ಪ್ರಚಲಿತ

ಪಾಕಿಸ್ತಾನವನ್ನು ಭೂಪಟದಿಂದಲೇ ಕಿತ್ತೆಸೆಯುತ್ತೇವೆ: ಯೋಗಿಜೀಯ ಎಚ್ಚರಿಕೆ!

ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರಕ್ಷಣಾ ಕಾರಿಡಾರ್‌ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾತನಾಡಿದ್ದು, ಇಲ್ಲಿ ತಯಾರಾಗುವ ಫಿರಂಗಿಗಳು ಘರ್ಜನೆ ಮಾಡಿದರೆ, ಪಾಕಿಸ್ತಾನವು ಪ್ರಪಂಚದ ಭೂಪಟದಿಂದಲೇ ಮಾಯವಾಗಲಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಚಿತ್ರ ಕೂಟ ದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಹಾಗೆಯೇ ರಕ್ಷಣಾ ಕಾರಿಡಾರ್ ಸಹ ನಿರ್ಮಾಣವಾಗಲಿದೆ. ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಭಾರತ ವಿದೇಶಗಳನ್ನು ಅವಲಂಬಿಸುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ರಕ್ಷಣಾ ಕಾರಿಡಾರ್ ಅನುಕೂಲಕಾರಿಯಾಗಲಿದೆ ಎಂದು ಯೋಗಿ ತಿಳಿಸಿದ್ದಾರೆ.

ಪಾಕಿಸ್ತಾನ ಈಗಾಗಲೇ ಭಿಕಾರಿಯಾಗಿದ್ದು, ಮುಂದಿನ ದಿನಗಳಲ್ಲೇನಾದರೂ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆ ಸೇರಿದಂತೆ, ಕಾಲು ಕರೆದುಕೊಂಡು ಭಾರತವನ್ನು ಕೆ ನಕಲು ಬಂದಲ್ಲಿ ಉತ್ತರ ಪ್ರದೇಶದಲ್ಲಿ ತಯಾರಾಗುವ ಫಿರಂಗಿಗಳು ಸದ್ದು ಮಾಡುವುದು ಮಾತ್ರವಲ್ಲದೆ, ಪಾಕಿಸ್ತಾನ ಎಂಬುದೊಂದು ರಾಷ್ಟ್ರದ ಕುರುಹು ಸಹ ಉಳಿದಂತೆ ಮಾಡುವಷ್ಟು ಶಕ್ತಿಶಾಲಿಗಳಾಗಿ ಈ ಸ್ವದೇಶಿ ನಿರ್ಮಿತ ಫಿರಂಗಿಗಳು ತಯಾರಾಗಲಿವೆ ಎನ್ನುವ ಅರ್ಥದಲ್ಲಿ ಯೋಗಿ ಆದಿತ್ಯನಾಥ್ ಅವರು ರಕ್ಷಣಾ ಕಾರಿಡಾರ್‌ಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.

ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ವೇ ನಿರ್ಮಾಣವನ್ನು ಸಹ ಮಾಡಲಾಗಿದ್ದು, ಇದರಿಂದಾಗಿ ಚಿತ್ರಕೂಟ ಮತ್ತು ದೆಹಲಿ ನಡುವಿನ ಪ್ರಯಾಣದಲ್ಲಿ ಐದು ಗಂಟೆಗಳಷ್ಟು ಸಮಯ ಕಡಿಮೆಯಾಗಲಿರುವುದಾಗಿಯೂ ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಭಾರತ ಅಭಿವೃದ್ಧಿಯಾಗುತ್ತಿದೆ ಎನ್ನುವುದಕ್ಕೆ ಪ್ರಧಾನಿ ಮೋದಿ ಅವರು ಕೇಂದ್ರದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಬಹಳಷ್ಟು ಸಾಕ್ಷ್ಯಗಳು ನಮ್ಮ ಮುಂದೆ ತೆರೆದುಕೊಳ್ಳುತ್ತಿವೆ. ರಕ್ಷಣಾ ವಲಯದಲ್ಲಿಯೂ ಭಾರತ ದಾಖಲೆ ಬರೆಯುತ್ತಿದೆ ಎನ್ನುವುದಕ್ಕೆ ಸ್ವದೇಶಿ ನಿರ್ಮಿತ ರಕ್ಷಣಾ ವ್ಯವಸ್ಥೆಗಳೇ ದಾಖಲೆ ಒದಗಿಸುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close