ಕರ್ನಾಟಕದಲ್ಲೇ ಜನ್ಮತಾಳಿದ ಪಕ್ಷವೊಂದು ಇಂದು ಕರ್ನಾಟಕದಲ್ಲೇ ತನ್ನ ನೆಲೆಕಂಡುಕೊಳ್ಳಲು ಪರದಾಡುತ್ತಿದೆ…!
ತನ್ನ ಪಕ್ಷವನ್ನು ಬಲಪಡಿಸಲು ಎಲ್ಲಿ ಅವಕಾಶ ಸಿಗುತ್ತದೆ ಎಂದು ಕಾಯುತ್ತಿದೆ. ಪ್ರಮುಖ ಎರಡು ರಾಷ್ಟ್ರೀಯ ಪಕ್ಷಗಳನ್ನು ಮಣಿಸುವ ಸಲುವಾಗಿ ಇಂದು ಜೆಡಿಎಸ್ ಪಕ್ಷವು ಕಮ್ಯುನಿಸ್ಟರಿಗೆ ಬೆಂಬಲ ಕೊಡಲು ತಯಾರಾಗಿದೆ…!?
ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಇಂದು ದೇವರನ್ನು ಪೂಜೆ ಮಾಡುವುದಕ್ಕೂ ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಅದಕ್ಕೆ ಕಾರಣ “ಕಮ್ಯುನಿಸ್ಟ್”.! ಚೀನಾದ ತತ್ವವನ್ನು ಆಧರಿಸಿ ಹುಟ್ಟಿಕೊಂಡಂತಹ ಪಕ್ಷ “ಕಮ್ಯುನಿಸ್ಟ್”. ಸದಾ ರಕ್ತಪಾತ ನಡೆಸುತ್ತಿರುವ ಕಮ್ಯುನಿಸ್ಟರು ಇಂದು ಕೇರಳದಲ್ಲಿ ಸಾಮಾನ್ಯ ಜನರಿಗೆ ಬದುಕಲು ಬಿಡುತ್ತಿಲ್ಲ ಎಂಬುದು ದುರಾದ್ರಷ್ಟಕರವಾದ ವಿಚಾರ…! ಯಾಕೆಂದರೆ ಕಮ್ಯುನಿಸ್ಟರ ತತ್ವವೇ ಹೀಗೆ. ತಮ್ಮ ಏಳಿಗೆಗಾಗಿ ಇತರರನ್ನು ಮುಗಿಸುತ್ತಲೇ ಬರುತ್ತಾರೆ.
ಇದೇ ರೀತಿ ಇಂದು ಕರ್ನಾಟಕದಲ್ಲೂ ಕೊಲೆಗಳು ನಡೆಯುತ್ತಿದೆ. ಸರಕಾರದ ಕುಮ್ಮಕ್ಕಿನಿಂದ ಹಲ್ಲೆ ಕೊಲೆಗಳು ಸೇರಿದಂತೆ ಸಮಾಜಘಾತುಕ ಚಟುವಟಿಕೆಗಳು ನಡೆಯುತ್ತಲೇ ಇದೆ…!
ಆದರೆ ಇಂದು ಜೆಡಿಎಸ್ ಇದೇ ಕಮ್ಯುನಿಸ್ಟರಿಗೆ ಮುಂದಿನ ಚುನಾವಣೆಯಲ್ಲಿ ಬೆಂಬಲ ಸೂಚಿಸಿ ಕರಾವಳಿಯ ಕೆಲ ಭಾಗಗಳಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಎಚ್ ಡಿ ದೇವೇಗೌಡರು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ…!
ಹಾಗಾದರೆ ಮತ್ತೆ ಕರಾವಳಿಯಲ್ಲಿ ಗಲಭೆ ಸ್ರಷ್ಟಿಸಲು ಜೆಡಿಎಸ್ ಕೂಡಾ ಕಾಯುತ್ತಿದೆ ಎಂಬುದು ಸಾಬೀತಾಗಿದೆ…!?
ಕರಾವಳಿಯಲ್ಲಿ ದಿನಕಳೆದಂತೆ ರಾಜಕೀಯ ಪ್ರೇರಿತ ಕೋಮುಗಲಭೆಗಳು ನಡೆಯುತ್ತಲೇ ಇದೆ.
