X

ಬ್ರೇಕಿಂಗ್!! ರಾಹುಲ್ ಗಾಂಧಿಯ ಟೆಂಪಲ್ ರನ್ ಗೆ ಅಮಿತ್ ಶಾ ಕೊಟ್ಟ ಗುನ್ನಾ ಏನು ಗೊತ್ತಾ?! ಕರ್ನಾಟಕದಲ್ಲಿ ಶಾ ಮಾಡುತ್ತಿರುವ ತಂತ್ರಗಾರಿಕೆ ಏನು?!

ಅಮಿತ್ ಶಾ… ಭಾರತೀಯ ಜನತಾ ಪಕ್ಷದ ರಾಜಕೀಯ ಚಾಣಕ್ಯ. ತಾನು ದೆಹಲಿ ಗದ್ದುಗೆ ಹಿಡಿದ ನಂತರ ಬರೋಬ್ಬರಿ 19ರಾಜ್ಯಗಳಲ್ಲಿ ಕೇಸರಿ ಪತಾಕೆಯನ್ನು ಹಾರಿಸಿದ ಕೀರ್ತಿ ಈ ಚಾಣಕ್ಯನದ್ದು. ಇದುವರೆಗೂ ಗೆಲುವಿನ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲದ ರಾಜ್ಯಗಳಲ್ಲಿ ಕಮಲದ ಬಾವುಟ ಹಾರಿಸಿದ ಕೀರ್ತಿ ಈ ಚಾಣಕ್ಯನದ್ದು. ಉತ್ತರ ಪ್ರದೇಶ, ಉತ್ತರ ಕಾಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ ಸೇರಿದಂತೆ 19ರಾಜ್ಯಗಳಲ್ಲಿ ಕೇಸರಿಯನ್ನು ರಾರಾಜಿಸಿದ್ದಾರೆ. ಕರ್ನಾಟಕದ ಚುನಾವಣೆಗೆ ಲಗ್ಗೆ ಇಟ್ಟ ಅಮಿತ್ ಶಾ…

ಯೆಸ್… ಶಾ ಮುಂದಿನ ಟಾರ್ಗೆಟ್ ಕರ್ನಾಟಕ. ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ವನ್ನು ಶತಾಯ ಗತಾಯ ಸೋಲಿಸಲೇ ಬೇಕು ಎನ್ನುವ ಹಠದಿಂದ ಟೊಂಕ ಕಟ್ಟಿ ನಿಂತಿರುವ ಅಮಿತ್ ಶಾ ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಗಮನ ಹರಿಸಿದ್ದಾರೆ. ರಾಜ್ಯದ ಭಾರತೀಯ ಜನತಾ ಪಕ್ಷದ ನಾಯಕರಿಗೆ ಟಾಸ್ಕ್ ನೀಡಿ ಎಲ್ಲಿಲ್ಲದ ತಲೆನೋವು ತಂದಿಟ್ಟಿದ್ದಾರೆ.

ರಾಹುಲ್ ಗಾಂಧಿಗೆ ಟಾಂಗ್ ನೀಡಲಿದ್ದಾರೆ ಶಾ…

ಹಿಂದಿನಿಂದಲೂ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುವ ಪಕ್ಷ ಕಾಂಗ್ರೆಸ್ ಈಗ ಮೆತ್ತಗಿನ ಅನುಭವವನ್ನು ಅನುಸರಿಸುವ ಹಾದಿ ಹಿಡಿದಿದೆ. ಹಿಂದೂ ವಿರೋಧಿ ನೀತಿ ವಿರುದ್ಧ ಸಿಡಿದೆದ್ದ ಜನತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವನ್ನು ಮಣಿಸಿ ಭಾರತೀಯ ಜನತಾ ಪಕ್ಷವನ್ನು ದೆಹಲಿಯ ಗದ್ದುಗೆಗೆ ಕೂರಿಸಿ ಬಿಟ್ಟಿತು. ಇದು ಕಾಂಗ್ರೆಸ್ ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ನಂತರ ನಡೆದ ಅದೆಷ್ಟೋ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತು ಸುಣ್ಣವಾಗಿ ಹೋಗಿತ್ತು. ಇದರಿಂದ ವಿಚಲಿತರಾದ ಕಾಂಗ್ರೆಸ್ ಪಕ್ಷ ಹಿಂದೂ ಧರ್ಮದ ವಿಷಯದಲ್ಲಿ ಸಾಫ್ಟ್ ಕಾರ್ನರ್ ತಂತ್ರಗಳನ್ನು ಅನುಸರಿಸುವ ಪ್ರಯತ್ನವನ್ನೂ ಮಾಡಿತ್ತು. ಗುಜರಾತ್ ವಿಧಾನಸಭೆಯಲ್ಲಿ ಈ ಪ್ರಯತ್ನವನ್ನೂ ಮಾಡಿದ್ದರೂ ಕಾಂಗ್ರೆಸ್ ಗೆ ಇದು ಫಲ ನೀಡಿಲ್ಲ. ರಾಹುಲ್ ಗಾಂಧಿ ಅದೆಷ್ಟೋ ದೇವಸ್ಥಾನಗಳ ಭೇಟಿ ಮಾಡಿ ಪೂಜೆ ಯ ನಾಟಕ ಮಾಡಿದರೂ ಜನರು ಸೊಪ್ಪು ಹಾಕಲಿಲ್ಲ. ಕೊನೆಗೆ ತಾನೊಬ್ಬ ಹಿಂದೂ ಎಂದು ಬಿಂಬಿಸಿಕೊಳ್ಳಲು ಜನಿವಾರವನ್ನು ಎತ್ತಿ ತೋರಿಸಬೇಕಾದ ಪರಿಸ್ಥಿತಿಯನ್ನು ತಲುಪಿತ್ತು.

