ಅತ್ಯಂತ ಸಂಪದ್ಭರಿತ ರಾಷ್ಟ್ರವಾಗಿದ್ದ ಭಾರತವನ್ನು ಬ್ರಿಟಿಷರು ಸ್ವಾತಂತ್ರ್ಯ ಪೂರ್ವದಲ್ಲಿ ಕೊಳ್ಳೆಹೊಡೆದಿದ್ದರು.ಕುಗ್ಗಿಹೋಗಿದ್ದ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಖುಷಿಯಲ್ಲಿದ್ದಾಗಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತೆ ಭಾರತದ ಸಂಪತ್ತನ್ನು ದೋಚಲು ಪ್ರಾರಂಭಿಸಿತ್ತು.ಬ್ರಿಟೀಷರ ಕಾಲದಲ್ಲಿ ಗುಲಾಮಗಿರಿಯಲ್ಲೇ ಬಾಳುತ್ತಿದ್ದ ಭಾರತೀಯರನ್ನು ಕಾಂಗ್ರೆಸ್ ಮತ್ತೇ ಗುಲಾಮರನ್ನಾಗಿಯೇ ವರ್ತಿಸಿತ್ತು.
ಸುಮಾರು ಅರುವತ್ತು ವರ್ಷಗಳ ಕಾಲ ಗುಲಾಮಗಿರಿಯಲ್ಲೇ ಬದುಕಿದ್ದ ಭಾರತೀಯರು ಬದಲಾವಣೆಗಾಗಿ 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಎಂಬ ಶಕ್ತಿಯನ್ನು ಗೆಲ್ಲಿಸಿದ್ದರು.ಪ್ರಧಾನಿಯಾದ ದಿನದಿಂದಲೇ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸುತ್ತಿರುವ ನರೇಂದ್ರ ಮೋದಿಯವರು ಹೋದಲ್ಲೆಲ್ಲಾ ಲಕ್ಷ ಲಕ್ಷ ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ.ಇದೇ ರೀತಿ ಮೊನ್ನೆ ಕರ್ನಾಟಕಕ್ಕೆ ಆಗಮಿಸಿದ ಸಂದರ್ಭದಲ್ಲೂ ಕಾರ್ಯಕರ್ತರ ದಂಡೇ ಬೆಂಗಳೂರು ಅರಮನೆ ಮೈದಾನದಲ್ಲಿ ಸೇರಿತ್ತು.ಇದನ್ನು ಕಂಡ ಕಾಂಗ್ರೆಸ್ ಕಂಗಾಲಾಗಿತ್ತು.ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸರ್ಕಸ್ ಮಾಡುತ್ತಿರುವ ಕಾಂಗ್ರೆಸ್ ನರೇಂದ್ರ ಮೋದಿಯವರ ಸಮಾವೇಶದಲ್ಲಿ ಸೇರಿದ ಜನರನ್ನು ನೋಡಿ ಭಯಭೀತಗೊಂಡಿದೆ.!
ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬಂದು ಹೋದ ನಂತರದಲ್ಲಿ ಕಾಂಗ್ರೆಸ್ ನ ಒಬ್ಬೊಬ್ಬರೇ ಬೊಬ್ಬೆ ಹಾಕಲು ಶುರುಮಾಡಿದ್ದಾರೆ.ಅಂತವರಲ್ಲಿ ಒಬ್ಬರಾದ ರಮ್ಯಾ ಎಂಬ ಹುಳ ನರೇಂದ್ರ ಮೋದಿಯವರ ಬಗ್ಗೆ ಕೀಳಾಗಿ ಮಾತನಾಡಿದ್ದಾಳೆ.ಪದೇ ಪದೇ ವಿವಾದಾತ್ಮಕವಾಗಿ ಮಾತನಾಡುವ ಮಾದಕ ಚಿತ್ರನಟಿ ರಮ್ಯಾ,’ನರೇಂದ್ರ ಮೋದಿಯವರು ಮಾದಕ ದ್ರವ್ಯ ಸೇವಿಸಿ ನಶೆಯಲ್ಲಿ ಮಾತನಾಡಿದ್ದಾರೆ’ ಎಂದು ಬೊಗಳಿದ್ದಾಳೆ.ಇದಕ್ಕೆ ಪ್ರತ್ಯುತ್ತರವಾಗಿ ರಮ್ಯಾಳಿಗೆ ತಕ್ಕ ಉತ್ತರವೂ ಸಾಮಾಜಿಕ ಜಾಲತಾಣದ ಮೂಲಕ ದೊರೆತಿದೆ.
