ಪ್ರಚಲಿತ

ಕಥುವಾ ರೇಪ್ ಕೇಸಿನ ಹಿಂದೆ ಓಡುತ್ತಿರುವ ನಕಲಿಗಳು ಮುಸ್ಲಿಮ್ ಬಾಲೆಯ ಮೌಲ್ವಿಯಿಂದಲೇ ನಡೆದ ಆ ಭೀಕರ ರೇಪ್‍ನ ಬಗ್ಗೆ ಯಾಕೆ ಮಾತಾಡಲ್ಲ!!

ಭಾರತೀಯ ಸಂಸ್ಕøತಿಯ ಪ್ರಕಾರ ಗುರುವನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತೇವೆ. ಹಾಗಾಗಿ ” ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ” ಅಂತಾ ಗುರುವನ್ನು ಭಕ್ತಿಯಿಂದ ಪೂಜಿಸುತ್ತೇವೆ. ಗುರುವಾದವನು ಮಕ್ಕಳಿಗೆ ದಾರಿ ದೀಪವಾಗುತ್ತರಾರೆ ಎಂದು ಮಕ್ಕಳನ್ನು ಗುರುವಿನ ಬಳಿ ಶಿಕ್ಷಣಕ್ಕಾಗಿ ಕಳುಹಿಸಲಾಗುತ್ತದೆ. ಆದರೆ ಮದರಸಾದಂತಹ ಶಿಕ್ಷಣ ಕ್ಷೇತ್ರದಲ್ಲಿ ಆ ಭೂಪ ತಾನು ವಿಧ್ಯೆ ಕಲಿಸಿದ ಮದರಾಸದ ಆವರಣದಲ್ಲೇ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿದ್ದಾನೆ ಎಂದರೆ ನಂಬುತ್ತೀರಾ.. ನಂಬಲೇ ಬೇಕಾದ ಕಟು ಸತ್ಯ!!

ಮಸೀದಿ ಆವರಣದಲ್ಲೇ 14 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಮೌಲ್ವಿ!!

ಉತ್ತರ ಪ್ರದೇಶದ ಭಾಗತ್ಪುರ ಪೆÇಲೀಸ್ ಠಾಣಾ ವ್ಯಾಪ್ತಿಯ ಮೊರಾದಾಬಾದ್‍ನ ಮಸೀದಿಯೊಂದರ ಆವರಣದಲ್ಲೇ 14 ವರ್ಷದ ಬಾಲಕಿ ಮೇಲೆ ಮಸೀದಿಯ ಮೌಲ್ವಿ ಹಾಗೂ ಅಂಗಡಿ ಮಾಲೀಕ ಸೇರಿ ಅತ್ಯಾಚಾರ ಎಸಗಿದ್ದಾರೆ. ಮಸೀದಿಯಲ್ಲಿ ತರಗತಿ ಮುಗಿದ ಬಳಿಕ ಮಗಳು ಮನೆಗೆ ಬರಲು ಯತ್ನಿಸಿದ್ದಾಳೆ. ಆಗ ತಡೆದ ಮೌಲ್ವಿ, ಜಾಕೀರ್ ಮಗಳಿಗೆ ಮಸೀದಿಯ ಕಸ ಗುಡಿಸು ಎಂದು ತಿಳಿಸಿದ್ದಾನೆ. ಈ ವೇಳೆ ಮೌಲ್ವಿ ಹಾಗೂ ಪಕ್ಕದ ಅಂಗಡಿಯ ಮಾಲೀಕ ಸೇರಿ ನನ್ನ ಮಗಳನ್ನು ಅತ್ಯಾಚಾರ ಮಾಡಿರುವುದಾಗಿ ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಭಾಗವಾನ್ಪುರ ಪೆÇಲೀಸ್ ಅಧಿಕಾರಿ ಅಖಿಲೇಶ್ ಪ್ರಧಾನ್ ತಿಳಿಸಿದ್ದಾರೆ. ಹಾಗಾದರೆ ವಿದ್ಯೆ ಕಲಿಸಿದ ಮೌಲ್ವಿಗೆ ಎಲ್ಲಿದೆ ಮೌಲ್ಯ?… ತಪ್ಪು ಮಾಡುವವರನ್ನೂ ತಾನು ತಿದ್ದಿ ಬುದ್ಧಿ ಹೇಳಬೇಕಾದ ಮೌಲ್ವಿ ಇಂದು ತಾನು ಉಪದೇಶ ನೀಡುವ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿದ್ದಾನೆ ಎಂದರೆ ಆತನಿಗೆ ಎಲ್ಲಿದೆ ಬೆಲೆ? ಮೌಲ್ವಿಗಳು ಇದೇ ಮೊದಲಲ್ಲ ಇದಕ್ಕಿಂತ ಮುಂಚಿತವಾಗಿ ಅದೆಷ್ಟೋ ಬಾರಿ ಇಂತಹ ಅತ್ಯಾಚಾರಗಳನ್ನು ಮಾಡಿದ್ದಾರೆ ಆದರೆ ಎಲ್ಲೂ ಯಾವ ಮಾಧ್ಯಮದವರೂ ಒಂದು ಸುಳಿವೂ ನೀಡಿಲ್ಲ!! ಯಾರೂ ಇಂತಹ ಪ್ರಕರಣದ ಬಗ್ಗೆ ಪ್ರತಿಭಟಿಸಿಲ್ಲ!!

