X

ಮತಾಂತರಗೊಳ್ಳೊಕ್ಕೆ ತಿರಸ್ಕರಿಸಿದ ಹಿಂದು ಹೆಣ್ಣನ್ನು ಮಾವನೇ ಅತ್ಯಾಚಾರ ಮಾಡಿದನೇ ?!

ಲವ್ ಜಿಹಾದ್ ಗೆ ಒಳಗಾದ ಅದೆಷ್ಟೋ ಮುಗ್ಧ ಹೆಣ್ಣುಮಕ್ಕಳು ಮುಸಲ್ಮಾನ ಯುವಕರ ಬಣ್ಣ ಬಣ್ಣದ ಮಾತಿಗೆ ಮೋಡಿಯಾಗಿ ಒಂದಿಷ್ಟು ಜನ ಬಲಿಯಾದರೆ, ಇನ್ನು ಒಂದಿಷ್ಟು ಜನ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ನರಕಯಾತನೆ ಅನುಭವಿಸುತ್ತದ್ದಾರೆ. ಇದೀಗ ಮತ್ತೋರ್ವ ಹಿಂದೂ ಹುಡುಗಿಯೊಬ್ಬಳು ಮುಸಲ್ಮಾನ ಯುವಕನ ಪ್ರೇಮ ಪಾಶಕ್ಕೆ ಸಿಲುಕಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದಾಗ ತನ್ನ ಪ್ರಿಯಕರನ ಸಂಬಂಧಿಕರೇ ಆಕೆಯನ್ನು ಅತ್ಯಚಾರ ಮಾಡಿ ಕೊಲೆಗೈದಿರುವ ಘಟನೆ ಇತ್ತೀಚೆಗೆ ನಡೆದಿದೆ!!

ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ ಹಿಂದೂ ಹೆಣ್ಣುಮಗಳೊಬ್ಬಳನ್ನು ಅತ್ಯಾಚಾರ ನಡೆಸಿ ಆಕೆಯನ್ನು ಹತ್ಯೆ ಮಾಡಿರುವಂತಹ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದ್ದು, ಲವ್ ಜಿಹಾದ್ ನ ಕೂಪಕ್ಕೆ ಈಕೆಯೂ ಬಲಿಯಾಗಿದ್ದಾಳೆ!! ಜಾರ್ಖಂಡ್ ನ ಬೋಕಾರೊ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಯಿಂದಾಗಿ ಇಡೀ ದೇಶದ ಜನತೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.

ಹೌದು… ಜಾರ್ಖಂಡ್ ನ ರಾಮಗಢ ಜಿಲ್ಲೆಯ ಭದಾನಿ ನಗರದ ಒಪಿ ಪ್ರದೇಶದ ನಿವಾಸಿಯಾಗಿರುವ ಈ ಹುಡುಗಿ, ನವೆಂಬರ್ 6 ರಂದು ಕಾಣೆಯಾಗಿದ್ದಾಳೆ ಎಂದು ವರದಿಯಾಗಿತ್ತಲ್ಲದೇ ತದನಂತರ ಕೈ ಕಾಲುಗಳನ್ನು ಕಟ್ಟಿದ್ದ ಆಕೆಯ ಮೃತ ದೇಹವು ಬೊಕಾರೋದ ಗಾರ್ನಾ ನದಿಯಲ್ಲಿ ಪತ್ತೆಯಾಗಿವೆ ಎಂದೂ ವರದಿಯಾಗಿತ್ತು. ಆದರೆ ಕೊಲೆಯಾಗುವುದಕ್ಕಿಂತ ಮುಂಚೆಯೇ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿರುವ ಬಗ್ಗೆ ಮರಣೋತ್ತರ ಪರೀಕ್ಷೆಯ ಮೂಲಕ ತಿಳಿದು ಬಂದಿದೆ!!

ಈ ಬಗ್ಗೆ ತೀವ್ರವಾಗಿ ಕಾರ್ಯಚರಣೆ ನಡೆಸಿರುವ ಪೆÇಲೀಸರು ಇದೇ ಭಾನುವಾರದಂದು ಹಿಂದೂ ಹುಡುಗಿಯ ಪ್ರಿಯಕರನಾದ ಆದಿಲ್ ಅನ್ಸಾರಿ ಎಂಬುವಾತನನ್ನು ಬಂಧಿಸಿದ್ದರು. ಅಷ್ಟೇ ಅಲ್ಲದೇ, ಈತನನ್ನು ವಿಚಾರಣೆ ನಡೆಸಿ ತನಿಖೆ ಮಾಡಿದ ಪೊಲೀಸರಿಗೆ ಆದಿಲ್ ಅನ್ಸಾರಿ ಈ ಕೊಲೆಯ ವಿಚಾರದ ಬಗ್ಗೆ ಬಾಯಿಬಿಟ್ಟಿದ್ದಾನೆ.

ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಆದಿಲ್ ಮತ್ತು ಆಕೆಯ ಹುಡುಗಿ ಒಬ್ಬರಿಗೊಬ್ಬರು ಪ್ರೀತಿಸಿರುವ ವಿಚಾರವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಲ್ಲದೇ, ಮದುವೆಯಾಗಲೆಂದೇ ಒಟ್ಟಿಗೆ ಓಡಿಹೋಗಿದ್ದೆವು ಎಂದು ಹೇಳಿದ್ದಾನೆ. ಮದುವೆಯಾದ ಬಳಿಕ ಅವರಿಬ್ಬರು ಕೂಡ ಬೊಕೊರೊದಲ್ಲಿನ ಆದಿಲ್ ನ ಚಿಕ್ಕಪ್ಪನ ಮನೆಗೆ ಬಂದಿರುವ ಬಗ್ಗೆ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೇ, ಆದಿಲ್ ನ ಚಿಕ್ಕಪ್ಪ ಆತನ ತಂದೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದನಲ್ಲದೇ ನವ ದಂಪತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಅದೇ ಸಂದರ್ಭದಲ್ಲಿ, ಆದಿಲ್ ಮತ್ತು ಆತನ ಪ್ರೇಯಸಿ ಬೇರೆ ಬೇರೆ ಧರ್ಮದವರಾಗಿರುವುದರಿಂದ ಆ ಹುಡುಗಿಯನ್ನು ಇಸ್ಲಾಂಗೆ ಪರಿವರ್ತಿಸಬೇಕು. ಒಂದು ವೇಳೆ ಹುಡುಗಿ ಇಸ್ಲಾಂಗೆ ಪರಿವರ್ತನೆಗೊಳ್ಳಲು ನಿರಾಕರಿಸಿದರೆ, ಹುಡುಗನೇ ಆಕೆಯನ್ನು ಬಿಡಬೇಕೆಂದು ಹೇಳಿದರು ಎಂದು ಪೊಲೀಸರ ಮುಂದೆ ಈತ ಬಾಯ್ಬಿಟ್ಟಿದ್ದಾನೆ.

ಆದರೆ ಈ ಜೋಡಿಯು ಧರ್ಮಕ್ಕೆ ಪರಿವರ್ತನೆಗೊಳ್ಳದೆ ಒಟ್ಟಿಗೆ ವಾಸಿಸುವುದಾಗಿ ತಿಳಿಸಿದರು!! ಇದನ್ನು ಕೇಳಿದ ಆದಿಲ್ ನ ಚಿಕ್ಕಪ್ಪ ಮತ್ತು ಆತನ ತಂದೆ, ರಾಂಚಿ ನಿಲ್ದಾಣಕ್ಕೆ ಅವರನ್ನು ಬಿಟ್ಟು ಬರುವುದಾಗಿ ಹೇಳಿದರು. ಆದರೆ ತಮ್ಮ ಕುತಂತ್ರ ಬುದ್ದಿಯನ್ನು ತೋರಿಸಿದ ಆದಿಲ್ ನ ಚಿಕ್ಕಪ್ಪ ಮತ್ತು ಆತನ ತಂದೆ ಈ ದಂಪತಿಗಳನ್ನು ರಾಜಬೇಡಾ ಹಾಲ್ಟ್ ನ ಕಾಡಿನ ಮಾರ್ಗದ ಮೂಲಕ ಕರೆದೊಯ್ದರು.

