ಪ್ರಚಲಿತ

ಹಿಂದೂ ಭಯೋತ್ಪಾದನೆಯ ಉತ್ಪಾದನೆ!! ಯುಪಿಎಯ ಗೃಹ ವ್ಯವಹಾರಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ಆರ್.ವಿ.ಎಸ್ ಮಣಿ ಅವರ ಪುಸ್ತಕದಲ್ಲಿ ಕೈ ಕಮಾಂಡಿನ ಕರ್ಮಕಾಂಡ ಬಯಲು!!

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಳಿಕ, ಈಗ ಯೂಪಿಎಯ ಗೃಹ ವ್ಯವಹಾರಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ಆರ್.ವಿ.ಎಸ್ ಮಣಿ ಅವರು “ಹಿಂದೂ ಟೆರರ್” ಎನ್ನುವ ಪುಸ್ತಕವನ್ನು ಬರೆದು ಯೂಪಿಎಯ ಕರ್ಮಕಾಂಡಗಳನ್ನು ಎಳೆ ಎಳೆಯಾಗಿ ಬಯಲಿಗೆಳೆದಿದ್ದಾರೆ. ಹೇಗೆ ಯೂಪಿಎಯ ಹೈ ಕಮಾಂಡ್ “ಹಿಂದೂ ಭಯೋತ್ಪಾದನೆ”(ಭಗವಾ ಆತಂಕವಾದ) ಎನ್ನುವ ಸಿದ್ದಾಂತವನ್ನು ಮುನ್ನೆಲೆಗೆ ತಂದಿತು ಎನ್ನುವುದನ್ನು ತಮ್ಮ ಪುಸ್ತಕ “ಹಿಂದು ಟೆರರ್” ನಲ್ಲಿ ಬಹಿರಂಗ ಪಡಿಸಿದ್ದಾರೆ.

ಭಾರತದಲ್ಲಿ ಹಿಂದೂ ಭಯೋತ್ಪಾದನೆಯೆನ್ನುವ ಹೊಸ ಸಿದ್ದಾಂತವನ್ನು ಯೂಪಿಎ ಹೇಗೆ ಹುಟ್ಟು ಹಾಕಿತು ಎನ್ನುವುದನ್ನು ಅವರು ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಮಣಿ ಅವರು ದಾಖಲಿಸಿರುವ ಈ ವಿಚಾರಗಳ ಪ್ರಕಾರ ಭಾರತ ಮತ್ತು ಹಿಂದೂಗಳು ಗಂಭೀರವಾದ ತೊಂದರೆಗೆ ಒಳಗಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯ ಉಳಿಯುವುದಿಲ್ಲ. ಯೂಪಿಎ ಕಾಲದ ಗೃಹ ಸಚಿವ ಪಿ.ಚಿದಂಬರಮ್ ಅವರು ಹಿಂದೂ ಭಯೋತ್ಪಾದನೆಯನ್ನು ಹೇಗೆ ಉತ್ಪಾದಿಸಿದರು ಎನ್ನುವ ದಾಖಲೆಗಳನ್ನು ಸೂಕ್ಷ್ಮವಾಗಿ ಪುನರ್ನಿರ್ಮಿಸಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ ಮಣಿ.

ಯೂಪಿಎ ಕಾಲದ ಎರಡು ಪ್ರಭಾವೀ ವ್ಯಕ್ತಿಗಳಾದ ಪ್ರಣಬ್ ಮುಖರ್ಜಿ ಮತ್ತು ಆರ್.ವಿ.ಎಸ್ ಮಣಿ ಇಬ್ಬರೂ ಒಂದೇ ವಿಷಯದ ಬಗ್ಗೆ ದಾಖಲೆಗಳನ್ನು ನೀಡಿರುವುದರಿಂದ ಯೂಪಿಎ ಹಿಂದೂಗಳನ್ನು ಮುಗಿಸಲು ಹುನ್ನಾರ ನಡೆಸಿತ್ತು ಮತ್ತು ಮುಂದೆ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಹಿಂದೂಗಳನ್ನು ಮುಗಿಸಿ ಬಿಡುತ್ತದೆ ಎನ್ನುವ ವಾದಕ್ಕೆ ಬಲ ಬರುತ್ತಿದೆ. ಮಣಿಯವರು ಈ ಪುಸ್ತಕದಲ್ಲಿ ಬರೆದಿರುವ ವಿಚಾರಗಳನ್ನು ಓದುತ್ತಾ ಹೋದರೆ ನೀವು ಹೌಹಾರುತ್ತೀರಿ ಮತ್ತು ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತೀರಿ!!

