ಪ್ರಚಲಿತ

ತಮಿಳುನಾಡಿನಲ್ಲಿ ದಲಿತ ಮಹಿಳೆಯ ಶವಸಂಸ್ಕಾರದ ಮೆರವಣಿಗೆಗೆ ಅಡ್ಡಿ ಪಡಿಸಿದ ಮುಸ್ಲಿಮರು, ಬಾಯಿಗೆ ಬೀಗ ಜಡಿದುಕೊಂಡು ಕೂತ ಜಸ್ಟ್ ಆಸ್ಕಿಂಗ್ ಜಾತ್ಯಾತೀತ ಬ್ರಿಗೇಡಿಗರು!!

ಮಾತೆತ್ತಿದರೆ ದೇಶದಲ್ಲಿ ಮುಸ್ಲಿಮರು ಭಯದಿಂದ ಜೀವಿಸುತ್ತಿದ್ದಾರೆ, ದಲಿತರಿಗೆ ಮೇಲ್ವರ್ಗದ ಹಿಂದೂಗಳು ಅನ್ಯಾಯ ಮಾಡುತ್ತಿದ್ದಾರೆ, ಬ್ರಾಹ್ಮಣರಿಂದ ದಲಿತರು ತುಳಿತಕ್ಕೊಳಗಾಗಿದ್ದಾರೆ ಎಂದು ಒಕ್ಕೊರಲಿನಿಂದ ಅರಚುವ “ಜೋಳಿಗೆ ಛಾಪು” ಜಾತ್ಯಾತೀತ ಬುದ್ದಿಜೀವಿ ಬ್ರಿಗೇಡ್ ನವರಿಗೆ ಭಾಜಪ ರಾಜ್ಯಗಳಲ್ಲಿ ಹುಲ್ಲು ಕಡ್ಡಿ ಅಲುಗಾಡಿದರೂ ಮರ ಬಿದ್ದಂತೆ ಕಾಣುತ್ತದೆ. ಮುಸ್ಲಿಮರು-ದಲಿತರು ಭಾಯಿ ಭಾಯಿ, ನಿಮ್ಮ ಉದ್ದಾರ ನಾವು ಮಾಡುತ್ತೇವೆ ಎನ್ನುವ ಕಾಂಗ್ರೆಸ್- ಕಮ್ಯುನಿಷ್ಟರೆ ಕಣ್ಬಿಟ್ಟು ನೋಡಿ. ತಮಿಳುನಾಡಿನಲ್ಲಿ ದಲಿತ ಮಹಿಳೆಯೊಬ್ಬಳ ಶವಸಂಸ್ಕಾರದ ಮೆರವಣೆಗೆ ನಡೆಯುತ್ತಿದ್ದಾಗ ನಿಮ್ಮ “ಭಾಯಿ ಜಾನ್” ಗಳು ಏನು ಮಾಡಿದ್ದಾರೆನ್ನುವುದನ್ನು.

‘ದ ಹಿಂದು’ ಪತ್ರಿಕೆ ವರದಿಯ ಪ್ರಕಾರ ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬಳ ಅಂತ್ಯಕ್ರಿಯೆಯ ಮೆರವಣಿಗೆಯ ಮಾರ್ಗದಲ್ಲಿ ಮುಸ್ಲಿಮರು ಮತ್ತು ದಲಿತರ ನಡುವೆ ನಡೆದ ವಿವಾದವು ಕೈ-ಕೈ ಮಿಲಾಯಿಸುವಷ್ಟು ಮುಂದೆ ಹೋಗಿ ಒಟ್ಟು 30 ಜನ ಗಾಯಗೊಂಡಿದ್ದಾರೆ ಮಾತ್ರವಲ್ಲ ಮೂರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ಜಸ್ಟ್ ಆಸ್ಕಿಂಗ್ ಗಳಲ್ಲಿ ಕೇಳೋಣವೆಂದರೆ ಒಬ್ಬರೂ ಕೈಗೆ ಸಿಗುತ್ತಿಲ್ಲ! ಏಪ್ರಿಲ್ 24 ರಂದು ಮೃತ ಪಟ್ಟಿದ್ದ ವನ್ನಿಮಲ್ ಎಂಬ ವಯೋವೃದ್ದೆಯ ಶವದ ಮೆರವಣಿಗೆಯನ್ನು ಮುಸ್ಲಿಂ ಬಾಹುಳ್ಯದ ಕೇರಿಯಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಸಾಮಾನ್ಯವಾಗಿ ಮೆರವಣಿಗೆ ನಡೆಸುವ ಮಾರ್ಗದಲ್ಲಿ ಇನ್ನೊಂದು ಮೆರವಣಿಗೆ ನಡೆಯುತ್ತಿದ್ದುದರಿಂದ ವನ್ನಿಮಲ್ ಅವರ ಶವವನ್ನು ಇನ್ನೊಂದು ಮಾರ್ಗದಿಂದ ತೆಗೆದುಕೊಂಡು ಹೋಗಬೇಕಾಗಿ ಬಂತು. ಬೊಮ್ಮಿನಾಯ್ಕನ್ ಪಟ್ಟಿಯ ಮುಸ್ಲಿಂ ಬಾಹುಳ್ಯದ ಕೇರಿಯಲ್ಲಿ ಮೆರವಣಿಗೆ ಸಾಗಿಸುತ್ತಿದ್ದಾಗ ಆಕ್ಷೇಪ ಎತ್ತಿದ ಮುಸ್ಲಿಮರು, “ನಮ್ಮ ರಸ್ತೆಯಲ್ಲಿ” ಮೆರವಣಿಗೆ ಸಾಗಿಸುವಂತಿಲ್ಲ ಎಂದು ಅಡ್ಡಿ ಪಡಿಸಿದರು.

