ಅಂಕಣಇತಿಹಾಸ

ತಮ್ಮ ಸಣ್ಣ ಭೂಮಿಗಾಗಿ 25 ವರ್ಷಗಳ ಕಾಲ ಹೋರಾಡಿ ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಿ ಪ್ರಾಣ ಬಿಟ್ಟ ಈ ಮಹಾಪುರುಷ!! ಮೊಘಲರು ಇವರನ್ನು ಕಂಡರೆ ಗಢಗಢ ನಡುಗುತ್ತಿದ್ದದ್ದು ಯಾಕೆ?!

ಮಹಾರಾಣ ಪ್ರತಾಪರು ಎಂದರೆ ನಿಜವಾಗಿಯೂ ಅವರೊಂದು ಅದ್ಭುತ ಶಕ್ತಿ ಅದಲ್ಲದೆ ಇವರೊಬ್ಬ ಹಿಂದುತ್ವದ ಪ್ರತೀಕವಾಗಿರೋ ಕ್ಷಾತ್ರತೇಜಸ್ಸಿನ ಜ್ವಾಲೆ ಅಂತಾನೇ ಹೇಳಬಹುದು!! ಮಹಾರಾಣಾ ಪ್ರತಾಪರ ಬಗ್ಗೆ ಓದಿದರೆ ನಿಜವಾಗಿಯೂ ಒಮ್ಮೆ ಮೈ ಮನ ಪುಳಕಿತವಾಗುತ್ತದೆ!!

ಮಹಾರಾಣ ಪ್ರತಾಪರ ಸೇನೆಯ ಬಗ್ಗೆ ಕೇಳಿದರೇನೇ ಅಕ್ಬರನ ಸಾಮ್ರಾಜ್ಯವನ್ನೇ ಗಡಗಡ ನಡುಗುತಿತ್ತು. ಅಕ್ಬರ್ ಜೀವನ ಪೂರ್ತಿ ಆತಂಕವಿರುವಂತೆ ಪ್ರತಾಪರು ನೋಡಿಕೊಂಡರು. ಇದು ಅಕ್ಬರನನ್ನು ಹಿಂದೂಗಳ ವಿರುದ್ಧ ದೌರ್ಜನ್ಯ ಎಸಗದಂತೆ ನೋಡಿಕೊಂಡಿತು. ಅಲ್ಲದೆ ಅಕ್ಬರನ ಸೈನ್ಯದಲ್ಲಿ ಅನೇಕ ಹಿಂದೂಗಳಿದ್ದರು. ಒಂದು ವೇಳೆ ಅಕ್ಬರ್ ಹಿಂದೂಗಳ ವಿರುದ್ಧ ನಡದುಕೊಂಡರೆ ಆತನ ಜೊತೆಯಲ್ಲಿದ್ದ ಹಿಂದೂ ದೊರೆಗಳು ಮಹಾರಾಣ ಪ್ರತಾಪರ ಸೇನೆಯನ್ನು ಸೇರುವ ಸಾಧ್ಯತೆ ಇದೆ ಎಂಬ ಆತಂಕ ಮನೆಮಾಡಿತ್ತು. ಇದೇ ಆತಂಕ ಅಕ್ಬರನಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ಎಸಗದಂತೆ ನೋಡಿಕೊಂಡಿತು.

