X

ಬಿಜೆಪಿ ಸಮಾವೇಶದಲ್ಲಿ ಮೈ ಚಳಿ ಬಿಟ್ಟು ಓಡುತ್ತಿರುವ ಹಿಂದೂ – ವಿರೋಧಿ ರಾಜ್ಯ ಕಾಂಗ್ರೆಸ್!! ಕಾಂಗ್ರೆಸ್ ನಾಯಕರಿಗಾಯ್ತು ಭರ್ಜರಿ ಮಾರಿಹಬ್ಬ!!

ಬೆಂಗಳೂರಿನಲ್ಲಿ ಇಂದು ಭಾರತೀಯ ಜನತಾ ಪಕ್ಷದ ಪರಿವರ್ತನಾ ಯಾತ್ರೆ ನಡೆಯುತ್ತಿದೆ! ಯಾತ್ರೆಯಲ್ಲಿ, ಅನಂತ್ ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಡಿವಿಎಸ್, ಬಿಎಸ್ ವೈ,. ರಂತಹ ಘಟಾನುಘಟಿ ಬಿಜೆಪಿ ನಾಯಕರು ಉಪಸ್ಥಿತರಿದ್ದು, ಜೊತೆಗೆ ಕೇಂದ್ರದಿಂದ ರಾಜನಾಥ್ ಸಿಂಗ್ ಕೂಡ ಆಗಮಿಸಿದ್ದಾರೆ! ಪರಿವರ್ತನಾ ಸಮಾವೇಶಕ್ಕೆ ಸಹಸ್ರಾರು ಕಾರ್ಯಕರ್ತರು ಸೇರಿದ್ದು, ಸಮಾರಂಭದಲ್ಲಿ ಹಿಂದೂ ವಿರೋಧಿ ಸರಕಾರದ ಮೇಲೆ ಮತ್ತೆ ಕೂಗೆದ್ದಿದೆ!

ಈ ಹಿಂದೆ, ಬಿಜೆಪಿಯವರದ್ದು ಕೊಳಕು ಮನಸ್ಸು, ಅವರ ಮನಸ್ಸೇ ಸರಿ ಇಲ್ಲ ಎಂದೆಲ್ಲ ಹೇಳಿದ್ದ ಸಿದ್ಧರಾಮಯ್ಯನವರು, ಪರಿವರ್ತನಾ ಯಾತ್ರೆಗಿಂತ ಮುಂಚೆ ಬಿಜೆಪಿ ನಾಯಕರು ಕೊಳಕು ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಲಿ ಎಂದಿದ್ದರು! ಆದರೆ, ಪರಿವರ್ತನೆಯಾಗಬೇಕಾಗಿರುವುದು ಸಿದ್ಧರಾಮಯ್ಯರವರ ಕೊಳಕು ಮನಸ್ಸು! ನಮ್ಮದಲ್ಲ! ರಾಜ್ಯದಲ್ಲಿ, ಇದೇ ಸಿದ್ಧರಾಮಯ್ಯನವರ ಆಡಳಿತದಲ್ಲಿ 20 ಹಿಂದೂಗಳ ಕಗ್ಗೊಲೆಯಾಗಿದೆ. ಪ್ರತೀ ಬಾರಿಯೂ ಒಂದಿಲ್ಲೊಂದು ಕಾರಣ ನೀಡಿ, ಸಾಕ್ಷಿ ನಾಶ ಮಾಡಿ ಕೊನೆಗೆ ಕೈ ತೊಳೆದು ಕೊಳ್ಳುತ್ತಿದ್ದಾರೆ. ಹಿಂದೂಗಳಿಗೆ ರಕ್ಷಣೆಯೇ ಇಲ್ಲ. ಸಿ ಎಂ ಸಿದ್ಧರಾಮಯ್ಯನವರು ಪಿಎಫ್ ಐಗೆ ರಕ್ಷಣೆ ಕೊಡುತ್ತಿದ್ದಾರೆ. ಮುಸಲ್ಮಾನರ ಓಲೈಕೆಗೆ ಟಿಪ್ಪು ಜಯಂತಿ ಮಾಡಿದ್ರು. ವಿರೋಧಗಳೆದ್ದರೂ ತಲೆ ಕೆಡಿಸಿಕೊಳ್ಳದ ಸರಕಾರದ ಆಡಳಿತದಲ್ಲಿ, ಇಂತಹ ಹಿಂದೂ ವಿರೋಧಿ ಸರಕಾರದ ಅಡಿಯಲ್ಲಿ ಹಿಂದೂಗಳಿಗೆ ಹೇಗೆ ಬದುಕಲು ಸಾಧ್ಯ?!’ ಎಂದು ಶೋಭಾ ಕರಂದ್ಲಾಜೆ ನೇರವಾಗಿಯೇ ಸಿದ್ಧರಾಮಯ್ಯರವರಿಗೆ ಮೆಣಸಿನ ಖಾರ ಹಚ್ಚಿದ್ದಾರೆ!

