X

ಗುಜರಾತಿನ ಗೋದ್ರಾ ಗಲಭೆಯ ಹಿಂದಿರುವ ಕಾಣದ ಕೈ ಯಾವುದೆಂದು ತಿಳಿದರೆ ನೀವು ಬೆಚ್ಚಿ ಬೀಳುವಿರಿ!

ಗುಜರಾತ್‍ನಿಂದ ಕರಸೇವಕರಾಗಿ ಹೊರಟಿದ್ದ ಸಾವಿರಾರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರು, ರಾಮಭಕ್ತರು ರೈಲಿನಲ್ಲಿ ತೆರಳುತಿದ್ದಾಗ ರೈಲಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಸಾಲದ್ದಕ್ಕೆ ಅರೆ ಜೀವವಿದ್ದ ದೇಹಗಳನ್ನು ರಾಡಿನಿಂದ ತಿವಿದು ಕೊಂದ ದಿಟ್ಟ ಪ್ರತಿಕ್ರಿಯೆಯೇ ಗೋದ್ರಾ ಹತ್ಯಾಕಾಂಡ. ಅಂದು ಫೆಬ್ರವರಿ 27, 2002ರ ಸಮಯ. ಸಬರಮತಿ ಎಕ್ಸ್‍ಪ್ರೆಸ್ ಎನ್ನುವ ರೈಲು ಅಯೋದ್ಯಾದಿಂದ ಗೋದ್ರಾ ನಿಲ್ದಾಣದತ್ತ ಬರುತಿತ್ತು. ಇದರಲ್ಲಿ ನೂರಾರು ಕರಸೇವಕರು ಬರುತ್ತಿದ್ದರು. ಅಯೋದ್ಯಾದಿಂದ ಗೋದ್ರಾಕ್ಕೆ ಬರುವ ರೈಲಿನಲ್ಲಿ ನೂರಾರು ಹಿಂದೂ ಕರಸೇವಕರಿರುವ ಮಾಹಿತಿ ಪಡೆದಿದ್ದು ಮುಸ್ಲಿಮ್ ಸಮುದಾಯದ ಗುಂಪೊಂದು ಮೊದಲೇ ಸಿದ್ಧವಾಗಿ ನಿಂತಿತ್ತು.

ಅವರ ಕೈಯಲ್ಲಿ 200 ಲೀಟರ್‍ಗಿಂತಲೂ ಅಧಿಕ ಪೆಟ್ರೋಲ್ ಇತ್ತು. ಎಕ್ಸ್‍ಪ್ರೆಸ್‍ನ ಭೋಗಿಯಲ್ಲಿದ್ದ ಕರಸೇವಕರನ್ನೇ ದೃಷ್ಟಿಯಲ್ಲಿರಿಸಿ ಬೋಗಿಯ ಬಾಗಿಲನ್ನು ಭದ್ರವಾಗಿ ಮುಚ್ಚಲಾಗಿತ್ತು.!!ಅಲ್ಲಿಂದ ಏನಾದರೂ ಓಡಲು ಪ್ರಯತ್ನ ಪಟ್ಟಲ್ಲಿ ಕರಸೇವಕರ ಮೇಲೆ ಕಲ್ಲಿನಿಂದ , ರಾಡ್‍ನಿಂದ ತಿವಿಯಲಾಗುತಿತ್ತು. ಆಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಯಿತು. ಬೋಗಿ ಧಗಧಗನೆ ಉರಿಯುತ್ತಿತ್ತು. ಕರಸೇವಕರು ಪ್ರಾಣ ಉಳಿಸಿಕೊಳ್ಳಲು ಇನ್ನಿಲ್ಲದಂತೆ ಒದ್ದಾಡುತ್ತಿದ್ದರು. ಅವರು ಪ್ರಾಣ ವೇದನೆಯಿಂದ ಅರಚಾಡುತ್ತಿದ್ದರೆ ಬೆಂಕಿ ಜ್ವಾಜಲ್ಯಮಾನವಾಗಿ ಉರಿದು ಒಬ್ಬೊಬ್ಬರೇ ಕರಸೇವಕರನ್ನು ಆಹುತಿ ಪಡೆಯುತ್ತಿತ್ತು.!!

