ಪ್ರಚಲಿತ

ಸ್ಫೋಟಕ ಮಾಹಿತಿ ಬಹಿರಂಗ!! ಸಿದ್ದರಾಮಯ್ಯ ಸರಕಾರದ “ಶಾದಿ ಭಾಗ್ಯ” ದ ಫಲ!! ಕರ್ನಾಟಕದಲ್ಲಿ ಮುಸ್ಲಿಂ ಜನಸಂಖ್ಯೆ 13% ನಿಂದ 16% ಗೆ ಏರಿಕೆ!!

ಅಂತೂ ಸಿದ್ದರಾಮಯ್ಯನವರ ಅಲ್ಪ ಸಂಖ್ಯಾತರ ಓಲೈಕೆ ರಾಜಕಾರಣ ಫಲ ನೀಡಿದೆ. ಅಲ್ಪ ಸಂಖ್ಯಾತರ “ಕಲ್ಯಾಣ”ಕ್ಕಾಗಿ ತರಹೇವಾರಿ ಯೋಜನೆಗಳನ್ನು ತಂದ ಸರಕಾರದ ಮಹತ್ವ ಪೂರ್ಣ ಯೋಜನೆ ಶಾದಿಭ್ಯಾಗ್ಯದ ಪ್ರತಿಫಲ ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ನ್ಯೂಸ್ 18 ರಿಪೋರ್ಟಿನನ್ವಯ 2011 ರಿಂದ 2015 ರ ಅವಧಿಯವರೆಗೆ ಮುಸ್ಲಿಂ ಜನಸಂಖ್ಯೆ 13% ನಿಂದ 16% ಗೆ ಏರಿಕೆಯಾಗಿದೆ. ಸಾಕಲ್ಲ, ಅಲ್ಪರ ಓಲೈಕೆಗೆ “ಸದಾ ಸಿದ್ದ ಸರಕಾರದ” ಅವಧಿಯಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಶೇಕಡಾ ಮೂರು ಪ್ರತಿಶತ ಏರಿಕೆ! ಇನ್ನೈದು ವರ್ಷ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟು ನೋಡಿ, ಇಡೀ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಿಬಿಡದಿದ್ದರೆ ಹೇಳಿ.

ನ್ಯೂಸ್ 18 ಹೇಳುವ ಪ್ರಕಾರ ಸಾಮಾಜಿಕ -ಆರ್ಥಿಕ ಸರ್ವೆ ರಿಪೋರ್ಟಿನಲ್ಲಿ ಈ ವಿಷಯ ತಿಳಿದು ಬಂದಿದೆಯಾದರೂ ಸರಕಾರ ಅದನ್ನು “ಸುರಕ್ಷಿತ ಪಾಲನೆ” ಯೆಂಬ ನೆಪದಡಿ ಅಡಗಿಟ್ಟಿಸಿದೆ ಎನ್ನಲಾಗುತ್ತದೆ. ಇದೇ ಸುರಕ್ಷಿತ ಪಾಲನೆಯ ಸೂತ್ರಗಳ ಅನುಸಾರ ಸರಕಾರ ಈ ರಿಪೋರ್ಟನ್ನು ಬಿಡುಗಡೆಗೊಳಿಸಲು ಹಿಂದೇಟು ಹಾಕುತ್ತಿದೆಯೆನ್ನಲಾಗುತ್ತಿದೆ. ಈ ಸರ್ವೇ ಅನ್ನು ಸ್ವತಃ ಸಿದ್ದು ಸರಕಾರವೇ 2015 ರಲ್ಲಿ ನಡೆಸಿತ್ತು ಮತ್ತು ಈ ಸರ್ವೇಗೆ ಬರೋಬ್ಬರಿ 150 ಕೋಟಿ ರುಪಾಯಿ ಖರ್ಚಾಗಿತ್ತು. ಸರಕಾರ ಈ ರಿಪೋರ್ಟನ್ನು “ರಾಜ್ಯ ರಹಸ್ಯ” ಎಂದು ವರ್ಗೀಕರಿಸಿ ತನ್ನ ಸೀಟಿನಡಿ ಇಟ್ಟುಕೊಂಡು ಕುಳಿತು ಬಿಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರವಹಿಸಲಿವೆ ಎಂಬುದನ್ನು ನೆನಪಿಡಿ.

