ಪ್ರಚಲಿತ

ಪಾಕ್‍ನಿಂದ ಉಗ್ರರು ಸೃಷ್ಟಿಯಾಗೋದು ಹೇಗೆ ಗೊತ್ತಾ..? ಬಯಲಾಯ್ತು ಬೆಚ್ಚಿ ಬೀಳುವ ರಹಸ್ಯ..! ಕೆಲಸವಿಲ್ವಾ,ನಾವ್ ಕೊಡ್ತೀವಿ – ಲಷ್ಕರ್

ಸದಾ ಭಾರತದ ವಿರುದ್ಧ ಕತ್ತಿಮಸೆಯುತ್ತಿರುವ ಪಾಕಿಸ್ತಾನ ಇದೀಗ ಭಾರತವನ್ನು ಹೇಗಾದರೂ ಮಾಡಿ ಈ ಬಾರಿ ಮಣಿಸಬೇಕು ಎಂಬ ಉದ್ಧೇಶದಿಂದ ಪಾಕಿಸ್ತಾನ ಈಗ ಶತಾಯ ಗತಾಯ ಪ್ರಯತ್ನದಲ್ಲಿರುವಂತೆ ಕಾಣುತ್ತಿದೆ!! ಈಗಾಗಲೇ ಗಡಿಯಲ್ಲಿ ನಮ್ಮ ಭಾರತೀಯ ಸೈನಿಕರು ಪಾಕ್‍ನ ಒಂದು ಹುಳವೂ ಭಾರತದ ಗಡಿ ದಾಟ ಬಾರದು ಎನ್ನುವ ಉದ್ಧೇಶದಿಂದ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನಮ್ಮ ದೇಶದ ಗಡಿ ಕಾಯುತ್ತಿದ್ದಾರೆ!! ಹೀಗಾಗಿ ಪಾಕಿಸ್ತಾನದ ಉಗ್ರರಿಗೂ ಗಡಿ ದಾಟಲು ಕಷ್ಟಕರವಾಗುತ್ತಿದೆ!! ಅದಲ್ಲದೆ ಈಗಾಗಲೇ ಮೋದಿಜೀ ಸರಕಾರದಿಂದ ಉಗ್ರರ ದಮನಕ್ಕೆ ಹಲವಾರು ಕ್ರಮಗಳನ್ನು ಕೂಡಾ ಕೈಗೊಂಡಿದೆ!! ಇದೀಗ ಪಾಕಿಸ್ತಾನದ ಭಯೋತ್ಪಾದಕರ ಮೂಲ ಸ್ಥಾನ ಎಂಬುದು ಜಗ್ಗಜಾಹಿರಾಗಿರುವ ಮಧ್ಯೆಯೇ, ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ತಾನ ಸದಾ ಆಶ್ರಯ ನೀಡುತ್ತಲೇ ಬರುತ್ತಿದೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. 

ಇಂಜಿನಿಯರ್‍ಗಳಿಗೆ ಉಗ್ರ ತರಬೇತಿ!!

