ಪ್ರಚಲಿತ

ಗಣರಾಜ್ಯೋತ್ಸವದಂದೇ ನಡೆಯುತ್ತಾ ಹಿಂದೂಗಳ ಮಾರಣಹೋಮ?

ಭಾರತವನ್ನು, ಈ ದೇಶದ ಹಿಂದೂಗಳನ್ನು, ಹಿಂದುತ್ವ ವನ್ನು ಕಂಡರೆ ಕೆಲವರಿಗೆ ಮೈಯೆಲ್ಲಾ ಉರಿ. ಆಂತರಿಕ ಮತ್ತು ಬಾಹ್ಯ ಭಯೋತ್ಪಾದಕರು ಹಿಂದೂಗಳಿಗೆ ಬಹುದೊಡ್ಡ ಸಮಸ್ಯೆಯಾಗಿರುವುದನ್ನು, ಉಗ್ರ ರಿಂದ ಹಿಂದೂ ಧರ್ಮ ಸಂಕಷ್ಟ ಅನುಭವಿಸುತ್ತಿರುವುದನ್ನು ನಾವು ದಿನನಿತ್ಯ ಕೇಳುತ್ತೇವೆ.

ಸದ್ಯ ಹಿಂದುತ್ವದ ತತ್ವಗಳನ್ನು ನೇರವಾಗಿ ಎದುರಿಸಲಾಗದ ಕೆಲವು ಷಂಡ ಭಯೋತ್ಪಾದಕರು ಈ ದೇಶದ ಪ್ರಮುಖ ಹಿಂದೂ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವ ಅಂಶ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಈ ಮಾಹಿತಿ ಬಹಿರಂಗಪಡಿಸಿದ್ದು, ಸಂಚುಕೋರ ಉಗ್ರರು ಈಗಾಗಲೇ ದೇಶದೊಳಕ್ಕೆೆ ಬಂದು ಅವಿತಿರಬಹುದು ಎಂಬ ಸಂದೇಹವನ್ನು ಸಹ ವ್ಯಕ್ತಪಡಿಸಿದ್ದಾರೆ.

ಡೆಡ್ ಡ್ರಾಪ್ ಮೆಥಡ್‌ನಲ್ಲಿ ಉಗ್ರರು ಹಿಂದೂ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದಾರೆ. ಜನವರಿ ೨೬ ರಂದು ಭಾರತವು ಗಣರಾಜ್ಯ ದಿನವನ್ನು ಆಚರಿಸುತ್ತಿದ್ದು, ಇಂತಹ ಸಮಯದಲ್ಲೇ ಸಂದರ್ಭದಲ್ಲಿಯೇ ಹಿಂದೂ ನಾಯಕರ ಹತ್ಯೆ ನಡೆಸುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ೨ ದಿನಗಳ ಹಿಂದಷ್ಟೇ ಐಸಿಸ್ ಮಾದರಿಯಲ್ಲಿ ವ್ಯಕ್ತಿಯೊಬ್ಬರ ತಲೆ ಕಡಿದು ಕ್ರೌರ್ಯ ಮೆರೆದ ಇಬ್ಬರನ್ನು ಬಂಧಿಸಲಾಗಿತ್ತು. ಆ ದುಷ್ಕರ್ಮಿಗಳ ವಿಚಾರಣೆಯ ಸಂದರ್ಭದಲ್ಲಿ ಹಿಂದೂ ನಾಯಕರ ಹತ್ಯೆಗೆ ಸಂಚು ರೂಪಿಸಿರುವ ಅಂಶ ಬಯಲಾಗಿದೆ.

ಪಂಜಾಬ್, ದೆಹಲಿಗೆ ಸಂಬಂಧಿಸಿದಂತೆ ಹಿಂದೂ ಸಮುದಾಯದ ನಾಯಕರನ್ನು ಈ ಉಗ್ರ ರು ಟಾರ್ಗೆಟ್ ಮಾಡಿದ್ದಾರೆ. ೮ ಮಂದಿ ಹಿಂದೂ ನಾಯಕರನ್ನು ಹತ್ಯೆ ಮಾಡಲು ಪಟ್ಟಿ ಸಿದ್ಧ ಪಡಿಸಲಾಗಿದೆ. ತಲೆ ಕೂಡಿದ ಆರೋಪದಲ್ಲಿ ಬಂಧಿಯಾಗಿರುವ ಇಬ್ಬರು ಆರೋಪಿಗಳಿಗೆ ಎಲ್‌ಇ‌ಟಿ, ಹರ್ಕತುಲ್ ಅನ್ಸಾರ್ ಉಗ್ರ ಸಂಘಟನೆಗಳ ಜೊತೆಗೆ ನಿಕಟ ಸಂಪರ್ಕ ಇದ್ದು, ಇವರು ಉಗ್ರರ ಈ ಭಯಾನಕ ಸಂಚಿನ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಪಟ್ಟಿ ಮಾಡಲಾದ ಹಿಂದೂ ಮುಖಂಡರನ್ನು ಡೆಡ್ ಡ್ರಾಪ್ ಮಾದರಿಯಲ್ಲಿ ಹತ್ಯೆ ನಡೆಸಲು ಷಡ್ಯಂತ್ರ ರೂಪಿಸಲಾಗಿದೆ. ಈ ಹತ್ಯೆ ಮಾಡಲು ನಿಯೋಜನೆಯಾದವರಿಗೆ ಯಾವ ರೀತಿಯ ಆಯುಧಗಳು ಬೇ ಕೆ ಎಂಬುದನ್ನು ಸಿಗ್ನಲ್ ಆ್ಯಪ್ ಆಧರಿಸಿ ಮಾಹಿತಿ ರವಾನೆ ಮಾಡಲಾಗುತ್ತದೆ. ಅವುಗಳು ದೊರೆಯುವ ಸ್ಥಳವನ್ನು ಗೂಗಲ್ ಮ್ಯಾಪ್ ಮೂಲಕ ರವಾನಿಸಲಾಗುತ್ತದೆ. ಈ ಆಯುಧಗಳನ್ನು ಹಂತಕರಿಗೆ ಒದಗಿಸುವುದಕ್ಕೂ ಇಬ್ಬರನ್ನು ನಿಯೋಜಿಸಲಾಗಿದೆ. ಸದ್ಯ ಬಂಧನ ದಲ್ಲಿರುವ ನರಿ ಗೂ ಇದೇ ಮಾದರಿಯಲ್ಲಿ ಆಯುಧಗಳನ್ನು ಒದಗಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಹಿಂದುತ್ವ, ಹಿಂದೂ ನಾಯಕರನ್ನು ನೇರವಾಗಿ ಎದುರಿಸಲಾಗದವರು, ಅವರ ಸಿದ್ದಾಂತ ಗಳನ್ನು ದ್ವೇಷಿಸುವ ಉಗ್ರರು ಇಂತಹ ಒಂದು ಸಂಚು ಹೂ ಡಿ ರು ವು ದು ಆಘಾತಕಾರಿಯಾಗಿದ್ದು, ಇದು ಹಿಂದೂ ಸಮಾಜ ಜಾಗೃತವಾಗಲು ಎಚ್ಚರಿಕೆಯ ಕರ ಗಂಟೆಯಾಗಿದೆ.

Tags

Related Articles

Close