ಪ್ರಚಲಿತ

ಹಿಂದುತ್ವದ ಭದ್ರಕೋಟೆ ಮಂಗಳೂರಿನಲ್ಲಿ ಹಿಂದೂ ಹೆಣ್ಣು ಮಕ್ಕಳೇ ಜಿಹಾದಿಗಳ ಟಾರ್ಗೆಟ್!

ಹಿಂದೂ ಹುಡುಗಿಯರೇ.. ಎಚ್ಚರ.. ಎಚ್ಚರ…

ಮಂಗಳೂರಿನಲ್ಲಿ ಮತ್ತೊಂದು ಮತಾಂತರ ಪ್ರಕರಣ ದಾಖಲಾಗಿದೆ. ಕೆಲಸಕ್ಕೆಂದು ಕರೆದುಕೊಂಡು ಹೋಗಿ, ಬಲವಂತವಾಗಿ ಇಸ್ಲಾಂ‌ಗೆ ಮತಾಂತರ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿ ಒಬ್ಬ ಬಡ ಹುಡುಗಿಯ ಬಾಳಿಗೆ ಬೆಂಕಿ ಇರಿಸುವ ಕೆಲಸವನ್ನು ಮತಾಂಧರು ಮಾಡಿದ್ದಾರೆ. ಕೆಲಸದ ಆಸೆಗೆ ಬದುಕು ಕಳೆದುಕೊಳ್ಳುವ ಹಂತಕ್ಕೆ ತಲುಪಿದ ಬಡ ಹೆಣ್ಣುಮಗಳ ಕಣ್ಣೀರ ಕಥೆ ಕೇಳಿ.. ನೀವೂ ಎಚ್ಚರಾಗಿ ಹಿಂದೂ ಹೆಣ್ಮಕ್ಕಳೆ. ಇಂತಹ ಖದೀಮರು ನಮ್ಮ ನಡುವೆಯೂ ಇದ್ದಾರು ಎಂಬ ಅರಿವಿರಲಿ.

ಈ ಮತಾಂತರ ಮಂಗಳೂರಿನಲ್ಲಿ ನಡೆದದ್ದು. ಈ ಮತಾಂತರ, ಲೈಂಗಿಕ ದೌರ್ಜನ್ಯ‌ದ ಹಿಂದೆ ಮೊಬೈಲ್ ಅಂಗಡಿಯ ಖಲೀಲ್ ಎಂಬ ಖದೀಮ, ಇಮಾಮ್ ಎಂಬ ಖದೀಮ, ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಜಮೀಲಾ ಎಂಬ ಎಜುಕೇಟೆಡ್ ಫೂಲ್ ಇದ್ದು ,ಇದೀಗ ಇವರಿಬ್ಬರ ಮೇಲೆಯೂ ನೊಂದ ಸಂತ್ರಸ್ತೆ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ.

ಬಡ ಹಿಂದೂ ಹೆಣ್ಣು ಮಗಳು ಮನೆಯ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಹತ್ತನೇ ತರಗತಿ ಮುಗಿದೊಡನೆಯೇ ಒಂದು ಫ್ಯಾನ್ಸಿ ಶಾಪ್‌ನಲ್ಲಿ ಕೆಲಸಕ್ಕೆ ಸೇರುತ್ತಾಳೆ‌. ಆಕೆಗೆ ಸಮೀಪದ ಮೊಬೈಲ್ ಶಾಪ್‌ನ ಖಲೀಲ ಎಂಬ ಖದೀಮನ ಪರಿಚಯ‌ವಾಗುತ್ತದೆ. ಆಕೆಯ ಬಡತನವನ್ನೇ ಅಸ್ತ್ರವಾಗಿ‌ರಿಸಿಕೊಂಡ ಈ ಖದೀಮ, ಆಕೆಗೆ ಒಳ್ಳೆಯ ಕೆಲಸ, ಉತ್ತಮ ಸಂಬಳ ಕೊಡಿಸುವ ನೆಪದಲ್ಲಿ ಡಾ. ಜಮೀಲಾ ಎಂಬಾಕೆಯ ಮನೆಯಲ್ಲಿ ಕೆಲಸಕ್ಕೂ ವ್ಯವಸ್ಥೆ ಮಾಡುತ್ತಾನೆ. ಅಲ್ಲಿ ಆಕೆಯನ್ನು ತಲೆಗೆ ಹಿಜಾಬ್ ಹಾಕಲು ಹೇಳುವುದು, ನಮಾಜ್ ಮಾಡಲು ಒತ್ತಡ ಹೇರುವುದು, ಇಸ್ಲಾಂ ಧರ್ಮ‌ಕ್ಕೆ ಮತಾಂತರ ಆಗುವಂತೆಯೂ ಆಕೆಯನ್ನು ಪೀಡಿಸಲಾಗಿತ್ತು.

