X

ಇದೇ ಕಾರಣಕ್ಕಾಗಿ ಕೋಟ್ಯಾಂತರ ಭಾರತೀಯರು ಮೋದಿ ಭಕ್ತರಾಗಿದ್ದಾರೆ.!! ಅಭಿನವ ವಿವೇಕಾನಂದರ ಬಗ್ಗೆ ಒಂದಿಷ್ಟು ಮಾಹಿತಿ!!

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವನ್ನು ಬ್ರಿಟಿಷರು ಯಾವ ರೀತಿ ಕೊಳ್ಳೆ ಹೊಡೆದರೋ ಅದಕ್ಕಿಂತಲೂ ಹೆಚ್ಚು ಸ್ವಾತಂತ್ರ್ಯ ನಂತರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮಾಡಿದೆ ವಿಚಿತ್ರವಾದರೂ ಇದು‌ ಸತ್ಯ. ಯಾವ ರೀತಿಯಲ್ಲಿ ಭಾರತವನ್ನು ದೋಚಲು ಸಾಧ್ಯವೋ ಎಲ್ಲಾ ರೀತಿಯಲ್ಲಿ ದೋಚಿದ್ದಾಯಿತು.

ಕಳೆದ 70 ವರ್ಷಗಳ ಈ ಭ್ರಷ್ಟ ಆಡಳಿತದಿಂದ ಬೇಸತ್ತಿದ್ದ ಭಾರತೀಯರ ಪಾಲಿಗೆ “ಯುಗಾವತಾರಿ ಶ್ರೀ ನರೇಂದ್ರ ಮೋದಿಯವರ” ಅಗತ್ಯವಿತ್ತು. ಅಧಿಕಾರಕ್ಕೆ ಬಂದ ದಿನದಿಂದಲೇ ದೇಶವಿರೋಧಿಗಳ ಒಂದೊಂದೇ ಅಂಗ ಮುರಿಯುತ್ತಾ ಬಂದಿರುವ ಶ್ರೀ ನರೇಂದ್ರ ಮೋದಿಯವರು ಭಾರತವನ್ನು “ಜಗದ್ಗುರು” ಸ್ಥಾನದಲ್ಲಿ ನಿಲ್ಲಿಸಲು ಶಥಪ್ರಯತ್ನ ಮಾಡುತ್ತಿದ್ದಾರೆ.

ಮೋದಿಯವರ ಒಂದೊಂದು ನಿರ್ಧಾರಗಳಿಂದಲೂ ಕಂಗಾಲಾಗಿರುವ ವಿರೋಧಿಗಳು ಏನೂ ಮಾಡಲಾಗದೆ ಮೂಲೆಗುಂಪಾಗುತ್ತಿದ್ದಾರೆ.

ಅಧಿಕಾರಕ್ಕೆ ಬಂದು ಕೇವಲ ಮೂರುವರೆ ವರ್ಷ ಆದರೂ ಕಾರ್ಯರೂಪಕ್ಕೆ ತಂದ ಯೋಜನೆಗಳಿಂದ ಮತ್ತು ಕೈಗೊಂಡ ನಿರ್ಧಾರಗಳಿಂದ ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ಮೋದಿಯವರ ಕೆಲವೊಂದು ನಿರ್ಧಾರಗಳನ್ನು ತಮ್ಮ ದೇಶದಲ್ಲೂ ಕೈಗೊಳ್ಳಲು ಪ್ರಯತ್ನಿಸುತ್ತಿವೆ.

ಪ್ರಧಾನಿ ಪಟ್ಟ ಏರುತ್ತಲೇ ಭ್ರಷ್ಟರ ಹೆಡೆಮುರಿಕಟ್ಟಲು ಮೋದಿಯವರು ತಂಡ ರಚಿಸಿದ್ದರು.
ಎಲ್ಲಾ ರೀತಿಯ ದೇಶವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲು ಕೆಲವೊಂದು ನಿರ್ಧಾರಗಳನ್ನು ಕೈಗೊಂಡರು.