Image result for rana mharana prathapa

ಇಂದು ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರಲು ಮಹಾರಾಣಾ ಪ್ರತಾಪರೂ ಕಾರಣ. ಮೊಘಲ್ ವಂಶ ದುರ್ಬಲವಾಗುವಂತೆ ನೋಡಿಕೊಂಡರಲ್ಲದೆ ಅನೇಕ ಪ್ರದೇಶಗಳನ್ನು ಮುಸ್ಲಿಂ ಕಪಿಮುಷ್ಠಿಯಿಂದ ಸ್ವತಂತ್ರ್ಯಗೊಳಿಸುವಂತೆ ಮಾಡಿಕೊಂಡರು. ಮೊಘಲರ ವಿರುದ್ಧದ ದಣಿವರಿಯದಂತೆ ಸೆಣಸುತ್ತಾ ಹಿಂದು ರಜಪೂತ ಪರಂಪರೆಯ ಅತ್ಯಂತ ಹೆಮ್ಮೆಯ ಬಿಂದುವಾಗಿ ಮಾಡಿದ ರಾಣಾ ಪ್ರತಾಪರನ್ನು ಪ್ರತಿಯೋರ್ವ ಹಿಂದೂ ಹೃದಯದಲ್ಲಿಟ್ಟು ಪೂಜಿಸಬೇಕು. ಮತಾಂಧರೊಡನೆ ಯಾವ ರೀತಿ ಹೋರಾಟ ನಡೆಸಬೇಕೆಂದು ಪ್ರತಾಪರನ್ನು ನೋಡಿ ಕಲಿಯಬೇಕು. ಯಾಕೆಂದರೆ ಪ್ರತಾಪರ ಕೇವಲ ಮೂರು ಸಾವಿರ ಸೈನ್ಯ ಪಡೆ ಅಕ್ಬರನ 80 ಸಾವಿರ ಸೈನ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ಪ್ರತಾಪರ ಮರಣಾನಂತರ ಹಿಂದೂ ದೊರೆಗಳು ಮೊಘಲರ ಅತಿದೊಡ್ಡ ಬಲದೆದುರು ಪ್ರತಿರೋಧ ಸಲ್ಲಿಸುತ್ತಲೇ ಬಂದಿದ್ದಕ್ಕೆ, ಆ ಮೂಲಕ ಸಮುದಾಯದ ಅಸ್ತಿತ್ವ ಕಾಪಾಡಿಕೊಂಡು ಬಂದಿದ್ದಕ್ಕೆ ಸ್ಫೂರ್ತಿಯಾದವರೇ ಮಹಾರಾಣ ಪ್ರತಾಪರು.

ಅಕ್ಬರ್ ಬೀರಬಲ್ಲನ ಕಥೆ ಓದಿ ನಾವೆಲ್ಲಾ ಅಕ್ಬರ್ ಎಂದರೆ ಮಹಾನ್ ಸೆಕ್ಯುಲರ್ ಎಂದು ನಂಬುತ್ತೇವೆ. ಇತರ ಮೊಘಲ್ ದೊರೆಗಳಂತೆ ನಮಗೆ ಆತನ ಮೇಲೆ ಸಿಟ್ಟಿಲ್ಲ. ಆದರೆ ಪ್ರತಾಪರು ಅಕ್ಬರನಿಗೆ ಆಗಾಗ ಒಡ್ಡುತ್ತಿದ್ದ ಪ್ರತಿರೋಧವೇ ಅಕ್ಬರ್ನನ್ನು ಸೆಕ್ಯುಲರ್ ಆಗಿರುವಂತೆ ನೋಡಿಕೊಂಡಿತು. ಇಲ್ಲದೇ ಹೋಗಿದ್ದರೆ ಅಕ್ಬರ್ ಇತರ ಮೊಘಲ್ ದೊರೆಗಳಂತೆ ಕ್ರೂರಿಯಾಗಿದ್ದ. ಇಸ್ಲಾಂ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದ ಅಕ್ಬರ್ ಕಾಫಿರ್ಗಳನ್ನು ನಾಶ ಮಾಡಲು ಹಿಂದೆಮುಂದೆ ನೋಡಲಿಲ್ಲ. ಈತ ರಜಪೂತರ ವಿರುದ್ಧದ ಪ್ರಾರಂಭಿಕ ಯುದ್ಧಗಳಲ್ಲಿ ಮೆರೆದ ಕ್ರೌರ್ಯ ಇತರ ಮೊಘಲ್ ರಾಜರುಗಳಂತೆ ಕಡಿಮೆ ಇರಲಿಲ್ಲ. ರಜಪೂತ ಮಹಿಳೆಯರನ್ನು ಸತಿಯ ಚಿತಾಗ್ನಿಗೆ ದೂಡಿದ ಪಾಪಕಾರ್ಯದಲ್ಲಿ ಅಕ್ಬರನ ಪಾತ್ರವೂ ಅಷ್ಟೇ ದೊಡ್ಡದಿದೆ. 1568ರಲ್ಲಿ ನಾಲ್ಕು ತಿಂಗಳ ಕದನದ ನಂತರ ಚಿತ್ತೋಡಗಢದ ಕೋಟೆ ಅಕ್ಬರನ ವಶವಾಯಿತು. ಆಗ ಸಮರದಲ್ಲಿ ಬದುಕುಳಿದಿದ್ದ 30,000 ಹಿಂದುಗಳನ್ನು ಮಾರಣಹೋಮ ಮಾಡಿ ಇಸ್ಲಾಂ ಸಾಮ್ರಾಜ್ಯದ ಆಗಮನವಾಗಿದೆಯೆಂದು ಸಾರಿದ್ದು ಇದೇ ಅಕ್ಬರ್. ಹಿಂದೂಗಳ ರುಂಡಗಳನ್ನು ಕಡಿದು ಆ ಪ್ರಾಂತ್ಯದಲ್ಲೆಲ್ಲಾ ಗೋಪುರಗಳ ಮೇಲೆ ನೇತುಹಾಕಿಸಿ ತನ್ನ ಪ್ರಾಬಲ್ಯ ಸಾರಿದ ವಿಕೃತ ನಡೆ ಅಕ್ಬರನದಾಗಿತ್ತು.