ಕೇವಲ 5 ನಿಮಿಷಗಳಷ್ಟೇ ಸುಮಾರು 59 ಕರಸೇವಕರು ಬೆಂಕಿಯಲ್ಲಿ ಸುಟ್ಟು ಹೋಗಿದ್ದರು.. ಯಾವ ರೀತಿ ಸುಟ್ಟು ಹೋಗಿದ್ದಾರೆ ಎಂದರೆ ಅವರ ಗುರುತು ಪಡೆಯದ ಮಟ್ಟಕ್ಕೆ ಅವರ ದೇಹ ಸುಟ್ಟು ಹೋಗಿತ್ತು. ರೈಲು ಹೊರಡುವುದು ರಾತ್ರಿ ಎಂಬುವುದನ್ನು ಅರಿತು ದುಷ್ಕರ್ಮಿಗಳು ಆಗಾಗಲೇ ಹಿಂದೂಗಳನ್ನು ಬಲಿಕೊಡಲು ತಯಾರಾಗಿ ನಿಂತಿದ್ದರು. ಯಾಕೆ ಈ ರೀತಿಯಾಗಿ ದುಷ್ಕರ್ಮಿಗಳು ಎಲ್ಲರೂ ನಿದ್ರಾವಸ್ಥೆಯಲ್ಲಿರುತ್ತಾರೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ರಾತ್ರಿಯೇ ಈ ದುಷ್ಕøತ್ಯ ಮಾಡಲು ತಯಾರಾಗಿದ್ದರು. ಸಾವಿನ ಸಂಖ್ಯೆಯನ್ನು ಹೆಚ್ಚಿಸಬಹುದು ಎಂಬ ಮೂಲ ಯೋಜನೆಯಾಗಿತ್ತು. ಆದರೆ ಅದೃಷ್ಟವಶಾತ್ ರೈಲು ತಡವಾಗಿ ಹೊರಡುತ್ತದೆ. ಆದರೆ ರೈಲು 5 ಘಂಟೆಗಳ ಕಾಲ ತಡವಾಗಿ ಚಲಿಸಿದ ಕಾರಣ ದುಷ್ಕರ್ಮಿಗಳ ಮೂಲ ಯೋಜನೆ ಸಾಧಿಸಲು ಆಗಲಿಲ್ಲ. ಇಲ್ಲದೆ ಇದ್ದರೆ ಸಾವಿನ ಸಂಖ್ಯೆ ಅಗಾಧವಾಗುತ್ತಿತ್ತು.

 

