ತಮ್ಮ ಮಕ್ಕಳು ವಿದ್ಯಾವಂತರಾಗಲಿ, ಅವರಿಗೆ ಒಳ್ಳೆಯ ಉದ್ಯೋಗ ದೊರೆಯಲಿ. ಅವರ ಜೀವನ ಬೆಳಗಲಿ ಎಂಬ ಉದ್ದೇಶದಿಂದ ಹೆತ್ತವರು ಕಷ್ಟಪಟ್ಟು ಅಧ್ಯಯನಕ್ಕೆ ಕಳುಹಿಸುತ್ತಾರೆ. ನಮ್ಮ ಮಕ್ಕಳು ನಮ್ಮ ಹೆಸರಿಗೆ ಕಳಂಕ ತಾರದಿರಲಿ ಎನ್ನುವ ಪ್ರಾರ್ಥನೆಯೂ ಹೆತ್ತವರದ್ದಿರುತ್ತದೆ. ಆದರೆ, ಏನು ಮಾಡುವುದು. ಹೆತ್ತವರ ಈ ಆತಂಕ ಹೆಚ್ಚಿನ ಮಕ್ಕಳಿಗೆ ಅರ್ಥವಾಗದೆ ಇರುವುದು, ಅವರಿಗೆ ಬೇಕಾದಂತೆ ಹೆತ್ತವರನ್ನು ಎದುರು ಹಾಕಿಕೊಂಡು ಬದುಕುವುದು ಮಾಡುವವರೂ ನಮ್ಮ ನಡುವೆ ಇದ್ದಾರೆ.
ಹೆಚ್ಚಾಗಿ ಪ್ರೀತಿ, ಪ್ರೇಮ, ಪ್ರಣಯದ ವಿಷಯಕ್ಕೆ ಸಂಬಂಧಿಸಿದಂತೆಯೇ ಈ ಸಮಸ್ಯೆ ಉದ್ಭವವಾಗುವುದು. ಇತ್ತೀಚೆಗೆ ಹೆತ್ತವರು ತಮ್ಮನ್ನು ಇಷ್ಟು ವರ್ಷ ಪ್ರೀತಿಸಿ, ಪೋಷಿಸಿದ್ದಾರೆ. ಅವರ ಜೀವವನ್ನೇ ತೇದು ನಮಗೆ ಉತ್ತಮ ವಿದ್ಯಾಭ್ಯಾಸ ನೀಡಿದ್ದಾರೆ ಎಂಬುದನ್ನು ಸಹ ಮರೆತು ಮಕ್ಕಳು ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ. ಅಷ್ಟೇ ಅಲ್ಲದೆ ಕೆಲವು ಮಕ್ಕಳು ಅನ್ಯ ಮತದ ಯುವಕರ ಪಾಲಾಗಿ ಕೊನೆಗೆ ದುರಂತ ಅಂತ್ಯ ಕಾಣುತ್ತಿದ್ದಾರೆ ಎನ್ನುವುದು ಸದ್ಯದ ದುರಂತ.
