ದೇಶಪ್ರಚಲಿತ

ಲವ್ ಜಿಹಾದ್ ತಡೆಗಟ್ಟಲು ಮಾರ್ಗವಿದೆ: ಅನುಸರಿಸಬೇಕಷ್ಟೇ!

ಅಲ್ಲಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಅಲ್ಲಲ್ಲಿ ಇಸ್ಲಾಂ, ಕ್ರೈಸ್ತ‌ರಿಂದ ನಡೆಯುತ್ತಿರುವ ಬಲವಂತದ ಮತಾಂತರ, ಲ್ಯಾಂಡ್ ಜಿಹಾದ್, ಶಾಹೀನ್ ಗ್ಯಾಂಗ್ ಮೂಲಕ ಹಿಂದೂ ಹೆಣ್ಮಕ್ಕಳ ಬ್ರೈನ್ ವಾಷ್ ಮಾಡಿ, ಅವರನ್ನು ತಮ್ಮ ಬಲೆಗೆ ಹಾಕಿಕೊಳ್ಳುವುದು, ಸ್ಲೀಪರ್ ಬಸ್‌ನಲ್ಲಿ ಹಿಂದೂ ಹುಡುಗಿಯರ ಜೊತೆ ಚೆಲ್ಲಾಟ, ಬೀದಿ ಬೀದಿಗಳಲ್ಲಿ ಹಿಂದೂ ಹುಡುಗಿಯರ ಜೊತೆ ಸುತ್ತಾಟ.. ಹೀಗೆ ಹಿಂದೂ ಧರ್ಮ ಎದುರಿಸುತ್ತಿರುವ ಸಮಸ್ಯೆ ಒಂದಲ್ಲ, ಎರಡಲ್ಲ. ಅನ್ಯ ಧರ್ಮ‌ದಿಂದ ನಮ್ಮ ಸನಾತನ ಧರ್ಮ ಹಲವಾರು ಸಮಸ್ಯೆ‌ಗಳನ್ನು ಎದುರಿಸುತ್ತಿದೆ ಎನ್ನುವುದು ಸತ್ಯ.

ಇಂತಹ ದೌರ್ಜನ್ಯ‌ದ ಬಗ್ಗೆ, ಹಿಂದೂಗಳ ಹತ್ಯೆ‌ಯ ಬಗ್ಗೆ ದಿನ ನಿತ್ಯ ಮಾದ್ಯಮ‌ಗಳು ಸುದ್ದಿ ಬಿತ್ತರಿಸುತ್ತಿದ್ದರೂ ನಮ್ಮ ಹಿಂದೂ ಬಾಂಧವರಲ್ಲಿ ಹೆಚ್ಚಿನವರು ಇನ್ನೂ ಎಚ್ಚೆತ್ತುಕೊಳ್ಳದೇ ಇರುವುದು ದುರಂತ. ನಮ್ಮ ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವುದರ ಸಾಕ್ಷಿ. ನಮ್ಮವರು ಎಚ್ಚರಾಗದೆ ಇರುವುದರ ಸಂಕೇತವೇ ನಮ್ಮ ಧರ್ಮದ ಮೇಲೆ ಆಗುತ್ತಿರುವ ಅನಾಚಾರಕ್ಕೆ ಕಾರಣ ಎನ್ನಬಹುದು.