ವಿಶ್ವಕ್ಕೆ ಕಂಟಕಟವಾಗಿರುವ ಲಷ್ಕರ್ ಈ ತೋಯ್ಬಾ ಉಗ್ರ ಸಂಘಟನೆ ಪಾಕಿಸ್ತಾನದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಮ್ಯಾನೆಜ್ ಮೆಂಟ್ ಕೋರ್ಸ್ ಗಳನ್ನು ಆರಂಭಿಸಿದ್ದು, ವಿಶ್ವಸಮುದಾಯಕ್ಕೆ ಮತ್ತೊಮ್ಮೆ ಭೀತಿ ಎದುರಾಗಿದೆ!! ಇಡೀ ತರಬೇತಿಯ ನೇತೃತ್ವವನ್ನು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಗಳಲ್ಲಿ ಒಬ್ಬನಾದ ಅಬ್ದುಲ್ ರೆಹೆಮಾನ್ ಮಕ್ಕಿ ವಹಿಸಿಕೊಂಡಿದ್ದು, ತರಬೇತಿ ಪಡೆದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಚೀನಾ ಪಾಕಿಸ್ತಾನ ಜಂಟಿ ಸಹಯೋಗದಲ್ಲಿ ನಡೆಸುತ್ತಿರುವ ಆರ್ಥಿಕ ಕಾರಿಡಾರ್ ನಲ್ಲಿ ಕೆಲಸ ದೊರಕಿಸಿ ಕೊಡಲಾಗುತ್ತದೆ. ಅವರು ತಾವು ನಿರ್ವಹಿಸುವ ಕೆಲಸಕ್ಕೆ ದೊರೆಯುವ ಸಂಭಾವನೆಯಲ್ಲಿ ಕೆಲವೊಂದಿಷ್ಟನ್ನು ತರಬೇತಿ ನೀಡಿದಕ್ಕಾಗಿ ಭಯೋತ್ಪಾದಕ ಸಂಘಟನೆಗೆ ದೇಣಿಗೆಯಾಗಿ ನೀಡಬೇಕು ಎಂಬ ಷರತ್ತನ್ನು ವಿಧಿಸಿ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ಕೇವಲ ಇಂಜನಿಯರ್ ಗಳು ತಮ್ಮ ಸಂಪಾದನೆಯ ಒಂದಿಷ್ಟು ಹಣವನ್ನು ಮಾತ್ರ ದೇಣಿಗೆಯಾಗಿ ನೀಡಬೇಕು ಎಂಬ ನಿಯಮವಿದ್ದರೂ ಸಹ, ಭವಿಷ್ಯದಲ್ಲಿ ಭಯೋತ್ಪಾದಕ ಸಂಘಟನೆಯೊಂದರಿಂದ ತರಬೇತಿ ಪಡೆದ ಇಂಜಿನಿಯರ್‍ಗಳು ಉಗ್ರರಾಗುವ ಭೀತಿ ಭಾರತದ ಗುಪ್ತರಚ ಇಲಾಖೆಗಳು ಸೇರಿ ವಿಶ್ವ ಸಮುದಾಯಕ್ಕೆ ಎದುರಾಗಿದೆ.

ಪಾಕ್ ಇಂಜಿನಿಯರುಗಳಿಗೆ ಉದ್ಯಮ ವ್ಯವಸ್ಥಾಪನೆ ಕೋರ್ಸ್ ನಡೆಸುವ ಪರಿಣತಿ ಲಷ್ಕರ್ ಉಗ್ರ ಸಂಘಟನೆಗೆ ಏನಿದೆ ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ; ಆದರೆ ಪಾಕ್ ಇಂಜಿನಿಯರ್‍ಗಳು ಚೀನ-ಪಾಕ್ ಆರ್ಥಿಕ ವಲಯದಲ್ಲಿ ಕೆಲಸ ಮಾಡುವ ಮೂಲಕ ಚೀನೀ ಇಂಜಿನಿಯರ್‍ಗಳ ಸುರಕ್ಷೆ ಮತ್ತು ಭದ್ರತೆಗೆ ಇನ್ನಷ್ಟು ಅಪಾಯ ಕಾದಿರುವುದನ್ನು ಶಂಕಿಸಲಾಗಿದೆ. ಅಂದ ಹಾಗೆ ಪಾಕ್ ಇಂಜಿನಿಯರ್‍ಗಳಿಗೆ ಮ್ಯಾನೇಜ್‍ಮೆಂಟ್ ಕೋರ್ಸ್ ನೀಡುವ ಸಂಪೂರ್ಣ ಹೊಣೆಗಾರಿಕೆಯನ್ನು  ಎಲ್‍ಇಟಿ ಉಗ್ರ ಮತ್ತು ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾದ ಅಬ್ದುಲ್ ರೆಹಮಾನ್ ಮಕ್ಕಿ ಗೆ ನೀಡಲಾಗಿದೆ. ಸುಮಾರು 300 ಪಾಕ್ ಇಂಜಿನಿಯರ್‍ಗಳು ಈಗಾಗಲೇ ಮ್ಯಾನೇಜ್‍ಮೆಂಟ್ ಕೋರ್ಸಿಗೆ ಸೇರಿದ್ದಾರೆಂದು ವರದಿಯಾಗಿದೆ!!

