X

ಬೆಂಗಳೂರಿನ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಸಿದ್ಧರಾಮಯ್ಯರವರ ಮೈ ಚಳಿ ಬಿಡಿಸಿರುವ ಯೋಗಿ ಆದಿತ್ಯನಾಥ್ ಹೇಳಿದ್ದೇನು ಗೊತ್ತಾ?!

ವಿಜಯನಗರದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ರಾಜಕೀಯ ದಿಗ್ಗಜರು ಸೇರಿದ್ದಾರೆ! ಅದರಲ್ಲಿಯೂ ಕೂಡ, ಉತ್ತರ ಪ್ರದೇಶದ ಹಿಂದೂ ಹುಲಿ ಎಂದೇ ಗುರುತಿಸಿಕೊಂಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿವರ್ತನೆಗೆ ಆಗಮಿಸಿರುವುದು ಇನ್ನೂ ವಿಶೇಷ!

ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಯೋಗಿ ಆದಿತ್ಯನಾಥ್!

ಈ ಹಿಂದೆಯೂ ಕೂಡ ಕರ್ನಾಟಕಕ್ಕೆ ಬಂದಿದ್ದಾಗ, ಕನ್ನಡದಲ್ಲಿಯೇ ಭಾಷಣ ಆರಂಭಿಸಿದ್ದ ಯೋಗಿ ಆದಿತ್ಯನಾಥ್, ಈ ಬಾರಿಯೂ ಸಹ
ಕಾರ್ಯಕರ್ತರನ್ನುದ್ದೇಶಿಸಿ, ‘ಬೆಂಗಳೂರಿನ ಸೋದರ ಸೋದರಿಯರಿಯರಿಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ್ದಕ್ಕೆ ಕಾರ್ಯಕರ್ತರು ಹರ್ಷೋದ್ಘಾರ ಮಾಡಿದ್ದಾರೆ!

“ಹಿಂದುತ್ವ ದೇಶದ ಜೀವಾಳ! ಅತ್ಯಂತ ಉತ್ಕೃಷ್ಟ ಬದುಕು ಹಿಂದೂಗಳದ್ದು! ಆದರೆ, ಅದು ಕಾಂಗ್ರೆಸ್ ಗೆ ಸಮಸ್ಯೆ ಆಗಿದೆ! ಕಾಂಗ್ರೆಸ್ ನನ್ನು ಇಡೀ ದೇಶದಿಂದಲೇ ಹೊಡೆದೋಡಿಸಲಾಗುತ್ತಿದೆ! ಆದರೆ, ಅವರಿನ್ನೂ ಹಿಂದುತ್ವದ ನಿರ್ನಾಮದ ಜಪ ಮಾಡುತ್ತಿದ್ದಾರೆ. ನೆನ್ನೆ ಸಿದ್ಧರಾಮಯ್ಯರವರ ಭಾಷಣ
ಕೇಳಿದೆ! ನನ್ನ ಹೆಸರಲ್ಲೇ ಹಿಂದೂ ಇದೆ ಎನ್ನುತ್ತಿದ್ದಾರೆ! ಇಷ್ಟು ದಿನ ಇಲ್ಲದ ಹಿಂದುತ್ವ ಈಗ ಬಂದಿದೆ! ಚುನಾವಣೆಯ ಸಮಯದಲ್ಲಿ ಹಿಂದುತ್ವ ಸ್ಮರಣೆ ಮಾಡುತ್ತಿದ್ದಾರೆ! ತಾಕತ್ತಿದ್ದರೆ, ದೇಶ ದ್ರೋಹಿ ಸಂಘಟನೆಗಳನ್ನು ನಿಷೇಧಿಸಿ ತಾನು ಯಾರು ಎಂಬುದನ್ನು ತೋರಿಸಲಿ.”

“ಅಟಲ್ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಅನೇಕ ಯೋಜನೆಗಳನ್ನು ಕರ್ನಾಟಕಕ್ಕೆ ಪರಿಚಯಿಸಿದರು. ಕೊನೆಗೆ , ಮೋದಿಯಾಡಳಿತದಲ್ಲಿ ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಬಿರುದು ನೀಡಲಾಯಿತು. ಮೆಟ್ರೋ ಬಂದಿತು! ಕಳೆದ ಐದು ವರುಷಗಳಲ್ಲಿ ದಿನೇ ದಿನೇ ಕಾಂಗ್ರೆಸ್ ಸರಕಾರ ಅಭಿವೃದ್ಧಿಗೆ ಕೊಡಲಿಯೇಟು ನೀಡಿದೆ! ಅಭಿವೃದ್ಧಿಯಾಗಬೇಕಾದರೆ, ಬಿಜೆಪಿಗೆ ಮತ ನೀಡಿ! ಸಮಾನ ಮನಸ್ಕ ನಾಯಕರಿರಬೇಕು ರಾಜಕೀಯದಲ್ಲಿ.”

