X

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ತೊರೆದು ಕಮಲ‌ ಹಿಡಿದ ಬ್ಯಾಂಕ್ ಅಧ್ಯಕ್ಷ.! ತಲೆಗೆ ಕೈ ಹೊತ್ತು ಕೂತ‌ ಸಿಎಂ ಸಾಹೇಬ್ರು.!

ಅದ್ಯಾವ ಗ್ರಹಚಾರನೋ‌ ಏನೋ ಕಾಂಗ್ರೆಸ್ ಗೆ ಹೊಡೆತಗಳ ಮೇಲೆ ಹೊಡೆತ ಬೀಳುತ್ತಿದ್ದು , ಚುನಾವಣಾ ಹೊಸ್ತಿಲಲ್ಲೇ ಭಾರೀ ಕಂಟಕವೊಂದು ಎದುರಾಗಿದೆ. ಈಗಾಗಲೇ ಟಿಕೆಟ್ ವಿಚಾರದಲ್ಲಿ ಅಸಮಧಾನಗೊಂಡು ಪಕ್ಷ ತೊರೆದ ನಾಯಕರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬುಜೆಪಿ ಸೇರ್ಪಡೆಗೊಂಡಿದ್ದಾರೆ. ಇದೀಗ ಮತ್ತೋರ್ವ ಕಾಂಗ್ರೆಸ್ ನಾಯಕ‌ ಬಿಜೆಪಿ ಸೇರಿಕೊಂಡಿದ್ದು, ಸ್ವತಃ ಕಾಂಗ್ರೆಸಿಗರೇ ಸೋಲು ಒಪ್ಪಿಕೊಂಡು ತತ್ತರಿಸಿದ್ದಾರೆ.!

ಕಮಲ ಹಿಡಿದ ಬ್ಯಾಂಕ್ ಅಧ್ಯಕ್ಷ..!

ಕಾಂಗ್ರೆಸ್ ನಲ್ಲಿ ಸಕ್ರೀಯ ಕಾರ್ಯಕರ್ತನಾಗಿ , ಮುಖಂಡನಾಗಿ ಬೆಳೆದು ಪಕ್ಷ ಸಂಘಟನೆ ಮಾಡಿ ಪ್ರಬಲ ನಾಯಕನಾಗಿ ಬೆಳೆದ ಬಾಗಲಕೋಟೆ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಅವರು ಅಧಿಕೃತವಾಗಿ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ನಗರ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ತಪಶೆಟ್ಟಿ , ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಪಾಳಯಕ್ಕೆ ಜಾರಿಕೊಂಡಿದ್ದಾರೆ.‌

ಈಗಾಗಲೇ ಕಾಂಗ್ರೆಸ್ ನಿಂದ ಹಲವಾರು ರಾಜ್ಯ ನಾಯಕರು ಪಕ್ಷ ತೊರೆದಿದ್ದು ಇದೀಗ ಮತ್ತೋರ್ವ ಪ್ರಭಾವಿ ನಾಯಕ ಪಕ್ಷ ತೊರೆದಿದ್ದಾರೆ. ಚುನಾವಣಾ ಹೊಸ್ತಿಲಲ್ಲೇ ಕಾಂಗ್ರೆಸ್ ಗೆ ಹೊಡೆತಗಳ ಮೇಲೆ ಹೊಡೆತ ಬೀಳುತ್ತಿದ್ದು, ಕಾಂಗ್ರೆಸ್ ಗೆ ಸೋಲಿನ ಮತ್ತಷ್ಟು ಹೆಚ್ಚಾಗಿದೆ.


ಬಾಗಲಕೋಟೆ ಬಿಜೆಪಿ ಪಾಳಯದಲ್ಲಿ ಈಗಾಗಲೇ ಪಕ್ಷ ಸಂಘಟನೆ ಬಹಳ ಜೋರಾಗಿದ್ದು, ನಿನ್ನೆ ನಡೆದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಸೇರಿದ್ದ ಸಾವಿರಾರು ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟುವಂತಿತ್ತು. ಇದನ್ನು ಕಂಡ ಕಾಂಗ್ರೆಸಿಗರು ಈ ಬಾರಿ ಸೋಲು ಗ್ಯಾರಂಟಿ ಎಂದು ಅನಿಸಿಕೊಂಡದ್ದು ಮಾತ್ರ ಸುಳ್ಳಲ್ಲ. ಅದೇ ರೀತಿ ಇದೀಗ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಕಮಲ ಹಿಡಿದಿದ್ದು, ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಈಗಾಗಲೇ ಕಾಂಗ್ರೆಸ್ ಗೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದುರಾಗಿದ್ದು, ರಾಜ್ಯದ ಜನತೆಯೂ ಕಾಂಗ್ರೆಸ್ ಗೆ ಛೀಮಾರಿ ಹಾಕಿದ್ದಾರೆ.‌ ಇದೀಗ ಸ್ವತಃ ಕಾಂಗ್ರೆಸ್ ನಾಯಕರೇ ಪಕ್ಷ ತೊರೆಯುತ್ತಿದ್ದು ಕಾಂಗ್ರೆಸಿಗರಿಗೆ ಭಾರೀ ತಲೆನೋವಾಗಿದೆ..!

–ಅರ್ಜುನ್

Editor Postcard Kannada:
Related Post