X
    Categories: ಅಂಕಣ

ಅಮಿತಾಭ್ ಬಚ್ಚನ್ ಹಾಗೂ ಸೋನಿಯಾ ಗಾಂಧಿ ನಡುವಿನ ಗೆಳೆತನವೊಂದು ಒಮ್ಮೆಲೇ ಅಂತ್ಯ ಕಂಡಿದ್ದು ಯಾಕೆ ಗೊತ್ತೇ?!

ಬಚ್ಚನ್ ಕುಟುಂಬ ಮತ್ತು ನೆಹರು ಕುಟುಂಬದ ಸಂಬಂಧವು ಸ್ವಾತಂತ್ರ್ಯ ಪೂರ್ವದ್ದು ಎಂದು ಯಾರಿಗಾದರೂ ತಿಳಿದಿದೆಯೇ? ಅಮಿತಾ ಬಚ್ಚನ್ ಅವರ ತಂದೆ ಹರಿವಂಚ್ ರಾಯ್ ಬಚ್ಚನ್ ಮತ್ತು ಮೋತಿಲಾಲ್ ನೆಹರೂ ಅವರು ಬಹಳ ನಿಕಟ ಸ್ನೇಹಿತರಾಗಿದ್ದು ಇವರು ಅಲಹಬಾದ್‍ನಲ್ಲಿ ಒಂದೇ ನಗರದಲ್ಲಿ ವಾಸವಾಗಿದ್ದರು. ಅಮಿತಾ ಬಚ್ಚನ್ ಕುಟುಂಬ ಮತ್ತು ನೆಹರು ಕುಟುಂಬದ ಎಲ್ಲಾ ವಿಷಯಗಳಲ್ಲಿಯೂ ಒಳ್ಳೆಯ ರೀತಿಯ ಆಸಕ್ತಿಗಳನ್ನು ಹೊಂದಿದ್ದರು.

ಅಮಿತಾಬಚ್ಚನ್ ಮೊದಲ ಬಾರಿಗೆ ರಾಜೀವ್ ಗಾಂಧಿಯನ್ನು ನಾಲ್ಕನೆಯ ವಯಸ್ಸಿನಲ್ಲಿ ಭೇಟಿಯಾಗಿದ್ದರು. ಆ ಸಮಯದಲ್ಲಿ ರಾಜೀವ್ ಗಾಂಧಿ ಗೆ 2 ವರ್ಷ
ವಯಸ್ಸಾಗಿತ್ತು. ಅಂದಿನಿಂದ ಅವರು ಪರಸ್ಪರ ತಿಳಿದಿದ್ದರು. ಈ ಬಾಂಧವ್ಯವು ರಾಜೀವ್ ಗಾಂಧಿ ಭಾರತದ ಪ್ರಧಾನಿಯಾದ ಬಳಿಕವೂ ಈ ಸ್ನೇಹ ಮುಂದುವರಿಯಿತು. ಚಿತ್ರರಂಗ ಮತ್ತು ರಾಜಕಾರಣದಲ್ಲಿ ಹಲವರು ರಾಜೀವ್ ಮತ್ತು ಅಮಿತಾಭ್ ಅವರು ದೇಶದ ಎರಡು ನಾಯಕರು ಎಂದು ಭಾವಿಸಿದ್ದರು.!!