ಪ್ರತಾಪರು ಅಕ್ಬರನ ಬಲಾಢ್ಯ ಸೈನ್ಯದೆದುರು ಎಂದಿಗೂ ಶರಣಾಗಲೇ ಇಲ್ಲ. ಅಕ್ಬರನಿಗೆ ತಲೆಬಾಗಿದ್ದೇ ಆದರೆ ಪ್ರತಾಪರಿಗೆ ಸಕಲ ವೈಭೋಗಗಳನ್ನು ನೀಡುವುದಾಗಿ ಸಂಧಾನ ಪ್ರಸ್ತಾಪವಾದಾಗಲೂ ಸ್ವಾಭಿಮಾನ ಬಿಡಲಿಲ್ಲ. ಬಹುತೇಕ ರಜಪೂತ ರಾಜರೆಲ್ಲಾ ಅಕ್ಬರನಿಗೆ ನಿಷ್ಠರಾಗಿ, ಅವರ ಜೊತೆ ವಿವಾಹ ಸಂಬಂಧ ಏರ್ಪಡಿಸಿದ್ದರೂ ಪ್ರತಾಪರು ಮಾತ್ರ ಕಾಡುಮೇಡುಗಳಲ್ಲಿ ಅಲೆದಾಡುತ್ತಾ ಅಕ್ಬರನಿಗೆ ಪ್ರತಿರೋಧ ಒಡ್ಡುತ್ತಲೇ ಇದ್ದರು.

