ಪ್ರಚಲಿತ

ಭಾರತಮಾತೆಯ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ಸೃಷ್ಟಿಸಿದ ಬಿಜೆಪಿ ನಾಯಕ..! ದೇಶಪ್ರೇಮ ಮೆರೆದ ಉತ್ತರ ಕರ್ನಾಟಕದ ಟೈಗರ್!

ಅವರು ವಿದ್ಯಾರ್ಥಿ ಜೀವನದಿಂದಲೇ ಸಂಘಟನೆಗಾಗಿ ದುಡಿದವರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಾಯಕರಾಗಿ ಸೇವೆ ಸಲ್ಲಿಸಿದವರು. ನಂತರ ಅವರ ಸೇವೆಯನ್ನು ಕಂಡು ಭಾರತೀಯ ಜನತಾ ಪಕ್ಷ ಅವರನ್ನು ಅರಸಿಕೊಂಡು ಬಂದಿತ್ತು. ಇದೀಗ ಅವರು ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರು.

ಹೌದು…. ನಾವು ಹೇಳುತ್ತಿರುವುದು ವಿಧಾನ ಪರಿಷತ್ತಿಗೆ ಇತ್ತೀಚೆಗೆ ನೂತನವಾಗಿ ಆಯ್ಕೆಯಾಗಿರುವ ಅಪ್ಪಟ ದೇಶಪ್ರೇಮಿ, ಹಿಂದೂ ಯುವ ನಾಯಕ, ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಎನ್.ರವಿ ಕುಮಾರ್.

ಇಂದು ವಿಧಾನ ಸೌಧದಲ್ಲಿ ನೂನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಪ್ರಮಾಣ ವಚನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾಗಿರುವ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎನ್.ರವಿ ಕುಮಾರ್ ಅವರೂ ಪ್ರಮಾಣ ವಚನಕ್ಕಾಗಿ ಭಾಗವಹಿಸಿದ್ದರು. ಇವರು ತಮ್ಮ ಪ್ರಮಾಣ ವಚನದ ವೇಳೆ ಭಾರತಮಾತೆಯ ಮೇಲೆ ಪ್ರಮಾಣ ವಚನವನ್ನು ಸ್ವೀಕರಿಸಿ ಮತ್ತೊಮ್ಮೆ ದೇಶದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ.

ವಿದ್ಯಾರ್ಥಿ ಜೀವನದಿಂದಲೇ ಸಂಘಟನೆಯಲ್ಲಿ ತೊಡಗಿಕೊಂಡು, ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದು, ತನ್ನ ಜೀವನದ ಬಹುತೇಕ ದಿನಗಳನ್ನು ಸಂಘಟನೆಗೇ ಮೀಸಲಿಟ್ಟಿದ್ದ ರವಿ ಕುಮಾರ್ ಅವರು ಇದೀಗ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಕಛೇರಿಯನ್ನೇ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದ ರವಿ ಕುಮಾರ್ ಅವರು ತನಗೆ ಕಡಿಮೆ ಸಮಾಜಕ್ಕೆ ಹೆಚ್ಚು ಎಂದು ದುಡಿದವರು. ಯಾವ ಹೆಸರಿನ ಗೋಜಿಗೂ ಹೋಗದೆ ನಿಸ್ವಾರ್ಥ ಸೇವೆಯನ್ನು ಗೈದ ರವಿ ಕುಮಾರ್ ಇವರಿಗೆ ಭಾರತೀಯ ಜನತಾ ಪಕ್ಷ ಈ ಹುದ್ದೆಯ ಅವಕಾಶವನ್ನು ನೀಡಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಟೈಗರ್ ರವಿ ಕುಮಾರ್ ಎಂದೇ ಪ್ರಸಿದ್ಧಿ ಪಡೆದ ಇವರು ಇಂದು ಮತ್ತೆ ತನ್ನ ಬೆಳವಣಿಗೆಗೆ ಕಾರಣವಾದ ಭಾರತಾಂಬೆಯನ್ನು ಸ್ಮರಿಸಿದ್ದಾರೆ. ತೀರಾ ಅಪರೂಪವೆಂಬಂತೆ ಇಂದು ಪ್ರಮಾಣ ವಚನದ ವೇಳೆ ಭಾರತಮಾತೆಯನ್ನು ಸ್ಮರಿಸಿ ಅವಳ ಹೆಸರಿನಲ್ಲೇ ಪ್ರಮಾಣ ವಚನವನ್ನು ಸ್ವೀಕರಿಸಿದ್ದು ಕರ್ನಾಟಕದಲ್ಲಿ ಹೊಸ ಇತಿಹಾಸಕ್ಕೆ ಕಾರಣವಾಗಿದೆ.

-ಸುನಿಲ್ ಪಣಪಿಲ

Tags

Related Articles

Close