ಪ್ರಚಲಿತ

4 ವರ್ಷಗಳಿಂದ ಮೋದಿ ವಿರುದ್ಧ ಉಗ್ರರು ಕೆಂಡ ಕಾರುತ್ತಿರುವುದು ಯಾಕೆ ಗೊತ್ತಾ..? ಇಲ್ಲಿದೆ ನೋಡಿ ಮೋದಿಯ ಉಗ್ರದಮನದ ರೋಚಕ ಸ್ಟೋರಿ..!

ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಆಡಳಿತದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಇಡೀ ದೇಶವೇ ಬದಲಾವಣೆಯ ಗಾಳಿ ಬೀಸಿದೆ ಅಂತಾನೇ ಹೇಳಬಹುದು!! ಅದೊಂದು ಕಾಲವಿತ್ತು ದಿನಬೆಳಗಾದರೆ ಸಾಕು ಉಗ್ರರ ದಾಳಿಗೆ ಯೋಧರ ಸಾವು!! ಎನ್ನುವ ಶೀರ್ಷಿಕೆಯೊಂದಿಗೆ ಯೋಧರ ಸಾವಿನ ಸುದ್ದಿ ಪತ್ರಿಕೆಯ ಮುಖಪುಟಗಳಲ್ಲಿ ರಾರಾಜಿಸುತ್ತಿತ್ತು. ಆದರೆ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಯಾವಾಗ ಅಸ್ತಿತ್ವಕ್ಕೆ ಬಂದಿತೋ, ಅಂದಿನಿಂದ ಸೇನೆಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ರಾಜಾರೋಷವಾಗಿ ಹೇಳಬಹುದು. ಅಷ್ಟೇ ಅಲ್ಲದೇ, ನರೇಂದ್ರ ಮೋದಿ ಸರ್ಕಾರದಿಂದ ಉಗ್ರರ ವಿರುದ್ಧದ ದಾಳಿಗೆ ಪ್ರೋತ್ಸಾಹಿಸಿತೋ, ಸರ್ಜಿಕಲ್ ದಾಳಿಗೆ ಅನುಮತಿ ನೀಡಿತೋ, ಅಂದಿನಿಂದ ಕಾಶ್ಮೀರದ ಪರಿಸ್ಥಿತಿಯೇ ಬದಲಾಗತೊಡಗಿತು!! ನಿಜಕ್ಕೂ ಇಂತಹ ಪ್ರಧಾನಿಯನ್ನು ಪಡೆದಿರುವ ನಾವೇ ಗ್ರೇಟ್!! ಒಂದು ಕಡೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಪ್ರಧಾನಿ ನರೇಂದ್ರ ಮೋದಿ!! ಮತ್ತೊಂದು ಕಡೆ ಭಾರತವನ್ನು ರಕ್ಷಿಸಲು ಸರ್ವ ರೀತಿಯಲ್ಲಿ ಸನ್ನದ್ಧವಾಗಿರುವ ಸೇನೆ!! ಅದಕ್ಕೊಬ್ಬ ಉತ್ಸಾಹಿ ಸೇನಾಧಿಕಾರಿ ಬಿಪಿನ್ ರಾವತ್!! ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡಿದ ಭಾರತ ಅತ್ತ ಪಾಕ್ ಪ್ರೇರಿತ ಭಯೋತ್ಪಾದನೆಗೂ ತಕ್ಕ ಮದ್ದು ಅರೆಯುತ್ತಿದೆ!! ಯಾವಾಗ ಮೋದಿಜೀ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಇಡೀ ದೇಶದ ಜನತೆ ನೆಮ್ಮದಿಯಿಂದ ನಡೆಸುವಂತಾಗಿದೆ!!

