ಪ್ರಚಲಿತ

ಪ್ರಧಾನ ಮಂತ್ರಿ ಮೋದಿಯನ್ನು ಕಂಡಾಗ ನನ್ನ ತಂದೆಯನ್ನು ಕಂಡಂತೆ ಎಂದು ಮೋದೀಜಿ ನಾಯಕತ್ವವನ್ನು ಹೊಗಳಿದ ಲಾಲ್ ಬಹದ್ದೂರ್ ಶಾಸ್ತ್ರೀ ಮಗ!

ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಭವಿಷ್ಯವನ್ನೇ ಬದಲಾಯಿಸುವ ಕ್ರಾಂತಿಕಾರಿ ನಾಯಕರಾಗಿ ಹೊರಹೊಮ್ಮಿದ್ದಲ್ಲದೇ, ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಕೂಡ… ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಿದ ಸಮಯದಿಂದಲೂ ನಮ್ಮ ದೇಶ ಸದೃಢತೆ ಹಾಗೂ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ಅದೆಷ್ಟೋ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಸಾಗುತ್ತಿದ್ದಾರೆ!! ಅಲ್ಲದೇ ತಾನು ದೇಶಕ್ಕೋಸ್ಕರ, ದೇಶದ ಜನತೆಗೋಸ್ಕರ ಮಾಡಿದ ಕೆಲಸಗಳ ಬಗ್ಗೆ ಯಾವತ್ತೂ, ಎಲ್ಲಿಯೂ ಕೂಡ ಹೇಳಿಕೊಳ್ಳದೆ ಇರುವ ವ್ಯಕ್ತಿ!! ಇನ್ನು ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿಂದ ಯಾವುದೇ ಕೆಲಸವನ್ನು ಕೂಡಾ ಮಾಡಲ್ಲ!! ಅಷ್ಟೇ ಅಲ್ಲದೇ ತಾವು ಮಾಡಿದ ಅಭಿವೃದ್ದಿ ಕೆಲಸಗಳ ಬಗ್ಗೆ ಎಲ್ಲಿಯೂ ಕೂಡ ಹೇಳಿದ್ದೇ ಇಲ್ಲ!! ಎಲ್ಲರೂ ಒಂದೇ ಎನ್ನುತ್ತಾ ಯಾವ ಜಾತಿ ಧರ್ಮ ಎಂದು ಎಂದಿಗೂ ಭೇದ ಭಾವ ಮಾಡದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುವ ಪ್ರಧಾನ ಸೇವಕ ಮೋದೀಜೀ!! ಅವರ ಕನಸು ಕೇವಲ ದೇಶದ ಅಭಿವೃದ್ಧಿ ಮಾತ್ರ!! ಎಲ್ಲೇ ಹೋದರೂ ಮೋದಿಜೀಯನ್ನು ದೇವರಂತೆ ಆರಾಧಿಸುತ್ತಾರೆ!! ತಮಗೆ ಸಮಯ ಸಿಕ್ಕಾಗಲೆಲ್ಲಾ ವಿದೇಶಿ ಪ್ರವಾಸವನ್ನು ಕೈಗೊಂಡು ಭಾರತ ಮತ್ತು ಹೊರ ರಾಷ್ಟ್ರಗಳೊಂದಿಗೆ ಸಂಂಧವನ್ನು ವೃದ್ಧಿಗೊಳಿಲು ಶ್ರಮ ಪಡುತ್ತಾರೆ!!

