ಪ್ರಚಲಿತ

ಹಿರಿಯ ಕಾಂಗ್ರೆಸ್ಸಿಗರ ವಿರುದ್ಧವೇ ಕಿಡಿಕಾರಿದ ನೂತನ ಕಾಂಗ್ರೆಸ್ಸಿಗ! ಸಿಡಿದೆದ್ದ ಹಿರಿಯ ಕಾಂಗ್ರೆಸ್ಸಿಗರು!

ಏನಪ್ಪಾ ಕಥೆ ಇದು!! ಹಳಬರಿಗೆ ಕಾಂಗ್ರೆಸ್ಸಿನಲ್ಲಿ ಮಾನ್ಯತೆಯೇ ಇಲ್ಲ ಎಂದಾಯಿತಲ್ಲ!! ಈ ಹಿಂದೆ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯ ವಿಚಾರವಾಗಿ ಮಾತನಾಡಿದ್ದ ರಾಹುಲ್ ಗಾಂಧಿ ಹೊಸಬರಿಗೆ ಮಾತ್ರ ಅವಕಾಶ ಎಂದು ಆಜ್ಞೆಯನ್ನು ಹೊರಡಿಸಿದ್ದು, ಇನ್ನು ನಮ್ಮ ಮನದಲ್ಲಿ ಮಾಸಿಲ್ಲ!! ಆದರೆ ಇದೀಗ ಮೊನ್ನೆ ಮೊನ್ನೆ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡ ಜೆಡಿಎಸ್ ನ ಬಂಡಾಯ ಶಾಸಕನಾಗಿದ್ದ ಜಮೀರ್ ಅಹ್ಮದ್ ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಇದೀಗ ಕಾಂಗ್ರೆಸ್ಸಿಗರಿಗೇ ಧಮ್ಕಿ ಹಾಕಿದ್ದಾರೆ.

ಹೌದು.. ಸಿದ್ದರಾಮಯ್ಯ ಸರ್ಕಾರದಲ್ಲಿ ಅದೆನೆಲ್ಲಾ ನೋಡಬಾರದು ಅಂತಾ ಇದ್ದೇವೋ ಅದೆನೆಲ್ಲಾ ನೋಡಿಯಾಯಿತು!! ಭ್ರಷ್ಟಚಾರಗಳ ಹಿಂಡು ಹಿಂಡು ದಾಖಲೆಗಳು, ಹಗರಣಗಳು ಅಷ್ಟೇ ಯಾಕೆ ಹಿಂದೂಗಳನ್ನು ತುಚ್ಛವಾಗಿ ಕಾಣುತ್ತಾ ಮುಸಲ್ಮಾನರನ್ನು ತನ್ನ ಒಡಹುಟ್ಟಿದವರಿಗಿಂತಲೂ ಹೆಚ್ಚು ಎನ್ನುವಂತೆ ಕಾಣುತ್ತಿರುವ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳಿಗೆ ಮಾತ್ರ ನ್ಯಾಯವಿಲ್ಲ ಎಂದುಕೊಂಡಿದ್ದೆವು. ಆದರೆ ಇದೀಗ ಕಾಂಗ್ರೆಸ್ಸಿನ ಹಿರಿಯ ನಾಯಕರೂ ಮೂಲೆ ಗುಂಪಾಗುತ್ತಿರುವುದನ್ನು ಕಂಡರೆ ನಗಬೇಕು, ಆಳಬೇಕೋ ಅಥವಾ ಕನಿಕರ ತೋರಿಸಬೇಕೋ ಒಂದು ಗೊತ್ತಾಗುತ್ತಿಲ್ಲ!! ನಾಚಿಕೆಯಾಗಬೇಕು ನಿಮಗೆ… ನಿಮ್ಮದೇ ಪಕ್ಷದ ಹಿರಿ ಜೀವಗಳನ್ನು ಮೂಲೆ ಗುಂಪು ಮಾಡುತ್ತಿದ್ದೀರಲ್ಲದೇ ಧಮ್ಕಿ ಹಾಕುತ್ತಿದ್ದೀರಲ್ಲ ನಿಮಗೆ ಅದೇನೂ ಹೇಳಬೇಕು!! ಛೆ ಛೆ ಛೆ……..!!!