ಮೇವಾಡದ ನಾಲ್ಕೂ ಸೀಮೆಯಲ್ಲಿ ಮುಸಲ್ಮಾನರು ಮುತ್ತಿಗೆ ಹಾಕಿದ್ದರು. ಮಹಾರಾಣಾ ಪ್ರತಾಪಸಿಂಹರ ತಮ್ಮಂದಿರಾದ ಶಕ್ತಿಸಿಂಹ ಹಾಗೂ ಜಗಮಲ್ಲ ಇವರಿಬ್ಬರೂ ಅಕ್ಬರನ ವಶದಲ್ಲಿದ್ದರು. ಅಕ್ಬರನಿಗೆ ಬುದ್ಧಿ ಕಲಿಸಬೇಕಿತ್ತು. ಆದರೆ ಪ್ರತಾಪರ ಬೊಕ್ಕಸ ಖಾಲಿಯಾಗಿತ್ತು. ಅದಕ್ಕಾಗಿ ಪ್ರತಾಪ ಸಿಂಹರು ತಮ್ಮ ವಿಶ್ವಾಸಿ ಸರದಾರರನ್ನು ಕರೆಸಿ, “ಮೇವಾಡ ಮುಸಲ್ಮಾನರ ವಶದಲ್ಲಿದೆ. ಚಿತ್ತೋಡ ಸ್ವತಂತ್ರವಾಗುವ ತನಕ ನಾನು ಬೆಳ್ಳಿಬಂಗಾರದ ತಟ್ಟೆಯಲ್ಲಿ ಊಟ ಮಾಡುವುದಿಲ್ಲ ಮೆತ್ತಗಿನ ಹಾಸಿಗೆಯಲ್ಲಿ ಮಲಗುವುದಿಲ್ಲ, ರಾಜವೈಭವವನ್ನು ಅನುಭವಿಸುವುದಿಲ್ಲ, ನೆಲದ ಮೇಲೆ ಮಲಗುವೆನು ಹಾಗೂ ಗುಡಿಸಲಿನಲ್ಲಿ ವಾಸಿಸುವೆನು! ಶೂರ ಸರದಾರರೇ, ಚಿತ್ತೋಡ ಸ್ವತಂತ್ರಗೊಳಿಸುವ ನನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಲಿಕ್ಕಾಗಿ ತನು-ಮನ-ಧನದಿಂದ ನೀವೆಲ್ಲರೂ ಸಹಾಯ ಮಾಡುವಿರಾ?.” ಎಂದರು. ಪ್ರತಾಪರ ಕಠೋರವಾದ ಪ್ರತಿಜ್ಞೆಯನ್ನು ಕೇಳಿ ಅಲ್ಲಿದ್ದ ಎಲ್ಲ ಸರದಾರರು, “ಹೇ ರಾಜಾ, ನಮ್ಮ ಶರೀರದಲ್ಲಿ ರಕ್ತದ ಕೊನೆ ಹನಿಯಿರುವ ತನಕ ಚಿತ್ತೋಡದ ಮುಕ್ತಿಗಾಗಿ ಹೋರಾಡುವೆವು’ ಎಂದು ಬೆಂಬಲಕ್ಕೆ ನಿಂತರು.

ಮಹಾರಾಣಾ ಪ್ರತಾಪಸಿಂಹರನ್ನು ಮೋಸದಿಂದ ತನ್ನ ಗುಲಾಮರನ್ನಾಗಿ ಮಾಡಲು ಅಕ್ಬರನು ಬಹಳ ಪ್ರಯತ್ನಿಸಿ ಸೋತ.. ಕೊನೆಗೆ ಅಕ್ಬರನು ತನ್ನ ಪುತ್ರ ಸಲೀಂ (ಜಹಾಂಗೀರ)ನ ನೇತೃತ್ವದಲ್ಲಿ ಸೈನ್ಯವನ್ನು ಕಳಿಸಿದ. ಜೊತೆಗೆ ಅಕ್ಬರನಿಗೆ ಶರಣಾಗಿದ್ದ ಜಯಪುರದ ರಾಜಾ ಮಾನಸಿಂಗ್ ಮತ್ತು ಮತಾಂತರವಾಗಿದ್ದ ರಾಜಪುತ ಸರದಾರ ಮಹಾಬತಖಾನ್ ಸೈನ್ಯಗಳು ಮಹಾರಾಣಾ ಪ್ರತಾಪಸಿಂಹರ ಮೇಲೆ ದಂಡೆತ್ತಿ ಹೋದವು. ಮಹಾರಾಣಾ ಪ್ರತಾಪ ಸಿಂಹರ 28 ಸಾವಿರ ಸೈನ್ಯ ಹಾಗೂ ಅಕ್ಬರನ 2 ಲಕ್ಷ ಸೈನ್ಯ ಹಳದಿಘಾಟಿನಲ್ಲಿ ಮುಖಾಮುಖಿಯಾಯಿತು. ಹೋರಾಟದ ಆವೇಶದಲ್ಲಿ ಮಹಾರಾಣಾ ಪ್ರತಾಪಸಿಂಹರು ತನ್ನ ಕುದುರೆಯ ಮೇಲಿಂದ ನೇರವಾಗಿ ಸಲೀಂನ ಆನೆಯ ಮೇಲೇರಿ ಹೋದರು. ಪ್ರತಾಪರ ಇತಿಹಾಸ ಪ್ರಸಿದ್ಧ `ಚೇತಕ’ ಎಂಬ ಕುದುರೆಯೂ ಅಂಜದೆ ಸಲೀಂನ ಆನೆಯ ಮೇಲೆಯೇ ಜಿಗಿಯಿತು, ರಾಣಾ ಪ್ರತಾಪಸಿಂಹರು ಭರ್ಜಿಯನ್ನೆಸೆದರು. ಸಲೀಂ ಮಾವುತನ ಹಿಂದೆ ಆಶ್ರಯ ಪಡೆದ ಕಾರಣ ಭರ್ಜಿ ಮಾವುತನಿಗೆ ತಗುಲಿ ಅವನು ಸಾವನ್ನಪ್ಪಿದನು. ಅದೃಷ್ಟವಶಾತ್ ಸಲೀಂ ಬದುಕಿದನು.