26/11 ಮುಂಬೈ ದಾಳಿಯನ್ನು ಕೂಡಾ ಹಿಂದೂ ಭಯೋತ್ಪಾದನೆ ಎಂದು ಕರೆಯಲು ಯೂಪಿಎ ಸಿದ್ದತೆ ನಡೆಸಿತ್ತು ಎನ್ನುವ ಮಾಹಿತಿಯನ್ನು ಮಣಿ ಅವರು ತಮ್ಮ ಪುಸ್ತಕದಲ್ಲಿ ಬಹಿರಂಗ ಪಡಿಸಿದ್ದಾರೆ! ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯು ಭಾಗಿಯಾರುವ ಸಾಕ್ಷ್ಯ ನೀಡಿದ್ದರೂ ಕೂಡ, ಅಧಿಕಾರದ “ಉನ್ನತ ಮಟ್ಟಗಳು” ಇದಕ್ಕೆ ಹಿಂದೂ ಭಯೋತ್ಪಾದನೆಯ ಲೇಪ ಕೊಡುವಂತಹ ಪ್ರಯತ್ನದಲ್ಲಿರುವಂತೆ ಭಾಸವಾಗುತ್ತಿತ್ತು ಎಂದು ಮಣಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇದೆ ಸಮಯದಲ್ಲಿ ದಿಗ್ವಿಜಯ್ ಸಿಂಗ್ ಈ ಘಟನೆಗೆ ಭಗವಾ ಆತಂಕವಾದವನ್ನು ಥಳಕು ಹಾಕಿದ್ದನ್ನು ನೆನಪಿಸಿಕೊಂಡರೆ ಮಣಿ ಅವರ ವಾದದಲ್ಲಿ ಸತ್ಯ ಇದೆ ಎನ್ನುವುದನ್ನು ಯಾರೂ ಕೂಡಾ ಊಹಿಸಬಲ್ಲರು.

ಮುಂಬೈ ದಾಳಿಯ ಕೆಲವೆ ದಿನಗಳ ಬಳಿಕ ಆಗಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಘಟನೆ ನಡೆದ ಸ್ಥಳಕ್ಕೆ ಸಿನಿಮಾ ನಿರ್ದೇಶಕರನ್ನು ಕರೆದುಕೊಂ ಡು ಹೋಗಿರುವುದರ ಬಗ್ಗೆ ಮಣಿ ಪ್ರಶ್ನಿಸುತ್ತಾರೆ. ಒಂದು ಭಯೋತ್ಪಾದನಾ ದಾಳಿ ನಡೆದಿರುವ ಪ್ರದೇಶವನ್ನು ಚಿತ್ರಕಥೆಗೆ ಮಾರಾಟ ಮಾಡಲು ಬಯಸಿದಂತೆ ತೋರುವ ಈ ನಡೆ, ರಾಜಕೀಯ ಪಕ್ಷಗಳು ಅಪರಾಧಿಗಳು ಮತ್ತು ಅವರ ಬೆಂಬಲಿಗರ ಜೊತೆ ಪಾಲುದಾರಿಕೆ ಹೊಂದಿದ್ದವು ಎನ್ನುವುದನ್ನು ಸೂಚಿಸುತ್ತಿರುವಂತೆ ಭಾಸವಾಗುತ್ತದೆ ಮತ್ತು ಇದಕ್ಕೆ ಅವರು ಉತ್ತರ ನೀಡಬೇಕಾಗುತ್ತದೆ ಎಂದು ಪುಸ್ತಕದಲ್ಲಿ ದೇಶ್ ಮಖ್ ಅವರ ಅನುಮಾನಾಸ್ಪದ ನಡೆ ಬಗ್ಗೆ ಕಿಡಿ ಕಾರಿದ್ದಾರೆ.