Related image

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಯಾಕೆಂದರೆ ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ. ಕನಸನ್ನು ನನಸಾಗಿ ಪರಿವರ್ತಿಸುವ ಸಾಮಥ್ರ್ಯವುಳ್ಳ ಧೀಮಂತ. ಭಾರತದ ಔನ್ನತ್ಯದ ಬಗ್ಗೆ ಮೋದಿ ಕಂಡಿರುವ ಕನಸುಗಳಲ್ಲಿ ಕೃಷಿ ಸಂಶೋಧನೆ, ಪರಿಸರದ ರಕ್ಷಣೆ, ಉದ್ಯಮಕ್ಕೆ ಪೂರಕ ಮೂಲಸೌಕರ್ಯ ಮತ್ತು ಜಾಗತಿಕ ಹಣ ಹೂಡಿಕೆ ಪ್ರಮುಖವಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಜೀವನದಲ್ಲಿ ಅನಂತ ಆನಂದವನ್ನು ಹೊಂದಿರುವ ಸಂಪದ್ಭರಿತ ಸಮಾಜದ ಕನಸು ಹೊತ್ತಿದ್ದಾರೆ!!! ಅತ್ಯಂತ ಶಿಸ್ತಿನ ಸಿಪಾಯಿ ಆಗಿರುವ ನರೇಂದ್ರ ಮೋದಿ ಅವರು ಅದ್ಭುತ ಶಕ್ತಿ ಮತ್ತು ಕಾರುಣ್ಯದ ಪ್ರತೀಕವೂ ಆಗಿದ್ದಾರೆ. ಮೋದಿಜೀ ಅಧಿಕಾರ ಸ್ವೀಕರಿಸಿದಾಗಿನಿಂದ ಮಾಡಿದ ಅಭಿವೃದ್ಧಿ ಒಂದಾ ಎರಡಾ? ಆದರೆ ಕೆಲ ಜನರು ಇವರ ಅಧಿಕಾರದ ವರ್ಚಸ್ಸನ್ನು ನೋಡಿ ಸುಖಾಸುಮ್ಮನೆ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಾರೆ!! ಆದರೆ ಮೋದಿಜೀ ಯಾರ ಕೊಂಕು ಮಾತಿಗೂ ಬಗ್ಗುವವರಲ್ಲ!! ಮೋದಿಜೀ ಮುಂದೆ ವಿರೋಧ ಪಕ್ಷದ ಯಾವನೂ ನಿಲ್ಲಲೂ ಸಾಧ್ಯವೇ ಇಲ್ಲ ಎಂಬುವುದನ್ನು ಈಗಾಗಲೇ ಮೋದೀಜೀ ತನ್ನ ಕೆಲಸದ ಮೂಲಕ ತೋರಿಸಿಕೊಟ್ಟಿದ್ದಾರೆ!! ಇದೀಗ ಮೋದಿಜೀಯನ್ನು ನನ್ನ ತಂದೆಯಂತೆ ಇವರೊಬ್ಬ ಮಹಾನ್ ವ್ಯಕ್ತಿ ಎಂದು ಹಾಡಿ ಹೊಗಳಿದ ವ್ಯಕ್ತಿ ಯಾರು ಗೊತ್ತೇ?!!

Related image

ಮೋದಿಜೀಯನ್ನು ಹಾಡಿ ಹೊಗಳಿದ ಲಾಲ್ ಬಹದ್ದೂರ್ ಶಾಸ್ತ್ರೀ ಮಗ!!

ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀ, ಮೋದಿಯವರವರನ್ನು ಕಂಡರೆ ನನ್ನ ತಂದೆಯನ್ನು ಕಂಡಂತಾಗುತ್ತದೆ ಎಂದು ಹೇಳಿದ್ದಾರೆ!! ಕಾಂಗ್ರೆಸ್ ಹಾಗೂ ಬಲಪಂಧೀಯ ಆರ್‍ಎಸ್‍ಎಸ್ ಜನಸಂಘ ಇವೆರಡು ಬಣಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡ ಕಾಂಗ್ರೆಸ್‍ನ ಕೆಲವೇ ಕೆಲವು ನಾಯಕರಲ್ಲಿ ಶಾಸ್ತ್ರೀಯವರು ಕೂಡಾ ಪ್ರಮುಖರು!! 1965ರಲ್ಲಿ ಜನಸಂಘದ ಸಂಸ್ಥಾಪಕ ಪಿಟಿ ದೀನ್ ದಯಾಳ್ ಉಪಾಧ್ಯಾಯರು ಶಾಸ್ತ್ರೀಜಿಯವರ ನಾಯಕತ್ವದ ಜವಾಬ್ದಾರಿಯನ್ನು ಕಂಡು ಅವರನ್ನು ಜನ್ ನಾಯಕ ಎಂದು ಬಣ್ಣಿಸಿದ್ದರು!! ಅದೇ ರೀತಿಯಲ್ಲಿ ಇದೀಗ ಶಾಸ್ತ್ರೀಯವರು ಮಗ ಸುನೀಲ ಶಾಸ್ತ್ರೀಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ!! ಆಗ್ರಾದಲ್ಲಿ ಸುನೀಲರನ್ನು ಭೇಟಿಯಾಗಿ ಅಭಿನಂದಿಸಲು ಬಂದಿದ್ದ ಕಾಂಗ್ರೆಸ್ ನಾಯಕರುಗಳಿಗೆ ಈ ಹೇಳಿಕೆಯಿಂದ ದಿಗ್ಭ್ರಮೆ ಉಂಟಾಗಿದೆ!!