Related image

ಘಟನೆಯಲ್ಲಿ ಚೇತಕನಿಗೆ ಗಾಯವಾಯಿತು. ಆದರೂ ಅದು ಪ್ರತಾಪರ ಜೀವವನ್ನು ಉಳಿಸಲಿಕ್ಕಾಗಿ ಒಂದು ದೊಡ್ಡ ಹಳ್ಳ ದಾಟಲು ಜಿಗಿಯಿತು. ಹಳ್ಳವನ್ನು ದಾಟಿದ ತಕ್ಷಣ ನೆಲಕ್ಕುರುಳಿದ ಚೇತಕನ ಪ್ರಾಣ ಹಾರಿಹೋಯಿತು. ಚೇತಕನ ಮೃತ್ಯುವಿನಿಂದ ಮಹಾರಾಣಾರಿಗೆ ಬಹಳ ದುಃಖವಾಯಿತು. ಚೇತಕ ಪ್ರಾಣ ಬಿಟ್ಟಿರುವ ಸ್ಥಳದಲ್ಲಿ ಮಹಾರಾಣಾ ಪ್ರತಾಪಸಿಂಹರು ಒಂದು ಸುಂದರವಾದ ಉದ್ಯಾನವನವನ್ನು ನಿರ್ಮಿಸಿದರು.

ಅನಂತರ ನೇರವಾಗಿ ಅಕ್ಬರನೇ ಯುದ್ಧಕ್ಕೆ ಬಂದನು. ಆತ ಬರೋಬ್ಬರಿ 6 ತಿಂಗಳು ಯುದ್ಧ ನಡೆಸಿಯೂ ಪ್ರತಾಪರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಯುದ್ಧಕ್ಕೆ ಅಕ್ಬರ ಸಾಕಷ್ಟು ಹಾನಿ ಅನುಭವಿಸುತ್ತಿದ್ದ. ಕೊನೆಯ ಪ್ರಯತ್ನವೆಂದು ಅಕ್ಬರನು 1584ರಲ್ಲಿ ಮಹಾಪರಾಕ್ರಮಿ ಸೇನಾಪತಿ ಜಗನ್ನಾಥನಿಗೆ ವಿಶಾಲವಾದ ಸೈನ್ಯವನ್ನು ನೀಡಿ ಮೇವಾಡದ ಮೇಲೆ ಆಕ್ರಮಿಸಲು ಕಳಿಸಿದನು. ಆದರೆ ಬರೋಬ್ಬರಿ 2 ವರ್ಷ ಕಠಿಣ ಪ್ರಯತ್ನ ಮಾಡಿಯೂ ಮಹಾರಾಣಾರನ್ನು ಹಿಡಿಯಲು ಅವನಿಗೂ ಸಾಧ್ಯವಾಗಲಿಲ್ಲ!!!