ಅದಾದ ಬಳಿಕ ಖಲೀಲ್ ಸಹ ಜಮೀಲಾ ಮನೆಯಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆಕೆ ಆರೋಪಿಸಿದ್ದಾಳೆ. ಸಂತ್ರಸ್ತೆ ಈ ನರಕದಿಂದ ಹೊರಬರಲು ಸಾಕಷ್ಟು ಒದ್ದಾಡಿದ್ದು, ಸದ್ಯ ಹಿಂದೂ ಸಂಘಟನೆಯೊಂದರ ನೆರವಿನೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.

ಹಿಂದೂ ಹೆಣ್ಮಕ್ಕಳೇ, ನಿಮ್ಮ ಬದುಕನ್ನು ನರಕ ಮಾಡಿಕೊಳ್ಳಲು ನೀವು ಮುಸ್ಲಿಂ ಯುವಕರ ಲವ್ ಜಿಹಾದ್ ಬಲೆಗೆಯೇ ಬೀಳಬೇಕೆಂದೇನಿಲ್ಲ. ಬದಲಾಗಿ, ಅವರ ಜೊತೆಗಿನ ಸಂಪರ್ಕ ಸಹ ನಿಮ್ಮನ್ನು ಅಪಾಯಕ್ಕೆ ತಳ್ಳಬಹುದು ಎಂಬುದಕ್ಕೆ ಮಂಗಳೂರಿನಲ್ಲಿ ಹಿಂದೂ ಹೆಣ್ಮಗಳಿಗೆ ನಡೆದ ಈ ಅನ್ಯಾಯವೇ ಸಾಕ್ಷಿ. ಹೊಟ್ಟೆಪಾಡಿಗಾಗಿ ಕೆಲಸಕ್ಕಿಟ್ಟುಕೊಂಡು, ಅಲ್ಲಿ ಆಕೆಗೆ ಚಿತ್ರಹಿಂಸೆ ,ಮಾನಸಿಕ ದೌರ್ಜನ್ಯ, ಮತಾಂತರ ನಡೆಸುವ ‘ಅಶಾಂತಿ’ ದೂತರೂ ನಮ್ಮ ನಡುವೆ ಇದ್ದಾರೆ. ಅಂತಹವರ ಕರಾಳತೆಗೆ ಸಾಕ್ಷಿ ಈ ದುರಂತ ಘಟನೆ.

ಹಿಂದೂಗಳೇ, ಸ್ನೇಹ ಬೇಕು. ಹಾಗೆಂದು ಯಾರೆಂದರವರ ಸ್ನೇಹ ಮಾಡುವುದಲ್ಲ. ಇಂತಹ ಲಫಂಗರ ಸ್ನೇಹ ಬದುಕಿಗೆ ಹೇಗೆ ಮುಳ್ಳಾಗುತ್ತದೆ ಎಂಬುದಕ್ಕೆ ಉದಾಹರಣೆ ಈ ಹೆಣ್ಣು ಮಗಳ ಬಾಳು. ಒಟ್ಟಾರೆಯಾಗಿ ಆ ಕಳ್ಳ ಮತಾಂಧರಿಗೆ ತಕ್ಕ ಶಿಕ್ಷೆಯಾಗಲಿ. ಈ ಹೆಣ್ಣು ಮಗಳಿಗಾದ ಅನ್ಯಾಯ ಈ ರಾಕ್ಷಸರಿಂದ ಇನ್ನಾರಿಗೂ ಆಗದಿರಲಿ ಎಂಬುದು ನಮ್ಮ ಕಳಕಳಿ.

ನಮ್ಮ ಬುದ್ಧಿ ನಮ್ಮ ಕೈಯಲ್ಲಿದ್ದರೆ ನಾವು ಇಂತಹ ಕರಾಳ ಕೂಪಕ್ಕೆ ಬೀಳಲಾರೆವು‌. ಹಿಂದೂಗಳೇ ಜಾಗೃತರಾಗಿ.. ಜಾಗೃತಿ ಮೂಡಿಸಿ. ಇಂದು ಆಕೆಗಾದ ಅನ್ಯಾಯ ನಾಳೆ ನಮ್ಮ ಮನೆಯ ಹೆಣ್ಣು ಮಕ್ಕಳಿಗೂ ಆಗಬಹುದು. ಎಚ್ಚರ ಹಿಂದೂ.. ಎಚ್ಚರ..

Tags

Related Articles

Close