ಪ್ರಚಲಿತ

ವಿದೇಶದಲ್ಲಿ ನಿಂತು ಮತ್ತೆ ಭಾರತದ ಮರ್ಯಾದೆ ಹರಾಜು ಹಾಕಿದ ರಾ’ಹುಳ’

ಜಾಗತಿಕ ಮಟ್ಟದಲ್ಲಿ ಭಾರತದ ಮರ್ಯಾದೆ ಹರಾಜು ಮಾಡುವುದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯದ್ದು ಎತ್ತಿದ ಕೈ. ಸೊನ್ನೆ ಮೊನ್ನೆಯಷ್ಟೇ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುವ ಮೂಲಕ ಲಂಡನ್‌ನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಭಾರತವನ್ನು ದೂರಿದ್ದ ರಾ’ಹುಳ’ ಸದ್ಯ ಅಂತದ್ದೇ ಮತ್ತೊಂದು ಎಡವಟ್ಟು ಮಾಡಿದ್ದಾರೆ.

ಯುಕೆ ಪ್ರವಾಸದಲ್ಲಿರುವ ರಾಗ ಭಾರತದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಕಿಡಿ ಕಾರಿದ್ದಾರೆ. ಭಾರತದ ಸಂಸತ್‌ ನಲ್ಲಿ ವಿರೋಧ ಪಕ್ಷಗಳು ಮಾತನಾಡುವಾಗ ಮೈಕ್ ಆಫ್ ಮಾಡಲಾಗುತ್ತದೆ ಎನ್ನುವ ಮೂಲಕ ವಿದೇಶದಲ್ಲಿ ಭಾರತದ ಮರ್ಯಾದೆಯನ್ನು ಕಳೆಯುವ ಕೆಲಸವನ್ನು ಮತ್ತೆ ಮಾಡಿದ್ದಾರೆ.

ಲಂಡನ್ನಿನ ಹೌಸ್ ಆಫ್ ಕಾಮನ್ಸ್‌ನ ಗ್ರ್ಯಾಂಡ್ ಕಮಿಟಿ ರೂಮ್‌ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡುವ ಮೂಲಕ ಮತ್ತೆ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ನಮ್ಮ ಮೈಕ್ ಗಳು ಸರಿ ಇದ್ದರೂ ನೀವು ಅವುಗಳನ್ನು ಆನ್ ಮಾಡಲು ಸಾಧ್ಯವಿಲ್ಲ. ನಾನು ಮಾತನಾಡುವ ಸಂದರ್ಭದಲ್ಲಿ ಇದು ಹಲವಾರು ಬಾರಿ ನನ್ನ ಗಮನಕ್ಕೆ ಬಂದಿದೆ. ನೋಟು ಅಮಾನ್ಯೀಕರಣದ ಸಮಯದಲ್ಲಿಯೂ ಆ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳಿಗೆ ಅವಕಾಶ ಇರಲಿಲ್ಲ. ಇದು ಅನಾಹುತಕಾರಿ ಆರ್ಥಿಕ ನಿರ್ಧಾರ ಎಂದು ಹೇಳಿದ್ದಾರೆ.

ಭಾರತದ ಗಡಿಯೊಳಗೆ ಚೀನಾ ನುಗ್ಗುತ್ತಿದ್ದರೂ, ಈ ಬಗ್ಗೆ ನಮಗೆ ಮಾತನಾಡಲು ಅವಕಾಶ ಇಲ್ಲ. ಸದ್ಯ ಭಾರತೀಯ ಸಂಸತ್ತು ಉಸಿರುಗಟ್ಟಿಸುವ ಹಾಗಿದೆ ಎಂದು ರಾಹುಲ್ ಗಾಂಧಿ ರಾಗ ಎಳೆದಿದ್ದಾರೆ.

ಒಟ್ಟಿನಲ್ಲಿ ಭಾರತದ ಅನ್ನವನ್ನೇ ತಿಂದುಕೊಂಡು, ಭಾರತದ ವಿರುದ್ಧವೇ ಮಾತನಾಡುವ ಇಂತಹ ನಾಲಾಯಕು ಸ್ವಘೋಷಿತ ನಾಯಕರಿಗೆ ಮಾನ ಮರ್ಯಾದೆ ಎಂಬುದರ ಗಂಧ ಗಾಳಿಯೇ ತಿಳಿದಂತಿಲ್ಲ. ಇಂತಹ ದೇಶ ವಿರೋಧಿಗಳು ಮತ್ತು ಅವರ ಹಿಂಬಾಲಕರಿಗೆ ಅದೆಂದು ಬುದ್ಧಿ ಬರುವುದೋ ದೇವರೇ ಬಲ್ಲ.

Tags

Related Articles

Close