ನೆಚ್ಚಿನ ರಮ್ಯಾ ರವರೇ,ಹೌದು ನನ್ನ ಮೋದೀಜಿ ಗೆ ನಶೆ ಏರಿದೆ.., ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಒಂದು ದಿನ ರಜೆ ಮಾಡದೇ ದಿನಕ್ಕೆ18 ಗಂಟೆ ದೇಶಕ್ಕಾಗಿ ದುಡಿಯುತ್ತಿದ್ದಾರಲ್ಲಾ ,ನಿಜವಾಗಿಯೂ ನನ್ನ ಮೋದೀಜಿಗೆ ದೇಶಪ್ರೇಮದ ನಶೆ ಏರಿದೆ..!
ಜಗತ್ತಿನ ಮುಂದೆ ಭಾರತವನ್ನು ಮಂಡಿಯೂರಿ ನಿಲ್ಲುವಂತೆ ಮಾಡಿ,ಜಗತ್ತು ಭಾರತವನ್ನು ಕೀಳಾಗಿ ಕಾಣಲು ಕಾರಣವಾಗಿದ್ದ ಕಾಂಗ್ರೆಸ್ ನಿಂದ ಭಾರತವನ್ನು ಮುಕ್ತಿಗೊಳಿಸಿ ಜಗತ್ತೇ ಭಾರತವನ್ನು ಕೈಬೀಸಿ ಕರೆಯುವಂತೆ ಮಾಡಿರುವ ನನ್ನ ಮೋದೀಜೀ ಗೆ ಭಾರತವನ್ನು ವಿಶ್ವಗುರು ಮಾಡುವ ನಶೆ ಏರಿದೆ..!
ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಬಳಸಿಕೊಂಡು ಕೇವಲ ಮುಸ್ಲಿಮರ ಓಲೈಕೆ ಮಾಡುತ್ತಿದ್ದವರ ಎದುರಲ್ಲೇ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳಿದ ನನ್ನ ಮೋದೀಜಿಗೆ ವಸುದೈವ ಕುಟುಂಬಕಂ ಎಂಬ ನಶೆ ಏರಿದೆ..!
ಕಾಂಗ್ರೆಸ್ ನ ನೀತಿಯಿಂದಾಗಿ ಭಾರತದ ಬಗ್ಗೆ ಕೀಳರಿಮೆ ಹೊಂದಿದವರ ಮುಂದೆ ನಿಂತು ‘ನನ್ನ ದೇಶ ನನ್ನ ಹೆಮ್ಮೆ’ ಎಂದು ಘೋಷಿಸಿದ ನನ್ನ ಮೋದೀಜೀ ಗೆ ದೇಶಭಕ್ತಿಯ ನಶೆ ಏರಿದೆ..!
ವಿದೇಶಿ ಸಂಸ್ಕ್ರತಿಗಳ ಬಗ್ಗೆ ಅತೀವ ಒಲವು ಹೊಂದಿ ಗುಲಾಮಗಿರಿಯಲ್ಲೇ ಬದುಕುತ್ತಿದ್ದವರ ನಡುವೆ ಸ್ವಾಭಿಮಾನದ ಬೀಜ ಬಿತ್ತಿದ ನನ್ನ ಮೋದೀಜೀಗೆ ದೇಶದ ಹಿತದ ಬಗ್ಗೆ ನಶೆ ಏರಿದೆ..!