ಸಂಜಯ್ ಗಾಂಧಿ ಕೂಡಾ ಅಮಿತಾ ಬಚ್ಚನ್ ಮತ್ತು ರಾಜೀವ್ ಗಾಂಧಿಯೊಂದಿಗೆ ಅನೋನ್ಯವಾಗಿದ್ದರು. ಆದರೆ ಸಂಜಯ್ ಜೊತೆಗಿನ ಸಂಭಾಷಣೆಯು ಆಟೋ
ಮೊಬೈಲ್ ಮತ್ತು ಹಾರುವ ಯಂತ್ರಗಳೊಂದಿಗೆ ಮಾತು ಕೊನೆಗೊಳ್ಳುತ್ತಿತ್ತು. ಅವರು ಯಾವಾಗಲೂ ಪೀಪಲ್ಸ್ ಕಾರ್ ನಿರ್ಮಾಣ ಮಾಡುವ ಬಗ್ಗೆ ಯಾವಾಗಲೂ
ಕನಸನ್ನು ಕಾಣುತ್ತಿದ್ದರು. ಅದೇ ಸಮಯದಲ್ಲಿ ರಾಜೀವ್ ಗಾಂಧಿಗೆ ವಿಮಾನಗಳಿಂದ ಆಕರ್ಷಿತರಾಗಿದ್ದರು ಮತ್ತು ಯಾವಾಗಲೂ ವಿಮಾನಗಳಲ್ಲಿ ಸಂಭಾಷಣೆಯನ್ನು ಮಾಡುತ್ತಿದ್ದರು. ಇವರ ಒಂದು ಸ್ನೇಹ ಎಷ್ಟರ ಮಟ್ಟಿಗೆ ಹೋಗಿತ್ತೆಂದರೆ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯ ಮದುವೆಯ ಬಗ್ಗೆ ಇಡೀ ಅಮಿತಾ ಬಚ್ಚನ್ ಕುಟುಂಬ ವೈಯುಕ್ತಿಕ ಆಸಕ್ತಿಯನ್ನು ತೆಗೆದುಕೊಂಡು ಇವರ ಮದುವೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಿದ್ದರು.

ಮದುವೆ ನಂತರ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಸಂಬಂಧವು ಯಾರೂ ಬೇರ್ಪಡಿಸಲಾಗದಂತಿತ್ತು. ಬಿಗ್‍ಬಿಯನ್ನು ಸಕ್ರೀಯವಾಗಿ ಮತ್ತು
ಗಂಭೀರ ರಾಜಕೀಯಕ್ಕೆ ಸೇರಲು ಅಮಿತಾಬಚ್ಚನ್‍ಗೆ ರಾಜೀವ್‍ಕುಟುಂಬ ಮನವೊಲಿಸಿತು. ಆದರೆ ಅಮಿತಾಬಚ್ಚನ್ ಬಾಲಿವುಡ್‍ನಲ್ಲಿ ಅಪಾರ ಜನಪ್ರಿಯತೆಯನ್ನು
ಗಳಿಸಿದ್ದರು ಮತ್ತು ರಾಜಕೀಯಕ್ಕೆ ಸೇರುವ ಬಗ್ಗೆ ಅವರ ಚಿಂತನೆಯನು ವಿಳಂಬಗೊಳಿಸಿದ್ದರು. ಇದು ಇದು ಬಿಗ್‍ಬಿಗೆ ಒಳ್ಳೆಯದನ್ನೇ ಮಾಡಿತ್ತು ಎಂದು ಅನ್ನಬಹುದು.