ಜೊತೆಗೆ, ‘ಕೆ ಆರ್ ಪುರಂ ನ ಕಾಂಗ್ರೆಸ್ ಶಾಸಕ ಭೂ ಮಾಫಿಯಾದ ಕಿಂಗ್! ಅವನ ಕಡೆಯಿಂದ 85 ಕೊಲೆಗಳು ನಡೆದಿದೆ! ಅಂತಹವನು ಕಾಂಗ್ರೆಸ್ ಸರಕಾರದಲ್ಲಿ ಜವಾಬ್ದಾರಿಯುತ ಶಾಸಕ! ಸಿದ್ಧರಾಮಯ್ಯನವರಿಗೆ ಇವೆಲ್ಲ ಪರವಾಗಿಲ್ಲವೇ?!’ ಎಂದು ಪ್ರಶ್ನಿಸಿದ್ದಾರೆ ಡಿ ವಿ ಸದಾನಂದ ಗೌಡರು!

ಅಲ್ಲದೇ, ವೇದಿಕೆಯಲ್ಲಿಯೇ ರಾಜನಾಥ್ ಸಿಂಗ್ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆಯವರ ವಿಚಾರಗಳನ್ನು ಅಲ್ಲಿಯೇ ಟಿಪ್ಪಣಿ ಮಾಡಿಕೊಂಡಿದ್ದು ವಿಶೇಷವಾಗಿತ್ತು!.

ಮೋದಿ ಮುಂದೆ ಸಿದ್ಧರಾಮಯ್ಯನವರು ಬಚ್ಚಾ! ಮೋದಿ ವಿಚಾರಗಳನ್ನು ಇಡೀ ಜಗತ್ತೇ ಗೌರವಿಸುತ್ತಿದೆ. ಅಂತಹದ್ದರಲ್ಲಿ, ಕಾಂಗ್ರೆಸ್ ನವರಿಗೆ ಮಾತ್ರ ಕಂಡಲ್ಲಿ ಉರಿಯುತ್ತೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದೆ! ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ! ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ, ಅಭಿವೃದ್ಧಿ ಕಾಣದ ಕರ್ನಾಟಕದಲ್ಲಿ, ರಾಜಧಾನಿಯನ್ನ ಕ್ರೈಂ ಸಿಟಿ ಮಾಡಿದ್ದಾರೆ ಸಿಎಮ್ಮು‘ ಎಂದು ಸಿದ್ಧರಾಮಯ್ಯನವರಿಗೆ ಸರಿಯಾಗಿ ಝಾಡಿಸಿದ್ದಾರೆ ಬಿ ಎಸ್ ವೈ!!