ಕನಸು ಕಾಣಲು ವಿದೇಶಗಳಿಗೆ ತೆರಳುತ್ತಿದ್ದ ಭೋಗಜೀವಿಗಳ ಮಧ್ಯೆ ಭಾರತವೇ ನನಗೆ ಸ್ವರ್ಗ ,ಇದೇ ನನ್ನ ಕನಸು ಎಂದು ಗಂಟಾಘೋಷವಾಗಿ ಹೇಳಿದ ನನ್ನ ಮೋದೀಜೀಗೆ ನಿಜವಾಗಲು ಕನಸಿನ ಭಾರತದ ನಶೆ ಏರಿದೆ..!
ಭಾರತಕ್ಕೆ ಬೇಕಾದ ಪ್ರತಿಯೊಂದು ವಿಷಯಗಳಿಗೂ ವಿದೇಶದಿಂದ ಆಮದು ಮಾಡುತ್ತಿದ್ದ ಭಾರತದಲ್ಲಿ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಅಡಿಯಲ್ಲಿ ಭಾರತದಲ್ಲೇ ಉತ್ಪಾದನಾ ವಲಯವನ್ನು ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಿದರಲ್ಲಾ, ಹೌದು ನನ್ನ ಮೋದೀಜೀ ಗೆ ಕನಸಿನ ಭಾರತವನ್ನು ನಿರ್ಮಿಸುವ ನಶೆ ಏರಿದೆ..!
ಕಾಳಧನಿಕರಿಂದಲೇ ತುಂಬಿದ್ದ ಭಾರತವನ್ನು ಕಪ್ಪುಹಣದಿಂದ ಮುಕ್ತಿ ಪಡೆಯಲು’ನೋಟ್ ಬ್ಯಾನ್’ ನಂತಹ ದಿಟ್ಟ ನಿರ್ಧಾರವನ್ನು ಕೈಗೊಂಡರಲ್ಲಾ, ಹೌದು ನನ್ನ ಮೋದೀಜೀ ಗೆ ಭವಿಷ್ಯದ ಭಾರತ ಉತ್ತಮವಾಗಿರಬೇಕೆಂಬ ನಶೆ ಏರಿದೆ..!
ರಸ್ತೆಯಲ್ಲೇ ಕಸಹಾಕಿ ,ಉಗುಳಿಕೊಂಡು ಕೊಚ್ಚೆಯಂತೆ ಮಾಡುತ್ತಿದ್ದ ಭಾರತವನ್ನು ‘ಸ್ವಚ್ಛ ಭಾರತ’ ಯೋಜನೆಯ ಹೆಸರಿನಲ್ಲಿ ಸ್ವತಃ ತಾಬೇ ಬೀದಿಗಿಳಿದು ಪೊರಕೆ ಹಿಡಿದು ಕಸ ಗುಡಿಸಿದರಲ್ಲಾ, ನಿಜವಾಗಿಯೂ ನನ್ನ ಮೋದೀಜೀ ಗೆ ಸ್ವಚ್ಛ ಭಾರತದ ನಶೆ ಏರಿದೆ..!
ಬ್ಯಾಂಕ್ ಎಂದರೆ ಏನೆಂದೇ ತಿಳಿಯದ ಭಾರತದ ಕೆಲ ಪ್ರಜೆಗಳಿಗಾಗಿಯೇ ‘ಪ್ರಧಾನ ಮಂತ್ರಿ ಜನ್ ಧನ್ ಯೋಜನೆ’ ಜಾರಿತಂದು ಬಾರತದ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಿದರಲ್ಲಾ,ನಿಜವಾಗಿಯೂ ನನ್ನ ಮೋದೀಜೀ ಗೆ ಭಾರತೀಯರನ್ನು ವಿಕಾಸಗೊಳಿಸುವ ನಶೆ ಏರಿದೆ..!