ಆದರೆ ರಾಜೀವ್ ಗಾಂಧಿ ಭಾರತದ ಪ್ರಧಾನ ಮಂತ್ರಿಯಾದ ನಂತರ ಬದಲಾವಣೆಗಳನ್ನು ಪ್ರಾರಂಭಿಸಿದರು. ರಾಜೀವ್ ಗಾಂಧಿಯವರ ಜನಪ್ರಿಯತೆಗೆ ಬೋಫೋರ್ಸ್ ಹಗರಣ ದೊಡ್ಡ ಕಾರಣವಾಯಿತು.!! ರಾಜೀವ್ ಗಾಂಧೀಯವರ ನಿಕಟ ಸಹಯೋಗಿಯಾಗಿದ್ದ ಅಮಿತಾಬಚ್ಚನ್ ಅವರು ಬೋಫೋರ್ಸ್‍ನಲ್ಲಿ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪ ಕೂಡಾ ಮಾಡಲಾಗಿತ್ತು.!! ಬಾಲಿವುಡ್‍ನಲ್ಲಿ ಅವರ ವಿಶ್ವಾಸಾರ್ಹತೆ ಹಾನಿಗೊಳಗಾದ ಕಾರಣ ರಾಜೀವ್ ಅವರೊಂದಿಗಿನ ಅವರ ಸಂಬಂಧ ಸೀಮಿತವಾಗತೊಡಗಲು ಬಹಳ ಸಮಯವಾಗಿತ್ತು. ಆದರೆ 1990ರ ದಶಕದಲ್ಲಿ ಅಮಿತಾಭ್ ಬಚ್ಚನ್ ಅವರು ಎಲ್ಲ ಆರೋಪಗಳನ್ನು ತೆರವುಗೊಳಿಸಿದರು. ರಾಜೀವ್ ಮತ್ತು ಅಮಿತಾಭ್ ಇನ್ನೂ ನಿಕಟ ಸ್ನೇಹಿತರಾಗಿದ್ದರು ಮತ್ತು ಕೆಲವೊಮ್ಮೆ ಪರಸ್ಪರ ಭೇಟಿಯಾಗಿದ್ದರು ಮತ್ತು ಉತ್ತಮ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ರಾಜೀವ್ ಗಾಂಧಿಯವರು ಇದರ ಬಗ್ಗೆ ಅತೃಪ್ತಿ ತೋರಿದ್ದರು ಯಾಕೆಂದರೆ ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಡಾ. ಸುಬ್ರಮಹ್ಮಣ್ಯಿಯನ್ ಮಾಹಿತಿಯನ್ನು ಬಹಿರಂಗಪಡಿಸಿದ್ದರು.

ಆದರೆ ರಾಜೀವ್ ಗಾಂಧಿಯನ್ನು 1991ರಲ್ಲಿ ಹತ್ಯೆ ಮಾಡಲಾಯಿತು. ರಾಜೀವ್ ಗಾಂಧಿಯವರ ಹತ್ಯೆಯ ಬಗ್ಗೆ ಕೊನೆಯಿಲ್ಲದ ಊಹಾ ಪೋಹಗಳು ಇನ್ನೂ ಸುತ್ತುತ್ತದೆ.!! ಈ ಘಟನೆಯ ನಂತರ ರಾಜೀವ್ ಗಾಂಧಿಯ ಗೆಳೆಯರು ಗಾಂಧಿಯವರ ಸಂಘದಿಂದ ದೂರ ಸರಿದರು.