ಪುಸ್ತಕದ 106 ಪುಟಗಳ ಬಳಿಕ ಹಿಂದೂಗಳ ಪಾಲಿಗೆ ಸಾಕ್ಷಾತ್ ಖಳನಾಯಕನಾಗಿರುವ ಪಿ.ಚಿದಂಬರಂ ಅವರ ಕರ್ಮಕಾಂಡಗಳನ್ನು ಬಯಲಿಗೆಳಿದ್ದಾರೆ ಮಣಿ. ಪಿ.ಚಿದಂಬರಂ ಗೃಹ ಮಂತ್ರಿಯಾದ ಬಳಿಕ NIA ಮತ್ತು ಗೃಹಸಚಿವಾಲಯಗಳು ಸೇರಿಕೊಂಡು, ಅಸ್ತಿತ್ವದಲ್ಲಿಲ್ಲದ ‘ಹಿಂದೂ ಭಯೋತ್ಪಾದನೆ’ ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸುವುದರ ಬಗ್ಗೆ ಚಿಂತನೆ ನಡೆಸುತ್ತಿದ್ದರು ಎಂದು ದಾಖಲಿಸಿದ್ದಾರೆ. ಅದೆ ಸಮಯದಲ್ಲಿ, ಗುಜರಾತ್ ಎನ್ ಕೌಂಟರ್ನಲ್ಲಿ ಹತಳಾದ ಇಶ್ರತ್ ಜಹಾಂಳನ್ನು ಮುಗ್ದೆ ಮತ್ತು ಅಮಾಯಕಿ ಎಂದು ಸಾಬೀತು ಪಡಿಸಲು ಡೇವಿಡ್ ಹೆಡ್ಲಿಯ ಹೇಳಿಕೆಗಳನ್ನು ಗೃಹಸಚಿವಾಲಯ ತಿರುಚಲು ಬಯಸಿತ್ತು ಎನ್ನುವ ಮಾಹಿತಿಯನ್ನೂ ಮಣಿ ನೀಡುತ್ತಾರೆ.

ಯೂಪಿಎಯ ಉನ್ನತ ಮಂತ್ರಿಗಳ ಕರ್ಮಕಾಂಡಗಳನ್ನು ಬಯಲಿಗೆಳೆಯಲು ಮಣಿ ಸ್ವಲ್ಪವೂ ಹಿಂಜರಿದಿಲ್ಲ. 2012-2014ರಲ್ಲಿ ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂದೆ ಅವರು ಅಮೇರಿಕಾವು ಡೇವಿಡ್ ಹೆಡ್ಲಿ ಪ್ರವೇಶವನ್ನು ನಿರೋಧಿಸುತ್ತಿದೆ ಎಂದು ದೇಶದ ಬಳಿ ಸುಳ್ಳು ಹೇಳಿದ್ದರು ಎನ್ನುವುದನ್ನೂ ವಿವರವಾಗಿ ಮಣಿ ದಾಖಲಿಸಿದ್ದಾರೆ. NIA ಹೆಡ್ಲಿಯ ಸಾಕ್ಷ್ಯದ ಪ್ರಮುಖ ಭಾಗಗಳನ್ನು ತೆಗೆದು ಮಾಧ್ಯಮಗಳಿಗೆ  ನೀಡಿತ್ತು ಎನ್ನುವ ಸತ್ಯವನ್ನೂ ಬಹಿರಂಗ ಪಡಿಸಿದ್ದಾರೆ. ಮಾಲೆಗಾಂವ್ ಸ್ಪೋಟ(2006), ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ (2007) ಮತ್ತು ಮೆಕ್ಕಾ ಮಸೀದಿ ಬಾಂಬ್ ಸ್ಫೋಟಗಳು (2007) ಈ ಎಲ್ಲಾ ಘಟನೆಗಳಲ್ಲಿಯೂ “ಹಿಂದೂ ಭಯೋತ್ಪಾದನೆಯ” ಸುಳ್ಳು ಆರೋಪಗಳನ್ನು ಹೊರಿಸಲು ಯೂಪಿಎ ಶಕ್ತಿ ಮೀರಿ ಪ್ರಯತ್ನಿಸಿದೆ ಎಂದು ಮಣಿ ದಾಖಲಿಸಿದ್ದಾರೆ.