ಕರಸೇವಕರನ್ನು ಸುಡುವ ಮುಂಚೆ ಲೌಡ್‍ಸ್ಪೀಕರ್‍ನಲ್ಲಿ ಹಂತಕರಿಗೆ ಮಾಹಿತಿ ನೀಡಲಾಗಿತ್ತು ಎಂದು ಇತರ ಪ್ರಯಾಣಿಕರು ಹೇಳಿದ್ದರು. ಆ ವೇಳೆ ಅವರು ಎಷ್ಟೊಂದು ಭಯಭೀತರಾಗಿದ್ದರು ಎಂದರೆ ತನ್ನ ಪ್ರಾಣ ಕೂಡಾ ಇದೇ ರೀತಿ ಭೀಭತ್ಸವಾಗಿ ಹೋಗಬಹುದು ಎಂಬ ಶಾಕ್‍ಗೆ ಒಳಗಾಗಿದ್ದರು. ಹಂತಕರು ಎಷ್ಟು ವ್ಯಾಗ್ರರಾಗಿದ್ದರೆಂದರೆ ಎಲ್ಲೆಂದರಲ್ಲಿ ಕಲ್ಲು, ಪೆಟ್ರೋಲ್ ಬಾಂಬ್‍ಗಳನ್ನು ಎಸೆಯುತ್ತಿದ್ದರು. ಬೆಂಕಿಯಲ್ಲಿ ಸುಡುತ್ತಿದ್ದ ಕರಸೇವಕರತ್ತ ಕಲ್ಲು ತೂರಿ ವಿಕೃತ ಆನಂದ ಪಡೆಯುತ್ತಿದ್ದರು. ಇವರಿಗೆಲ್ಲಾ ಸಮೀಪದ ಮಸೀದಿಯಿಂದ ಲೌಡ್‍ಸ್ಪೀಕರ್ ಮುಖಾಂತರ ಮಾಹಿತಿ ನೀಡಲಾಗುತ್ತಿತ್ತು. ಗಲಭೆ ನಡೆಯುತ್ತಿದ್ದ ಮುಸ್ಲಿಮರು ಗಲಭೆ ನಡೆಯುತ್ತಿದ್ದ ಸ್ಥಳಕ್ಕೆ ಅಗ್ನಿಶಾಮಕ ದಳದ ಟ್ಯಾಂಕರ್ ಹೋಗದಂತೆ ತಡೆದು ವಿಕೃತಿ ಮೆರೆದರು. ಇಷ್ಟೆಲ್ಲಾ ರಾಕ್ಷಸಿ ಪ್ರವೃತ್ತಿ ಮೆರೆದ ಹಂತಕರು ಕಾಂಗ್ರೆಸ್ಸಿಗರೆಂದು ಯಾವ ಮಾಧ್ಯಮಗಳೂ ವಿವರಿಸಿಲ್ಲ. ಕರ ಸೇಕರನ್ನು ಇಷ್ಟೊಂದು ಕ್ರೂರವಾಗಿ ಕೊಂದ ಕಾಂಗ್ರೆಸ್ಸಿಗರ ಅಟ್ಟಹಾಸದ ಸತ್ಯ ಕೊನೆಗೂ ಬಯಲಾಗಿದೆ.

ಈ ಘಟನೆಯ ಬಳಿಕ ನಿವೃತ್ತ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಜಿ.ಟಿ ನನವತಿ ನೇತೃತ್ವದ ಸಮಿತಿ ಮತ್ತು ನಿವೃತ್ತ ಗುಜರಾತ್ ಹೈಕೋರ್ಟ್ ನ್ಯಾಯಾಧೀಶ ಕೆ.ಜಿ.ಶಾ ನೇತೃತ್ವ ವಹಿಸಿದ್ದು, ಸುಮಾರು 12 ವರ್ಷಗಳ ತನಿಖೆಯನ್ನು ಕೈಗೊಂಡಿದ್ದು ಸುಮಾರು 40,000 ದಾಖಲೆಗಳನ್ನು ಮತ್ತು 1100 ಸಾಕ್ಷಿಗಳನ್ನು ಪರೀಕ್ಷಿಸಿತ್ತು. ಮುಖ್ಯ ಶಂಕಿತ ಹಾಜಿ ಬಿಲಾಲ್ , ಸ್ಥಳೀಯ ಪಟ್ಟಣ ಕೌನ್ಸಿಲರನ್ನು ಗೋಧ್ರಾದಲ್ಲಿ ಭಯೋತ್ಪಾದನಾ ವಿರೋಧಿ ತಂಡದಿಂದ ವಶಪಡಿಸಿಕೊಂಡಿದ್ದರು.