ಇತ್ತೀಚೆಗೆ ಕೆಲ ಕಡೆಗಳಲ್ಲಿ ಹಿಂದೂ ಹೆಣ್ಮಕ್ಕಳ‌ನ್ನು ಲವ್ ಜಿಹಾದ್‌ಗೆ ಬಲಿಯಾಗಿಸಿ, ಹತ್ಯೆ ಮಾಡುವುದು, ಅವರ ಮೃತ ದೇಹ ಸಹ ಹೆತ್ತವರಿಗೆ ಸಿಗದಂತೆ ಮಾಡುವುದು ಹೆಚ್ಚಾಗುತ್ತಿದೆ. ಇಷ್ಟು ಮಾತ್ರ‌ವಲ್ಲ ಹಿಂದೂ ಹುಡುಗಿಯರ ಜೊತೆ ಸುತ್ತಾಟ, ಹಿಂದೂ ಹೆಣ್ಮಕ್ಕಳನ್ನು ಸ್ಲೀಪರ್ ಬಸ್‌ಗಳಲ್ಲಿ ಕರೆದುಕೊಂಡು ಹೋಗುವ ನೆಪದಲ್ಲಿ ಹಾಳು ಮಾಡುವುದು ಇತ್ಯಾದಿಗಳನ್ನು ಜಿಹಾದಿಗಳು ಮಾಡುತ್ತಲೇ ಇದ್ದಾರೆ. ಆ ಮೂಲಕ ಹಿಂದೂ ಧರ್ಮ ನಾಶ ಮಾಡುವ ಅವರ ಹುನ್ನಾರ ನಡೆಯುತ್ತಲೇ ಇದೆ. ನಮ್ಮ ಹಿಂದೂ ಹೆಣ್ಮಕ್ಕಳು ಮಾತ್ರ ದುರುಳರ ಈ ತಂತ್ರಗಾರಿಕೆ ಅರಿಯದೆ ಮೂರ್ಖರಾಗುತ್ತಿರುವುದು ದುರಾದೃಷ್ಟ.

ಕೆಲ ಹಿಂದೂ ಹೆಣ್ಮಕ್ಕಳಿಗೆ ಬುದ್ಧಿ ಹೇಳಿ ಪ್ರಯೋಜನವಾಗುತ್ತಿಲ್ಲ. ಎಲ್ಲಾ ಕುಟುಂಬಗಳನ್ನು ಭೇಟಿ ಮಾಡಿ ಧರ್ಮ ಜಾಗೃತಿ ಮಾಡುವ ಕೆಲಸವೂ ಸುಲಭದ ಮಾತಲ್ಲ. ಇದನ್ನರಿತ ಹಿಂದೂ ಸಂಘಟನೆಗಳು ಕೆಲವು ಊರುಗಳಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸುವ ಮೂಲಕ ಹಿಂದೂ ಹೆಣ್ಮಕ್ಕಳ‌ಲ್ಲಿ, ಹಿಂದೂ ಕುಟುಂಬಗಳಲ್ಲಿ ಜಾಗೃತಿ ಮೂಡಿಸುವ, ಅವರಲ್ಲಿ ಲವ್ ಜಿಹಾದ್ ಹಿಂದಿನ ಕರಾಳತೆಯ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಹಿಂದೂ ಹೆಣ್ಮಕ್ಕಳೇ ಎಚ್ಚರಾಗಿ. ಹಿಂದೂ ಹುಡುಗಿ ಶ್ರದ್ಧಾಳ ಹತ್ಯೆ, ದೇಹವನ್ನು ತುಂಡು ತುಂಡು ಮಾಡಿದರು. ಇದಕ್ಕೆ ಕಾರಣ ಲವ್ ಜಿಹಾದ್. ನೀವು ಇದಕ್ಕೆ ಬಲಿಯಾಗದಿರಿ ಎಂದು ಹಿಂದೂಗಳನ್ನು ಎಚ್ಚರಿಸುವ ಕೆಲಸ ನಡೆಯುತ್ತಿದೆ. ಹಿಂದೂ ಹೆಣ್ಮಕ್ಕಳ ಮಾನ, ಪ್ರಾಣ ಉಳಿಸುವ ನಿಟ್ಟಿನಲ್ಲಿ ಹೀಗೆ ಫ್ಲೆಕ್ಸ್ ಮೂಲಕ ಹಿಂದೂ ಸಂಘಟನೆಗಳು ಜಾಗೃತಿ ಮೂಡಿಸುತ್ತಿವೆ.