ಸ್ವ ಉದ್ಯೋಗ ಮಾಡಲು ಹಣಕಾಸಿನ ತೊಂದರೆ ಇರುವ ಯುವಕರಿಗೆ ‘ಮುದ್ರಾ ಯೋಜನೆಯ’ ಅಡಿಯಲ್ಲಿ ಸರಕಾರದ ವತಿಯಿಂದಲೇ ಸಾಲ ಕೊಟ್ಟು ಉದ್ಯೋಗ ನಿರ್ಮಿಸುವ ಕನಸು ಕಂಡರಲ್ಲಾ,ನಿಜವಾಗಿಯೂ ನನ್ನ ಮೋದೀಜೀ ಗೆ ಭಾರತವನ್ನು ನಿರುದ್ಯೋಗ ಮುಕ್ತ ಭಾರತವನ್ನಾಗಿ ಮಾಡುವ ನಶೆ ಏರಿದೆ..!
ಹೆಣ್ಣು ಮಕ್ಕಳನ್ನು ದರಿದ್ರ ಎಂದು ಭಾವಿಸುತ್ತಿದ್ದ ಜನರ ಮಧ್ಯೆ ‘ಹೆಣ್ಣು ಎಂದರೆ ಲಕ್ಷ್ಮೀ, ದೇವರಂತೆ ಕಾಣಿ’ ಎಂದು ಹೇಳಿ ಸುಕನ್ಯಾ ಸಮ್ರಧ್ದಿ ಯೋಜನೆಯ ಆಶಯದಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಎಂದು ಕರೆಕೊಟ್ಟರಲ್ಲಾ,ನಿಜವಾಗಿಯೂ ನನ್ನ ಮೋದೀಜೀ ಗೆ ಕಾಳಜಿಯ ನಶೆ ಏರಿದೆ..!
ಭಾರತದ ಪವಿತ್ರ ನದಿಗಳಲ್ಲಿ ಒಂದಾದ ಗಂಗಾ ನದಿಯನ್ನು ಚರಂಡಿಯಂತೆ ಉಪಯೋಗಿಸುತ್ತಿದ್ದ ಜನರ ನಡುವೆ ‘ನಮಾಮಿ ಗಂಗೆ’ ಎಂಬ ಅಭಿಯಾನದ ಮೂಲಕ ಇಡೀ ಗಂಗೆಯನ್ನು ಪುಣ್ಯ ನದಿಯನ್ನಾಗಿ ಪುನರ್ನಿರ್ಮಾಣ ಮಾಡಿದರಲ್ಲಾ,ನಿಜವಾಗಿಯೂ ನನ್ನ ಮೋದೀಜೀ ಗೆ ಪ್ರಕ್ರತಿ ಸಂಪತ್ತಿನ ಕಾಳಜಿಯ ನಶೆ ಏರಿದೆ..!
ಅಪಘಾತವಾದಾಗ ತತ್ ಕ್ಷಣ ಸರಕಾರದ ವತಿಯಿಂದ ಲಕ್ಷ ಲಕ್ಷ ವಿಮೇ ನೀಡಲಾಗುತ್ತದೆಯಲ್ಲಾ,ನಿಜವಾಗಿಯೂ ನನ್ನ ಮೋದೀಜೀ ಗೆ ಭಾರತೀಯರ ಕಾಳಜಿಯ ನಶೆ ಏರಿದೆ..!
ಭಾರತವನ್ನು ವಿರೋಧಿಗಳಿಂದ ರಕ್ಷಿಸುವ ಸೈನಿಕರ ತಲೆ ಕಡಿದು ಹೋದಾಗಲೂ ಸುಮ್ಮನಿರುತ್ತಿದ್ದ ಜನರ ಮಧ್ಯೆ ಸೈನಿಕರ ರಕ್ಷಣೆಗೆ ಧಾವಿಸುವ ಪ್ರಧಾನಿ ಇದ್ದಾರಲ್ಲಾ,ನಿಜವಾಗಿಯೂ ನನ್ನ ಮೋದೀಜೀ ಗೆ ಭಾರತದ ರಕ್ಷಣೆಯ ನಶೆ ಏರಿದೆ..!