ಇದರಿಂದ ರೊಚ್ಚಿಗೆದ್ದ ದಲಿತರು ತಗಾದೆ ತೆಗೆದ ಮುಸ್ಲಿಮರ ಜೊತೆ ವಾಗ್ವಾದಕ್ಕಿಳಿದ್ದಾರೆ. ಪೋಲಿಸರ ಮಧ್ಯಸ್ಥಿಕೆಯಿಂದಾಗಿ ಶವದ ಅಂತ್ಯ ಸಂಸ್ಕಾರ ಸಾಂಗವಾಗಿ ನೆರವೇರಿದರೂ ದಲಿತರ ಎದೆಯೊಳಗೆ ದಾವಾಗ್ನಿ ಪ್ರಜ್ವಲಿಸುತ್ತಲೆ ಇತ್ತು. ಅದು ಶನಿವಾರದಂದು ಸ್ಪೋಟಗೊಂಡು ಸಂಘರ್ಷಕ್ಕೆ ಕಾರಣವಾಗಿ ಇಡಿಯ ಹಳ್ಳಿಯೆ ಹೊತ್ತಿ ಉರಿದಿದೆ, ಸಂಘರ್ಷದಲ್ಲಿ 50 ಮುಸ್ಲಿಮರ ಮನೆಗಳು ಹಾನಿಗೀಡಾಗಿವೆ. ದಲಿತೋದ್ಧಾರಕ “ತಿಗಣೇಶ್”ನಂತವರು ಈಗ ಬಾಯಿಗೆ ಬೀಗ ಜಡಿದಿದ್ದಾರೆ. ಜಾತ್ಯಾತೀತ ಜಸ್ಟ್ ಆಸ್ಕಿಂಗ್ ಕೋಮಾದಲ್ಲಿವೆ. ಜಾತ್ಯಾತೀತ ಮಾಧ್ಯಮಗಳು ಇದನ್ನು “ಸಣ್ಣ ಪುಟ್ಟ ಗಲಾಟೆ” ಎಂದು ಬರೆದು ಕೈ ತೊಳೆದುಕೊಂಡಿವೆ! ಇದೆ ಘಟನೆ ಭಾಜಪ ರಾಜ್ಯದಲ್ಲಿ ಆಗಿದ್ದು, ದಲಿತರಿಗೂ ಮೇಲ್ವರ್ಗದವರಿಗೂ ಸಂಘರ್ಷ ನಡೆದಿದ್ದರೆ “ಬಿಗೇಡ್” ಇಷ್ಟು ಹೊತ್ತಿಗೆ ಮೋದಿಯವರ ರಾಜೀನಾಮೆ ಕೇಳುತ್ತಿತ್ತು. ಈ ಘಟನೆಯಿಂದ ತಮಿಳುನಾಡಿನ ಮಹಾನಟರಿಗೆ ಈಗ ತಮಿಳುನಾಡಿನಲ್ಲಿ ಉಸಿರಾಡಲು ಆಗುತ್ತದೊ ಎನ್ನುವುದು ತಿಳಿದು ಬಂದಿಲ್ಲ.