ಜೆಡಿಎಸ್ ಪಕ್ಷದಿಂದ ಬಂಡಾಯ ಎದ್ದು ಕಾಂಗ್ರೆಸ್ ಗೆ ಪಕ್ಷಾಂತರವಾಗಿರುವ ಜಮೀರ್ ಅಹ್ಮದ್ ಅವರನ್ನು ಚಾಮರಾಜಪೇಟೆ ಕ್ಷೇತ್ರದಲ್ಲಿ ಶತಾಯಗತಾಯ ಸೋಲಿಸಲು ಒಂದು ಕಡೆ ಜೆಡಿಎಸ್ ಸಂಕಲ್ಪ ತೊಟ್ಟಿರುವಂತಿದೆ. ಚಾಮರಾಜಪೇಟೆಯಲ್ಲಿ ಜಮೀರ್ ಭದ್ರಕೋಟೆಯನ್ನು ಭೇದಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, ರಾಜಕೀಯ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡಿರುವ ಜೆಡಿಎಸ್ ಮುಖ್ಯಸ್ಥ ಎಚ್.ಡಿ.ದೇವೇಗೌಡರು ಜಮೀರ್ ಹಣಿಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆದರೆ ಇತ್ತ ಕಡೆ ಜಮೀರ್ ಅಹ್ಮದ್ ಕಾಂಗ್ರೆಸ್ಸಿಗರಿಗೆ ಧಮ್ಕಿ ಹೊಡೆದಿದ್ದು ಬಾರೀ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿರುವ ಚಾಮರಾಜಪೇಟೆಯಲ್ಲಿ ಸ್ವತಃ ಸಿದ್ದರಾಮಯ್ಯನವರ ಸಮ್ಮುಖದಲ್ಲಿಯೇ ಜಮೀರ್ ಅಹ್ಮದ್ ತಮ್ಮ ದುರಂಹಕಾರವನ್ನು ಪ್ರದರ್ಶಿಸಿದ್ದರು ಕೂಡ ತುಟಿಕ್ ಪಿಟಿಕ್ ಎನ್ನದೇ ಮೌನವಹಿಸಿದ್ದನ್ನು ಕಂಡರೆ ಮುಸಲ್ಮಾನರ ನಾಯಕರಿಗೆ ಸಂಪೂರ್ಣವಾಗಿ ರಾಜ್ಯಭಾರ ನಡೆಸುವ ಹಕ್ಕನ್ನು ನೀಡಿದ್ದಾರೆ ಎಂದಾಯಿತು!! ಯಾಕೆಂದರೆ, ಮೊದಲಿನಿಂದಲೂ ಕಾಂಗ್ರೆಸ್ ನಲ್ಲಿದ್ದು ಕಾಂಗ್ರೆಸ್ ಪಕ್ಷದಲ್ಲಿಯೇ ಹಗಲಿರುಳು ದುಡಿಯುತ್ತಿದ್ದ ಕಾಂಗ್ರೆಸ್ಸಿಗರಿಗೆ ಧಮ್ಕಿ ಹಾಕಿದ್ದಾರೆ ಎಂದರೆ ಅದರ ಅರ್ಥವಾದರೂ ಏನು??

ಅಷ್ಟಕ್ಕೂ ಜಮೀರ್ ಅಹ್ಮದ್ ಹೇಳಿದ್ದಾದರೂ ಏನು ಗೊತ್ತಾ??

ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲಿಯೇ ಕಾಂಗ್ರೆಸ್ಸಿಗರಿಗೆ ಅವಮಾನ ಮಾಡಿರುವ ಜಮೀರ್ ಅಹ್ಮದ್, “ನಾನು ಮತ್ತು ಅಖಂಡ ಶ್ರೀನಿವಾಸಮೂರ್ತಿ ಇಬ್ಬರೂ ಈಗ ಕಾಂಗ್ರೆಸ್ಸಿಗೆ ಬಂದಿದ್ದೇವೆ ಹಾಗಾಗಿ ಇನ್ನು ಮುಂದೆ ಪುಲಕೇಶಿನಗರ, ಚಾಮರಾಜಪೇಟೆಯಲ್ಲಿ ನಮ್ಮದೇ ಹವ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ” ಕಿರಿಕ್ ತೆಗೆದ್ರೆ ಅಲ್ಲೂ ಇಲ್ಲ ಇಲ್ಲೂ ಇಲ್ಲದಂತೆ ಆಗುತ್ತೆ!! ಏನೋ… ನಿಮ್ ಪಾಡಿಗೆ ನೀವಿದ್ರೆ ಸರಿ” ಎಂದು ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಕಾಂಗ್ರೆಸ್ಸಿಗರಿಗೆ ಧಮ್ಕಿ ಹಾಕಿದ್ದಾರೆ!!

