ಅಬ್ಬಬ್ಬಾ! ನೋಡ್ರಪಾ! ಸಿದ್ಧರಾಮಯ್ಯ ಸರಕಾರ ನುಡಿದಂತೆಯೇ ನಡೆಯುತ್ತಿದೆ! ಪ್ರಜೆಗಳಿಗೆ ತರಾವರಿ ಭಾಗ್ಯಗಳನ್ನು ಕೊಟ್ಟ ಸಿದ್ಧರಾಮಯ್ಯ ಸರಕಾರ ಈಗ ಮತ್ತೊಮ್ಮೆ ಮಹಿಳಾ ಅಧಿಕಾರಿಯ ಅಮಾನತು ಮಾಡಿ ಹೊಸದಾದ ‘ಅಮಾನತು ಭಾಗ್ಯ’ವನ್ನು ಉದ್ಘಾಟಿಸಿದೆ!
ಹಾ! ಸಚಿವ ಕೆ.ಜೆ.ಜಾರ್ಜ್ ರವರ ಕೈ ಚಳಕವೊಂದು ಎಲ್ಲೆಲ್ಲಿ ಕೆಲಸ ಮಾಡುತ್ತಿದೆ ಗೊತ್ತಾ?! ಡಿವೈಎಸ್ ಪಿ ಗಣಪತಿಯವರ ಹತ್ಯೆಯಿಂದ ಈಗ ಬಿಬಿಎಂಪಿಯ ಅಧಿಕಾರಿಗಳ ತನಕವೂ! ಎಂತಹ ಅಧಿಕಾರ ಎನ್ನುತ್ತೀರಿ?! ಯಾವಾಗ ಯಾರ್ಯಾರಿಗೆ ಎಲ್ಲೆಲ್ಲಿ ವರ್ಗಾವಣೆ ಆಗುತ್ತೋ, ಯಾರ್ಯಾರಿಗೆ ಮರಣ ಭಾಗ್ಯವೋ, ಯಾರ್ಯಾರಿಗೆ ಇನ್ನೇನೇನು ಭಾಗ್ಯಗಳು ಯಾವಾಗ ಸಿಗುತ್ತದೆಯೋ ?! ಸಿದ್ಧರಾಮಯ್ಯನವರಿಗೇ ಗೊತ್ತು ಬಿಡಿ!
ಆದರೀಗ, ತಮ್ಮ ಪರಮಾಪ್ತ ಸಚಿವರು ಮಾಡಿದ ಘನಾಂಧಾರಿ ಕೆಲಸಕ್ಕೆ ಏನೆನ್ನುತ್ತಾರೋ ಸಿದ್ಧರಾಮಯ್ಯ!?!
ಬಿಬಿಎಂಪಿ ನೌಕರರು ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ! ತಮ್ಮ ಪರಮಾಪ್ತನನ್ನು ಉಳಿಸಿಕೊಳ್ಳಲು ಕೆ.ಜೆ.ಜಾರ್ಜ್ ಜಂಟಿ ಆಯುಕ್ತರಿಗೆ ಒತ್ತಡ ತಂದ ಹಿನ್ನೆಲೆಯಲ್ಲಿ, ಜಾರ್ಜ್ ಕ್ಷೇತ್ರದ ಬಿಬಿಎಂಪಿಯ ಅಧಿಕಾರಿ ನರಸಿಂಹ ಮೂರ್ತಿಯನ್ನು ಉಳಿಸಿಕೊಳ್ಳಲು ಮಹಿಳಾ ಅಧಿಕಾರಿಯಾದ ಜಯಾರವರನ್ನು ಅಮಾನತು ಮಾಡಲಾಗಿದೆ ಎಂದು ಬಿಬಿಎಂಪಿ ನೌಕರರ ಸಂಘ ಗಂಭೀರ ಆರೋಪ ಮಾಡಿದೆ!
18 ದಿನಗಳ ಹಿಂದಷ್ಟೇ, ಹೆಚ್ ಆರ್ ಬಿ ಆರ್ ಲೇಔಟ್ ಗೆ ವರ್ಗಾವಣೆಯಾಗಿದ್ದ ಎಆರ್ ಓ ಜಯಾರನ್ನು ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕಾನೂನನ್ನು ಉಲ್ಲಂಘಿಸಿ ಅಮಾನತು ಮಾಡಲಾಗಿದೆ. ಸಚಿವ ಜಾರ್ಜ್ ಕ್ಷೇತ್ರಕ್ಕೆ ವರ್ಗಾವಣೆಯಾಗಿದ್ದ ಜಯಾರನ್ನು ಕಾನೂನು ಬಾಹಿರವಾಗಿ ಅಮಾನತು ಮಾಡಲಾಗಿರುವ ಜಂಟಿ ಆಯುಕ್ತ ಇಲಾಖೆ, ಕೆ.ಜೆ.ಜಾರ್ಜ್ ರವರಿಗೆ ಅನುಕೂಲವಾಗುವಂತಹ ಅಧಿಕಾರಿಯ ವರ್ಗಾವಣೆಯನ್ನು ತಡೆ ಹಿಡಿದಿದೆ ಎಂದು ಬಿಬಿಎಂಪಿ ನೌಕರರು ಆರೋಪಿಸಿದ್ದಾರೆ!
ಇದೆಂತಹ ಸರಕಾರ ಸ್ವಾಮಿ?! ದಕ್ಷ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ, ಮರಣ ಭಾಗ್ಯವಾಯಿತು! ಈಗ , ಅಮಾನತು ಭಾಗ್ಯವೇ?!
ಕೆ.ಜೆ.ಜಾರ್ಜ್ ಮೇಲಿನ ಆರೋಪ ಇದೇ ಮೊದಲಲ್ಲ!
ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆಯಲ್ಲಿ ಕೆ.ಜೆ.ಜಾರ್ಜ್ ಮೊದಲನೇ ಮುಖ್ಯ ಆರೋಪಿ!
ಐಎಸ್ ಅಧಿಕಾರಿ ಡಿಕೆ ರವಿಯವರ ಆತ್ಮಹತ್ಯೆಯಲ್ಲಿಯೂ ಕೆ.ಜೆ.ಜಾರ್ಜ್ ರವರ ಹೆಸರು ಕೇಳಿಬಂದಿತ್ತಾದರೂ, ಪ್ರಕರಣಕ್ಕೆ ಅಂತ್ಯ ಕಾಣದೇ ಬಚಾವಾಗಿ ಹೋದರು!
1999 ದಿಂದ 2013 ರ ವರೆಗೂ ಸಹ, ಕೆ.ಜೆ.ಜಾರ್ಜ್ ರವರಿಗೆ ಇದ್ದದ್ದು ‘ಲೋ ಪ್ರೊಫೈಲ್’ ಬಿರುದು!
ಜೆಡಿಎಸ್.ಮತ್ತು ಬಿಜೆಪಿ ಪಕ್ಷಗಳು, ಕೆ.ಜೆ.ಜಾರ್ಜ್ ರನ್ನು ತಕ್ಷಣವೇ ಕಾಂಗ್ರೆಸ್ ನಿಂದ ಉಚ್ಛಾಟಿಸಬೇಕೆಂದು ಒತ್ತಡ ಹೇರಿದರೂ, ಮಾನ್ಯ ಮುಖ್ಯಮಂತ್ರಿಗಳು ಸಮರ್ಥನೆ ನೀಡಿ ಉಳಿಸಿಕೊಂಡಿದ್ದರು!
– ಪೃಥು ಅಗ್ನಿಹೋತ್ರಿ