ಬಚ್ಚನ್ ತಮ್ಮ ತಾತ್ಕಾಲಿಕ ವಿರಾಮದ ಅವಧಿಯಲ್ಲಿ ಚಿತ್ರ ನಿರ್ಮಾಣದತ್ತ ಹೊರಳಿದರು. ಅಲ್ಲದೆ 1996ರಲ್ಲಿ ಕಾರ್ಪೊರೇಷನ್ ಲಿಮಿಟೆಡ್(ಎಬಿಸಿಎಲ್) ಎಂಬ
ಸಂಸ್ಥೆಯನ್ನು ಹುಟ್ಟು ಹಾಕಿದರು. 200ದ ವೇಳೆ 10 ಶತಕೋಟಿ ರೂಪಾಯಿ ಆದಾಯವಿರುವ ಪ್ರಮುಖ ಮನರಂಜನೆ ಸಂಸ್ಥೆಯನ್ನಾಗಿ ಮಾಡುವ ಗುರಿ
ಹೊಂದಲಾಗಿತ್ತು. ಭಾರತದ ಎಲ್ಲಾ ಮನೋರಂಜನಾ ಉದ್ಯಮಕ್ಕೆ ಅವಶ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸುವುದು ಎಬಿಸಿಎಲ್‍ನ
ಯೋಜನೆಯಾಗಿತ್ತು. ಮುಖ್ಯವಾಹಿನಿಯಲ್ಲಿರುವ ವಾಣಿಜ್ಯ ಚಿತ್ರ ನಿರ್ಮಾಣ ಮತ್ತು ವಿತರಣೆ ಆಡಿಯೋ ಕ್ಯಾಸೆಟ್‍ಗಳು ಮತ್ತು ವಿಡಿಯೋ ಡಿಸ್ಕ್‍ಗಳು, ಟಿವಿಗಾಗಿ
ತಂತ್ರಾಂಶ ನಿರ್ವಹಣೆ ಮತ್ತು ಮಾರುಕಟ್ಟೆ ನಿರ್ವಹಣೆ ಖ್ಯಾತನಾಮರ ನಿರ್ವಹಣೆ ಮತ್ತು ಕಾರ್ಯಕ್ರಮದ ವ್ಯವಸ್ಥಾಪನೆಗಳು ಸಂಸ್ಥೆಯ ಕಾರ್ಯಕ್ಷೇತ್ರವಾಗಿತ್ತು. 1996ರಲ್ಲಿ ಸಂಸ್ಥೆ ಆರಂಭವಾದ ಕೆಲವೇ ದಿನಗಳಲ್ಲಿ ಮೊದಲ ಚಿತ್ರವನ್ನು ನಿರ್ಮಿಸಿತು. ತೇರೇ ಮೇರೇ ಸಪ್ನೆ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸೋತಿತು. ಎಬಿಸಿಎಲ್ ಮತ್ತೆ ಕೆಲವು ಚಿತ್ತರಗಳನ್ನು ನಿರ್ಮಿಸಿತ್ತಾದರೂ ಅವುಗಳ ಪೈಕೆ ಯಾವುದೂ ಗೆಲ್ಲಲಿಲ್ಲ.

1997ರಲ್ಲಿ ಆರ್ಥಿಕವಾಗಿ ಮತ್ತು ಕಾರ್ಯಕಾರಿಯಾಗಿ ಪತನಗೊಂಡಿತು. ಆಡಳಿತಾತ್ಮಕವಾಗಿ ಸಂಸ್ಥೆಯ ಅಸ್ತಿತ್ವ ಮುಂದುವರಿದರೂ ನಂತರ ದಿನಗಳಲ್ಲಿ ಭಾರತ
ಕೈಗಾರಿಕಾ ಮಂಡಳಿ ಅಮಿತಾ ಬಚ್ಚನ್‍ರದ್ದು ವಿಫಲ ಸಂಸ್ಥೆ ಎಂದು ಘೋಷಿಸಿತ್ತು. 1999ರಲ್ಲಿ ಬಚ್ಚನ್ ಅವರು ಬಾಂಬೆಯಲ್ಲಿರುವ ತಮ್ಮ ಬಂಗಲೆಯನ್ನು ಮಾರಾಟ ಮಾಡಲು ಮುಂದಾದಾಗ ಬಾಂಬೆ ಉಚ್ಚ ನ್ಯಾಯಾಲಯ ಅದನ್ನು ತಡೆಹಿಡಿದಿತ್ತು. ಯಾಕೆಂದರೆ ಕೆನರಾಬ್ಯಾಂಕ್‍ನ ಸಾಲಕ್ಕೆ ಸಂಬಂಧಿಸಿ ಬಾಕಿ ಇದ್ದ ಕೇಸುಗಳು ಇತ್ಯರ್ಥವಾಗುವವರೆಗೆ ಬಂಗಲೆಯನ್ನು ಮಾರದಂತೆ ಆದೇಶ ನೀಡಿತ್ತು. 2000ದಲ್ಲಿ ಬ್ರಿಟಿಷ್ ಟಿವಿ ಗೇಮ್ ಶೋ ಹೂ ವಾಂಟ್ಸ್ ಟು ಬಿ ಮಿಲಿಯನೇರ್? ನ ಭಾರತೀಯ ರೂಪಾಂತರವನ್ನು ಅಮಿತಾಭ್ ನಡೆಸಿಕೊಟ್ಟರು. ಇದಕ್ಕೆ ಕೌನ್ ಬನೇಗಾ ಕ್ರೋರ್‍ಪತಿ ಎಂದು ಹೆಸರಿಡಲಾಗಿತ್ತು. ಈ ಕಾರ್ಯಕ್ರಮವನ್ನು ರೂಪಾಂತರಗೊಳಿಸಿದ್ದ ಇತರ ದೇಶಗಳು ಇದೇ ರೀತಿಯ ಹೆಸರನ್ನಿರಿಸಿಕೊಂಡಿದ್ದವು. ಅಲ್ಲದೆ ಇದು ಕೆಲವೇ ದಿನಗಳಲ್ಲಿ ಅದ್ಭುತ ಯಶಸ್ಸು ಕಂಡಿತು.

