ಪ್ರೀತಿ, ಪ್ರೇಮ, ಪ್ರಣಯ ಎಂದು ಅನ್ಯ ಧರ್ಮದ ಲವ್ ಜಿಹಾದ್ಗೆ ತುತ್ತಾಗಿ ಪ್ರಾಣ ಕಳೆದುಕೊಂಡ, ಬದುಕನ್ನು ಸಂಕಷ್ಟದ ಸರಮಾಲೆ ಮಾಡಿಕೊಂಡ ಅದೆಷ್ಟೋ ಹಿಂದೂ ಧರ್ಮದ ಹೆಣ್ಣು ಮಕ್ಕಳು ನಮ್ಮ ನಡುವೆ ಇದ್ದಾರೆ.
ಪ್ರೀತಿಸುವ ಸಂದರ್ಭದಲ್ಲಿ ಎಲ್ಲವೂ ಸುಂದರವೇ. ಆದರೆ ನಿಜವಾದ ಬದುಕು, ಹಿಂದೂ ಧರ್ಮದಲ್ಲಿ ಇರುವ ಸ್ವಾತಂತ್ರ್ಯ, ಮಹಿಳೆಯರಿಗೆ ಇರುವ ಬೆಲೆಯ ಅರಿವಾಗುವುದು ಲವ್ ಜಿಹಾದ್ಗೆ ತುತ್ತಾಗಿ, ಮಾತೃ ಧರ್ಮವನ್ನು ಬಿಟ್ಟು ಅನ್ಯ ಮತಕ್ಕೆ ಹೋಗಿ ಬಿದ್ದಾಗಲೇ. ಆ ಬಳಿಕವೇ ನಾವು ಯಾರನ್ನು ನಂಬಿ ಬಂದಿದ್ದೇವೆ?, ನಮ್ಮ ಹೆತ್ತವರನ್ನು ಬಿಟ್ಟು, ಅವರ ಮನಸ್ಸಿಗೆ ವಿರುದ್ಧವಾಗಿ ನಾವು ನಮ್ಮ ಜೀವನಕ್ಕೆ ಮಾಡಿಕೊಂಡ ಒಂದೇ ಒಂದು ಮೋಸ, ನಮ್ಮನ್ನು ಎಷ್ಟು ದೊಡ್ಡ ಹೊಂಡಕ್ಕೆ ಬಿದ್ದಿದ್ದೇವೆ ಎನ್ನುವುದರ ಅರಿವಾಗುವುದು. ಆದರೆ ಏನು ಫಲ. ಆಗ ಕಾಲ ಮಿಂಚಿ ಹೋಗಿರುತ್ತದೆ. ನಾವೇ ಆರಿಸಿಕೊಂಡು ಹೋಗಿ ಬಿದ್ದ ಹೊಂಡದಿಂದ ಮೇಲೆ ಬರಲು ಹಾದಿಯೇ ಕಾಣುವುದಿಲ್ಲ. ಹೊಂಡದೊಳಗೆ ಕುಳಿತು ಅಳಬೇಕು. ಇಲ್ಲವೇ ಅಲ್ಲೇ ಸಾಯಬೇಕು. ಇಲ್ಲವೇ ಹೊಂಡಕ್ಕೆ ಹೋಗಿ ಬೀಳಲು ಕಾರಣರಾದವರೇ ನಮ್ಮ ಕತ್ತು ಹಿಸುಕಿ ಕೊಂದು ಬಿಡುತ್ತಾರೆ. ಅಷ್ಟೇ. ಇದು ನಾವು ನಂಬಿದ ಅನ್ಯ ಮತದ ಪ್ರೀತಿಯ ನಾಟಕದ ಅಂತ್ಯ.
ಪ್ರೀತಿ ಸುಖವೇ. ಆದರೆ ನಾವು ಯಾರನ್ನು ಪ್ರೀತಿಸುತ್ತೇವೆ ಎನ್ನುವುದು ಸಹ ಮುಖ್ಯವಾಗುತ್ತದೆ. ಪ್ರೀತಿಸುವಾಗ ಏನೇನೋ ಉಡುಗೊರೆಗಳು, ಸುಖ ಸಿಗಬಹುದು. ಆದರೆ ಅದನ್ನೇ ನಂಬಿ ಮದುವೆಯಾದೆವೋ, ಹೆಣ್ಣು ಮಕ್ಕಳೇ, ಆ ಬಳಿಕ ನೋಡುವುದೇ ನಿಜವಾದ ನರಕ. ಯಾವ ಕನಸಿನ ಜೊತೆಗೆ ಅನ್ಯ ಮತದ ಯುವಕನ ಜೊತೆಗೆ ಅಪ್ಪ ಅಮ್ಮನನ್ನೂ ಬಿಟ್ಟು ತೆರಳಿರುತ್ತೀರೋ, ಮುಂದೆ ಅವನೇ ನಿಮಗೆ ಅಪ್ಪ ಅಮ್ಮನ ಮುಖವೂ ನೋಡದ ಹಾಗೆ, ಕಡೇ ಪಕ್ಷ ನಮ್ಮ ಶವವನ್ನು ಸಹ ನೋಡಲಾರದ ಹಾಗೆ ಮಾಡಿಟ್ಟು ಬಿಡುತ್ತಾರೆ ಎನ್ನುವುದು ಸದ್ಯದ ಸತ್ಯ.
