ಪ್ರಚಲಿತ

ಕೇಂದ್ರದ ಮಹತ್ವದ ಯೋಜನೆಯೊಂದಕ್ಕೆ WHO ಮೆಚ್ಚುಗೆ

ಹರ್ ಘರ್ ಜಲ್ ಜೀವನ್ ಮಿಷನ್ ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ‘ಸಾರ್ವಜನಿಕ ಆರೋಗ್ಯ ಮತ್ತು ಹಣಕಾಸಿನ ಉಳಿತಾಯದ ಮೇಲೆ ಈ ಹರ್ ಘರ್ ಜಲ್ ಯೋಜನೆಯು ಗಮನಾರ್ಹವಾದ ಪರಿಣಾಮವನ್ನು ಬೀರಿದೆ’ ಎಂಬುದಾಗಿ ತಿಳಿಸಿದೆ.

ಭಾರತದ ಎಲ್ಲಾ ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಸದುದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹರ್ ಘರ್ ಜಲ್ ಕಾರ್ಯಕ್ರಮದ ವರದಿಯ ಪ್ರಕಾರ, ದೇಶದ ಎಲ್ಲಾ ಮನೆಗಳಿಗೆ ಸುರಕ್ಷಿತವಾಗಿ ನಿರ್ವಹಿಸಲಾದ ಕುಡಿಯುವ ನೀರನ್ನು ಖಾತ್ರಿಪಡಿಸಿಕೊಳ್ಳುವುದರಿಂದ, ಅತಿಸಾರ ರೋಗದಿಂದ ಉಂಟಾಗುವ ಸುಮಾರು ನಾಲ್ಕು ಲಕ್ಷ ಸಾವುಗಳನ್ನು ತಪ್ಪಿಸಬಹುದು. ಹಾಗೆಯೇ ಈ ಕಾಯಿಲೆಗೆ ಸಂಬಂಧಿಸಿದ ಸುಮಾರು ೧೪ ಲಕ್ಷ ಅಂಗವೈಕಲ್ಯಗಳನ್ನು ತಪ್ಪಿಸಿ, ಆಯಸ್ಸು ಹೆಚ್ಚಿಸಿಕೊಳ್ಳಬಹುದು. ಈ ಯೋಜನೆ ಸುಮಾರು ೧೦೧ ಶತಕೋಟಿ ಯುಎಸ್ ಡಾಲರ್ಗಳಷ್ಟು ಅಂದಾಜು ವೆಚ್ಚದ ಉಳಿತಾಯಕ್ಕೂ ಕಾರಣವಾಗಿದೆ ಎಂದು ತಿಳಿಸಿದೆ.

ಈ ಯೋಜನೆಯ ವರದಿಯು ಅತಿಸಾರ ರೋಗಗಳ ಮೇಲೆ ಕೇಂದ್ರೀಕೃತವಾಗಿದೆ. ನೀರು, ಸ್ವಚ್ಛತೆ, ನೈರ್ಮಲ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟಾರೆಯಾಗಿ ರೋಗದ ಹೊರೆಗೆ ಗಮನಾರ್ಹವಾದ ಮುಕ್ತಿಯನ್ನು ಈ ಯೋಜನೆ ನೀಡುತ್ತದೆ.

Tags

Related Articles

Close