ಪ್ರಚಲಿತ

ಮತದಾನ ಮಾಡುವ ಮುನ್ನ ಸ್ವಲ್ಪ ಈ ವಿಚಾರ ನೆನಪಿಸಿಕೊಳ್ಳಿ.! ನಿಮ್ಮ ಒಂದು ಮತ ಧರ್ಮದ ಉಳಿವಿಗಾಗಿರಲಿ.!

ಭಾರೀ ಕುತೂಹಲದಿಂದ ಕಾಯುತ್ತಿದ್ದ ರಾಜ್ಯ ವಿಧಾನಸಭಾ ಚುನಾವಣೆ ಬಂದೇ ಬಿಟ್ಟಿತಲ್ಲಾ..! ಇಂದು ರಾತ್ರಿ ಬೆಳಗಾಗುವುದರಲ್ಲಿ ಚುನಾವಣೆ ನಡೆಯಲಿದೆ. ಐದು ವರ್ಷದಲ್ಲಿ ಸಿದ್ದರಾಮಯ್ಯನವರ ದುರಾಡಳಿತಕ್ಕೆ ಬೇಸತ್ತ ರಾಜ್ಯದ ಜನತೆ ನಾಳೆ ಹೊಸ ಪರ್ವಕ್ಕೆ ಕಾಲಿಡಲಿದ್ದಾರೆ. ಬೆಳಿಗ್ಗೆಯಿಂದಲೇ ಆರಂಭವಾಗುವ ಮತದಾನ ಸಂಜೆವರೆಗೆ ನಡೆಯಲಿದೆ.‌ ಮತದಾನ ಮಾಡಬೇಕು , ಆದರೆ ಯಾರಿಗೆ ಎಂಬುದು ಆಲೋಚಿಸಿ ಮತದಾರ ಬಾಂಧವರೇ…!

* ಮತದಾನ ಮಾಡಿ ಆದರೆ, ಕೊಲೆಗಡುಕರ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಸರಕಾರಿ ಅಧಿಕಾರಿಗಳಿಗೆ ಕಿರುಕುಳ ನೀಡಿ ಅವರನ್ನು ಕೊಂದ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಅಧಿಕಾರಕ್ಕೆ ಏರುತ್ತಲೇ ಅಹಂಕಾರದಿಂದ ಹಿಂದೂ ಸಂಘಟನೆಗಳ ವಿರುದ್ಧ ಸಮರ ಸಾರಿದ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಹಂತಕರನ್ನು ರಕ್ಷಿಸಿದ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಭ್ರಷ್ಟರಿಗೆ ಕಂಟಕವಾಗಿದ್ದ ಲೋಕಾಯುಕ್ತ ಇಲಾಖೆಯನ್ನೇ ನಾಶ ಮಾಡಿದವರಿಗೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ತಮ್ಮ ಲಾಭಕ್ಕಾಗಿ ಸರಕಾರಿ ಅಧಿಕಾರಿಗಳನ್ನು ತಮಗಿಷ್ಟ ಬಂದಂತೆ ವರ್ಗಾವಣೆ ಮಾಡಿದ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಹಿಂದೂಗಳ ಮತವೇ ಬೇಡ , ನಮ್ಮದು ಮುಸ್ಲಿಂ ಪಕ್ಷ ಎಂದ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಕೋಟಿ ಕೋಟಿ ಹಗರಣ ಮಾಡಿ ಸಿಕ್ಕಿಬಿದ್ದವರಿಗೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ , ಆದರೆ ಗೋಕಳ್ಳರಿಗೆ ಬೆಂಬಲ ನೀಡುವ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಪೊಲೀಸರ ಕೈಯಿಂದ ಸತ್ತ ಗೋಕಳ್ಳನಿಗೆ ಪರಿಹಾರ ಧನ ನೀಡಿದ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಡ್ರಗ್ ಮಾಫಿಯಾದ ವಿರುದ್ಧ ಹೋರಾಡಿದ ಜುಬೈರ್‌ನಂತಹ ಯುವಕನ ಕೊಲೆಗೆ ಕಾರಣರಾದವರಿಗೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಲಾಗದ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಶಾಸಕರ ಮಕ್ಕಳು ಗೂಂಡಾಗಳಂತೆ ವರ್ತಿಸಿ ಸಾಮಾನ್ಯ ಜನರಿಗೆ ತೊಂದರೆ ಕೊಡುವ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಭಗವಾಧ್ವಜ ಹಿಡಿದನೆಂಬ ಕಾರಣಕ್ಕೆ ಪರೇಶ್ ಮೇಸ್ತಾನನ್ನು ಬಿಸಿ ಎಣ್ಣೆ ಹಾಕಿ ಕೊಂದ ಪಾಪಿಗಳ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಕೇಂದ್ರ ಸರಕಾರ ನೀಡಿದ ಅನುದಾನವನ್ನು ತಮ್ಮ ಅಭಿವೃದ್ಧಿ ಎಂದು ಹೇಳಿಕೊಂಡು ತಿರುಗುವ ಬೊಗಳೆ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಸಾವಿರಾರು ರೈತರ ಆತ್ಮಹತ್ಯೆಗೆ ಕಾರಣವಾದ ರೈತ ವಿರೋಧಿ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ೨೩ ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಕೊಲೆಗೆ ಕಾರಣರಾದ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಡಿಕೆ ರವಿ ಅಂತಹ ದಕ್ಷ ಅಧಿಕಾರಿಗಳ ಸಾವಿಗೆ ಕಾರಣರಾರ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

* ಮತದಾನ ಮಾಡಿ ಆದರೆ, ಇಡೀ ದೇಶದಲ್ಲೇ ಕರ್ನಾಟಕವನ್ನು ಗೂಂಡಾ ಸಿಟಿಯನ್ನಾಗಿ ಮಾರ್ಪಾಡಿಸಿರುವ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

ಕೊನೆಯದಾಗಿ ಮತದಾನ ಮಾಡಿ ಆದರೆ , ಹಿಂದೂ ಧರ್ಮವೇ ಇಲ್ಲ , ಶ್ರೀ ರಾಮ ಒಬ್ಬ ಹೆಣ್ಣುಬಾಕ , ನಾನು ಗೋಮಾಂಸ ತಿನ್ನುತ್ತೇನೆ ಕೇಳೋಕೆ ನೀವ್ಯಾರು , ಮಾಂಸ ತಿಂದು ದೇವಾಲಯಗಳಿಗೆ ಹೋಗುತ್ತೇನೆ ಕೇಳೋಕೆ ನೀವ್ಯಾರು ಎಂದು ಅಹಂಕಾರದಿಂದ ವರ್ತಿಸುತ್ತಿರುವ ಪಕ್ಷಕ್ಕೆ ಮಾತ್ರ ನಿಮ್ಮ ಮತ ಬೀಳದಿರಲಿ.

ಯೋಚಿಸಿ ಮತದಾನ ಮಾಡಿ

— ಸಾರ್ಥಕ್ ಶೆಟ್ಟಿ

Tags

Related Articles

Close