ಘಟನೆಯ ದಿನದಂದು ತಡವಾಗಿ ಬಂದಿರುವ ರೈಲು ಗೋದ್ರಾ ನಿಲ್ದಾಣದಿಂದ ಹೊರಟ ರೈಲು ಕೆಲವೇ ನಿಮಿಷಗಳ ನಂತರ ಜನರ ಗುಂಪೊಂದು ಸಬರಮತಿ ಎಕ್ಸ್‍ಪ್ರೆಸ್ ಮೇಲೆ ದಾಳಿ ನಡೆಸಿತು ಎಂದು ಆರೋಪ ಕೂಡಾ ಮಾಡಿತ್ತು. ಗೋದ್ರಾ ಪುರಸಭಾಧ್ಯಕ್ಷ ಮೊಹಮ್ಮದ್ ಹುಸೇನ್ ಕಲೋಟ ಅವರನ್ನು ಬಂಧಿಸಲಾಯಿತು. ಕಾರ್ಪೋರೇಟರ್‍ಗಳಾದ ಅಬ್ದುಲ್ ರಝಾಕ್ ಮತ್ತು ಶಿರಾಜು ಅಬ್ದುಲ್ ಜೇಮ್ಹಾ ಸೇರಿದಂತೆ ಹಲವರನ್ನು ಬಂಧಿಸಲಾಯಿತು. ಬಿಲಾಲ್ ಕೂಡಾ ಗ್ಯಾಂಗ್ ಲೀಡರ್ ಅಬ್ದುಲ್ ಲತೀಫ್‍ನೊಂದಿಗೆ ಸಂಬಂಧವಿತ್ತು ಎನ್ನುವ ಮಾಹಿತಿ ಕೂಡಾ ಬಿಡುಗಡೆಯಾಗಿತ್ತು. ಇವರು ಪಾಕಿಸ್ತಾನದ ಕರಾಚಿಗೆ ಹಲವಾರು ಬಾರಿ ಸಂದರ್ಶಿಸಿರುವ ಮಾಹಿತಿ ಕೂಡಾ ವರದಿಯಾಯಿತು.

2004ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ರೈಲ್ವೆ ಸಚಿವ ಲಾಲು ಪ್ರಸಾದ್‍ಯಾದವ್ ಯು.ಸಿ ಬ್ಯಾನರ್ಜಿ ನೇತೃತ್ವದ ಸಮಿತಿಯನ್ನು ರಚಿಸಿದರು. ಫೆಬ್ರವರಿ 27 2002ರಲ್ಲಿ ನಡೆದ ಸಬರಮತಿ ಎಕ್ಸ್‍ಪ್ರೆಸ್‍ಗೆ ಬಿದ್ದ ಬೆಂಕಿಯು ನೈಸರ್ಗಿಕ ಅಪಘಾತವೆಂದು ವರದಿ ನೀಡಿತು. !! ಯಾವ ರೀತಿ ಜನರ ದಾರಿಯನ್ನು ತಪ್ಪಸುತ್ತದೆ ಎಂದು ಇವನ್ನು ನೋಡಿ ಕಲಿಯಬೇಕು. ತನಿಖೆ ಅಸಂವಿಧಾನಿಕ ಕಾನೂನುಬಾಹಿರ ಮತ್ತು ಶೂನ್ಯ ಮತ್ತು ನಿರರ್ಥಕ ಎಂದು ತೀರ್ಪು ನೀಡಿದ್ದಕ್ಕೆ ಸಬರ್ಮತಿ ಎಕ್ಸ್‍ಪ್ರೆಸ್‍ನಲ್ಲಿ ಬದುಕುಳಿದವರು ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

59 ಹಿಂದೂ ಕರಸೇವಕರು ಬಲಿಯಾದ ಗೋದ್ರಾ ಹತ್ಯಾಕಾಂಡ ವ್ಯವಸ್ಥಿತ ಸಂಚಾಗಿತ್ತು. ಜಾತ್ಯಾತೀತ ಪಕ್ಷಗಳು ಇದು ಹಿಂದೂಗಳು ಮಾಡಿರುವ ಕೃತ್ಯ ಎಂದು ಹಿಂದೂಗಳ ತಲೆಯ ಮೇಲೆ ಹಾಕಿದ್ದರು. ಈ ಕೃತ್ಯವನ್ನು ಮಾಡಿರುವಂತಹದ್ದು ಹಿಂದೂಗಳೇ ಎಂದು ದೂಷಿಸಲು ಆರಂಭಿಸಿದವು. ಹಿಂದೂಗಳನ್ನು ಹಿಂದೂಗಳೇ ಗುರಿಯಾಗಿಸಿ ನಂತರ ಮುಸ್ಲಿಮರನ್ನು ದೂಷಿಸಲು ಮಾಡಿದ ಕೃತ್ಯ ಎಂಬ ಮಾತು ಎಲ್ಲೆಡೆ ಪ್ರಚಾರ ಮಾಡಿದರು.