ಈ ಹಿಂದೆ ಸಿದ್ಧರಾಮಯ್ಯನವರು ಬಿಜೆಪಿಯವರ ಪರಿವರ್ತನಾ ಯಾತ್ರೆಯ ಬಗ್ಗೆ ಬಾಯಿಗೆ ಬಂದಂತೆ ಹೇಳಿದ್ದರು. ಅಲ್ಲದೇ, ತೀರಾ ಎನ್ನುವಷ್ಟು ತುಷ್ಟೀಕರಣವನ್ನು ಮಾಡಿದ ರಾಜ್ಯ ಕಾಂಗ್ರೆಸ್ 20 ಹಿಂದೂಗಳ ಸಾವಿಗೆ ಮುನ್ನುಡಿ ಬರೆದಿತ್ತು. ಇಷ್ಟು ದಿನವೂ ಸಹಿಸಿಕೊಂಡಿದ್ದ ಹಿಂದೂಗಳು ಪರೇಶ್ ಮೇಸ್ತಾನ ಹತ್ಯೆಯಾದಾಗ ತಿರುಗಿ ಬಿದ್ದಿದ್ದು, ಹಿಂದೆ ಭಾರತೀಯರು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದು ಚಚ್ಚಲು ತೊಡಗಿಂದಂತಹ ಪ್ರಮಾಣದಲ್ಲಿ ಉತ್ತರ ಕನ್ನಡದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಎದುರಿಗೆ ಬರುವಷ್ಟು ಧೈರ್ಯ ತೋರದ ಕಾಂಗ್ರೆಸ್ ಪಕ್ಷದವರು ಕೂತಲ್ಲಿಯೇ ‘ಆಕಸ್ಮಿಕ ಸಾವು’ ಎಂದು ಹೇಳಿಕೆ ಕೊಟ್ಟಿದ್ದೇ, ಹಿಂದೂಗಳು ರಣ ಕಹಳೆ ಊದಿದ್ದರಷ್ಟೇ! ಅಷ್ಟರಲ್ಲಿಯೇ ಮೆತ್ತಗಾದ ಕಾಂಗ್ರೆಸ್ ಬಾಲ ಮುದುರಿಕೊಂಡು ಪ್ರಕರಣವನ್ನು ಸಿಬಿಐ ಗೆ ವಹಿಸಿತ್ತು.

ಪ್ರಕರಣದಲ್ಲಿ, ಬಿಜೆಪಿಯವರು ತೀವ್ರವಾಗಿ ಪರೇಶ್ ಮೇಸ್ತಾನ ಸಾವಿಗೆ ಪ್ರತಿಭಟಿಸಿದ್ದರೆಂಬುದು, ಹಿಂದೂಗಳಿಗೆ ಬಿಜೆಪಿಯೇ ಪರಿಹಾರ ಎಂಬುದು ನಿಶ್ಚಿತವಾಗಿದ್ದರೂ, ಸಿದ್ಧರಾಮಯ್ಯ ಮತ್ತೆ ಬಿಜೆಪಿಯವರು ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಹೇಳಿಕೆಗೆ, ಅನಂತ ಕುಮಾರ್ ಹೆಗಡೆ ಸರಿಯಾಗಿಯೇ ತಿರುಗೇಟು ನೀಡಿದ್ದರು.

ಸಮಾವೇಶದಲ್ಲಿ,ರಾಜನಾಥ್ ಸಿಂಗ್, ‘ಇಂತಹ ಪರಿವರ್ತನಾ ಯಾತ್ರೆಯಿಂದಲೇ ಕರ್ನಾಟಕ ಪರಿವರ್ತನೆಯಾಗಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವೈಟ್ ಟ್ಯಾಪಿಂಗ್, ಸ್ಟೀಲ್ ಬ್ರಿಡ್ಜ್, ಕಸದ ವಿಚಾರ.. ಎಂಬಂತಹ ಅದೆಷ್ಟೋ ಭ್ರಷ್ಟಾಚಾರ ನಡೆದಿದೆ. ದೇಶದಲ್ಲಿ
ಕರ್ನಾಟಕವೇ ಭ್ರಷ್ಟಾಚಾರದಲ್ಲಿ ಮುಂದಿದೆ. ಇದನ್ನು ಸಾಧ್ಯವಾದಷ್ಟು ಬಗೆ ಹರಿಸಬೇಕು. ಭ್ರಷ್ಟಮುಕ್ತ ಕರ್ನಾಟಕವನ್ನಾಗಿ ಮಾಡಬೇಕು.
‘ ಎಂದು ಎಂದು ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಸೂಕ್ಷ್ಮ ವರದಿಯನ್ನೇ ನೀಡಿದ್ದಾರೆ.

– ಪೃಥು ಅಗ್ನಿಹೋತ್ರಿ

Editor Postcard Kannada:
Related Post