ಇತ್ತೀಚಿನ ಕೆಲ ಸಮಯದಿಂದ ಹಿಂದೂ ಯುವತಿಯರಲ್ಲಿ ಕೆಲವು ಮಂದಿ, ಅನ್ಯ ಮತೀಯ ಯುವಕರ ಪ್ರೇಮದ ಬಲೆಗೆ ಸಿಲುಕಿ ಹೀನಾಯವಾಗಿ, ದುರಂತ ಸಾವನ್ನು ಕಾಣುತ್ತಿದ್ದಾರೆ. ಇಂತಹ ಘಟನೆಗಳ ಬಗ್ಗೆ ದಿನ ನಿತ್ಯ ನಾವು ಮಾಧ್ಯಮಗಳಲ್ಲಿಯೂ ಕಾಣುತ್ತಿದ್ದೇವೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಯುವತಿಯರು ಮತ್ತು ಚಿಕ್ಕ ವಯಸ್ಸಿನ ಹುಡುಗಿಯರೇ ಮತಾಂಧ ಶಕ್ತಿಗಳ ಕೈ, ಬಾಯಿಗೆ ಆಹಾರವಾಗುತ್ತಿದ್ದಾರೆ ಎನ್ನುವುದು ದುರಂತ. ಇಂತಹ ದುರಂತಗಳಿಗೆ ಬಲಿಯಾಗುವ ಯುವತಿಯರ ಕಥೆ ದಾರುಣವಾದರೆ, ಇನ್ನು ಅವರನ್ನು ಪ್ರೀತಿಯಿಂದ ಸಾಕಿ ಸಲಹಿದ, ಅಷ್ಟೆತ್ತರ ಬೆಳೆಸಿದ ಹೆತ್ತವರಿಗೆ ಕರುಳೇ ಕಿತ್ತು ಬರುತ್ತಿದೆ ಎನ್ನುವಷ್ಟು ನೋವು, ಅವಮಾನ. ಸಮಾಜಕ್ಕೆ ಮುಖ ತೋರಿಸಲೂ ನಾಚಿಕೆ. ಇಂತಹ ಪರಿಸ್ಥಿತಿಯನ್ನು ಅನ್ಯ ಮತೀಯರ ಮಕ್ಕಳು ತಂದೊಡ್ಡಿ ಬಿಡುತ್ತಾರೆ.
ಸರಿ, ಹೋದ ಮರ್ಯಾದೆ ಹೋಯಿತು. ತಮ್ಮ ಕರುಳ ಕುಡಿಯಾದರೂ ಹೋದವರ ಜತೆಗೆ ಅನ್ಯೋನ್ಯವಾಗಿದ್ದಾರೋ.. ಅದೂ ಇಲ್ಲ. ಯಾವುದೋ ಆಮಿಷಕ್ಕೆ ಬಿದ್ದು ಅನ್ಯ ಧರ್ಮದ ಯುವಕನ ಜೊತೆ ಹೋದವಳಿಗೆ ಅಲ್ಲಿ ಸಿಗುವುದು ನರಕ ಸದೆಶ ಬದುಕು ಅಷ್ಟೇ. ಕೊನೆಗೆ ದುರಂತ ಸಾವು. ಆಗ ಪ್ರೀತಿಯ ನಾಟಕವಾಡಿ, ಮೋಸ ಮಾಡಿದವನ ಕರಾಳ ಮುಖವಾಡದ ಅರಿವಾಗಿ ಬಿಡುತ್ತದೆ. ಇಂತಹ ನೀಚನಿಗಾಗಿ ನಾನು ನನ್ನನ್ನು ಜೀವ ಎಂದೇ ನಂಬಿದ್ದ ಹೆತ್ತವರಿಗೆ ಮೋಸ ಮಾಡಿದ್ದೇನೆ ಎಂಬ ಅರಿವಾಗತೊಡಗುತ್ತದೆ. ಆದರೆ ಚಿಂತಿಸಿ ಫಲವಿಲ್ಲ.
ಆಲೋಚಿಸದೆ ತೆಗೆದುಕೊಂಡ ಆ ಒಂದು ನಿರ್ಧಾರ, ನಿರ್ದಾಕ್ಷಿಣ್ಯವಾಗಿ ನಿಮ್ಮ ಬದುಕನ್ನು, ನಿಮ್ಮ ಹೆತ್ತವರ ಬದೂಕು, ಸಂತೋಷ, ಕನಸುಗಳನ್ನು ಕೊಂದು ಹಾಕಿರುತ್ತದೆ.
ಆದ್ದರಿಂದ, ಯುವತಿಯರೇ.. ಲವ್ ಎಂಬ ಕರಾಳ ಜಿಹಾದ್ಗೆ ಬಲಿಯಾಗುವ ಮೊದಲು, ಅವರ ಸ್ನೇಹ ಮಾಡುವ ಮೊದಲೊಮ್ಮೆ ನಿಮ್ಮ ಹೆತ್ತವರ ಬಗೆಗೂ ಆಲೋಚಿಸಿ. ಅವರ ಕಣ್ಣೀರು ನಿಮ್ಮನ್ನು ನೆಮ್ಮದಿಯಾಗಿರಿಸದು. ಆಲೋಚಿಸಿ.