ಪ್ರಚಲಿತ

ಪರೇಶ್ ಮೇಸ್ತಾನ ನಾಡಲ್ಲಿ ಯೋಗಿ ಅಬ್ಬರ ಆರಂಭ..! ಜಿಹಾದಿಗಳ ಹುಟ್ಟಡಗಿಸಲು ಬಿಜೆಪಿ ಗೆಲ್ಲಿಸಿ ಎಂದ ಫೈರ್ ಬ್ರಾಂಡ್..!

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಆಗಮಿಸುತ್ತಿರುವ ರಾಷ್ಟ್ರೀಯ ನಾಯಕರ ದಂಡು ಕರ್ನಾಟಕದಲ್ಲಿ ಆರ್ಭಟಿಸುತ್ತಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರುಗಳು ರಾಜ್ಯದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು ತಮ್ಮ ಪಕ್ಷದ ಸ್ಟಾರ್ ಪ್ರಚಾರಕರನ್ನು ಕರೆಸಿ ತಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಮೊನ್ನೆಯಷ್ಟೇ ಕರ್ನಾಟಕದಲ್ಲಿ ಘರ್ಜಿಸಿದ್ದ ಪ್ರಧಾನಿ ಮೋದಿ ಒಂದೇ ದಿನ ಸತತ ಮೂರು ಸಮಾವೇಶಗಳಲ್ಲಿ ಭಾಗವಹಿಸಿ ಇಡೀ ರಾಜ್ಯದಲ್ಲೇ ಬಿಜೆಪಿಗೆ ಹೊಸ ಹುರುಪು ತುಂಬಿದ್ದರು. ಇದೀಗ ಮೋದಿ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ , ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ರಾಜ್ಯದತ್ತ ಆಗಮಿಸಿದ್ದು , ಕಾಂಗ್ರೆಸ್ ವಿರುದ್ಧ ಘರ್ಜಿಸಿದ್ದಾರೆ..!

ಕನ್ನಡದಲ್ಲೇ ಮಾತು ಆರಂಭಿಸಿದ ಯೋಗಿ..!

ಬಿಜೆಪಿ ಪರ ಪ್ರಚಾರಕ್ಕಾಗಿ ಇಂದು ಕರ್ನಾಟಕಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್ , ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ವಿಕಾಸಾಶ್ರಮ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತು ಆರಂಭಿಸಿದ ಯೋಗಿ ‘ಶಿರಸಿಯ ಜನತೆಗೆ ನನ್ನ ನಮನಗಳು’ ಎಂದು ಕನ್ನಡದಲ್ಲೇ ಮಾತು ಕೇಳುತ್ತಿದ್ದಂತೆ ಸೇರಿದ್ದ ಸಹಸ್ರಾರು ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಇದುವೇ ಕೊನೆಯ ಆಡಳಿತ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ ಯೋಗಿ, ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ನಾನು ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಿಂದ ಬಂದಿದ್ದೇನೆ, ಪರಮಾತ್ಮ ಶ್ರೀ ಕೃಷ್ಣನ ನಾಡಿನಿಂದ ಬಂದಿದ್ದೇನೆ ಎಂದ ಯೋಗಿ , ಪ್ರಭು ಶ್ರೀ ರಾಮನಿಗೆ ಬಂಟ ಹನುಮಂತ ಸಿಕ್ಕಿರುವುದು ಇದೇ ಕರ್ನಾಟಕದಲ್ಲಿ , ಆದ್ದರಿಂದ ಯುಪಿ ಮತ್ತು ಕರ್ನಾಟಕದ ಸಂಬಂಧ ರಾಮ-ಹನುಮನ ರೀತಿಯದ್ದು ಎಂದ ಯೋಗಿ, ಉತ್ತರ ಪ್ರದೇಶದ ರೀತಿಯ ಆಡಳಿತ ನೋಡಬೇಕೆಂದರೆ ಕರ್ನಾಟಕದಲ್ಲೂ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಹೇಳಿದರು.

ಜಿಹಾದಿಗಳ ವಿರುದ್ಧ ಆರ್ಭಟಿಸಿದ ಯೋಗಿ..!

ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಡೆಯುತ್ತಿರುವ ಸಾಲು ಸಾಲು ಹಿಂದೂಗಳ ಕೊಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದಲ್ಲಿ ಯಾವುದೇ ಜಿಹಾದಿಗಳನ್ನು ನಮ್ಮ ಸರಕಾರ ತಲೆ ಎತ್ತಲೂ ಬಿಡುವುದಿಲ್ಲ. ಆದರೆ ಈ ಕರ್ನಾಟಕದಲ್ಲಿ ಮಾತ್ರ ಸರಕಾರವೇ ಜಿಹಾದಿಗಳನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ ಯೋಗಿ , ಜಿಹಾದಿಗಳ ಹುಟ್ಟಡಗಿಸಬೇಕಾದರೆ ಈ ಕಾಂಗ್ರೆಸ್ ಸರಕಾರ ಪತನವಾಗಲೇಬೇಕು ಎಂದು ಪುನರುಚ್ಚರಿಸಿದರು.!