ಮೊನ್ನೆ ತಾನೇ 8 ವರ್ಷದ ಮುಸ್ಲಿಂ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಲಾಯಿತು.. ಆ ಪ್ರಕರಣ ನಿಜವಾಗಿಯೂ ಖಂಡನೀಯ!! ಅದನ್ನು ಪ್ರತೀಯೊಬ್ಬರೂ ಖಂಡಿಸುತ್ತಾರೆ!! ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದರೂ ಆ ಶಿಕ್ಷೆ ಪಾಪಿಗಳಿಗೆ ಕಡಿಮೆಯೇ. ಆದರೆ, ಬಾಲಕಿಯನ್ನು ದೇವಾಲಯದಲ್ಲಿ ಅತ್ಯಾಚಾರ ಮಾಡಲಾಗಿದೆ ಎಂಬ ಒಂದೇ ಒಂದು ಕಾರಣಕ್ಕೆ ಇಡೀ ದೇವಾಲಯಗಳನ್ನು, ಹಿಂದೂಗಳನ್ನು ಟೀಕಿಸಲಾಗುತ್ತಿದೆ. ಎಲ್ಲ ಬುದ್ಧಿಜೀವಿಗಳು, ಸಾಮಾಜಿಕ ಜಾಲತಾಣದಲ್ಲಿರುವ ಜೀವಪರರು ಹಿಂದೂಗಳ ವಿರುದ್ಧ, ಹಿಂದುತ್ವದ ವಿರುದ್ಧ ಸಮರ ಸಾರಿದ್ದಾರೆ!! ಅದೆಷ್ಟೋ ದಿನಗಳಿಂದ ಮಾಧ್ಯಮದಲ್ಲಿ, ಅದಲ್ಲದೆ ಅನೇಕ ಸಿನಿಮಾ ತಾರೆಯರೂ , ಬುದ್ಧಿ ಜೀವಿಗಳು ಈ ಬಗ್ಗೆ ಪ್ರತಿಭಟನೆಯನ್ನು ಮಾಡಿದ್ದಾರೆ!! ಇಂತಹ ಸ್ಥಿತಿ ಯಾವ ಹೆಣ್ಣಿಗೂ ಬರಬಾರದು.. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯೇ ನೀಡಬೇಕು..

ಆದರೆ ಅದೇ ಮುಸ್ಲಿಮರು, ಮುಸ್ಲಿಮ್ ಮೌಲ್ವಿಗಳು ಅದೆಷ್ಟು ಅನಾಚಾರವನ್ನು ಮಾಡಿದರೂ ಸಹ ಯಾಕೆ ಯಾರೂ ಮಾತನಾಡುತ್ತಿಲ್ಲ ಎಂಬುವುದು ಎಲ್ಲರ ಪ್ರಶ್ನೆ!! ಮಸೀದಿಯ ಆವರಣ ಕೂಡಾ ದೇವಸ್ಥಾನದಂತೆ ಪವಿತ್ರವಾದ ಸ್ಥಳವಲ್ಲವೇ ಹಾಗಾದರೆ ಮೌಲ್ವಿಯೇ ಮಸೀದಿಯ ಆವರಣದಲ್ಲಿ ಈ ರೀತಿಯ ಕೃತ್ಯಗಳನ್ನು ಮಾಡಿದರೂ ಒಂದೇ ಒಂದೇ ಪಿಳ್ಳೆಯೂ ಈ ಬಗ್ಗೆ ತುಟಿಕ್ ಪಿಟಿಕ್ ಅನ್ನೋದಿಲ್ಲ ಎಂದರೆ ಇದರ ಹಿಂದಿನ ಮರ್ಮವೇನು?! ಯಾವುದೇ ಮಾಧ್ಯಮಗಳು, ಬುದ್ಧಿಜೀವಿಗಳು, ಸಾಮಾಜಿಕ ಜಾಲತಾಣದಲ್ಲಿ ಏಕಾಭಿಮುಖವಾಗಿ ಸಕ್ರಿಯರಾಗಿರುವ ಜೀವಪರರು ಸೊಲ್ಲೆತ್ತಿಲ್ಲ. ಯಾರೂ ಮೌಲ್ವಿಯ ಕೃತ್ಯವನ್ನು ಖಂಡಿಸಿಲ್ಲ. ಜಸ್ಟಿಸ್ ಫಾರ್ ಲೇಡೀಸ್ ಹೋರಾಟಕ್ಕೆ ಇಳಿದಿಲ್ಲ. ಯಾವ ಪ್ರಗತಿಪರರೂ ಟಿವಿಯಲ್ಲಿ ಕೂತು ಗಂಟೆಗಟ್ಟಲೇ ಚರ್ಚಿಸಿಲ್ಲ. ಏಕೆ ಎಂಬ ಪ್ರಶ್ನೆಯಲ್ಲೇ ಇವರ ಇಬ್ಬಂದಿತನ, ವಿಚಾರ ನಪುಂಸಕತೆ ಅಡಗಿದೆ!!

