ಪ್ರಚಲಿತ

ಸಿದ್ದುಗೆ ಮುಟ್ಟಿ ನೋಡ್ಕೊಳ್ಳೊ ಹಾಗೆ ಉತ್ತರ ಕೊಟ್ಟ ‘ಹಿಂದುತ್ವದ ಫೈರ್ ಬ್ರಾಂಡ್’

ಸದಾ ಕಾಲ ಹಿಂದೂಗಳ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡೋ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಓಲೈಕೆಯಲ್ಲೇ ಕಾಲ ಕಳೆಯುವುದು ಹೊಸದೇನಲ್ಲ.

ಅಲ್ಪಸಂಖ್ಯಾತರನ್ನು ಮೆಚ್ಚಿಸೋದಿಕ್ಕೆ ಟಿಪ್ಪು ಜಯಂತಿ ಆಚರಣೆ, ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ, ಆ ಭಾಗ್ಯ, ಈ ಭಾಗ್ಯ, ಯಾವ್ಯಾವುದೋ ಭಾಗ್ಯಗಳನ್ನು ಕರುಣಿಸೋದು, ಮಾಂಸ ಸೇವಿಸಿ ದೇವಾಲಯಕ್ಕೆ ಹೋಗೋದು, ಅನ್ಯ ಧರ್ಮೀಯರ ಟೋಪಿ ಹಾಕ್ಕೊಂಡು ಜನರಿಗೆ ಟೋಪಿ ಹಾಕೋದ್ರಲ್ಲಂತೂ ಕಾಂಗ್ರೆಸ್ ‌ನ ಸಿದ್ದರಾಮಯ್ಯ ಅವರದ್ದು ಎತ್ತಿದ ಕೈ.

ಇಂತಹ ಹಿಂದೂ ವಿರೋಧಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ನಾಯಕ, ಹಿಂದೂ ವೀರ, ಹಿಂದುತ್ವದ ಫೈರ್ ಬ್ರಾಂಡ್, ಶಾಸಕ ಅನಂತ ಕುಮಾರ್ ಹೆಗಡೆ ಅವರು ಮುಟ್ಟಿ ನೋಡಿಕೊಳ್ಳುವಂತೆ ಪ್ರತ್ಯುತ್ತರ ನೀಡಿದ್ದಾರೆ. ಸಿದ್ದು ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಅವರು, ಆ ಮನುಷ್ಯನಿಗೆ ತನ್ನ ರಕ್ತ ಯಾವುದು ಎಂದೇ ತಿಳಿದಿಲ್ಲ. ಅಂತಹವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ತಿವಿದಿದ್ದಾರೆ. ನಿಮಗೆ ಹಿಂದುತ್ವ ಬೇಕೋ ಬೇಡವೋ, ಆದರೆ ನಾವಂತೂ ನೀವು ಹಿಂದೂ ಅಲ್ಲ ಎಂದು ನಿಮ್ಮನ್ನು ಹೊರಗಿಟ್ಟಾಗಿದೆ ಎಂದು ಹೇಳಿದ್ದಾರೆ.

ಹಾಗೆಯೇ, ಹಿಂದೂ ಎನ್ನಬೇಕಾದರೂ ಕೆಲವು ಯೋಗ್ಯತೆಗಳಿವೆ. ಆಡಂಬರದ ಬದುಕನ್ನು ಒಪ್ಪಿಕೊಳ್ಳದೇ ಇರುವುದು ಹಿಂದುತ್ವ. ಹಿಂದುತ್ವದ ಬಗ್ಗೆ ಕಮಂಗಿಗಳಿಗೆ ಏನೂ ಅರ್ಥವಾಗದು. ಜಾತಿಯಿಂದ ಹೊರ ಬರ ವಾರದ ರು ಹಿಂದುತ್ವದ ಬಗ್ಗೆ ಚರ್ಚೆ ಮಾಡುತ್ತಾರೆ. ದೇವಾಲಯಗಳಿಗೆ ಹೇಗೆ ಹೋಗಬೇಕು ಎಂದು ತಿಳಿಯದವರು ಹಿಂದುತ್ವದ ಬಗೆಗೆ ಮಾತನಾಡುತ್ತಾರೆ. ಹಿಂದುತ್ವ ಎಂದರೆ ನಮಗೆ ಬದುಕು, ಜೀವನ ಎಂದು ಹೆಗಡೆ ಸಿದ್ದುಗೆ ಟಾಂಗ್ ನೀಡಿದ್ದಾರೆ.

ಒಂದೊಂದು ಹೊರ ಹೊಂದಿ ಇದ್ದರೆ ಅದು ಹಿಂದುತ್ವ ಆಗಲಾರದು. ಹಿಂದೂ ಆಗಿ ಹುಟ್ಟಿ, ಹಿಂದೂ ಎನ್ನಲು ಇಷ್ಟವಿಲ್ಲದವರು, ಹಿಂದುತ್ವ ಬೇಕಿಲ್ಲ ಎನ್ನುವವರು ಹಿಂದುತ್ವದ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಅನಂತ್ ಕುಮಾರ್ ಹೆಗಡೆ ಸಿದ್ದುಗೆ ಎದುರೇಟು ನೀಡಿದ್ದಾರೆ.

Tags

Related Articles

Close