Aಬಿಜೆಪಿ, ಹಿಂದೂ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿ ಹಲ್ಲೆ ಕೊಲೆಗಳು ನಡೆಯುತ್ತಿದೆ ಎಂದರೆ ಇದರ ಹಿಂದೆ ಸರಕಾರ ಶಾಮೀಲಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ, ಕೊಲೆಯಾದ ಕೂಡಲೇ ಸರಕಾರದ ಸಚಿವರುಗಳು ತಮಗೆ ಬೇಕಾದ ರೀತಿಯಲ್ಲಿ ಹೇಳಿಕೆ ನೀಡುತ್ತಾರೆ. ತನಿಖೆ ನಡೆಯುವುದಕ್ಕೂ ಮೊದಲೇ ಸರಕಾರ ವರದಿ ನೀಡುತ್ತದೆ ಎಂದರೆ ಯಾವ ರೀತಿಯ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಅರಿವಾಗುತ್ತದೆ ಅಲ್ಲವೇ? ಎಂದು ಸೇರಿದ್ದ ಜನರಿಗೆ ಪ್ರಶ್ನಿಸಿದರು.

ಕರ್ನಾಟಕ ಕಾಂಗ್ರೆಸ್ ಎಟಿಎಂ ಇದ್ದಂತೆ..! 

ಈಗಾಗಲೇ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ತನ್ನ ಬಲ ಕಳೆದುಕೊಂಡಿರುವುದರಿಂದ ಕಾಂಗ್ರೆಸ್ ನ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದೆ. ಆದ್ದರಿಂದಲೇ ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ನಂತೆ ಬಳಸಿಕೊಳ್ಳುತ್ತಿದೆ ಎಂದ ಯೋಗಿ, ರಾಜ್ಯವನ್ನು ಲೂಟಿ ಹೊಡೆಯಲೆಂದೇ ಈ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಎಂದರು. ಕಾಂಗ್ರೆಸ್ ಗೆ ಬಲ ತುಂಬಲು ಇರುವ ರಾಜ್ಯ ಕರ್ನಾಟಕ ಮಾತ್ರ ,ಆದರೆ ಇದೀಗ ಕರ್ನಾಟಕದಲ್ಲೂ ಬಿಜೆಪಿಯದ್ದೇ ಹವಾ ಎದ್ದು ಕಾಣುತ್ತಿದೆ , ಆದ್ದರಿಂದ ಈ ಬಾರಿ ಬಿಜೆಪಿ ವಿಜಯ ಪತಾಕೆ ಹಾರಿಸಿಯೇ ಸಿದ್ಧ, ಎಂದ ಯೋಗಿ ಕನ್ನಡದ್ದಲೇ “ಬಿಜೆಪಿಯನ್ನು ಗೆಲ್ಲಿಸಿ – ಕಾಂಗ್ರೆಸ್ ನ್ನು ಸೋಲಿಸಿ” ಎಂದು ಜನರ ಜೊತೆಗೇ ಹೇಳಿದರು.

ರಾಜ್ಯದಲ್ಲಿ ಭಯೋತ್ಪಾದಕರ ಸೂಚನೆಯಂತೆ ಸರಕಾರ ನಡೆಸುತ್ತಿದೆ..!

ಶಾಂತಿಗೆ ಹೆಸರಾಗಿದ್ದ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಕೊಲೆ ದರೋಡೆಗಳೇ ನಡೆಯುತ್ತಿದೆ. ದಿನನಿತ್ಯ ಭಯೋತ್ಪಾದಕರು ಹೆಚ್ಚಾಗುತ್ತಿದ್ದು ಸರಕಾರವೇ ಇದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಯಾಸಿನ್ ಭಟ್ಕಳ್ ನಂತಹ ಭಯೋತ್ಪಾದಕರ ಸೂಚನೆಯಂತೆ ಈ ಸರಕಾರ ನಡೆದುಕೊಳ್ಳುತ್ತದೆ ಎಂದರೆ ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿಯುತ್ತದೆ ಎಂಬುದು ಅರಿವಾಗುತ್ತದೆ ಎಂದರು. ರಾಜ್ಯ ಸರಕಾರದ ಕುಮ್ಮಕ್ಕಿನಿಂದಲೇ ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಿದೆ, ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸರಕಾರ ಬೇಜವಾಬ್ದಾರಿಯಿಂದ ಆಡಳಿತ ನಡೆಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಯ ವಿರುದ್ದವೂ ಕೆಂಡ ಕಾರಿದರು. ಕಾಂಗ್ರೆಸ್ ನ ಉಡಾಫೆಯಿಂದಾಗಿಯೇ ಈ ರೀತಿ ರೈತರು ಸಾವನ್ನಪ್ಪುತ್ತಿದ್ದಾರೆ , ನಮ್ಮ ಯುಪಿ ಯಲ್ಲಿ ಯಾವುದೇ ಒಬ್ಬ ರೈತ ಕೂಡಾ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಯಾಕೆಂದರೆ ನಮ್ಮ ಸರಕಾರ ರೈತರಿಗೆ ಬೇಕಾದ ಸವಲತ್ತುಗಳನ್ನು ಒದಗಿಸುತ್ತಿದೆ ಎಂದರು.!

— ಅರ್ಜುನ್

 

Tags

Related Articles

Close