ನಟಿ ರಮ್ಯಾ ಅವರು ಭಾರತೀಯ ರಾಜಕೀಯದಲ್ಲಿ ಪ್ರಾಮುಖ್ಯತೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರತಿಬಿಂಬವನ್ನು ಪ್ರತಿಬಿಂಬಿಸಲು ಅವರು ತನ್ನ ಕೊಡುಗೆಯನ್ನು ನೀಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ತುಂಬಾ ಸುಲಭವಾದ ಸಾಧನವೆಂದರೆ ಸಾಮಾಜಿಕ ಮಾಧ್ಯಮ. ಬಿಜೆಪಿ ಇದನ್ನು ಪರಿಣಾಮಕಾರಿಯಾಗಿ ಬಳಸುತ್ತಿದೆ. ಆದರೆ ಈ ನಟಿ ರಾಜಕೀಯ ಪಕ್ಷವಾದ ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗವನ್ನು ವಹಿಸಿಕೊಂಡ ಬಳಿಕ ಕಾಂಗ್ರೆಸ್ ಪಕ್ಷದ ಖ್ಯಾತಿ ಮತ್ತಷ್ಟು ಕಡಿಮೆಯಾಗಿದೆ.!!..
ನಾವು ಕೆಳಗಿನ ಟ್ವೀಟ್ ಅನ್ನು ಗಮನಿಸಿದಾಗ ರಮ್ಯಾ ಯಾವ ರೀತಿ ಸ್ಮೃತಿ ಇರಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಅರ್ಥವಾಗುತ್ತದೆ.
ಸಿಪಿಐ(ಎಮ್) ಆಳ್ವಿಕೆಯಲ್ಲಿ 286 ಆರ್ಎಸ್ಎಸ್-ಬಿಜೆಪಿ ಕಾರ್ಯಕರ್ತರನ್ನು ಕೊಲ್ಲಲ್ಪಟ್ಟಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.!! ಆದರೆ ರಮ್ಯಾ ಈ ಬಗ್ಗೆ
ಯಾವುದೇ ರೀತಿಯ ಮಾನವೀಯತೆಯನ್ನು ತೋರದೆ ಜೀವವನ್ನು ಕಳೆದುಕೊಂಡ ವ್ಯಕ್ತಿಗಳು ಜಿಜೆಪಿಯವರು ಎಂದು ಸರಾಗವಾಗಿ ಹೇಳಿದ್ದಾರೆ. ರಾಹುಲ್
ಗಾಂಧಿಯವರ ಕಾರನ್ನು ಕಲ್ಲುಗಳಿಂದ ಹೊಡೆದಾಗ ಅವರ ದೇಹದಲ್ಲಿ ಒಂದು ಗೀರು ಕೂಡಾ ಇಲ್ಲದಿದ್ದರೂ ಕಾಂಗ್ರೆಸ್ ಅದನ್ನು ದೊಡ್ಡ ಸಮಸ್ಯೆಯಾಗಿ ಮಾಡಿತು. ಆದರೆ ಆರ್ಎಸ್ಎಸ್ ಕಾರ್ಯಕರ್ತರನ್ನು ಕೊಲೆ ಮಾಡಿದಾಗ ಅದೇ ಕಾಂಗ್ರೆಸ್ ಪಕ್ಷ ಬಾಯನ್ನೇ ಬಿಡಲಿಲ್ಲ!! ಇಷ್ಟೇನಾ ಮಾನವೀಯತೇ ಕಾಂಗ್ರೆಸ್ಸಿಗರೇ??
ಸ್ಮೃತಿ ಇರಾನಿ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದಾರೆಯೇ? ಇದು ಹೆಚ್ಚು ವಿಪರ್ಯಾಸವನ್ನು ಪಡೆಯಬಹುದೇ? ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ರಮ್ಯಾ ಟ್ವೀಟ್ ಮಾಡಿದ್ದಾಳೆ. ಬಿಜೆಪಿ ಆರ್ಎಸ್ಎಸ್ ಕಾರ್ಮಿಕರ ಸಾವುಗಳಿಂದ ತುಂಬಿದ ಜನರನ್ನು ಕೆರಳಿಸಲು ಇದುವೇ ಸಾಕಷ್ಟಾಗಿದೆ ರಮ್ಯಾರವರೇ!!
ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮದ ಪಟ್ಟ ರಮ್ಯನಿಗೆ ದೊರಕಲು ರಾಹುಲ್ ಗಾಂಧಿಯೇ ಕಾರಣ.. ಅದಕ್ಕಿಂತ ಮುಂಚೆ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆಯಾಗಿ ಹರಿಯಾಣದ ಮುಖ್ಯಮಂತ್ರಿ ಬುಪಿಂದರ್ ಸಿಂಗ್ ಹೋಡಾರ ಪುತ್ರನಾದ ರೋಹಕ್ ಎಮ್ ಪಿ ದೀಪೆಂದರ್ ಸಿಂಗ್ ಹೋಡಾ ಇವರು ಕೆಲಸ ನಿರ್ವಹಿಸುತ್ತಿದ್ದರು.