ಹಿಂದೂ ಹೆಣ್ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗುವುದು ಕಂಡುಬಂದಲ್ಲಿ ಅವರನ್ನು ಅದರಿಂದ ಹೊರತರುವ ಪ್ರಯತ್ನ ಸಹ ಹಿಂದೂ ಸಂಘಟನೆಗಳಿಂದಾಗುತ್ತಿದೆ. ಈ ನಡುವೆ ಹಿಂದೂ ಯುವತಿಯರಿಂದಲೇ ಹಿಂದೂ ಕಾರ್ಯಕರ್ತರು ಬಾಯಿಗೆ ಬಂದಂತೆಲ್ಲಾ ಉಗಿಸಿಕೊಳ್ಳಬೇಕಾದ ಪರಿಸ್ಥಿತಿ ಸಹ ಇದೆ. ಮೊನ್ನೆ ಮಂಗಳೂರಿನ ಕಲ್ಲಡ್ಕ ಸಮೀಪದ ದಾಸಕೊಡಿ‌ಯಲ್ಲಿ ಸ್ಲೀಪರ್ ಬಸ್ಸಿನಲ್ಲಿ ಜಿಹಾದಿ ಜೊತೆಗೆ ಸಿಕ್ಕಿ ಬಿದ್ದ ಹಿಂದೂ ಹುಡುಗಿ, ಆಕೆಯನ್ನು ಈ ಆಪತ್ತಿನಿಂದ ರಕ್ಷಿಸಲು ಹೊರಟ ಹಿಂದೂ ಸಹೋದರರಿಗೆ ಬೇಕಾಬಿಟ್ಟಿ, ನಾಲಿಗೆ ತಿರುಗಿದಂತೆಲ್ಲಾ ಮಾತನಾಡಿದ್ದನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಬಹುದು. ಹೀಗಿದ್ದರೂ, ನಮ್ಮ ಮನೆಯ ಮಗಳಲ್ಲದಿದ್ದರೂ, ನಮ್ಮ ಸಹೋದರಿಯ ಹಾಗೆಯೇ.. ನಮ್ಮ ಸಹೋದರಿಯ ಮಾನ, ಪ್ರಾಣಕ್ಕೆ ದುರಂತ ಸಾವು ಬಾರದಿರಲಿ ಎನ್ನುವ ಸದುದ್ದೇಶದಲ್ಲಿ ಹಿಂದೂ ತರುಣರು ಅವರನ್ನು ರಕ್ಷಿಸಲು ಮುಂದಾಗುತ್ತಾರೆ.

ಹೆಣ್ಣು ಮಕ್ಕಳೇ, ಅರಿತುಕೊಳ್ಳಿ.. ನಿಮ್ಮ ಜೀವನ ರಕ್ಷಣೆ‌ಗೆ ಬರುವವರನ್ನು ನೀವು ನಂಬಿ. ಅದು ಬಿಟ್ಟು ನಿಮ್ಮನ್ನು ಬಳಸಿಕೊಂಡು ನಂತರ ಹತ್ಯೆ ಮಾಡುವ ಜಿಹಾದಿಗಳ‌ನ್ನಲ್ಲ.

ಹಿಂದೂ ಧರ್ಮದ ಜನರಲ್ಲಿ ಲವ್ ಜಿಹಾದ್ ಜಾಗೃತಿ ಫ್ಲೆಕ್ಸ್‌ಗಳು ಎಲ್ಲಾ ಊರುಗಳಲ್ಲಿಯೂ ಕಂಡು ಬರಲಿ. ಹಿಂದೂ ಕುಟುಂಬಗಳಲ್ಲಿ ಧರ್ಮ ಜಾಗೃತಿ ಮೂಡುವಂತಾಗಲಿ ಎನ್ನುವುದೇ ನಮ್ಮ ಆಶಯ.

Tags

Related Articles

Close