್ತದೆ.!

ಜಸ್ಟ್ ಆಸ್ಕಿಂಗ್ – ಜಸ್ಟ್ ಆನ್ಸರಿಂಗ್..!

ಪ್ರಕಾಶ್ ರಾಜ್ ಏನೇ ಹೇಳಿಕೆ ನೀಡಿದರು ಅದರ ಅಡಿಬರಹವಾಗಿ ‘ಜಸ್ಟ್ ಆಸ್ಕಿಂಗ್’ ಎಂಬುದಾಗಿ ಬರೆಯುತ್ತಿದ್ದರು. ಆದರೆ ಈ ವಿಚಾರವನ್ನೇ ಟೀಕೆ ಮಾಡಲು ಪ್ರಾರಂಭಿಸಿದ ಟ್ವಿಟ್ಟರಿಗರು ಸದಾ ಒಂದಲ್ಲಾ ಒಂದು ವಿಚಾರಕ್ಕೆ ಪ್ರಕಾಶ್ ರಾಜ್ ಅವರ ಕಾಲೆಳೆಯುತ್ತಲೇ ಇದ್ದಾರೆ. ನಿನ್ನೆ ನಡೆದ ಘಟನೆಯಿಂದಾಗಿ ತೀವ್ರ ಮುಖಭಂಗ ಅನುಭವಿಸಿದ ಪ್ರಕಾಶ್ ರಾಜ್ ಅವರು ಚಕ್ರವರ್ತಿ ಸೂಲಿಬೆಲೆ ಅವರನ್ನು ಬ್ಲಾಕ್ ಮಾಡಿರುವುದನ್ನು ಗಮನಿಸಿದ ಚಕ್ರವರ್ತಿ ಅದನ್ನೇ ಸ್ಕ್ರೀನ್ ಷಾಟ್ ತೆಗೆದು ತಮ್ಮ ಟ್ವಿಟ್ಟರ್ ನಲ್ಲಿ #ಜಸ್ಟ್ ಆನ್ಸರಿಂಗ್ ಎಂಬ ಅಡಿಬರಹದೊಂದಿಗೆ ಪ್ರಕಟಿಸಿದ್ದರು.

Image result for prakash raj

ಇದೇ ರೀತಿ ಈ ವಿಚಾರವಾಗಿ ವಿಸ್ತೃತ ವರದಿ ಪ್ರಕಟಿಸಿದ ಪೋಸ್ಟ್ ಕಾರ್ಡ್ ನ ಅಂಕಣವನ್ನೂ ನಮೂದಿಸಿದ ಚಕ್ರವರ್ತಿ ಅವರು ಪ್ರಕಾಶ್ ರಾಜ್ ಗೆ ತಕ್ಕ ತಿರುಗೇಟು ನೀಡಿದ್ದಾರೆ..!

–ಅರ್ಜುನ್

 

Tags

Related Articles

Close