ಯಾವಾಗ ಈ ಕಾಡಿನ ಮಾರ್ಗದ ಮೂಲಕವಾಗಿ ಸಂಚರಿಸಲು ಆರಂಭಿಸಿದರೋ ಆ ಸಂದರ್ಭದಲ್ಲಿ, ಹುಡುಗಿಯು ಆದಿಲ್ ನ ತಂದೆಯನ್ನು ಪ್ರಶ್ನಿಸಲು ಆರಂಭಿಸಿದಳು. ಆಗ ಆತ “ನೀನು ಈಗಾಗಲೇ ಭಯಗೊಂಡಿದ್ದಿ, ಹಾಗಾಗಿ ನೀನು ನೋಡಬೇಕಾಗಿರುವುದಕ್ಕಿಂತ ಹೆಚ್ಚಿನವುಗಳು ಇನ್ನೂ ಇವೆ” ಎಂದು ಹೇಳಿದ್ದಾನೆ. ಆ ಸಂದರ್ಭದಲ್ಲಿ ಈ ಹುಡುಗಿ ತನ್ನ ಮನೆಗೆ ಮರಳಬೇಕೆಂದು ಒತ್ತಾಯಿಸಿದಾಗ, ಆದಿಲ್ ನ ಚಿಕ್ಕಪ್ಪ ಇದ್ದಕ್ಕಿದ್ದಂತೆ ಅವಳನ್ನು ಹಿಡಿದಿಟ್ಟುಕೊಂಡನಲ್ಲದೇ ಆಕೆಯನ್ನು ಹತ್ತಿರದ ಪೆÇದೆಗಳಿಗೆ ಎಳೆದು ಹಾಕಿದಾಗ ಇತ್ತ ಆದಿಲ್ ನನ್ನು ಆತನ ತಂದೆ ಹಿಡಿದಿಟ್ಟುಕೊಂಡ ಎಂದು ಹೇಳುತ್ತಾನೆ. ತದ ನಂತರ ತನ್ನ ಚಿಕ್ಕಪ್ಪ ಮಾತ್ರವಲ್ಲದೇ ಅವನೊಂದಿಗಿದ್ದ ಕೆಲವರು ಆಕೆಯನ್ನು ಕೊಂದು ಹಾಕಿರುವ ಬಗ್ಗೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಲವ್ ಜಿಹಾದ್ ನ ಕೂಪಕ್ಕೆ ಬಲಿಯಾದ ಹೆಣ್ಣು ಮಗುವಿನ ತಾಯಿ ಕೂಡ ಆದಿಲ್ ತಂದೆಗೆ ಬೆರಳು ಮಾಡಿ ತೋರಿಸಿದ್ದಲ್ಲದೇ, ಅವರು ಹಣದ ಆಸೆಗೋಸ್ಕರ ತಮ್ಮ ಮಗಳನ್ನು ಕೊಂದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಆದಿಲ್ ನ ಈಡೀ ಕುಟುಂಬದ ಸದಸ್ಯರು ಒಂದು ತಿಂಗಳ ಕಾಲ ಹುಡುಗಿಯ ಕುಟುಂಬವನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ಹೇಳಿದ್ದಾರೆ.

ಈ ಬಗ್ಗೆ ಹಲವಾರು ವಿಚಾರಗಳು ಬೆಳಕಿಗೆ ಬಂದ ನಂತರ, ಭುರ್ಕುಂಡ ಪ್ರದೇಶವು ಕೋಮು ಗಲಭೆಯಲ್ಲಿ ಮುಳುಗಿಹೋಗಿದ್ದು, ಈ ಹತ್ಯೆಯ ಬಗ್ಗೆ ಹಾಗೂ ಲವ್ ಜಿಹಾದ್ ವಿರುದ್ಧ ಹಲವಾರು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಬಜರಂಗದಳ, ಹಿಂದೂ ಜಗದನ್ ಮಂಚ್ ಮತ್ತು ವಿ.ಎಚ್.ಪಿ ಮುಂತಾದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಲವ್ ಜಿಹಾದ್ ಗೆ ಬಲಿಯಾದ ಹುಡುಗಿಯ ಕುಟುಂಬವನ್ನು ಭೇಟಿ ಮಾಡಿದ್ದರಲ್ಲದೇ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿದ್ದಾರೆ.

ಇನ್ನು ಈ ಬಗ್ಗೆ ಜಾರ್ಖಂಡ್ ನ ನಗರಾಭಿವೃದ್ಧಿ ಸಚಿವ ಸಿಪಿ ಸಿಂಗ್ ಅವರು ಮಾಧ್ಯಮಗಳ ಜೊತೆ ಮಾತಾನಾಡಿ, “ಲವ್ ಜಿಹಾದ್ ನಂತಹ ಘಟನೆಗಳ ಬಗ್ಗೆ ತಿಳಿದಿದ್ದು, ಈ ಬಗ್ಗೆ ನಿಷೇಧ ಹೇರಲು ರಾಜ್ಯ ಸರಕಾರ ಪ್ರಯತ್ನಿಸುತ್ತಿರುವ ಬಗ್ಗೆ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ರಾಜ್ಯದಲ್ಲಿ ಪರಿವರ್ತನಾ-ವಿರೋಧಿ ಕಾನೂನು ಇದೆ” ಎನ್ನುವ ವಿಚಾರವನ್ನೂ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ನಮ್ಮದು ಫ್ಯೂರ್ ಲವ್…. ಎಂದು ಮೋಸ ಹೋಗುವ ಹಿಂದು ಹುಡುಗಿಯರೇ ಎಚ್ಚೆತ್ತುಕೊಳ್ಳಿ!! ಲವ್ ಜಿಹಾದ್ ನ ಕೂಪಕ್ಕೆ ಒಮ್ಮೆ ಬಿದ್ದರೆ ಮತ್ತೆ ಅಲ್ಲಿಂದ ಹಿಂದೆ ಬರಲು ಸಾಧ್ಯವೇ ಇಲ್ಲ ಅನ್ನೋದನ್ನು ನೆನಪಿಟ್ಟುಕೊಳ್ಳಿ!!
– ಅಲೋಖಾ

Editor Postcard Kannada:
Related Post