ಮಸ್ಲಿಂ ಬಾಹುಳ್ಯದ ಹಳ್ಳಿಯಲ್ಲಿ ದಲಿತ ಮಹಿಳೆಯ ಶವದ ಮೆರವಣಿಗೆ ಹೋಗಗೊಡಲಿಲ್ಲ. ಸ್ವಲ್ಪ ಯೋಚಿಸಿ, ಕುರಾನ್ ಅನ್ನು ಕಣ್ಣು ಮುಚ್ಚಿ ನಂಬುವ ಕಟ್ಟರವಾದಿಗಳಿಗೆ ಮುಸ್ಲಿಮೇತರರೆಲ್ಲರೂ “ಕಾಫಿರರು”. ನೀವು ದಲಿತರೊ, ಬ್ರಾಹ್ಮಣರೊ, ಬೌದ್ಧರೊ, ಕ್ರೈಸ್ತರೊ ಅದು ಲೆಕ್ಕಕ್ಕೆ ಬರುವುದಿಲ್ಲ. ನೀವೇನಿದ್ದರೂ ಕಾಫಿರರು ಅಷ್ಟೆ. ರಾಜಕೀಯದ ಚದುರಂಗದ ಆಟಕ್ಕೆ ತಿಗಣೇಶನಂತವರ “ಕೈ”ಯಲ್ಲಿ ದಾಳ ಆಗುವ ಮುನ್ನ ಸರಿಯಾಗಿ ಯೋಚಿಸಿ. ನೆಮ್ಮದಿಯ ನಿಶ್ಚಿಂತೆಯ ಬದುಕು ಬೇಕಾದರೆ ಅಖಂಡ “ಹಿಂದೂ ರಾಷ್ಟ್ರ” ಆಗಲೇಬೇಕು. ಧರ್ಮನಿರಪೇಕ್ಷತೆ, ಜಾತ್ಯಾತೀತತೆ ಎನ್ನುವುದೆಲ್ಲ ಹಿಂದೂಗಳನ್ನು ತುಳಿಯಲು ಮಾಡಿದಂತಹ ಹುನ್ನಾರಗಳೆ ಹೊರತು ಮತ್ತೇನಲ್ಲ. ಹಿಂದೂಗಳು ಸುಖಾ ಸುಮ್ಮನೆ ಮುಸ್ಲಿಮರಿಗೆ ಹೊಡೆದು ಬಡಿದು ಮಾಡುವುದಿಲ್ಲ. ಆದರೆ ಹಿಂದೂಗಳ ಜಾತ್ರೆ, ಆಚರಣೆ, ನಂಬಿಕೆಗಳಿಗೆ ಅಡ್ಡಿಪಡಿಸುತ್ತಾ, ಹಿಂದೂಗಳ ಮಾರಣ ಹೋಮ ಮಾಡುತ್ತಿದ್ದರೆ ಅದೆಲ್ಲವನ್ನೂ ಸಹಿಸಿ ಕೈ ಕಟ್ಟಿ ಕುಳಿತು ಕೊಳ್ಳಲು ಹಿಂದೂಗಳೇನು ನಪುಂಸಕರೆ? ಕೋಲು ಕೊಟ್ಟು ಪೆಟ್ಟುತ್ತಿನ್ನುತ್ತೇವೆ ಎಂದರೆ ಯಾರು ಬೇಡ ಅನ್ನುತ್ತಾರೆ? ಮಾಡಿದ್ದುಣ್ಣೋ ಮಹರಾಯ ಗಾದೆ ಕೇಳಿಲ್ಲವೆ?

ಜಾತ್ಯಾತೀತರು ಉಸಿರಾಡುವ ಇದೆ ತಮಿಳುನಾಡಿನಲ್ಲಿ ಜಯಲಲಿತಾ ಸ್ಮಾರಕದ ಅಡಿಪಾಯ ಹಾಕುವ ಸಂಧರ್ಭದಲ್ಲಿ ಮುಖ್ಯ ಮಂತ್ರಿ ಪನ್ನೀರ್ ಸೆಲ್ವಂ ಅವರು ಭೂಮಿ ಪೂಜೆ ಮತ್ತು ಹವನ ಏರ್ಪಡಿಸಿದ್ದಕ್ಕಾಗಿ ಪ್ರತಿಪಕ್ಷ ಡಿ.ಎಮ್.ಕೆಯು ಅಕ್ಷೇಪ ವ್ಯಕ್ತ ಪಡಿಸಿದೆ. ಭೂಮಿ ಪೂಜೆ-ಹವನ ಹಿಂದೂ ಆಚರಣೆಗಳನ್ನು ಮಾಡುವುದು “ಜಾತ್ಯಾತೀತತೆ”ಗೆ ಧಕ್ಕೆ ಅಂತೆ!! ಇಂಥ ಪಕ್ಷಗಳು ಅಧಿಕಾರ ಹಿಡಿದರೆ ಹಿಂದೂಗಳ ಗತಿಯೇನಾಗಬಹುದು ಯೋಚಿಸಿ. ಶವದ ಮೆರವಣಿಗೆಯಲ್ಲೂ ಜಾತಿವಾದ ಮೆರೆದದ್ದು ಜಾತ್ಯಾತೀತತೆಗೆ ಧಕ್ಕೆ ಎಂದು ಇವರಿಗೆ ಅನಿಸಲಿಲ್ಲವೇನೊ? ಹಿಂದೂಗಳು ಸಾಯಲೆಂದೆ ಹುಟ್ಟಿದವರು ಎನ್ನುವ ಮನಸ್ಥಿತಿ ಇಂತಹ ಸೋಗಲಾಡಿಗಳದ್ದು. ಇನ್ನಾದರೂ ನಾವೆಲ್ಲರೂ ಹಿಂದೂಗಳು, ಸನಾತನವೆ ನಮ್ಮ ಧರ್ಮ ಎನ್ನುವ ಮನೋಭಾವ ಬೆಳೆಸಿಕೊಳ್ಳೊಣ. ಅಖಂಡ ಹಿಂದೂ ರಾಷ್ಟ್ರದ ಕನಸನ್ನು ನನಸಾಗಿಸೋಣ.

-ಶಾರ್ವರಿ

Tags

Related Articles

Close