ಭಾರತೀಯ ಸೈನಿಕರ ಮೇಲೆ ದಾಳಿ ಮಾಡುವ ಪಾಕಿಸ್ತಾನದ ಗಡಿ ದಾಟಿ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಲು ಆದೇಶ ನೀಡುತ್ತಾರಲ್ಲಾ,ನಿಜವಾಗಿಯೂ ನನ್ನ ಮೋದೀಜೀ ಗೆ ಸೈನಿಕರ ಮೇಲಿನ ಕಾಳಜಿಯ ನಶೆ ಏರಿದೆ..!
ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ‘ಒನ್ ರಾಂಕ್ ಒನ್ ಪೆನ್ಷನ್ ಯೋಜನೆಯನ್ನು’ ಮತ್ತೆ ಜಾರಿಗೊಳಿಸಿ ದೇಶವನ್ನು ಕಾಯುವ ಯೋಧರ ನಿವ್ರತ್ತಿ ಯ ನಂತರ ನಂತರ ಸೈನಿಕರು ಮತ್ತು ಅವರ ಕುಟುಂಬದವರು ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಟ್ಟರಲ್ಲಾ , ನಿಜವಾಗಿಯೂ ನನ್ನ ಮೋದೀಜೀ ಗೆ ದೇಶದ ಪ್ರತಿಯೊಬ್ಬನ ಹಿತ ಕಾಪಾಡುವ ನಶೆ ಏರಿದೆ..!
ಸ್ವಾತಂತ್ರ್ಯ ದೊರೆತು ಎಪ್ಪತ್ತು ವರುಷವಾದರೂ ಅದೆಷ್ಟೋ ಹಳ್ಳಿಗಳು ಇಂದೂ ಕತ್ತಲಲ್ಲೇ ಜೀವನ ಸಾಗಿಸುತ್ತಿದ್ದ ಈ ಕಾಲದಲ್ಲಿ ‘ಉದಯ ಯೋಜನೆ’ಯ ಅಡಿಯಲ್ಲಿ ದೇಶದ ಪ್ರತಿಯೊಂದು ಹಳ್ಳಿಗಳಿಗೂ ವಿದ್ಯುತ್ ಪೂರೈಕೆ ಮಾಡುವ ಸಂಕಲ್ಪ ಮಾಡಿಕೊಂಡರಲ್ಲಾ,ನಿಜವಾಗಿಯೂ ನನ್ನ ಮೋದೀಜೀ ಗೆ ದೇಶವನ್ನು ವಿಕಾಸದತ್ತ ಕೊಂಡೊಯ್ಯುವ ನಶೆ ಏರಿದೆ..!
ಹಳೇ ಕಾಲದ ಪದ್ದತಿಯನ್ನೇ ಅನುಸರಿಸಿಕೊಂಡು ಬರುತ್ತಿರುವ ಭಾರತೀಯರನ್ನು ಆಧುನೀಕರಣ ಮಾಡುವ ಕನಸು ಹೊಂದಿರುವ ಮೋದಿ ‘ಡಿಜಿಟಲ್ ಇಂಡಿಯಾ’ ಯೋಜನೆಯನ್ನು ಜಾರಿಗೊಳಿಸಿದರಲ್ಲಾ,ನಿಜವಾಗಿಯೂ ನನ್ನ ಮೋದೀಜೀ ಗೆ ಭಾರತವನ್ನು ಮತ್ತು ಭಾರತೀಯರನ್ನು ಆಧುನೀಕರಣ ಜಗತ್ತಿಗೆ ಪರಿಚಯಿಸುವ ನಶೆ ಏರಿದೆ..!