Image result for modi

ಮೋದಿ ಸರಕಾರದ 4 ವರ್ಷದಲ್ಲಿ 619 ಉಗ್ರರ ಹತ್ಯೆ

ನರೇಂದ್ರ ಮೋದಿ ಸರಕಾರ ಭಯೋತ್ಪಾದಕರ ಬಗ್ಗೆ ಶೂನ್ಯ ತಾಳ್ಮೆ ನೀತಿಯನ್ನು ಅನುಸರಿಸುತ್ತಿದ್ದು ಉಗ್ರ ವಿರೋಧಿ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿಯಲಿದೆ ಎಂದು ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ!! ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಬಿಜೆಪಿ ಆಡಳಿತಾವಧೀಯಲ್ಲಿ ವಿವಿಧ ಉಗ್ರ ವಿರೋಧೀ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳ ಕೈಯಿಂದ ಹತ್ಯೆಗೀಡಾದ ಉಗ್ರರ ಅಂಕಿಅಂಶಗಳನ್ನು ತೆರೆದಿಟ್ಟರು… 4 ವರ್ಷದಲ್ಲಿ ಜಮ್ಮು ಕಾಶ್ಮೀರದಲ್ಲಿ ಒಟ್ಟು 619 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದ ಅವರು ರಂಜಾನ್ ತಿಂಗಳಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ನಾವು ನಿಲ್ಲಿಸಿಲ್ಲ.. ಬದಲಿಗೆ ಮುಂದೂಡಿದ್ದೇವೆ ಅಷ್ಟೇ ಎಂದಿದ್ದಾರೆ!! ಯುಪಿಎ-2 ಅವಧಿಯಲ್ಲಿ 471 ಉಗ್ರರನ್ನು ಹತ್ಯೆ ಮಾಡಲಾಗಿತ್ತು!! ಆದರೆ ಬಿಜೆಪಿಯ 4 ವರ್ಷದ ಅವಧಿಯಲ್ಲಿ 619 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದರು!! ಅಷ್ಟು ವರ್ಷಗಳ ಕಾಲ ಕಾಂಗ್ರೆಸ್ ಆಳ್ವಿಕೆ ನಡೆಸಿದರೂ ಕೂಡಾ ನಮ್ಮ ಸೈನಿಕರನ್ನು ಅಟ್ಯಾಕ್ ಮಾಡಿದರೆ ಅದರ ಪ್ರತಿ ದಾಳಿಯನ್ನು ಮಾಡಬೇಕಾದರೆ ಯುಪಿಎ ಸರಕಾರದ ಅನುಮತಿ ಪಡೆಯಬೇಕಿತ್ತು!! ಆದರೆ ಇಂದು ಅದೆಲ್ಲಾ ಬದಲಾಗಿದೆ!! ಸೈನಿಕರಿಗೆ ಮೋದಿ ಸರಕಾರ ನೀಡುತ್ತಿರುವ ಸವಲತ್ತು ಇದು ಸೈನಿಕರಿಗೆ ಮಾನಸಿಕ ಸ್ಥೈರ್ಯ ನೀಡುತ್ತಿದೆ!!

Image result for modi

ಅದಲ್ಲದೆ ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ವಂಸಕ ಕೃತ್ಯ ನಡೆಸಿ ಮುಗ್ಧರನ್ನು , ಜವಾನರನ್ನು ಹತ್ಯೆಗೊಳಿಸುತ್ತಿದ್ದ ಉಗ್ರ ಸಂಘಟನೆಗಳು ಇಂದು ತನ್ನ ಮುಖ್ಯಸ್ಥರನ್ನೇ ಕಳೆದುಕೊಳ್ಳುತ್ತಿದೆ ಎಂದರೆ ಇದಕ್ಕಿಂತ ಗುಡ್‍ನ್ಯೂಸ್ ಬೇರೆ ಇದೆಯಾ?. ನಮ್ಮ ಸೇನಾಪಡೆ ಎಷ್ಟು ಮಂದಿ ಉಗ್ರ ಸಂಘಟನೆಯ ಮುಖ್ಯಸ್ಥರನ್ನು ಹೊಸಕಿ ಹಾಕಿದೆ ಗೊತ್ತಾ!! ಉಗ್ರವಾದಿಗಳ ರುಂಡವನ್ನು ಚೆಂಡಾಡುತ್ತಾ, `ಜಗತ್ತಿಗೆ ಭಯೋತ್ಪಾದನೆ ಶತ್ರುವಾಗಿದ್ದು, ಅವರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಬಿಡಿ’ ಎಂದು ಇಡೀ ಜಗತ್ತಿಗೆ ಕರೆ ನೀಡುತ್ತಾ ತನ್ನ ಬದ್ಧತೆಯನ್ನು ಭಾರತ ಪ್ರದರ್ಶಿಸುತ್ತಲೇ ಬರುತ್ತಿದೆ. ಇದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಒಂದು ಕಾಲದಲ್ಲಿ ಪಾಕಿಸ್ತಾನವನ್ನು ಹೆಗಲಲ್ಲಿಟ್ಟು ಪೆÇೀಷಿಸುತ್ತಿದ್ದ ಚೀನಾ ಕೂಡಾ ಇಂದು ಅದೇ ಪಾಕಿಸ್ತಾನ ಉಗ್ರರನ್ನು ರಫ್ತು ಮಾಡುತ್ತಿದೆ ಎಂದು ಹೇಳುವಂತಾಗಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಭಾರತದ ಪರಿಸ್ಥಿತಿ ಹೇಗಿತ್ತು ಗೊತ್ತಾ? `ಉಗ್ರರ ಜೊತೆ ಗುಂಡಿನ ಚಕಮಕಿ, ಓರ್ವ ಯೋಧ ಸಾವು’ ಇಂತಹುದೇ ಸುದ್ದಿಗಳನ್ನು ಓದುತ್ತಿದ್ದ ನಾವು ಇಂದು ಪತ್ರಿಕೆಗಳ ಪುಟವನ್ನು ತಿರುವಿ ಹಾಕಿದರೆ, `ಕಾಶ್ಮೀರದಲ್ಲಿ ಎನ್‍ಕೌಂಟರ್, ಉಗ್ರ ಮುಖಂಡನ ಹತ್ಯೆ’ ಎಂಬ ಸುದ್ದಿಗಳನ್ನೇ ಓದುವಂತಾಗಿದೆ ಎಂದರೆ ಇದಕ್ಕೆ ಕಾರಣ ಮೋದಿ ಎಂಬ ದಿಟ್ಟ ವ್ಯಕ್ತಿ ಪ್ರಧಾನಿ ಪಟ್ಟದಲ್ಲಿ ಕುಳಿತಿರುವುದೇ ಕಾರಣವಾಗಿದೆ.