ಲವ್ ಜಿಹಾದ್ಗೆ ತುತ್ತಾದವರ ಎಲ್ಲರ ಸ್ಥಿತಿಯೂ ಇದೇ ಆಗಿದೆಯೋ ಎಂಬ ಪ್ರಶ್ನೆ ಮನಸ್ಸಲ್ಲಿ ಮೂಡಬಹುದು. ಆದರೆ, ಲವ್ ಜಿಹಾದ್ಗೆ ತುತ್ತಾಗಿ ಅನ್ಯ ಮತದವರ ಜೊತೆ ಓಡಿ ಹೋದ ಹೆಚ್ಚಿನ ಹೆಣ್ಣು ಮಕ್ಕಳು ದುರಂತ ಅಂತ್ಯ ಕಾಣುತ್ತಾರೆ ಎಂಬುದು ಸತ್ಯ. ಇಂತಹ ಘಟನೆಗಳ ಬಗ್ಗೆ ನಾವು ದಿನ ನಿತ್ಯ ಮಾಧ್ಯಮಗಳಲ್ಲಿ ನೋಡುತ್ತೇವೆ. ಲವ್ ಜಿಹಾದ್ಗೆ ಬಲಿಯಾದ ಹುಡುಗಿಯರ ಕಥೆ ಹೊಟ್ಟೆಯೊಳಗೆ ಸಂಕಟ ಹುಟ್ಟಿಸುವಂತೆ ಇರುತ್ತದೆ ಎನ್ನುವುದು ಸತ್ಯ. ಆದರೆ, ಹೆತ್ತವರ ಮನಸ್ಸು ನೋಯಿಸಿ, ಮಾತೃ ಧರ್ಮಕ್ಕೆ ದ್ರೋಹ ಎಸಗಿ, ಹಿಂದೂ ಧರ್ಮವನ್ನು ಒದ್ದು ಅನ್ಯ ಧರ್ಮದ ಯುವಕನೊಂದಿಗೆ ಓಡಿ ಹೋದವರಿಗೆ ಕೊನೆಗೆ ಸಿಗುವ ಉಡುಗೊರೆ ನರಕ ಸದೃಶ ಜೀವನ ಅಥವಾ ಶವದ ಗುರುತೂ ಸಿಗದ ಹಾಗಿನ ಸಾವು.
ಹೇಳಿ, ಈ ಸುಖಕ್ಕೆ ನಮ್ಮ ಧರ್ಮದಲ್ಲಿರುವ ನಿಜವಾದ ಸ್ವಾತಂತ್ರ್ಯ, ಸುಖವನ್ನು ತ್ಯಜಿಸಬೇಕಾ..?, ಹೆತ್ತವರ ನೋವಿಗೆ ಕಾರಣವಾಗಬೇಕ. ಅವರು ನೀಡುವ ಉಡುಗೊರೆಗಳು ಬದುಕಿಗೆಯೇ ಮಾರಕವಾಗುತ್ತವೆ ಎಂದು ತಿಳಿದೂ ತಿಳಿದೂ, ನಮ್ಮ ಬದುಕನ್ನು ನಾವೇ ವಿನಾಶಕ್ಕೆ ತಳ್ಳಬೇಕಾ..
ಹಿಂದೂ ಯುವತಿಯರೇ ಇನ್ನಾದರೂ ಎಚ್ಚರಾಗಿ. ಅನ್ಯ ಧರ್ಮದವರನ್ನು ಪ್ರೀತಿಸುವ, ವರಿಸುವ ಮೊದಲ ಆಲೋಚಿಸಿ. ಅವಸರಕ್ಕೆ ಬಿದ್ದು ಬದುಕನ್ನೇ ಕಳೆದುಕೊಳ್ಳುವಷ್ಟು ಕುರುಡರಾಗಬೇಡಿ. ಪ್ರೀತಿ ಒಳ್ಳೆಯದೇ. ಆದರೆ ಯಾರನ್ನು ಪ್ರೀತಿ ಮಾಡುತ್ತೇವೆ ಎನ್ನುವುದು ಮುಖ್ಯ. ಹೆತ್ತವರನ್ನು ಪ್ರೀತಿಸಿ. ನಮ್ಮ ಧರ್ಮದವರನ್ನೇ ಪ್ರೀತಿಸಿ. ಬದುಕಿನ ಭದ್ರತೆಯ ಬಗ್ಗೆ ಆಲೋಚಿಸಿ ಪ್ರೀತಿಸಿ. ಬದಲಾಗಿ ಅನ್ಯ ಧರ್ಮದ ಯುವಕರು ನೀಡುವ ಉಡುಗೊರೆಗಳಿಗೆ ನಿಮ್ಮನ್ನು ನೀವು ಬಲಿ ಕೊಡದಿರಿ.
ಜೀವನ ಒಂದೇ ಇರುವುದು. ನಮ್ಮನ್ನು ನಾವು ಸಾವಿನ ಕೂಪಕ್ಕೆ ತಳ್ಳದಿರಲಿ ಎಂಬ ಆಶಯವಷ್ಟೇ ನಮ್ಮದು. ನಮ್ಮ ಧರ್ಮವನ್ನು ಪ್ರೀತಿಸಿ. ಅವಸರಕ್ಕೆ ಬಿದ್ದು ಅಪಾಯ ಮೈಮೇಲೆಳೆದುಕೊಳ್ಳುವ ಮೊದಲು ಬದಲಾಗಿ. ಬದುಕಿ. ಇದೇ ನಮ್ಮ ಕಳಕಳಿ.