ಗಡಿಯಲ್ಲಿ ಪದೇ ಪದೇ ಭಾರತೀಯ ಸೈನಿಕರ ಮೇಲೆ ಅಪ್ರಚೋದಿತ ಗುಂಡಿನ ದಾಳಿ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಪ್ರತ್ಯುತ್ತರ ನೀಡುತ್ತಲೇ ಬಂದಿತ್ತು. ಆದರೂ ತನ್ನ ಬುದ್ದಿ ಬಿಡದ ಪಾಕಿಸ್ತಾನ ಭಾರತೀಯ ಸೈನಿಕರನ್ನು ಹತ್ಯೆ ಮಾಡಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮೋದಿ ಸರ್ಕಾರ ಕೆಲವೇ ದಿನದಲ್ಲಿ ಯಾರೂ ಊಹಿಸದಂತಹ ಒಂದು ಮಹತ್ತರವಾದ ಘಟನೆಗೆ ಸಾಕ್ಷಿಯಾಗಿತ್ತು. ಅದುವೇ “ಸರ್ಜಿಕಲ್ ಸ್ಟ್ರೈಕ್”. ಭಾರತೀಯ ಸೇನೆಯ ಈ ದಾಳಿಗೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿ ಹೋಗಿತ್ತು. ಇಡೀ ವಿಶ್ವವೇ ಭಾರತದ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಯಾಕೆಂದರೆ ಪಾಕಿಸ್ತಾನದ ಗಡಿ ದಾಟಿ ಅಲ್ಲಿದ್ದ ಪಾಕಿಸ್ತಾನ ಸೇನೆಯ ತುಕಡಿಗಳ ಮೇಲೆ ದಾಳಿ ಮಾಡಿದ ಭಾರತೀಯ ಸೇನೆ ಹಲವಾರು ಪಾಕಿಸ್ತಾನ ಯೋಧರನ್ನು ಹತ್ಯೆ ಮಾಡಿತ್ತು ಮತ್ತು ಉಗ್ರರ ಅಡಗುತಾಣಗಳನ್ನು ನಾಶಪಡಿಸಿತ್ತು.

ಭಾರತದ ಮಣ್ಣನ್ನು ಪ್ರತಿಯೊಬ್ಬರು ಗೌರವಿಸಲೇಬೇಕು ಎಂದು ಹೇಳಿರುವ ಮೋದಿಯವರು
” ಸ್ವಚ್ಛ ಭಾರತ ” ಎಂಬ ಯೋಜನೆಯನ್ನು ಜಾರಿಗೆ ತಂದರು. ಮೋದಿಯವರ ಈ ನಿರ್ಧಾರಕ್ಕೆ ಇಡೀ ದೇಶವೇ ಕೈಜೋಡಿಸಿತು. ಪ್ರತಿಯೊಂದು ಹಳ್ಳಿಗಳಲ್ಲೂ ಕೂಡ “ಸ್ವಚ್ಛ ಭಾರತ” ದ ಕಾರ್ಯಕ್ರಮಗಳು ಇಂದಿಗೂ ನಡೆಯುತ್ತಲೇ ಇದೆ. ಮೋದಿಯವರ ಈ ನಿರ್ಧಾರದಿಂದ ಪ್ರತಿಯೊಬ್ಬ ನಾಗರಿಕನೂ ಕೂಡ ಜವಾಬ್ದಾರಿಯುತನಾಗತೊಡಗಿದ. ಅಲ್ಲಲ್ಲಿ ಕಸ ಕಡ್ಡಿಗಳನ್ನು ಬಿಸಾಕುತ್ತಿದ್ದವರು ಇಂದು ಸ್ವಚ್ಚತೆಯೆಡೆಗೆ ಗಮನಹರಿಸುತ್ತಿದ್ದಾರೆ.