Image result for terrorists

ಅದಲ್ಲದೆ ಈ ಮೊದಲು  ಮೂರು ಉಗ್ರ ಸಂಘಟನೆಗಳು ಜಂಟಿ ಕಾರ್ಯಾಚರಣೆ ಕೂಡಾ ನಡೆಸಿತ್ತು!! ಅದಕ್ಕೆ ಪಾಕಿಸ್ತಾನದ ಐಎಸ್‍ಐ ಬೆನ್ನೆಲುಬಾಗಿ ನಿಂತಿರುವುದು ಕೂಡಾ ಈಗಾಗಲೇ ಬಹಿರಂಗವಾಗಿತ್ತು!! ಉಗ್ರ ಆಶಿಕ್ ಬಾಬಾ ವಿಚಾರಣೆ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಈ ಮಾಹಿತಿ ನೀಡಿದ್ದ!! ಜೈಷ್ ಎ ಮೊಹಮದ್, ಲಷ್ಕರ್ ಎ ತೊಯ್ಬಾ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು ಒಟ್ಟಾಗಿ ಭಾರತದ ವಿರುದ್ಧ ಕಾರ್ಯಾಚರಣೆಗೆ ತಂತ್ರ ರೂಪಿಸುತ್ತಿದ್ದದ್ದು ಈಗಾಗಲೇ ಬಹಿರಂಗವಾಗುತ್ತಿದ್ದ ಬೆನ್ನನ್ನೇ ಇದೀಗ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಇಂಜಿನಿಯರ್‍ಗಳನ್ನು ಭಾರತದ ವಿರುದ್ಧ ಹೋರಾಡಲು ತರಭೇತಿಯನ್ನು ನೀಡಲು ಮುಂದಾಗಿದ್ದಾರೆ!! ಭಾರತವನ್ನು ಹೇಗಾದರೂ ಮಣಿಸಬೇಕು ಎನ್ನುವ ಉದ್ಧೇಶದಿಂದ ಈ ರೀತಿ ನಿರುದ್ಯೋಗಿಗಳನ್ನು ಉಗ್ರ ಸಂಘಟನೆಗೆ ಸೇರ್ಪಡೆಗೊಳಿಸಲು ತರಭೇತಿಯನ್ನು ನೀಡಲಾಗುತ್ತಿದೆ!! ಪಾಕಿಸ್ತಾನದಿಂದ ಭಾರತದ ಗಡಿಗೆ ಉಗ್ರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಲಾಗುತ್ತಿದೆ!! ಪಾಕಿಸ್ತಾನ ಭಾರತವನ್ನು ಮಣಿಸಬೇಕು ಎಂಬ ಉದ್ಧೇಶದಿಂದ ಈಗಾಗಲೇ ಹಲವಾರು ತಂತ್ರಗಳನ್ನು ಕೂಡಾ ಮಾಡುತ್ತಿದೆ!!

ಪಾಕಿಸ್ತಾನ ಸರ್ಕಾರ ತಮ್ಮ ತಮ್ಮ ವೈಮನಸ್ಸಿನಿಂದ ಹೊಡೆದಾಡುತ್ತಿದ್ದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಇ ತಯ್ಯಬ್ಬಾ, ಜೈಷ್ ಇ ಮೊಹಮದ್ಮ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ನ ಉಗ್ರರಿಗೆ ಪಾಕಿಸ್ತಾನದ ಸೈನ್ಯದ ಮಾರ್ಗದರ್ಶನದಲ್ಲೇ ತರಬೇತಿ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ತನಿಖಾ ದಳದ ವಶದಲ್ಲಿರುವ ಉಗ್ರ ಆಶಿಕ್ ಬಾಬಾ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದ!! ಜೈಷ್ ಇ ಮೊಹಮ್ಮದ್, ಲಷ್ಕರ್ ಈ ತೋಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿ ಮೂರು ಉಗ್ರ ಸಂಘಟನೆಗಳು ಪಾಕಿಸ್ತಾನದ ಸೈನ್ಯದ ಮಾರ್ಗರ್ದಶನದಲ್ಲೇ ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. 

