ಪ್ರಚಲಿತ

ಬಿಜೆಪಿ ಸರ್ಕಾರದಿಂದ ಮಾತ್ರ ನಮ್ಮ ಸುರಕ್ಷತೆ ಸಾಧ್ಯ: ಬಿಜೆಪಿಗೆ ಮತ ನೀಡಲು ಹರ್ಷ ಸಹೋದರಿ ಮನವಿ

ಬಿಜೆಪಿ ಸರ್ಕಾರದಿಂದ ಮಾತ್ರ ನಮ್ಮ ಸುರಕ್ಷತೆ ಸಾಧ್ಯ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವಂತೆ ಮಾಡೋಣ ಎಂದು ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಹರ್ಷ ಅವರ ಸಹೋದರಿ ಅಶ್ವಿನಿ ಅವರು ಹೇಳಿದ್ದಾರೆ.

ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರು ಪ್ರಚಾರ ಕಾರ್ಯದ ಸಲುವಾಗಿ ಹರ್ಷ ಮನೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಹರ್ಷ ಅವರ ಸಹೋದರಿ ಈ ಮಾತುಗಳನ್ನು ಹೇಳಿದ್ದಾರೆ. ಹಾಗೆಯೇ ಮತದಾರರು ಬಿಜೆಪಿಯನ್ನು ಬೆಂಬಲಿಸುವಂತೆಯೂ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ ನಾಯಕ ಈಶ್ವರಪ್ಪ ಅವರ ಆಪ್ತ ಚನ್ನಬಸಪ್ಪ ಅವರಿಗೆ ಟಿಕೇಟ್ ನೀಡಿರುವುದು ಸಂತಸದ ವಿಷಯ. ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆವರು ಬಿಜೆಪಿ ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದು, ಇಡೀ ರಾಜ್ಯದ ಜನರು ಬಿಜೆಪಿಯನ್ನು ಅಧಿಕಾರಕ್ಕೇರಿಸಲು ತಮ್ಮ ಮತಗಳನ್ನು ನೀಡಬೇಕು. ಬಿಜೆಪಿ ಬಂದರೆ ನಮ್ಮೆಲ್ಲರ ಸುರಕ್ಷತೆ ಸಾಧ್ಯ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ ಇದು ಹರ್ಷನ ಕುಟುಂಬ ಜನರಲ್ಲಿ ಮಾಡುತ್ತಿರುವ ವಿನಂತಿ ಎಂದು ಹೇಳಿದ್ದಾರೆ. 

ಬಿಜೆಪಿ ಕುಟುಂಬಕ್ಕೆ ನಾನೂ ಸೇರಿದ್ದೇನೆ. ಪ್ರಧಾನಿ ಮೋದಿ ಅವರು ನಮ್ಮೆಲ್ಲರ ಕುಟುಂಬದಲ್ಲಿ ಒಬ್ಬರಾಗಿದ್ದಾರೆ. ನಾವೆಲ್ಲರೂ ಜೊತೆಯಾಗಿ ಬಿಜೆಪಿ ಕುಟುಂಬವನ್ನು ಗೆಲ್ಲಿಸೋಣ ಎಂದು ಅವರು ಹೇಳಿದ್ದಾರೆ.

Tags

Related Articles

Close