ಪಾಪಿ ಪಾಕಿಸ್ತಾನಕ್ಕೆ ತಿನ್ನುವುದಕ್ಕೆ ಗತಿ ಇಲ್ಲದಿದ್ದರೂ ಕೊಬ್ಬು ಮಾತ್ರ ಕರಗದಿರುವುದು ದುರಂತ. ಅತ್ತ ಟರ್ಕಿಯಲ್ಲಿ ಸಂಭವಿಸಿದ ಭೂಕಂಪಕ್ಕೆ ನೆರವಿನ ಹಸ್ತ ಚಾಚಿರುವ ಭಾರತದ ರಕ್ಷಣಾ ತಂಡಗಳನ್ನು ಹೊತ್ತ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ನಿರಾಕರಿಸುವ ಮೂಲಕ ದುರಹಂಕಾರ ಮೆರೆದಿದೆ. ಆ ಮೂಲಕ ಟರ್ಕಿಯ ಸಂತ್ರಸ್ತರ ಮೇಲೆ ಒಂದು ಚೂರೂ ಕರುಣೆ ಇಲ್ಲದಂತೆ ನಡೆದುಕೊಂಡು ತನ್ನ ನರಿ ಬುದ್ಧಿಯನ್ನು ಮತ್ತೆ ಪ್ರದರ್ಶನ ಮಾಡಿದೆ.
ಭಾರತದಿಂದ ಟರ್ಕಿಗೆ ಎರಡು ವಿಮಾನಗಳನ್ನು ಕಳುಹಿಸಲಾಗಿದೆ. ಒಂದು ವಿಮಾನ ಸೋಮವಾರ ತಡರಾತ್ರಿ ಹೊರಟಿದೆ. ಎರಡನೇ ವಿಮಾನ ಮಂಗಳವಾರ ಹೊರಟಿದ್ದು, ಈ ವಿಮಾನಕ್ಕೆ ಪಾಕ್ ತನ್ನ ವಾಯುನೆಲೆಯನ್ನು ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ. ಈ ವಿಮಾನಗಳಲ್ಲಿ ಭೂಕಂಪ ಪರಿಹಾರ ಸಾಮಗ್ರಿಗಳು, ರಕ್ಷಣಾ ತಂಡಗಳು, ತರಬೇತಿ ಪಡೆದ ಶ್ವಾನಗಳು, ವೈದಕೀಯ ಸೇವೆ, ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಬೇಕಾದ ಪರಿಕರಗಳು ಇತ್ಯಾದಿಗಳನ್ನು ಸಾಗಿಸಲಾಗುತ್ತಿತ್ತು. ಈ ವಿಮಾನಗಳಿಗೆ ಪಾಕ್ ಯಾವ ಕಾರಣದಿಂದ ತನ್ನ ವಾಯುನೆಲೆಯನ್ನು ನಿಷೇಧಿಸಿತ್ತು ಎಂಬುದನ್ನು ಅಧಿಕಾರಿಗಳು ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.
ಭಾರತವು ಸಂತ್ರಸ್ತರಿಗೆ ರಕ್ಷಣಾ ಕಾರ್ಯದಲ್ಲಿ ಟರ್ಕಿಗೆ ಸಹಾಯ ಮಾಡುತ್ತಿದೆ. ಟರ್ಕಿಯ ರಾಯಭಾರ ಕಚೇರಿ ಸಹ ಭಾರತದ ಈ ಮಾನವೀಯ ನೆರವಿಗೆ ಧನ್ಯವಾದಗಳನ್ನು ಸಮರ್ಪಿಸಿದೆ.
ಪಾಕಿಸ್ತಾನ ಮಾತ್ರ ತಾನು ಬಿಕಾರಿಯಾಗಿದ್ದರೂ ಇನ್ನೂ ಬುದ್ಧಿ ಕಲಿಯದೇ ಇರುವುದು ದುರಂತ. ಪಾಕ್ ಎದುರಿಸುತ್ತಿರುವ ಆಹಾರ, ಆರ್ಥಿಕ ಸಮಸ್ಯೆಗಳಿಗೆ ಭಾರತವೂ ಸೇರಿದಂತೆ ವಿಶ್ವದ ಮುಂದೆ ಬಿಕ್ಷೆ ಬೇಡಿತ್ತು. ಈ ಪರಿಸ್ಥಿತಿಯಿಂದ ಹೊರ ಬರದೇ ಇದ್ದರೂ, ಈಗಲೂ ಬದಲಾಗದೆ, ವಿಶ್ವಕ್ಕೆ ಕಂಟಕವಾಗಿರುವುದು, ಪಾಕಿಸ್ತಾನದ ಅವಸಾನಕ್ಕೂ ಕಾರಣವಾಗಬಹುದು. ತಾನು ಈ ರೀತಿ ವರ್ತಿಸಿದರೆ ವಿಶ್ವದ ಯಾವ ರಾಷ್ಟ್ರಗಳು ತನ್ನ ಸಹಾಯಕ್ಕೆ ಬರಲಾರವು ಎನ್ನುವುದನ್ನೂ ಅರಿಯದ ಪಾಕ್, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿತಪಿಸಲಿದೆ ಎನ್ನುವುದು ಸತ್ಯ.