ಇವೆಲ್ಲದಕ್ಕೂ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ…! ಇತ್ತ ದೇವೇಗೌಡರ ಈ ಹೇಳಿಕೆಯು ಕಮ್ಯುನಿಸ್ಟರಿಗೆ ಕರ್ನಾಟಕದಲ್ಲೂ ತಮ್ಮ ಕ್ರತ್ಯ ಮುಂದುವರೆಸಲು ಅವಕಾಶ ಮಾಡಿಕೊಟ್ಟಂತಿದೆ…!
ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಕಳೆದ ಬಾರಿ ಮಂಗಳೂರಿಗೆ ಬಂದಾಗ ಇಡೀ ಕರಾವಳಿಯೇ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕೇರಳದಲ್ಲಿ ರಕ್ತಪಾತ ನಡೆಸಿದ ಪಿಣರಾಯ್ ವಿಜಯನ್ ಗೆ ಮಂಗಳೂರಿಗೆ ಬರಲು ಅವಕಾಶ ನೀಡಬಾರದು ಎಂದು ಇಡೀ ರಾಜ್ಯವೇ ತಿರುಗಿಬಿದ್ದರು ರಾಜ್ಯ ಕಾಂಗ್ರೆಸ್ ಸರಕಾರ ಬಿಗಿಭದ್ರತೆ ನೀಡಿ ಮಂಗಳೂರಿಗೆ ಬರುವಂತೆ ಮಾಡಿತ್ತು. ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಮಂಗಳೂರಿಗೆ ಬಂದು ಹೋದ ಕೆಲವೇ ದಿನಗಳಲ್ಲಿ ಕರಾವಳಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಬಿದ್ದಿತ್ತು…!
ಕರಾವಳಿಯಲ್ಲಿ ತೀವ್ರ ವೀರೋಧದ ನಡುವೆಯೂ ಪಿಣರಾಯ್ ವಿಜಯನ್ ಮಂಗಳೂರಿಗೆ ಬಂದು ಇಲ್ಲಿ ಪ್ರಚೋಧನಕಾರಿ ಭಾಷಣ ಮಾಡಿ ಕಾರ್ಯಕರ್ತರನ್ನು ಮತ್ತಷ್ಟು ಉತ್ತೇಜಿಸತೊಡಗಿದ್ದರು.
ಇದಾದ ಕೆಲವೇ ದಿನದಲ್ಲಿ ಮಂಗಳೂರಿನ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆಯಾಗಿತ್ತು…!
ಕೇರಳದ ಮಾದರಿಯಲ್ಲೇ ಮಂಗಳೂರಿನಲ್ಲಿ ದುಷ್ಕ್ರತ್ಯಗಳನ್ನು ನಡೆಸುತ್ತಿರುವ ಕೆಂಪು ಉಗ್ರರಿಗೆ ಕರ್ನಾಟಕದಲ್ಲಿ ಜೆಡಿಎಸ್ ಬೆಂಬಲ ಕೊಡಲು ಸಿದ್ದವಾಗಿದೆ ಎಂದರೆ ಜೆಡಿಎಸ್ ಕೂಡಾ ಕರಾವಳಿಯ ಶಾಂತಿಗೆ ಧಕ್ಕೆ ತರುವ ಹುನ್ನಾರ ನಡೆಸುತ್ತಿದೆ…!
ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುವ ದೇವೇಗೌಡರು ಮಂಗಳೂರಿನಲ್ಲಿ ಮುಂದಿನ ಚುನಾವಣೆಯಲ್ಲಿ ಸಿಪಿಎಂ (ಕಮ್ಯುನಿಸ್ಟ್) ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ…!
ಬಿಜೆಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಮೇಲೆ ಕುಮಾರಸ್ವಾಮಿ ಪಶ್ಚಾತ್ತಾಪ ಪಡುವಂತಾಗಿದೆ ಎಂದು ದೇವೇಗೌಡರು ಹೇಳಿದ್ದಾರೆ… ಹಾಗಾದರೆ ತಮ್ಮ ವಿರೋಧ ಪಕ್ಷದ ಕಾರ್ಯಕರ್ತರನ್ನು ಬರ್ಬರವಾಗಿ ಹಾಡುಹಗಲೇ ಕೊಲೆ ಮಾಡುತ್ತಿರುವ ಕಮ್ಯುನಿಸ್ಟರ ಜೊತೆ ಕೈಜೋಡಿಸುವುದು ಸಂತಸವೆಂಬಂತಿದೆ ದೇವೇಗೌಡರ ಮಾತು…!?