 

ತಾಶ್ಕೆಂಟ್‍ನಲ್ಲಿ ತಂದೆ ಅಕಾಲಿಕವಾಗಿ ನಿಧನರಾದಾಗ, ನಾನು ಮತ್ತು ನನ್ನ ಮೂವರು ಸಹೋದರರು ಒಂದು ಕೊಠಡಿ ಹಾಗೂ ಒಂದು ಕೋಟನ್ನು ಇಟ್ಟು ಹೋದರು!! ನಾವು ಅಲ್ಲಿಯೇ ನಮ್ಮ ಜೀವನವನ್ನು ನಡೆಸಿದೆವು ಎಂದು ಶಾಸ್ತ್ರಿ ಹೇಳಿದ್ದಾರೆ!! ನಮ್ಮ ತಂದೆ ಸರಳ ಜೀವಿ ಯಾವುದೇ ವಯಕ್ತಿಕ ಲಾಭವಿಲ್ಲದೇ ಕೇವಲ ದೇಶದ ಏಳಿಗೆಗಾಗಿ ದುಡಿದು ಭಾರತವನ್ನು ಹೆಮ್ಮೆ ಪಡುವಂತೆ ಮಾಡುವಲ್ಲಿ ತಮ್ಮ ಜೀವನವನ್ನು ಮಡುಪಾಗಿಟ್ಟಿದ್ದರು!! ಪ್ರಧಾನಿ ಮೋದಿ ಕೂಡಾ ನಮ್ಮ ತಂದೆಯಂತೆಯೇ ಕೆಲಸ ಮಾಡುತ್ತಿದ್ದಾರೆ!! ಜಗತ್ತಿನಾದ್ಯಂತ ಭಾರತದ ಗೌರವವನ್ನು ಹೆಚ್ಚುಸುತ್ತಿದ್ದಾರೆ!! ಜಗತ್ತಿನಾದ್ಯಂತ ಭಾರತದ ಗೌರವವನ್ನು ಹೆಚಿಸುತ್ತಿದ್ದಾರೆ!! ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಸಬ್ ಕಾ ಸಾಥ್ ಸಬ್ ಕಾ ವಿಕಾಸ್‍ನಂತಹ ಸಮಗ್ರ ಬೆಳವಣಿಗೆಯ ಯೋಜನೆಗಳನ್ನು ಪ್ರಧಾನಿ ರೂಪಿಸುತ್ತಿದ್ದಾರೆ ಎಂದು ಸುನೀಲ ಶಾಸ್ತ್ರಿ ಹೇಳಿದ್ದಾರೆ!! ಇಂದಿನ ಭಾರತೀಯ ರಾಜಕೀಯ ರಂಗದಲ್ಲಿ ಪ್ರಧಾನಿ ಮೋದಿ ಪರ್ಯಾಯವಾಗಿ ಯಾರು ಇಲ್ಲ ಹಾಗೂ 2019 ರ ಚುನಾವಣೆಯಲ್ಲಿ ಬಿಜೆಯ ದಾಖಲೆಯ ಸ್ಥಾನಗಳೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಭವಿಷ್ಯ ನಡಿದರು!! ಮೋದಿಜೀಯ ಪ್ರಭಾವ ಯಾವ ರೀತಿ ಬೆಳೆದಿದೆ ಎಂದರೆ ಸ್ವತಃ ಶಾಸ್ತ್ರೀಜೀಯ ಮಗನೇ ಹೇಳಬೇಕಾದರೆ ಇಂತಹ ಮಾತುಗಳು ಮೋದೀಜೀ ಗೆಲುವು ಸಿಕ್ಕಷ್ಟೇ ಖುಷಿಕೊಡಬಹುದು!!

Related image

ನರೇಂದ್ರ ಮೋದಿ ಕೇವಲ ರಾಜಕಾರಣಿ ಯಷ್ಟೇ ಅಲ್ಲ. ಅವರೊಬ್ಬ ಗುರು, ಮಾರ್ಗದರ್ಶಕ. ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಆಶಾಕಿರಣ. ಅದೆಷ್ಟೋ ಜನರು ಅವರನ್ನೇ ತಮ್ಮ ಬದುಕಿನ ಆದರ್ಶ ವ್ಯಕ್ತಿಯನ್ನಾಗಿ ಆರಾಧಿಸುತ್ತಾರೆ. ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ದಾಮೋದರ ದಾಸ್ ಮೋದಿ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿ ಯಾಗಿ ಬೆಳೆದು ನಿಂತಿರುವುದು ಸಾಮಾನ್ಯ ಸಂಗತಿಯಲ್ಲ!! ಮೋದೀಜೀಯನ್ನು ಹೊಗಳಿದರೆ ಇಡೀ ಭಾರತವನ್ನು ಹೊಗಳಿದಂತೆ ಎಲ್ಲರಿಗೂ ಖುಷಿಯಾಗುತ್ತದೆ!! ಜೈ ಮೋದೀಜೀ!!

source: http://news13.in/archives/104397

  • ಪವಿತ್ರ
Tags

Related Articles

Close