ಗೋದ್ರಾಹತ್ಯಾಕಾಂಡದ ಪ್ರಮುಖ ಆರೋಪಿ ಹುಸೇನ್ ಸುಲೇಮಾನ್ ಮೊಹಮ್ಮದ್‍ನನ್ನು ಗೋದ್ರಾ ಅಪರಾಧ ಶಾಖೆ ಬಂಧಿಸಿದೆ. ಕರಸೇವಕರನ್ನು ಸುಡಲು ನೇತೃತ್ವವಹಿಸಿದ್ದ ವ್ಯಕ್ತಿಗೆ ಕಾಂಗ್ರೆಸ್ ನೇರ ಸಂಪರ್ಕವಿತ್ತು. ಆತನ ಹೆಸರು ಫಾರೂಕ್ ಭಾನಾ. ಈತ ಕರಸೇವಕರನ್ನು ಸುಟ್ಟು ಕೊಲ್ಲಲು ಐಡಿಯಾ ರೂಪಿಸಿದ್ದ ಓರ್ವ ಮತಾಂಧ ಮುಸ್ಲಿಮ್. ಘಟನೆ ನಡೆದ ಈತ ಬರೋಬ್ಬರಿ 14 ವರ್ಷಗಳ ಕಾಲ ತಲೆಮರಿಸಿಕೊಂಡಿದ್ದ. ಕಳೆದ ವರ್ಷ ಈತನನ್ನು ಭಯೋತ್ಪಾದಕ ನಿಗ್ರಹ ದಳ ಅಧಿಕಾರಿಗಳು ಬಂಧಿಸಿದ್ದರು. ಈತ ಕಾಂಗ್ರೆಸ್ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದರು.

2011ರಲ್ಲಿ ಕೋರ್ಟು 31 ಜನರನ್ನು ಅಪರಾಧಿಗಳು ಎಂದು ಪರಿಗಣಿಸಿ ಬಂಧನ ಮಾಡಲಾಯಿತು. ಅನುಮಾನದ ಮೇರೆಗೆ 63 ಜನರನ್ನು ಬಂದಿಸಲಾಯಿತು.. 11 ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. 20 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಸರಿಯಾದ ಸಾಕ್ಷಿ ಇಲ್ಲದೆ ಅನುಮಾನದ ಮೇರೆ ಬಂಧಿಸಿದ 63 ಜನರನ್ನು ಕೂಡಾ ತಕ್ಕ ಸಾಕ್ಷಿಯನ್ನು ಒದಗಿಸಿ ಬಂಧನದಲ್ಲಿರಿಸಲಾಯಿತು. ಮಾಧ್ಯಮಗಳು ಮಾತ್ರ ಒಂದು ಸಲ ಸಹಾನುಭೂತಿಯನ್ನು ತೋರಿಸುವ ತರಹ ಸುದ್ಧಿಯನ್ನು ಪ್ರಸಾರ ಮಾಡುತ್ತದೆ, ಮತ್ತೆ ಅದರ ಗೋಜಿಗೇ ಹೋಗುತ್ತಿಲ್ಲ.

ಇಸ್ಲಾಂ ಮತದ ಅಫೀಮನ್ನು ತಲೆಗೆ ಹತ್ತಿಸಿಕೊಂಡ ಕಾಂಗ್ರೆಸ್ಸಿಗರು ಹಿಂದೂಗಳನ್ನು ನಿರ್ದಯವಾಗಿ ಹತ್ಯೆ ಮಾಡಿದರು ಎಂಬ ಸತ್ಯ ಕೊನೆಗೂ ಬೆಳಕಿಗೆ ಬಂದಿತು. ಕಾಂಗ್ರೆಸ್ಸಿಗರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಪಾಪಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗದೇ ಹೋಗುವುದಿಲ್ಲ ಯಾಕೆಂದರೆ ಅದಕ್ಕೆ ಕೋಟ್ಯಾಂತರ ಹಿಂದೂಗಳ ಶಾಪ ಕಣ್ಣೀರಿದೆ.

source: http: http://postcard.news/every-indian-must-know-the-painful-truth-of-godhra-train-burning-which-mainstream-media-has-preferred-to-ignore/

-ಪವಿತ್ರ

Editor Postcard Kannada:
Related Post