ಸ್ವಚ್ಛ ಭಾರತ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮಗಳು ನಗರಗಳು ಸ್ವಚ್ಚವಾಗತೊಡಗಿದವು.
ಆದರೆ ದೇಶದಲ್ಲಿ ತುಂಬಿದ್ದ “ಕಾಳಧನಿಕ” ಎಂಬ ಕಸವನ್ನು ಕಿತ್ತೊಗೆಯುವ ಜವಾಬ್ದಾರಿ ಮೋದಿಯವರ ಮೇಲಿತ್ತು.

ಅದೇ ಕಾರಣಕ್ಕೆ ಭಾರತದ ಒಳಗೇ ಇರುವ ದೇಶದ್ರೋಹಿಗಳ ಮೇಲೆ “ನೋಟ್ ಬ್ಯಾನ್ ” ಮಾಡುವ ಮೂಲಕ ದಾಳಿ ನಡೆಸಿದ್ದರು. ಮೋದಿಯವರ ಈ ಕ್ರಮದಿಂದಾಗಿ ಕಂತೆ ಕಂತೆ ನೋಟುಗಳನ್ನು ತಮ್ಮ ಖಜಾನೆಯಲ್ಲಿ ಬಚ್ಚಿಟ್ಟವರ ತಲೆಗೆ ಸಿಡಿಲು ಬಡಿದಂತಾಗಿತ್ತು. ಲೆಕ್ಕವಿಲ್ಲದಷ್ಟು ಕಪ್ಪು ಹಣ ಸಂಪಾದಿಸಿ ಸರಕಾರಕ್ಕೆ ಯಾವುದೇ ತೆರಿಗೆ ಕಟ್ಟದೆ ಮೋಸಮಾಡುತ್ತಿದ್ದ ಕಾಳಧನಿಕರ ವಿರುದ್ಧ ತಿರುಗಿಬಿದ್ದ ಮೋದಿ ಸರಕಾರ ನೋಟ್ ಬ್ಯಾನ್ ಮಾಡುವ ಮೂಲಕ ಕಪ್ಪು ಹಣ ಕೂಡಿಟ್ಟವರ ಸೊಂಟ ಮುರಿದಿದ್ದರು.

ಅಲ್ಪಸಂಖ್ಯಾತರ ಓಲೈಕೆಯ ಪರಿಣಾಮ ದೇಶದಲ್ಲಿ ಇಬ್ಬಗೆಯ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದ ಕಾಂಗ್ರೆಸ್ ನ ಎಲ್ಲಾ ಯೋಜನೆಗಳನ್ನು ಕಿತ್ತು ಹಾಕಿ ಹೊಸ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಹೊಸತೊಂದು ಕ್ರಾಂತಿಗೆ ಮುನ್ನುಡಿ ಬರೆದರು ಮೋದಿ.

ಅನಾಗರಿಕ ಪದ್ದತಿ ಎಂದೇ ಕರೆಯಲ್ಪಡುವ “ತಲಾಖ್” ನ್ನು ನಿಷೇಧಿಸುವ ಮೂಲಕ ಭಾರತೀಯ ಮುಸ್ಲಿಂ ಮಹಿಳೆಯರ ಪಾಲಿಗೆ ಹೊಸತೊಂದು ಯುಗ ಆರಂಬಿಸಿದರು ಮೋದಿ. ಯಾಕೆಂದರೆ ತಲಾಖ್ ಪದ್ದತಿಯಿಂದ ಅದೆಷ್ಟೋ ಸಂಬಂಧಗಳು ಒಡೆದು ಹೋಗಿದ್ದವು.ಎಲ್ಲೋ ಕುಳಿತು ತನ್ನ ಪತ್ನಿಗೆ ತಲಾಖ್ ಎಂದು ಮೂರು ಬಾರಿ ಹೇಳಿದ ಕೂಡಲೇ ಗಂಡ-ಹೆಂಡತಿ ಸಂಬಂಧವನ್ನು ಕಳೆದುಕೊಳ್ಳುವ ಒಂದು ಈ ಅನಾಗರಿಕ ಪದ್ದತಿಯನ್ನು ನಿಷೇಧಿಸುವ ಮೂಲಕ ಹೊಸತೊಂದು ಕ್ರಾಂತಿಯನ್ನೇ ಮಾಡಿದರು ಮೋದಿ.