Image result for modi with soldiers

ಅದಲ್ಲದೆ ಇದೀಗ ಉಗ್ರರು ತಮ್ಮ ಬುದ್ಧಿವಂತಿಕೆಯನ್ನು ತಾವು ತೋರಿಸಿದರೆ ಅದಕ್ಕೆ ಪ್ರತಿತಂತ್ರವಾಗಿ ಭಾರತೀಯಸೇನೆ ಅತೀ ದೊಡ್ಡ ಮಾಸ್ಟರ್ ಪ್ಲಾನ್ ಅನ್ನೇ ಮಾಡುತ್ತಿದೆ.. ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ನಿಗ್ರಹ ಮಾಡಲು ಭಾರತೀಯ ಸೈನ್ಯ ನೂತನ ಯೋಜನೆಯನ್ನು ಕೂಡಾ ರೂಪಿಸುತ್ತಿದೆ!! ಉಗ್ರರನ್ನು ಕೊಲ್ಲುವ ಬದಲು ಜೀವಂತವಾಗಿ ಹಿಡಿಯಲು ಕೂಡಾ ಮುಂದಾಗುತ್ತಿದೆ. ಯಾವುದೇ ಉಗ್ರರನ್ನು ಹತ್ಯೆ ಮಾಡುವುದರಿಂದ ಅವರ ಜೀವ ಹೋಗುತ್ತದೆಯೇ ವಿನಃ ಅವರು ಎಷ್ಟು ಉಗ್ರರನ್ನು ನೇಮಿಸಿದ್ದಾರೆ, ಆ ಉಗ್ರ ತನ್ನ ಕುಟುಂಬದವರನ್ನೂ ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದಾನಾ, ಉಗ್ರರ ಮುಂದಿನ ದಾಳಿ ಕುರಿತ ಯೋಜನೆ ಯಾವುದು ಎಂಬುದರ ಕುರಿತು ಪತ್ತೆ ಹಚ್ಚಲು ಭಾರತೀಯ ಸೇನೆ ಈ ಯೋಜನೆ ರೂಪಿಸಿದೆ. ಹಾಗಾಗಿ, ಉಗ್ರರು ಅಡಗಿರುವ ಸೇನಾನೆಲೆಯನ್ನು ಪತ್ತೆ ಹಚ್ಚಿ, ಎಷ್ಟು ಸಾಧ್ಯವೋ ಅಷ್ಟು ಸಾಧ್ಯವಾದಷ್ಟು ಉಗ್ರರನ್ನು ಜೀವಂತವಾಗಿ ಹಿಡಿಯುವುದು ಸೇನೆಯ ಮುಂದಿನ ಯೋಜನೆಯಾಗಿದೆ, ಹೀಗೆ ಸೆರೆಸಿಕ್ಕ ಉಗ್ರರನ್ನು ಹಿಡಿದು ತಂದು, ಅವರನ್ನು ಬಾಯಿಬಿಡಿಸುವ ಯೋಜನೆಯನ್ನು ಸೇನೆ ರೂಪಿಸಿಕೊಂಡಿದೆ!!

ಕಾಂಗ್ರೆಸ್ ಸರಕಾರ ಭಾರತವನ್ನು ಇಷ್ಟು ವರ್ಷಗಳ ಕಾಲ ಆಳಿದೆ. ಆದರೆ ಇಷ್ಟೊಂದು ಉಗ್ರರನ್ನು ಹೊಡೆದುರುಳಿಸಲು ಮೋದಿಯೇ ಬರಬೇಕಾಯಿತು. ಇಂದು ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಸಾಧಾರಣವಾಗಿ ಸಾಕಷ್ಟು ಉಗ್ರ ಕಮಾಂಡರ್ಗಳು ಹೇಳಹೆಸರಿಲ್ಲದಂತೆ ನಾಶವಾಗಿರುವುದರಿಂದ ಸೇನಾಪಡೆಗೆ ಸಿಕ್ಕ ಭರ್ಜರಿ ಯಶಸ್ವಿ ಎಂದೇ ಹೇಳಬಹುದು. ಮೋದಿ ಸರಕಾರ ಸೇನಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದರಿಂದ ಉಗ್ರರನ್ನು ಹುಡುಕಿ ಹುಡುಕಿ ಹೊಸಕಿ ಹಾಕುತ್ತಿದೆ!! ಇದು ಮೋದೀಜೀ ತಾಕತ್ತು!!

-ಪವಿತ್ರ

Tags

Related Articles

Close