ಈ ಹಿಂದೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಜೆಡಿಎಸ್ ನಲ್ಲಿದ್ದು, ತದನಂತರದಲ್ಲಿ ಜೆಡಿಎಸ್ ಗೆ ತಿಲಾಂಜಲಿಯನ್ನು ಇಟ್ಟು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವ ವಿಚಾರ ನಮಗೆಲ್ಲಾ ತಿಳಿದೇ ಇದೆ!! ಆದರೆ ಅದೇ ಮಾದರಿಯಲ್ಲಿ ಹೊರಟಿರುವ ಜಮೀರ್ ಅಹ್ಮದ್ ಕಾಂಗ್ರೆಸ್ ನಾಯಕರಿಗೆ ಧಮ್ಕಿ ಹಾಕಿರೋದನ್ನು ಕಂಡರೆ ಕಾಂಗ್ರೆಸ್ಸಿಗರಿಗೆ ಕಾಂಗ್ರೆಸ್ಸಿನಲ್ಲಿಯೇ ಒಂದು ಚೂರು ಬೆಲೆ ಇಲ್ಲದಂತಾಗಿದೆ!!

ಈಗಾಗಲೇ ಜಮೀರ್ ಅಹ್ಮದ್ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಜಿಗಿಯಲು ಸಜ್ಜಾಗಿದ್ದ ವೇಳೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಡಿ ಹೊಗಳಿದ್ದರು. ಅಷ್ಟೇ ಅಲ್ಲದೇ, ಜಮೀರ್ ಅಹ್ಮದ್ ಅವರು ಭವಿಷ್ಯದ ಒಬ್ಬ ಮುಸ್ಲಿಂ ನಾಯಕನಾಗಿ ಹೊರ ಹೊಮ್ಮುತ್ತಾರಲ್ಲದೆ ಮುಸ್ಲಿಮರ ಕಷ್ಟ, ದುಃಖಗಳಿಗೆ ಸ್ಪಂದಿಸುವ ನಾಯಕನಾಗಿದ್ದು, ಉತ್ತಮ ನಾಯಕರಾಗಿ ಹೊರಹೊಮ್ಮುತ್ತಾರೆ ಎಂದು ಕೊಂಡಾಡಿದ್ದರು. ಆದರೆ ಅದೇ ಜಮೀರ್ ಅಹ್ಮದ್ ಇಂದು ನಿಮ್ಮದೇ ಪಕ್ಷದ ನಾಯಕರನ್ನು ತೇಜೋವಧೆ ಮಾಡುತ್ತಿದ್ದಾರಲ್ಲ ಅದಕ್ಕೆ ನೀವೇನು ಹೇಳುತ್ತಿರಾ?? ಹಾಗಾದರೆ ಕೇವಲ ಇವರು ಮುಸಲ್ಮಾನರ ನಾಯಕನಾದರೆ ಸಾಕೇ??? ಇನ್ನು ಚಾಮರಾಜಪೇಟೆಯಲ್ಲಿರುವ ಹಿಂದುಗಳ ಕಥೆಯಾದರೂ ಏನು??

ಅಂತೂ ಹಿಂದೂಗಳನ್ನು ಕಡೆಗಾಣಿಸುತ್ತಾ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್ಸಿಗರು ಇದೀಗ ಒರ್ವ ಮುಸಲ್ಮಾನನಿಂದಲೇ ಧಮ್ಕಿ ಹಾಕಿಸಿಕೊಂಡಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಅಚ್ಚರಿಯ ಸಂಗತಿಯೇ ಆಗಿದೆ!! ಎಷ್ಟೋ ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿ ದುಡಿದವರಿಗೆ ಮೊನ್ನೆ ಮೊನ್ನೆ ತಾನೇ ಜೆಡಿಎಸ್ ನಿಂದ ಹಾರಿ ಕಾಂಗ್ರೆಸ್ಸಿಗೆ ಸೇರಿಕೊಂಡ ಜಮೀರ್ ಅಹ್ಮದ್, “ನಿಮ್ ಪಾಡಿಗೆ ನೀವಿದ್ರೆ ಸರಿ” ಎಂದು ಧಮ್ಕಿ ಹಾಕುತ್ತಾರಲ್ಲ ಇದಕ್ಕೇನಂತೀರಾ ಕಾಂಗ್ರೆಸ್ ಪ್ರೇಮಿಗಳೇ??

– ಅಲೋಖಾ

Tags

Related Articles

Close