ಅಲ್ಲದೇ ಈ ಮೂರು ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಸಹ ಸಾಥ್ ನೀಡುತ್ತಿದೆ ಎಂದು ವಿಚಾರಣೆ ವೇಳೆ ಆಶಿಕ್ ಬಾಬಾನಿಂದ ಮಾಹಿತಿ ಹೊರಬಿದ್ದಿತ್ತು!!. ಭಾರತದಲ್ಲಿ ಉಗ್ರರ ಪ್ರತಿನಿಧಿಯಾಗಿ ಉಗ್ರ ಅಬ್ದುಲ್ಲಾ ಎಂಬಾತನನ್ನು ನೇಮಕ ಮಾಡಿದ್ದು, ಆತನ ನೇತೃತ್ವದಲ್ಲೇ ಭಾರತ ವಿರೋಧಿ ಚಟುವಟಿಕೆಗಳಿಗಾಗಿ ನೇಮಿಸಲಾಗಿತ್ತು. ಆತ ಭಾರತದ ಗಡಿಯಲ್ಲಿ ತನ್ನ ದುಷ್ಕೃತ್ಯ ನಡೆಸಲು ಸಿದ್ಧತೆ ನಡೆಸುತ್ತಿದ್ದಾನೆ ಎಂದು ಆಶಿಕ್ ತಿಳಿಸಿದ್ದ. ಎಂಟು ಸೈನಿಕರನ್ನು ಬಲಿ ಪಡೆದುಕೊಂಡಿದ್ದ 2017ರ ಪುಲ್ವಾಮಾ ಪೊಲೀಸ್ ಡೇರೆಯ ಮೇಲೆ ದಾಳಿಯ ಮಾಸ್ಟರ್ ಮೈಂಡ್ ಜೈಷ್ ಎ ಮಹಮ್ಮದ್ ಸಂಘಟನೆಯ ಮುಫ್ತಿ ವಕ್ಕಾಸ್ ಎಂಬುವುದನ್ನು ರಾಷ್ಟ್ರಿಯ ತನಿಖಾ ದಳದ ಎದುರು ಬಾಯಿ ಬಿಟ್ಟಿದ್ದ.. ಭಾರತವನ್ನು ಹೇಗಾದರೂ ಮಣಿಸಬೇಕು ಎಂಬ ದುರುದ್ಧೇಶದಿಂದ ಪಾಕಿಸ್ತಾನ ಹಲವಾರು ಯೋಜನೆಗಳನ್ನು ಮಾಡುತ್ತ ಬಂದರೂ ಎಲ್ಲವೂ ನಿಷ್ಪ್ರಯೋಜಕವಾಗುತ್ತಿದ್ದು ಪಾಕ್‍ಗೆ ಒಂದು ಕಡೆಯಲ್ಲಿ ತಲೆನೋವಾಗಲೂ ಶುರುವಾಗಿದೆ!!