ಈಗ ಕರ್ನಾಟಕ ಚುನಾವಣೆ ಸಮಯದಲ್ಲಿ ರಾಹುಲ್ ಗಾಂಧಿ ಮತ್ತೆ ದೇವಸ್ಥಾನಗಳ ಭೇಟಿ ಮಾಡಿ ಪೂಜೆ ಮಾಡುವ ನಾಟಕವನ್ನು ಶುರು ಮಾಡಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿ ಶೃಂಗೇರಿ ಹಾಗೂ ಉಡುಪಿಯ ಮಠದಲ್ಲಿ ವಾಸ್ತವ್ಯ ಹೂಡಿ ಮತ್ತೆ ಕರ್ನಾಟಕ ಚುನಾವಣೆಯಲ್ಲಿ ಟೆಂಪಲ್ ರನ್ ಗೇಮ್ ಪ್ಲಾನ್ ಮಾಡಲು ಅಣಿಯಾಗುತ್ತಿದ್ದಾರೆ.

ಅಮಿತ್ ಶಾ ಇಟ್ಟರು ರಾಹುಲ್ ಗೆ ಗುನ್ನಾ…!

ಅಮಿತ್ ಶಾ ಅಂದರೆ ಕೇಳಬೇಕಾ. ಚುನಾವಣೆ ತಂತ್ರಗಳನ್ನು ಅನುಸರಿಸುವುದರಲ್ಲಿ ಎತ್ತಿದ ಕೈ. ಟೆಂಪಲ್ ರನ್ ಮಾಡುತ್ತಿರುವ ರಾಹುಲ್
ಗಾಂಧಿ ಯ ಬುಡಕ್ಕೆ ಕೊಡಲಿ ಏಟು ನೀಡಲು ಚಾಣಕ್ಯ ಸಖತ್ ಪ್ಲಾನ್ ನಡೆಸಿದ್ದಾರೆ. ಇದೇ ಜನವರಿ 25ಕ್ಕೆ ಮೈಸೂರಿಗೆ ಆಗಮಿಸುತ್ತಿರುವ ಅಮಿತ್ ಶಾ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಯಾವ ಲಿಂಗಾಯತ ಧರ್ಮದ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಖತರ್ನಾತ್ ತಂತ್ರಗಳನ್ನು ಅನುಸರಿಸುವ ಪ್ರಯತ್ನವನ್ನು ಮಾಡಿ ಅವರ ಮತವಿಭಜನೆ ಮಾಡಲು ಪ್ರಯತ್ನವನ್ನು ಮಾಡಿತ್ತೊ ಅದೇ ಸಮುದಾಯಕ್ಕೆ ಈಗ ಅಮಿತ್ ಶಾ ಸಖತ್ ಪ್ಲಾನ್ ಮಾಡಿ ಲಿಂಗಾಯತ ಧರ್ಮದ ಮತದಾರರನ್ನು ಸೆಳೆಯುವ ಪ್ಲಾನ್ ನಡೆಸಿದ್ದಾರೆ. ಇದೇ 25ಕ್ಕೆ ಮೈಸೂರಿನಲ್ಲಿ ನಡೆಯುವ ಸಮವೇಶದಲ್ಲಿ ಭಾವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಲು ಸಜ್ಜಾಗಿದ್ದಾರೆ.

ಒಟ್ಟಾರೆ ಮುಂದಿನ ಚುನಾವಣೆ ಧರ್ಮದ ವಿಷಯದಲ್ಲಿ ಆಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದು ರಾಹುಲ್ ಗಾಂಧಿಯ ತಂತ್ರಕ್ಕೆ ಪ್ರತಿ ತಂತ್ರ ಹೂಡಲು ಬಿಜೆಪಿ ಸಖತ್ ಪ್ಲಾನ್ ನಡೆಸುತ್ತಿರುವುದಂತು ಸತ್ಯ.

-ಸುನಿಲ್ ಪಣಪಿಲ

Editor Postcard Kannada:
Related Post