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ ದೇವೇಗೌಡರು ಸಿಪಿಎಂ ಜೊತೆ ಸೇರುವುದಾಗಿ ಹೇಳಿದ್ದಾರೆ…!
ಈ ಮೂಲಕ ಕರಾವಳಿಯಲ್ಲಿ ಮತ್ತಷ್ಟು ಕೆಂಪು ಉಗ್ರರಿಗೆ ಅಟ್ಟಹಾಸ ಮೆರೆಯಲು ತಾವೂ ಬೆಂಬಲ ಸೂಚಿಸಿದಂತಿದೆ….!
ಕೇರಳದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಸಿಪಿಎಂ ಕಾರ್ಯಕರ್ತರ ವಿರುದ್ದ ಕೇರಳದ ಕಮ್ಯುನಿಸ್ಟ್ ಸರಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಸದಾ ಕೇರಳದಲ್ಲಿ ರಕ್ತಪಾತ ನಡೆಯುತ್ತಿದೆ…!
‘ನಮ್ಮದು ಪ್ರಾದೇಶಿಕ ಪಕ್ಷ. ಕರ್ನಾಟಕದ ಮತ್ತು ಕನ್ನಡದ ಉಳಿವಿಗಾಗಿ ಶ್ರಮಿಸುವ ಪಕ್ಷ ಜೆಡಿಎಸ್ ಮಾತ್ರ’ ಎಂದು ಜಂಬಕೊಚ್ಚಿಕೊಳ್ಳುವ ದೇವೇಗೌಡರು ಇದೀಗ ಚೀನಾದ ತತ್ವಗಳನ್ನು ಪಾಲಿಸಿಕೊಂಡು ದೇಶಕ್ಕೆ ಮಾರಕವಾಗಿರುವ ಕಮ್ಯುನಿಸ್ಟರ ಜೊತೆ ಸೇರಲು ಹೊರಟಿದ್ದಾರೆ ಎಂದರೆ ದೇವೇಗೌಡರ ಭಾಷಾಭಿಮಾನ ದೇಶಾಭಿಮಾನ ಮತ್ತು ರಾಜ್ಯದ ಮೇಲೆ ಇರುವ ಕಾಳಜಿ ಅರಿವಾಗುತ್ತದೆ…!
ಕರ್ನಾಟಕದಲ್ಲೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ಕೊಲೆಗಳು ಹೆಚ್ಚುತ್ತಾ ಇದೆ…ಆದರೆ ಜೆಡಿಸ್ ವರಿಷ್ಠ ಎಚ್ ಡಿ ದೇವೇಗೌಡರು ಇದೀಗ ಮತ್ತೆ ಕೆಂಪು ಉಗ್ರರ ಜೊತೆ ಮೈತ್ರಿಗೆ ತಯಾರಾಗಿರುವುದು ರಾಜ್ಯದ ಜನತೆಯ ದುರಾದ್ರಷ್ಟವೇ ಸರಿ…! ಪಕ್ಷದ ಉಳಿವಿಗಾಗಿ ಯಾವ ರೀತಿ ಎಲ್ಲಿ ಅವಕಾಶ ಸಿಗುತ್ತದೆ ಎಂದು ಕಾಯುತ್ತಿರುವ ಜೆಡಿಎಸ್ ಪಕ್ಷದ ಮುಖಂಡರು ಕೊಲೆಗಡುಕರ ಜೊತೆಗೆ ಮೈತ್ರಿ ಮಾಡಲು ಹೊರಟಿದ್ದಾರೆ…! ಇಂತಹ ‘ಸೂಟ್ ಕೇಟ್’ ಪಕ್ಷಕ್ಕೆ ಮುಂದಿನ ಚುನಾವಣೆ ಯಲ್ಲಿ ಕರಾವಳಿಯ ಜನತೆ ಬಲಿಯಾಗದಿರಲಿ…!!!
source: public tv
–ಅರ್ಜುನ್