ಸಿದ್ದು ಸರಕಾರ ಈ ಹಿಂದೆ ಜಾತೀವಾರು ಜನಗಣತಿ ಮಾಡಿದ್ದನ್ನು ನೆನಪಿಸಿಕೊಳ್ಳಿ. ಸರಕಾರ ನಡೆಸಿದ ಜಾತೀವಾರು ಜನಗಣತಿಯ ರಿಪೋರ್ಟ್ ಮಾದ್ಯಮಗಳಲ್ಲಿ ಸುದ್ದಿಯಾದದ್ದು ನಿಮಗೆ ತಿಳಿದಿರಬಹುದು. ಆಗಲೂ ಮುಸ್ಲಿಂ ಜನಸಂಖ್ಯೆಯಲ್ಲಿ ಏರಿಕೆಯಾಗಿದ್ದದ್ದು ಕಂಡು ಬಂದಿತ್ತು. ಆದರೆ ಸರಕಾರ ಮಾಧ್ಯಮಗಳ ಬಾಯಿ ಮುಚ್ಚಿಸಿ ಈ ರಿಪೋರ್ಟಿನ ಮೇಲೆ ಮುಸುಕು ಹಾಕಿತ್ತು. ಮುಸ್ಲಿಂ ಜನಸಂಖ್ಯೆಯಲ್ಲಿ ಏರಿಕೆ ಕರ್ನಾಟಕದ ಜನತೆಗೆ ಎಚ್ಚರಿಕೆಯ ಘಂಟೆಯಾಗಬೇಕು. ಇದುವರೆಗೆ ಕರ್ನಾಟಕದಲ್ಲಿ ಒಕ್ಕಲಿಗ ಮತ್ತು ಲಿಂಗಾಯತರೇ ಬಹುಸಂಖ್ಯಾತರೆನ್ನುವ ಭ್ರಮೆ ಇತ್ತು. ಆದರೆ ಇದೀಗ ಒಕ್ಕಲಿಗ ಮತ್ತು ಲಿಂಗಾಯತರ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎನ್ನಲಾಗುತ್ತಿದೆ. ಒಕ್ಕಲಿಗ ಮತ್ತು ಲಿಂಗಾಯತರ ಜನಸಂಖ್ಯೆ ಅನುಕ್ರಮವಾಗಿ 14% ಮತ್ತು11% ಆಗಿದ್ದರೆ, ದಲಿತರ ಜನಸಂಖ್ಯೆ 19.5% ಇದೆ. ಮುಸ್ಲಿಮರ ಜನಸಂಖ್ಯೆ ಕರ್ನಾಟಕದ ಒಟ್ಟು ಜನಸಂಖ್ಯೆಯ 16% ಇದೆ. ಅಂದರೆ ಕರ್ನಾಟಕದಲ್ಲಿ ದಲಿತರು ಮೊದಲನೇ ಸ್ಥಾನದಲ್ಲಿದ್ದರೆ, ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಒಕ್ಕಲಿಗ ಮತ್ತು ಲಿಂಗಾಯತರಿದ್ದಾರೆ. ತದನಂತರ “ಆಟಕ್ಕುಂಟು ಲೆಕ್ಕಕ್ಕಿಲ್ಲದ” ಉಳಿದ ಜಾತಿಯವರು ಬರುತ್ತಾರೆ.