ಇದೇ ರೀತಿ ಭಾರತೀಯ ಜನಸಾಮಾನ್ಯರ ತೆರಿಗೆ ಹಣದಲ್ಲಿ ಹಜ್ ಯಾತ್ರೆಗೆ ಸಬ್ಸಿಡಿ ನೀಡಲಾಗುತ್ತಿತ್ತು.
ಆದರೆ ಪ್ರಸಕ್ತ ವರ್ಷದಿಂದ ಈ ಸಬ್ಸಿಡಿಯನ್ನು ರದ್ದುಗೊಳಿಸುವ ಮೂಲಕ ಮತ್ತೊಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಮೋದಿ. ಹಿಂದಿನಿಂದಲೂ ಹಜ್ ಯಾತ್ರೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸುವಂತೆ ದೇಶದಲ್ಲಿ ಕೂಗು ಕೇಳಿಬರುತ್ತಲೇ ಇತ್ತು.

ಆದರೆ ಮುಸ್ಲಿಮರ ಓಲೈಕೆಯ ಪರಿಣಾಮ ಯಾರೂ ಈ ಕ್ರಮವನ್ನು ಕೈಗೊಳ್ಳಲಿಲ್ಲ. ಆದರೆ ಮೋದಿ ಸರ್ಕಾರ ಮಾತ್ರ ಯಾವುದಕ್ಕೂ ಅಂಜದೆ ಯಾತ್ರೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಿದೆ. ಈ ಮೂಲಕ ರದ್ದುಪಡಿಸಿದ ಹಣವನ್ನು ಪ್ರಸಕ್ತ ವರ್ಷದಿಂದ ಬಡ ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ಬಡವರ ಏಳಿಗೆಗೆ ಸಹಾಯವಾಗುವಂತೆ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ದೇಶದ ಪ್ರತಿಯೊಬ್ಬನೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡ ಮೋದಿಯವರು “ಜನ್ ಧನ್” ಎಂಬ ಯೋಜನೆಯನ್ನು ಜಾರಿಗೊಳಿಸಿದರು.ಬ್ಯಾಂಕ್ ಮೆಟ್ಟಿಲು ಹತ್ತದವರೆಲ್ಲರೂ ಮೋದಿಯವರ ಈ ಯೋಜನೆಗೆ ಸಾಥ್ ನೀಡಲುತೊಡಗಿದರು.ಅದೆಷ್ಟೋ ಕೋಟಿ ಬ್ಯಾಂಕ್ ಖಾತೆಗಳು ಈ ಯೋಜನೆಯಿಂದಾಗಿ ತೆರೆದವು…!

ಭಾರತೀಯರಲ್ಲಿ ಅದೆಷ್ಟೋ ಕಲೆಗಳು ಅಡಗಿವೆ‌.ಆದರೆ ಅದನ್ನು ತೋರ್ಪಡಿಸಲು ಯಾವುದೇ ಅವಕಾಶ ಇರಲಿಲ್ಲ.
ಆದರೆ ಮೋದಿಯವರ “ಮೇಕ್ ಇನ್ ಇಂಡಿಯಾ” ಯೋಜನೆಯಿಂದ ಭಾರತೀಯರಿಗೆ ಅವಕಾಶ ಕಲ್ಪಿಸಲಾಯಿತು.