ಈ ಬಗ್ಗೆ ಹಲವೆಡೆ ಸುದ್ಧಿ ಹಬ್ಬಿದ್ದರೂ ಇದರ ಅನೇಕ ಜನ ಟ್ವೀಟ್ ಮಾಡಿದ್ದರೂ ಮಾಧ್ಯಮಗಳು ಮಾತ್ರ ಯಾವುದೇ ಸುದ್ಧಿ ಹಬ್ಬಿಸದಿರುವುದು ವಿಷಾದನೀಯ!! ಮಾಧ್ಯಮಗಳು ಇಂತಹವರಿಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಿದೆಯೇ? ಕೇವಲ ಈ ಪ್ರಕರಣವಲ್ಲದೆ ಇಂತಹ ಅನೇಕ ಪ್ರಕರಣಗಳು ದೇಶದ ನಾನಾ ಕಡೆಗಳಲ್ಲಿ ನಡೆಯುತ್ತಾ ಇದೆ. ಆದರೆ ಈ ಬಗ್ಗೆ ಯಾವುದೇ ಮಾಧ್ಯಮಗಳು ಕೂಡಾ ಆಸಕ್ತಿಯನ್ನು ತೋರಿಸುತ್ತಿಲ್ಲ ಅನ್ನೋದೇ ಆಶ್ಚರ್ಯಕರ!! ದೇಶಾದ್ಯಂತ ಅಸಿಫ ಪ್ರಕರಣವನ್ನು ಪ್ರತಿಭಟಿಸುತ್ತಿರುವ ಜನರಿಗೆ ಮೊರಾದಾಬಾದ್ ಮಸೀದಿ ಆವರಣದಲ್ಲಿ ಮೌಲ್ವಿ ಮಾಡಿರುವ ಅತ್ಯಾಚಾರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಏಕೆ?!

ಅದೇ ಹಿಂದೂ ಸ್ವಾಮೀಜಿಗಳೇನಾದರೂ ಇಂತಹ ಪ್ರಕರಣಗಳಲ್ಲಿ ಸಿಲುಕಿದ್ದರೆ ಈಗಾಗಲೇ ಅದೆಷ್ಟೋ ಮಾಧ್ಯಮಗಳು 2-3 ತಿಂಗಳುಗಳ ಕಾಲ ಇದನ್ನು ಟಿಆರ್ಪಿಗೋಸ್ಕರ ಸುದ್ಧಿ ಮಾಡುತ್ತಿತ್ತು…. ಇಂತಹ ಮೌಲ್ವಿ ಪಾಪಿಗಳಿಗೆ ಯಾಕೆ ಇನ್ನೂ ಕೊಡಾ ಮಾಧ್ಯಮಗಳು ಸುದ್ದಿಯನ್ನು ಪ್ರಸಾರ ಮಾಡಿ ಇಂತಹವರಿಗೆ ಶಿಕ್ಷೆಯನ್ನು ವಿಧಿಸುವಂತೆ ಮಾಡುತ್ತಿಲ್ಲ?? ಇಲ್ಲಿ ನಾವು ಯಾವುದೇ ಧರ್ಮವನ್ನು ಹೊಗಳುವುದು ಅಥವಾ ತೆಗಳುವುದು ಅಲ್ಲ. ಪ್ರಚಲಿತ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬೂದರ ಬಗ್ಗೆ ಹೇಳುತ್ತಿದ್ದೇವೆ ಅಷ್ಟೆ… ಇನ್ನಾದರೂ ಅಪ್ರಾಪ್ತ ಮಕ್ಕಳಿಗೆ ನ್ಯಾಯ ಕೊಡುವಲ್ಲಿ ಮಾಧ್ಯಮಗಳು ಕೂಡಾ ಶ್ರಮಿಸಬೇಕಾಗುತ್ತದೆ. ಇಂತಹವರಿಗೆ ಯಾವತ್ತೂ ಕುಮ್ಮಕ್ಕು ಕೊಡಬಾರದು..

source: https://www.altnews.in/old-news-of-14-year-old-raped-inside-mosque-in-moradabad-circulates-as-recent-incident/

ಪವಿತ್ರ

Tags

Related Articles

Close