ಈಗಲಾದರೂ ನಿಮಗೆ ದಲಿತರ ಮತ್ತು ಮುಸಲ್ಮಾನರ ಓಲೈಕೆಗೆ ಕಾಂಗ್ರೆಸ್ ಸರಕಾರ ಏಕೆ ಸದಾ ಸಿದ್ದವಾಗಿರುತ್ತದೆ ಎಂಬ ಸತ್ಯದ ಅರಿವಾದರೆ ಒಳಿತು. ಇಲ್ಲವಾದಲ್ಲಿ ಪರಿಣಾಮ ತುಂಬಾ ಗಂಭೀರವಾಗಲಿದೆ. ಕಳೆದ ಎಪ್ಪತ್ತು ವರ್ಷಗಳಿಂದಲೂ ಕಾಂಗ್ರೆಸ್ ಜಾತಿ ಆಧಾರಿತ ರಾಜಕಾರಣ ಮಾಡುತ್ತಲೇ ಬಂದಿದೆ. ಹಿಂದೂಗಳು ಒಬ್ಬರ ಮೇಲೆ ಮತ್ತೊಬ್ಬರು ಕತ್ತಿ ಮಸೆಯುವಂತೆ ಮಾಡಿ ಅಣ್ಣ ತಮ್ಮಂದಿರೊಳಗೆ ತಂದಿಟ್ಟು ಸಮಸ್ತ ಸನಾತನ ಧರ್ಮವನ್ನು ಒಡೆದು ಆಳುತ್ತಿರುವ ಕಾಂಗ್ರೆಸ್ ಮುಸ್ಲಿಮರಲ್ಲಿ ಒಗ್ಗಟ್ಟು ಬರುವಂತೆ ನೋಡಿಕೊಂಡು ತನ್ನ ಮತ ಬ್ಯಾಂಕ್ ಅನ್ನು ಭದ್ರವಾಗಿಸಿಕೊಂಡಿತು. ಕಾಂಗ್ರೆಸ್ ನ ಜಾತಿ ರಾಜಕಾರಣದ ಬಲೆಗೆ ಸಿಕ್ಕಿ ಹಿಂದೂಗಳು ಈಗಲೂ ತಮ್ಮ ತಮ್ಮಲ್ಲೇ ಜಗಳವಾಡುತ್ತಿದ್ದರೆ, ಕಾಂಗ್ರೆಸ್ ಮಾತ್ರ ತನ್ನ ರಿಪೋರ್ಟನ್ನು ಕುರ್ಚಿಯಡಿಗಿಟ್ಟು ಮುಸಿ ಮುಸಿ ನಗುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲ ದೇಶದಲ್ಲೇ ಮುಸ್ಲಿಮರ ಜನಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿಬಂದಿದೆ. ಜಾಗತಿಕ ರಿಪೋರ್ಟಿನ ಪ್ರಕಾರ 2050 ರ ಹೊತ್ತಿಗೆ ಪ್ರಪಂಚದಲ್ಲೇ ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ರಾಷ್ಟ್ರ ಭಾರತವಾಗಲಿದೆಯಂತೆ! ಇದು ನಿಜವೆಂದಾದರೆ ಸನಾತನ ಧರ್ಮದ ಪತನ ನಿಶ್ಚಿತವಾಗಿಯೂ ಆಗಲಿದೆ.

ಹಿಂದೂ ರಾಷ್ಟ್ರವಾದದ ಉತ್ಥಾನಕ್ಕೆ ಇದು ಸಕಾಲ. ಹಿಂದೂ ರಾಷ್ಟ್ರವಾದದ ಶಂಖನಾದ ಕರ್ನಾಟಕದಿಂದಲೇ ಮೊಳಗಲಿ. ಇಡಿಯ ಭಾರತವೇ ಸನಾತನ ಧರ್ಮದ ಛತ್ರದಡಿ ಬಂದು ಚಂದ್ರಗುಪ್ತ-ಚಾಣಕ್ಯರ ಅಖಂಡ ಭಾರತ ಮತ್ತೊಮ್ಮೆ ಮೂಡಿಬರಲಿ. ಈ ಬಾರಿ ಅಖಂಡ ಭಾರತದ ಒಗ್ಗಟ್ಟಿಗಾಗಿ ಮತ ನೀಡಿ ಮತ್ತು ಒಡೆದು ಆಳುವ ಕಾಂಗ್ರೆಸ್-ಕಮ್ಯೂನಿಷ್ಟ್ ಮತ್ತು ಇನ್ನಿತರ ಚೌ ಚೌ ಭಾತ್ ಸರಕಾರಕ್ಕೆ ಇತಿಶ್ರೀ ಹಾಡಿ. ಕರ್ನಾಟಕದಲ್ಲಿ ಕೇಸರಿ ಕಹಳೆ ಮೊಳಗಲಿ. ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ಕಮಲ ಅರಳಲಿ.

-Sharvari

Tags

Related Articles

Close