Related image

ಅದಲ್ಲದೆ ಈಗಾಗಲೇ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಭಾರತದ ವಿರುದ್ಧ ಹೋರಾಡಲು ಭಾರತದ ಯುವಕರನ್ನೇ ಉಗ್ರ ಸಂಘಟನೆಗಳು ಬಳಸಲು ತೀರ್ಮಾನಿಸಿತ್ತು!! ಅದರಂತೆ ಭಾರತದ ಹಲವು ಮದರಸಾಗಳಿಂದ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿ ಅವರಿಗೆ ತರಬೇತಿ ನೀಡಲಾಗುತ್ತದೆ ಎಂದು ವಿಚಾರಣೆಯಲ್ಲಿ ಜಬೀವುಲ್ಲಾ ಬಾಯಿಬಿಟ್ಟಿದ್ದ!! ಮೊದಲು ಮದರಸಾಗಳಲ್ಲಿರುವ ಯುವಕರನ್ನು ನೇಮಕ ಮಾಡಿಕೊಳ್ಳುವುದು. ಬಳಿಕ ಅವರನ್ನು ಲಾಹೋರಿನ ತರಬೇತಿ ಕೇಂದ್ರಕ್ಕೆ ಕಳಿಸುವುದು. ಅಲ್ಲಿ ಹಫೀಜ್ ಸಯೀದ್ ಯುವಕರನ್ನು ಪ್ರಚೋದಿಸಿ ಭಾರತದ ವಿರುದ್ಧವೇ ಹೋರಾಟ ಮಾಡಲು ಸ್ಫೂರ್ತಿ ನೀಡುತ್ತಿದ್ದ ಎಂದು ಜಬೀವುಲ್ಲಾ ತಿಳಿಸಿದ್ದ!!

ಅಷ್ಟೇ ಅಲ್ಲ, ತರಬೇತಿ ವೇಳೆ ಆಧುನಿಕ ತಂತ್ರಜ್ಞಾನದ ಬಳಕೆ, ಹೆಚ್ಚಿನ ತೂಕ ಹೊತ್ತು ದುರ್ಗಮ ಹಾದಿಯಲ್ಲಿ ಸಂಚರಿಸುವುದು, ಹಿಮ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವುದು, ಶಸ್ತ್ರಾಸ್ತ್ರ ಬಳಸುವುದು ಸೇರಿ ಹಲವು ವಿಧದಲ್ಲಿ ಮದರಸಾದಿಂದ ನೇಮಕವಾದ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು ಎಂದು ಜಬೀವುಲ್ಲ ಹೇಳಿದ್ದ!! ಉಗ್ರ ಜಬೀವುಲ್ಲಾನ ಈ ಹೇಳಿಕೆಯಿಂದ ಭಾರತದಲ್ಲಿರುವ ಮದರಸಾಗಳು ಉಗ್ರ ಸಂಘಟನೆಗಳಿಗೆ ಯುವಕರನ್ನು ಸರಬರಾಜು ಮಾಡುವ ಕುರಿತು ಅನುಮಾನ ಮೂಡುತ್ತಿದ್ದು, ಇಂತಹ ಮದರಸಾಗಳನ್ನು ಹುಡುಕಿ ನಿರ್ನಾಮ ಮಾಡಬೇಕು. ಇಲ್ಲದಿದ್ದರೆ, ಇವರೇ ಮುಂದೆ ದೇಶಕ್ಕೆ ಕಂಟಕವಾಗುವ ಲಕ್ಷಣಗಳಿದ್ದು ಅದಕ್ಕೆ ಈಗಾಗಲೇ ಉತ್ತರ ಪ್ರದೇಶದಲ್ಲಿರುವ ನಕಲಿ  ಮದರಾಸಗಳನ್ನು ಕಿತ್ತೊಗೆಯಲಾಗಿತ್ತು!!

ಹೀಗೆ ಭಾರತವನ್ನು ಮಣಿಸಬೇಕು ಎಂದು ಪಾಪಿ ಪಾಕಿಸ್ತಾನಿಗಳು ಒಂದೊಂದು ಮಾಸ್ಟರ್ ಪ್ಲಾನ್ ಅನ್ನೇ ಮಾಡುತ್ತಿದೆ!! ಆದರೆ  ನಮ್ಮ ಭಾರತೀಯ ಸೈನಿಕರು ತಕ್ಕ ಮದ್ದನ್ನು ಅರೆಯುವ ಮೂಲಕ ಪಾಕಿಸ್ತಾನದ ಸೊಕ್ಕನ್ನು ಮುರಿಯುತ್ತನೇ ಇದ್ದಾರೆ!!

  • ಪವಿತ್ರ
Tags

Related Articles

Close