Related image

ಪ್ರತಾಪರು ಅರಣ್ಯದಲ್ಲಿ ಅಲೆದಾಡುತ್ತಿದ್ದ ಸಂದರ್ಭ ಮಾಹಾರಾಣಿ ರೊಟ್ಟಿ ಕಾಯಿಸುತ್ತಿದ್ದರು. ಎಲ್ಲರೂ ತಮ್ಮ ತಮ್ಮ ಪಾಲಿನ ರೊಟ್ಟಿ ತಿಂದರು. ಮಾಹಾರಾಣಿಯ ಮಗಳು ಕೂಡಾ ತನ್ನ ಮಗಳಿಗೆ ಅರ್ಧ ರೊಟ್ಟಿ ತಿನ್ನಲು ಕೊಟ್ಟು ಉಳಿದ ಉಳಿದ ರೊಟ್ಟಿ ರಾತ್ರಿಗೆ ಕಟ್ಟಿಡಲು ಹೇಳಿದರು. ಅಷ್ಟರಲ್ಲಿ ಕಾಡುಬೆಕ್ಕು ಬಂದು ರಾಜಕುಮಾರಿಯ ಕೈಯಲ್ಲಿದ್ದ ರೊಟ್ಟಿಯನ್ನು ಕಸಿದುಕೊಂಡು ಹೋಯಿತು. ರಾಜಕುಮಾರಿ ಅಸಹಾಯಕತೆಯಿಂದ ಅಳುತ್ತಾ ಕುಳಿತಳು. ಇದರಿಂದ ಮನಸ್ಸು ಕರಗಿದ ಪ್ರತಾಪರು ಅಕ್ಬರನೊಂದಿಗೆ ಒಪ್ಪಂದ ಮಾಡಲು ನಿರ್ಣಯಿಸಿದರು. ಆದರೆ ಅಕ್ಬರನ ದರಬಾರಿನಲ್ಲಿ ಪ್ರತಾಪಸಿಂಹರ ಹಿತೈಷಿಯಾಗಿದ್ದ ರಾಜಕವಿ ಪೃಥ್ವಿರಾಜರು ಪ್ರತಾಪರಿಗೆ ರಾಜಸ್ಥಾನಿ ಭಾಷೆಯಲ್ಲಿ ಕವಿತೆಯ ರೂಪದಲ್ಲಿ ಒಂದು ದೊಡ್ಡ ಪತ್ರ ಬರೆದು ಒಪ್ಪಂದ ಮಾಡದಂತೆ ಸೂಚಿಸಿದರು. ಅಕ್ಬರನೊಂದಿಗೆ ಒಪ್ಪಂದ ಮಾಡುವ ವಿಚಾರವನ್ನೇ ಮನಸ್ಸಿನಿಂದ ಕಿತ್ತೆಸೆದರು.

ರಾಜಸ್ಥಾನ ಅಕ್ಬರನ ವಶದಲ್ಲಿದ್ದಾಗ ಮಹಾರಾಣಾ ಪ್ರತಾಪಸಿಂಹರು ತಮ್ಮ ಸಣ್ಣ ಭೂಮಿಗಾಗಿ 25 ವರ್ಷ ಹೋರಾಡಿದರು. ಆದರೆ ಅಕ್ಬರನಿಗೆ ಸೋಲಿಸಲಾಗಲಿಲ್ಲ. ಪ್ರತಾಪರು ಮುಸಲ್ಮಾನರ ಹಿಡಿತದಿಂದ ರಾಜಸ್ಥಾನದ ಬಹಳಷ್ಟು ಭೂಮಿಯನ್ನೂ ಸ್ವತಂತ್ರಗೊಳಿಸಿದರು. ಕೊನೆಯ ಕ್ಷಣದಲ್ಲಿ ತಮ್ಮ ಪುತ್ರ ಅಮರಸಿಂಹನ ಕೈಹಿಡಿದುಕೊಂಡು ಅವರು ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ವಹಿಸಿ ಪ್ರಾಣ ಬಿಟ್ಟರು. ಇಂದು ಹಿಂದೂಗಳು ಬಹುಸಂಖ್ಯಾರಾಗಿ ಉಳಿದುಕೊಂಡಿರುವುದಕ್ಕೆ ಮಹಾರಾಣಾ ಪ್ರತಾಪರೂ ಕಾರಣ. ಇಲ್ಲದೇ ಹೋಗಿದ್ದರೆ ಮೊಘಲರು ಭಾರತವನ್ನು ಎಂದೋ ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡಿರುತ್ತಿದ್ದರು.

Tags

Related Articles

Close