ಅನವಶ್ಯಕವಾಗಿ ಸಂಪತ್ತನ್ನು ಬಳಸದೇ ಹಾಳುಮಾಡುತ್ತಿದ್ದ ಜನರ ಮಧ್ಯೆ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯ ಅಡಿಯಲ್ಲಿ ಉಪಯೋಗಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಬಳಸುವದಕ್ಕೆ ಕಡಿವಾಣ ಹಾಕಲು ದೇಶದ ಮಹಿಳೆಯರಿಗೆ ಕರೆಕೊಟ್ಟು ಎಂಬತ್ತ ಎರಡು ಲಕ್ಷಕ್ಕೂ ಅಧಿಕ ಗ್ಯಾಸ್ ಸಬ್ಸಿಡಿ ಸರಕಾರಕ್ಕೆ ಹಿಂತಿರುಗಿಸುವಂತೆ ಮಾಡಿ ಇರುವ ಸವಲತ್ತುಗಳನ್ನು ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಿದರಲ್ಲಾ , ನಿಜವಾಗಿಯೂ ನನ್ನ ಮೋದೀಜೀ ಗೆ ದೇಶದ ಸಂಪತ್ತನ್ನು ಉಳಿಸುವ ನಶೆ ಏರಿದೆ..!
ಜಗತ್ತು ಮುಂದುವರಿಯುತ್ತಾ ಇದ್ದರೂ ಭಾರತೀಯರು ಮಾತ್ರ ಹಳೇ ಕಾಲದ ಪದ್ದತಿಯನ್ನೇ ಅನುಸರಿಸಿಕೊಂಡು ಬರುತ್ತಿರುವಾಗ ‘ಸ್ಮಾರ್ಟ್ ಸಿಟಿ ಯೋಜನೆ’ಯ ಅಡಿಯಲ್ಲಿ ದೇಶದ ನಗರಗಳನ್ನೂ ಆಧುನೀಕರಣ ಮಾಡಲು ಯೋಜನೆ ರೂಪಿಸಿದ್ದಾರಲ್ಲಾ,ನಿಜವಾಗಿಯೂ ನನ್ನ ಮೋದೀಜೀ ಗೆ ದೇಶವನ್ನು ಆಧುನೀಕರಣ ಮಾಡುವ ನಶೆ ಏರಿದೆ..!
ಭಾರತಕ್ಕೆ ಆಪತ್ತಾಗಿರುವ ಶತ್ರು ರಾಷ್ಟ್ರಗಳಿಂದ ಭಾರತವನ್ನು ರಕ್ಷಿಸುವ ಸಲುವಾಗಿ ಭಾರತಕ್ಕೆ ಬಲಿಷ್ಠ ಸೇನಾ ಅಸ್ತ್ರಗಳನ್ನು ಒದಗಿಸುತ್ತಿರುವ ನನ್ನ ಮೋದೀಜೀ ಗೆ ನಿಜವಾಗಿಯೂ ಭಾರತದ ಬಗ್ಗೆ ಕಾಳಜಿಯ ನಶೆ ಏರಿದೆ..!
ಭಾರತದ ಪ್ರಗತಿಗಾಗಿ ಈ ವಯಸ್ಸಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಲವಲವಿಕೆಯಿಂದ ಕೆಲಸ ಮಾಡುತ್ತಿರುವ ನನ್ನ ಮೋದೀಜೀ ಗೆ ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸುವ ನಶೆ ಏರಿದೆ…!
ಒಟ್ಟಾರೆಯಾಗಿ ಹೇಳಬೇಕೆಂದರೆ ನರೇಂದ್ರ ಮೋದಿಯವರಿಗೆ ಭವ್ಯ ಭಾರತದ ನಿರ್ಮಾಣದ ನಶೆ ಏರಿದೆ ಎಂಬೂದರಲ್ಲಿ ಸಂಶಯವಿಲ್ಲ…!!
–ಅರ್ಜುನ್