ಯುಪಿಎ ಸರಕಾರವು ನಿಜವಾದ ಭಯೋತ್ಪಾದಕರನ್ನು ಸಮರ್ಥಿಸುತ್ತಿತ್ತು ಮತ್ತು ಭಯೋತ್ಪಾದಕರನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದವರಿಗೆ ಅವಕಾಶ ನೀಡುತ್ತಿತ್ತು ಎನ್ನುವುದನ್ನೂ ಮಣಿ ಬರೆದುಕೊಂಡಿದ್ದಾರೆ. ಸಾಕಾ ಹಿಂದೂಗಳೆ, ಅಥವಾ ಇನ್ನೂ ಬೇಕಾ? ಇನ್ನೂ ಬೇಕಿದ್ದರೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಣಿ, ಡೆವಿಡ್ ಫ್ರಾವ್ಲೆ, ಫಾಂಕೋಯಿಸ್ ಗ್ವಾಟೆಯರ್ ಮುಂತಾದವರನ್ನು ಕೇಳಿ ನೋಡಿ, ರಾಜಮಾತೆಯ ಹಿಂದೂ ದ್ವೇಷದ ಪರಿಯನ್ನು ಚೆನ್ನಾಗಿ ವಿವರಿಸುತ್ತಾರೆ ನಿಮಗೆ.ಯೂಪಿಎ-3 ಅಧಿಕಾರಕ್ಕೆ ಬಂದರೆ ಹಿಂದೂಗಳ ಗತಿ ಏನಾಗುವುದು ಎನ್ನುವುದನ್ನು ಒಂದು ಬಾರಿ ಯೋಚಿಸಿ ನೋಡಿ ಮೂರ್ಖ ಹಿಂದೂಗಳೇ. ಭಯೋತ್ಪಾದಕರನ್ನು ಬೆಂಬಲಿಸಿ ಹಿಂದೂಗಳ ತಲೆಗೆ ಆತಂಕವಾದಿಗಳೆಂಬ ಹಣೆ ಪಟ್ಟಿ ಕಟ್ಟಿದ ಕಾಂಗ್ರೆಸ್ ಗೆ ಇನ್ನೂ ಮತ ನೀಡುತ್ತೀರಾ? ಇಲ್ಲ, ದೇಶಕ್ಕಾಗಿ, ಸನಾತನಕ್ಕಾಗಿ ಪ್ರಾಣವನ್ನು ಒತ್ತೆ ಇಟ್ಟಿರುವ ಮೋದಿ ಅವರಿಗೆ ಮತ ನೀಡುತ್ತೀರಾ?

ಯೂಪಿಎಯ ರಾಜಮಾತೆಯ ಹಿಂದೂ ದ್ವೇಷ ಮತ್ತು ಆತಂಕ ಪ್ರೇಮದ ಪರಿಯನ್ನು ಅವರದೆ ಮಂತ್ರಿಗಳು ಮತ್ತು ಅಧಿಕಾರಿಗಳು ಬಿಚ್ಚಿಡುತ್ತಿದ್ದಾರೆ. ಇನ್ನೂ ನಿಮಗೆ ನಂಬಿಕೆ ಬರುತ್ತಿಲ್ಲವೆ? ಒಂದೆಡೆ ಹಿಂದೂಗಳ ಮಾರಣ ಹೋಮ ನಡೆಸಿ, ಹಿಂದೂಗಳಿಗೆ ಭಯೋತ್ಪಾದಕರ ಪಟ್ಟಿ ಕಟ್ಟಿದ ಕಾಂಗ್ರೆಸ್ ಇನ್ನೊಂದೆಡೆ ಮಂದಿರ ಯಾತ್ರೆ ಮಾಡುವ ನಾಟಕವಾಡುತ್ತಿದೆ. ಇನ್ನೂ ಎಷ್ಟು ಸಾಕ್ಷ್ಯ ಬೇಕು ನಿಮಗೆ? ಅಂಗೈ ಹುಣ್ಣನ್ನು ನೋಡಲು ಕನ್ನಡಿ ಹುಡುಕುತ್ತಾ ಕಾಲ ಕಳೆಯಬೇಡಿ. ಕಾಂಗ್ರೆಸ್ ಪೋಷಿತ ತೃತೀಯ ರಂಗವನ್ನು ಸಾರಾಸಗಟಾಗಿ ತಿರಸ್ಕರಿಸಿ ಮೋದಿ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ.. ದೇಶ ಉಳಿಸಿ…ಸನಾತನ ಉಳಿಸಿ…

-ಶಾರ್ವರಿ

Tags

Related Articles

Close