ಗೋಹತ್ಯಾ ನಿಷೇಧಿಸುವ ಮೂಲಕ ಬಹುಸಂಖ್ಯಾತ ಜನರ ಅದೆಷ್ಟೋ ವರ್ಷದ ಬೇಡಿಕೆಯನ್ನು ಈಡೇರಿಸಿದರು ಮೋದಿ.
ಈ ಮೂಲಕ ಎಲ್ಲಾ ವರ್ಗದ ಜನರ ಪಾಲಿಗೂ ಸರಕಾರ ಇದೆ ಎಂಬೂದನ್ನು ನಿರೂಪಿಸಿದರು. ಕೇವಲ ಚುನಾವಣೆ ದ್ರಷ್ಠಿಯಿಂದ ಅಲ್ಪಸಂಖ್ಯಾತರ ಓಡುತ್ತಿದ್ದವರೆಲ್ಲರೂ ಇಂದು ಹಿಂದೂ ದೇವಾಲಯಗಳನ್ನು ಸುತ್ತುತ್ತಿದ್ದಾರೆ.

ಇವೆಲ್ಲವೂ ನರೇಂದ್ರ ಮೋದಿಯಂತಹ ನಾಯಕ ಪವಾಡವೇ ಹೊರತು ಮತ್ತೇನಲ್ಲ. ಇದೇ ಕಾರಣಕ್ಕೆ ಮೋದಿಯವರನ್ನು “ಯುಗಾವತಾರಿ” ಎಂದು ಕರೆದಿದ್ದು. ಶ್ರೀ ನರೇಂದ್ರ ಮೋದಿ ದೇಶದ ಒಳಿತಿಗಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೂ ಹಿಂದೇಟು ಹಾಕದ ಬಲಿಷ್ಟ ನಾಯಕ…! ಇಂತಹ ನಾಯಕನನ್ನು ಕಳೆದುಕೊಂಡರೆ ಮುಂದೆ ಯಾವ ನಾಯಕನೂ ಭಾರತದಲ್ಲಿ ಇಂತಹ ಕಠಿಣ ನಿರ್ಧಾರವನ್ನು ಕೈಗೆತ್ತಿಗೊಳ್ಳುವುದಿಲ್ಲ.

ಜಗತ್ತಿನ ಮುಂದೆ ಭಾರತವನ್ನು ಮಂಡಿಯೂರಿ ಕೂರುವಂತೆ ಮಾಡಿತ್ತು ಕಾಂಗ್ರೆಸ್. ಇದೀಗ ಮತ್ತೆ ಜಗತ್ತಿನ ಮುಂದೆ ಭಾರತ ತಲೆಯೆತ್ತಿ ಮೆರೆಯುತ್ತಿದೆ ಎಂದರೆ ಅದಕ್ಕೆ ನರೇಂದ್ರ ಮೋದಿಯೆಂಬ ಶಕ್ತಿಯೇ ಕಾರಣ.

ನರೇಂದ್ರ ಮೋದಿಯವರು ಯಾವುದೇ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದಾರೆ ಎಂದರೆ ಅದರ ಹಿಂದೆ ಭಾರತದ ಭವಿಷ್ಯ ಉತ್ತಮವಾಗಿರಬೇಕೆಂಬ ಉದ್ದೇಶವಿದೆ. ಆದ್ದರಿಂದಲೇ ಇಂತಹ ನಾಯಕನ ಪ್ರತಿಯೊಂದು ಹೆಜ್ಜೆಯಲ್ಲೂ ಭಾರತೀಯರಾದ ನಾವು ಜೊತೆಗಿರೋಣ.

ಭಾರತ ಮತ್ತೆ ವಿಶ್ವಗುರು ಸ್ಥಾನದಲ್ಲಿ ನಿಲ್ಲುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.ನರೇಂದ್ರ ಮೋದಿಯವರ ಕನಸಿನ ಭಾರತ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ. ಮೋದಿಯವರ ಪ್ರತಿಯೊಂದು ಮಾತಿಗೂ ಭಾರತೀಯರೆಲ್ಲರೂ ನಾವು ಒಕ್ಕೊರಲಿನಿಂದ ಜೈ ಅನ್ನೋಣ…!

“ಒಂದೇ ಭಾರತ ಶ್ರೇಷ್ಠ ಭಾರತ”
“ವಿಶ್ವಗುರು ಭಾರತ”

– ಅರ್ಜುನ್

Editor Postcard Kannada:
Related Post