ಚುನಾವಣೆ ಬಂದ ತಕ್ಷಣ ಕಾಂಗ್ರೆಸ್ ನವರಿಗೆ ಇದ್ದಕ್ಜಿದ್ದಂತೆ ಹಿಂದುತ್ವ ನೆನಪಾಗುತ್ತದೆ! ಏನು ಬೇಕಿದೆ ಕರ್ನಾಟಕ ಕಾಂಗ್ರೆಸ್ ಗೆ ?! ಕರ್ನಾಟಕದಲ್ಲಿ ಅಭಿವೃದ್ಧಿಯಾಗಿ ಜನರು ಸಂತಸದಿಂದ ಇರಬೇಕೆಂದರೆ ಮೊದಲು ಕಾಂಗ್ರೆಸ್ ಅನ್ನು ನಿರ್ನಾಮ ಮಾಡಿ! ಈಗಾಗಲೇ, ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ! ಕರ್ನಾಟಕದಲ್ಕಿಯೂ ಆಗಬೇಕಿದೆ!

ಸಿದ್ಧರಾಮಯ್ಯರವರ ಸರಕಾರ, ಹಿಂದೂ ವಿರೋಧಿ ಎಂದು ಎಲ್ಲರಿಗೂ ಗೊತ್ತಿದೆ! ಅಕಸ್ಮಾತ್, ಏನಾದರೂ ಸಿದ್ಧರಾಮಯ್ಯರವರು ನನ್ನ ಹೆಸರಿನಲ್ಲಿ ಹಿಂದೂ ಇದೆ ಎನ್ನುವುದಾದರೆ ಮೊದಲು ಗೋಹತ್ಯೆ ನಿಷೇಧಿಸಲಿ. ತಾಕತ್ತಿದ್ದರೆ, ಸಿದ್ಧರಾಮಯ್ಯರವರ ಸರಕಾರ, ಹಿಂದೂಗಳ ಸಾವಿಗೆ ನ್ಯಾಯ ದೊರಕಿಸಿಕೊಡಲಿ!

“ರಾಮ ರಾಜ್ಯದ ಕನಸಿಗೆ ಕರ್ನಾಟಕದ್ದೂ ಪಾಲಿದೆ! ಸೀತೆಯನ‌್ನು ಹುಡುಕಿಕೊಡಲು ರಾಮನಿಗೆ ಸಹಕರಿಸಲು ಇದೇ ಕರ್ನಾಟಕದಲ್ಲಿ ಹುಟ್ಟಿದ್ದ ಹನುಮಂತ! ರಾಮರಾಜ್ಯದ ಸ್ಥಾಪನೆಗೆ ಕರ್ನಾಟಕದ ಪಾಲು ಬಹಳವಿದೆ!”

ಸಿದ್ಧರಾಮಯ್ಯರವರಿಗೆ ಚಳಿ ಬಿಡಿದಿರುವುದು ಇದೇ ಮೊದಲಲ್ಲ!

ಯೋಗಿ ಆದಿತ್ಯನಾಥ್ ರವರಿಗೆ ಸಿದ್ಧರಾಮಯ್ಯರವರ ಹಿಂದೂವಿರೋಧಿ ಹಾಗೂ ಅವ್ಯವಸ್ಥೆಗಳ ಭಯಕಂರ ತಿರಸ್ಜಾರವಿದೆ! ಈ ಹಿಂದೆ, ಹುಬ್ಬಳ್ಳಿಗೆ ಆಗಮಿಸಿದ್ದಾಗಲೂ ಸಹ, ಯೋಗಿ ಸಿದ್ದರಾಮಯ್ಯರವರಿಗೆ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದರು! ಈಗಲೂ ಸಹ, ಸಿದ್ಧರಾಮಯ್ಯರವರ ಸರಕಾರಕ್ಕೆ ತರಾಟೆಗೆ ತೆಗೆದುಕೊಂಡಿರುವ ಯೋಗಿ ಆದಿತ್ಯನಾಥ್ ಕರ್ನಾಟಕ ಕಾಂಗ್ರೆಸ್ ಗೆ ಬಿಸಿ ಮುಟ್ಟಿಸಿರುವುದು ಸುಳ್ಳಲ್ಲ.

– ಪೃಥು ಅಗ್ನಹೋತ್ರಿ

Editor Postcard Kannada:
Related Post