1990ರ ದಶಕದಲ್ಲಿ ಬಿಗ್‍ಬಿಯ ಕಂಪನಿ ಎಬಿಸಿಎಲ್‍ನಿಂದ ಭಾರೀ ನಷ್ಟವನ್ನು ಅನುಭವಿಸಿದ ಸಮಯದಲ್ಲಿ ಬಹುತೇಕ ಅವರಸ್ನೇಹಿತರು ಯಾವುದೇ ಬೆಂಬಲವನ್ನು ನೀಡಲಿಲ್ಲ. ಕಾಂಗ್ರೆಸ್‍ನ ಒಬ್ಬ ಶಕ್ತಿಯುತ ವ್ಯಕ್ತಿಯ ಆದೇಶದಂತೆ ಅವರು ಪಕ್ಷದ ಯಾವುದೇ ವ್ಯಕ್ತಿಯನ್ನು ಭೇಟಿ ಮಾಡಲು ಸಮಯವನ್ನು ನೀಡಲಿಲ್ಲ ಎಂದು ಹೇಳಲಾಗುತ್ತದೆ. ವಾಸ್ತವವಾಗಿ ಕಾಂಗ್ರೆಸ್2005 ರಲ್ಲಿ ಗಂಭೀರ ಚಿಕಿತ್ಸೆಗೆ ಆಸ್ಪತ್ರೆಯಲ್ಲಿದ್ದಾಗ ಬಿಗ್‍ಬಿಗೆ ಆದಾಯ ತೆರಿಗೆ ನೋಟೀಸ್ ನೀಡಲಾಗಿತ್ತು.

ಅಮರ್‍ಸಿಂಗ್ ಅವರೊಂದಿಗಿನ ಬಿಗ್‍ಬಿ ಅವರ ಸಹಭಾಗಿತ್ವವು ಕಾಂಗ್ರೆಸ್‍ಗೆ ಬಲವಾದ ಸಿಗ್ನಲ್‍ಗಳನ್ನು ಕಳುಹಿಸಿತು. ಕೌನ್ ಬನೇಗಾ ಕ್ರೋರ್‍ಪತಿ ಎಂಬ ಕರ್ಯಕ್ರಮವು ಅಮಿತಾಬಚ್ಚನ್‍ಗೆ ಆತಿಥ್ಯವನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಅವರ ಜೀವನವನ್ನು ಹಿಂತುರಿಗಿಸಿತು. ಇದರಲ್ಲಿ ನಾವು ತಿಳಿಯಬೇಕೆಂದರೆ ಕಾಂಗ್ರೆಸ್ ಪಕ್ಷದವರು ತಮಗೆ ಯಾವಾಗ ಒಬ್ಬ ವ್ಯಕ್ತಿಯ ಅಗತ್ಯವಿದೆಯೋ ಆ ಸಮಯದಲ್ಲಿ ಅವರನ್ನು ಬಳಕೆ ಮಾಡಿ ಮುಂದೆ ಅವರನ್ನು ದೂರ ಎಸೆಯುವುದೇ ಅವರ ಕೆಲಸ.

-ಶೃಜನ್ಯಾ

Editor Postcard Kannada:
Related Post