ಕಾಂಗ್ರೆಸ್ ಸುಮಾರು 70 ವರ್ಷಗಳಿಂದ ಭಾರತವನ್ನು ಆಳಿತು ಬದಲಾಗಿ ನೀವು ಭಾರತೀಯರಿಗೆ ಏನು ಕೊಟ್ಟಿರಿ? ಎಂದು ಟ್ವೀಟ್ ಮಾಡಿದ್ದಾರೆ.
ಸ್ಮೃತಿ ಇರಾನಿಯನ್ನು ಪ್ರಜಾಪ್ರಭುತ್ವದ ಬಗ್ಗೆ ರಮ್ಯಾ ಪ್ರಶ್ನಿಸುವ ಧೈರ್ಯ ಮಾಡಿದ್ದಾರೆ.!! ಆದರೆ ಈ ಟ್ವೀಟ್ ಬಳಕೆದಾರ ಮಾತ್ರ ರಮ್ಯಾಳಿಗೆ ಉತ್ತರಿಸಲು ಆಗದಂತೆ ಪ್ರಶ್ನಿಸಿದ್ದಾರೆ!! ನೆಹರು ಸಾಮ್ರಾಜ್ಯದ ಸಾಧನೆ ಏನು? ಸ್ಮೃತಿ ಇರಾನಿಯನ್ನೇ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನಿಸಿದ ಈಕೆಗೆ ಈ ಪಶ್ನೆಗೆ ಉತ್ತರಿಸಬಹುದಲ್ಲವೇ?
ಈ ಮನುಷ್ಯ ತನ್ನ ಚುಚ್ಚು ಮದ್ದಿನಿಂದ ಅವಳನ್ನು ಕೊಂದಿದ್ದಾನೆ. 21 ತಿಂಗಳುಗಳು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದ್ದನ್ನು ನೆನಪಿಸಿದರು.
ಬೆಂಗಳೂರಿನ ಇಡೀ ಪ್ರದೇಶ ಸರೋವಾಗಿ ತಿರುಗುತ್ತಿದೆ.. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗ ಬೇಕಾದರೆ ಬೋಟ್ಗಳನ್ನು ಉಪಯೋಗಿಸುವ ಕಾಲ
ಬಂದಿದ್ದರೂ, ಜನರಿಗೆ ತೊಂದರೆ ಆಗುತ್ತಿದ್ದರೂ ಕಾಂಗ್ರೆಸ್ ಪಕ್ಷ ಯಾವುದೇ ಧೈರ್ಯವನ್ನು ನೀಡಿಲ್ಲ… ಇದನ್ನು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯಂತೆಯೇ ಈಗ ರಮ್ಯಾ ಕೂಡಾ ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದು ಇದಕ್ಕೆ ತುಂಬಾ ಜನಪ್ರಿಯವಾಗಿದ್ದಾರೆ. ಕಳೆದ ವರ್ಷ ಮಂಗಳೂರಿಗೆ ಬಂದ ರಮ್ಯಾ “ಮಂಗಳೂರು ನರಕ.. ಪಾಕಿಸ್ತಾನ ಅಲ್ಲ” ಎಂದು ಹೇಳಿದ್ದರು. ಇದು ಮಂಗಳೂರಿನ ಇಡೀ ಜನತೆಯನ್ನು ಕೆರಳಿಸುವುದರ ಮೂಲಕ ಮಂಗಳೂರಿಗೆ ಸಮಾರಂಭದಲ್ಲಿ ಆಗಮಿಸಿದ್ದಾಗ ಆಕೆಗೆ ಮೊಟ್ಟೆಯಲ್ಲಿ ಹೊಡೆಯುದರ ಮೂಲಕ ಆಕೆಯ ಹೇಳಿಕೆಯ ವಿರುದ್ಧ ಪ್ರತಿಭಟಿಸಿದರು.
ಪಾಕಿಸ್ತಾನ ನರಕವಲ್ಲ…ಅವರೂ ನಮ್ಮಂತೆ ಮನುಷ್ಯರು..ಅವರನ್ನು ನಾವು ಪ್ರೀತಿಯಿಂದ ಕಾಣಬೇಕು ಅಷ್ಟೇ. ಪಾಕಿಸ್ತಾನವನ್ನು ಭಾರತ ಶತ್ರು ರಾಷ್ಟ್ರವೆಂದು
ಘೋಷಿಸಿಲ್ಲ. ಅವರು ನಮ್ಮ ಭಾರತೀಯ ಸೈನಿಕರನ್ನು ಕೊಂದಿರಬಹುದು ಹಾಗೆಂದ ಮಾತ್ರಕ್ಕೆ ಅಲ್ಲಿನ ಜನರನ್ನು ತಪ್ಪಿತಸ್ಥರು ಎನ್ನಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು ರಮ್ಯಾ.!! ಹೀಗಾಗಿ ರಮ್ಯಾ ವಿರುದ್ಧ ಸೆಕ್ಷನ್ 124-ಎ ಪ್ರಕಾರ ರಾಷ್ಟ್ರದ್ರೋಹದ ಪ್ರಕರಣ ಕೂಡಾ ದಾಖಲಾಗಿತ್ತು.
-ಶೃಜನ್ಯ